ವೇದಿಕೆಯ ಮೇಲೆ ಹಾರ ಹಾಕಿಸಿಕೊಳ್ಳುವಾಗ ಸೂರಜ್ ರೇವಣ್ಣನನ್ನು ಹತ್ತಿರಕ್ಕೆ ಕರೆದ ನಿಖಿಲ್ ಕುಮಾರಸ್ವಾಮಿ!
ಮಾಧ್ಯಮಗಳಲ್ಲಿ ಪದೇಪದೆ ವರದಿಯಾಗಿರುವಂತೆ ಕುಮಾರಸ್ವಾಮಿಯವರು ತಮ್ಮ ಮಗ ನಿಖಿಲ್ನನ್ನು ಪಕ್ಷದ ರಾಜ್ಯಾಧ್ಯಕ್ಷನಾಗಿ ಘೋಷಿಸಲು ಸಕಲ ತಯಾರಿಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಅವರ ಪ್ರಸ್ತಾಪಿತ ನಡೆಗೆ ಜೆಡಿಎಸ್ ನಾಯಕರಿಂದ ವಿರೋಧವೇನೂ ಎದುರಾಗಿಲ್ಲ. ಕುಟುಂಬದ ರಾಜಕೀಯ ಲೆಗಸಿಯನ್ನು ಮಗ ಮುಂದುವರಿಸಿಕೊಂಡು ಹೋಗಲಿ ಅನ್ನೋದು ಕುಮಾರಸ್ವಾಮಿಯವರ ಇರಾದೆಯಾಗಿರಬಹುದು. ಸೂರಜ್ನನ್ನು ಅಧ್ಯಕ್ಷ ಮಾಡುವಂತೆ ರೇವಣ್ಣ ಒತ್ತಾಯಿಲಾರರು.
ಹಾಸನ: ಲೋಕಸಭಾ ಚುನಾವಣೆಯ ನಂತರ ಹೆಚ್ ಡಿ ಕುಮಾರಸ್ವಾಮಿ ಮತ್ತು ನಿಖಿಲ್ ಕುಮಾರಸ್ವಾಮಿ ಅವರು ಹೆಚ್ ಡಿ ರೇವಣ್ಣ ಕುಟುಂಬವನ್ನು ದೂರ ಮಾಡಿದ್ದರು. ಯಾಕೆ ಅಂತ ಎಲ್ಲ ಕನ್ನಡಿಗರಿಗೆ ಗೊತ್ತು. ಈಗ ಕಾಲ ಬದಲಾಗಿದೆ ಮತ್ತು ಕಾವೇರಿಯಲ್ಲಿ ಹೆಚ್ಚು ನೀರು ಹರಿದು ಹೋಗಿದೆ. ಪಕ್ಷ ಸಂಘಟನೆಯ ಹೊಣೆ ಹೊತ್ತಿರುವ ನಿಖಿಲ್ ಕುಮಾರಸ್ವಾಮಿ ಇವತ್ತು ನಗರದಲ್ಲಿ, ಹಾಸನ, ಚಿಕ್ಕಮಗಳೂರು, ಶಿವಮೊಗ್ಗ ಭಾಗದ ಜೆಡಿಎಸ್ ಮುಖಂಡರ ಸಭೆ ನಡೆಸಿದರು. ಸಭೆಯಲ್ಲಿ ರೇವಣ್ಣ ಭಾಗಿಯಾಗಿರಲಿಲ್ಲ ನಿಜ ಅದರೆ ಅವರ ಮಗ ಮತ್ತು ವಿಧಾನ ಪರಿಷತ್ ಸದಸ್ಯ ಸೂರಜ್ ರೇವಣ್ಣ ಪಾಲ್ಗೊಂಡಿದ್ದರು. ನಿಖಿಲ್ ಮತ್ತು ಸೂರಜ್ ನಡುವಿನ ಬಾಂಡಿಂಗ್ ಮತ್ತು ಬಾಂಧವ್ಯ ಸಭೆಯಲ್ಲಿ ಹಾಜರಿದ್ದ ಜೆಡಿಎಸ್ ನಾಯಕರಿಗೆ ಖುಷಿ ನೀಡಿರಬಹುದು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಪಕ್ಷದ ರಾಜ್ಯಾಧ್ಯಕ್ಷನಾಗಲು ಸಿದ್ಧನಿದ್ದೇನೆ ಅನ್ನೋದನ್ನು ನಿಖಿಲ್ ಕುಮಾರಸ್ವಾಮಿ ನೇರವಾಗಿ ಹೇಳಲ್ಲ!