AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Pariksha Pe Charcha 2026: ಇಂದು ನಾನು ಕಷ್ಟಪಟ್ಟು 'ವಿಕಸಿತ ಭಾರತ'ದ ಬುನಾದಿ ಹಾಕುತ್ತಿರುವುದು ನಿಮಗಾಗಿ

Pariksha Pe Charcha 2026: ಇಂದು ನಾನು ಕಷ್ಟಪಟ್ಟು ‘ವಿಕಸಿತ ಭಾರತ’ದ ಬುನಾದಿ ಹಾಕುತ್ತಿರುವುದು ನಿಮಗಾಗಿ

ಅಕ್ಷಯ್​ ಪಲ್ಲಮಜಲು​​
|

Updated on: Feb 06, 2026 | 2:55 PM

Share

ಪ್ರಧಾನಿ ಮೋದಿ 'ಪರೀಕ್ಷಾ ಪೇ ಚರ್ಚಾ 2026' ರಲ್ಲಿ ವಿದ್ಯಾರ್ಥಿಗಳನ್ನು 2047 ರ ವಿಕಸಿತ ಭಾರತದ ನಿರ್ಧಾರಕರು ಎಂದು ಕರೆದಿದ್ದಾರೆ. 35-40 ವರ್ಷದವರಾಗಿ ನೀವು ಸ್ವಾತಂತ್ರ್ಯದ ಶತಮಾನೋತ್ಸವದ ಫಲ ಉಣ್ಣುವವರು ಎಂದರು. ನಿಮ್ಮ ಭವಿಷ್ಯಕ್ಕಾಗಿ ಈಗಿನಿಂದಲೇ ಶ್ರಮಿಸಲು ಪ್ರೇರೇಪಿಸಿದ ಅವರು, ಭಾರತೀಯ ಉತ್ಪನ್ನಗಳಿಗೆ ಆದ್ಯತೆ ನೀಡುವಂತೆ ಮನವಿ ಮಾಡಿದ್ದಾರೆ. ಇದು ದೇಶಪ್ರೇಮ ಮತ್ತು ಭವಿಷ್ಯದ ದೃಷ್ಟಿಕೋನವನ್ನು ಸಾರಿದೆ.

ದೆಹಲಿ,ಫೆ.6: ಪ್ರಧಾನಿ ನರೇಂದ್ರ ಮೋದಿ ಅವರು ‘ಪರೀಕ್ಷಾ ಪೇ ಚರ್ಚಾ’ 2026 ರ ಸಂವಾದದಲ್ಲಿ ವಿದ್ಯಾರ್ಥಿಗಳನ್ನು ಕೇವಲ ಓದುವ ಮಕ್ಕಳಂತೆ ನೋಡದೆ, ದೇಶದ ಭವಿಷ್ಯದ ನಿರ್ಧಾರಕರು ಎಂಬಂತೆ ಮಾತನಾಡಿದ್ದಾರೆ. ಅವರ ಭಾಷಣದ ಈ ಭಾಗವು ಅತ್ಯಂತ ಸ್ಪೂರ್ತಿದಾಯಕವಾಗಿದ್ದು, ದೇಶಪ್ರೇಮ ಮತ್ತು ಭವಿಷ್ಯದ ದೃಷ್ಟಿಕೋನವನ್ನು ಒಳಗೊಂಡಿದೆ ಎಂದು ಹೇಳಿದ್ದಾರೆ. “ಭಾರತವು ಸ್ವಾತಂತ್ರ್ಯದ ನೂರನೇ ವರ್ಷವನ್ನು (2047) ಆಚರಿಸುವಾಗ ನೀವು 35 ರಿಂದ 40 ವರ್ಷದವರಾಗಿರುತ್ತೀರಿ. ಅಂದರೆ ವಿಕಸಿತ ಭಾರತದ ಫಲವನ್ನು ಉಣ್ಣುವವರು ಮತ್ತು ಅದನ್ನು ಮುನ್ನಡೆಸುವವರು ನೀವೇ. ಇಂದು ನಾನು ಕಷ್ಟಪಟ್ಟು ‘ವಿಕಸಿತ ಭಾರತ’ದ ಬುನಾದಿ ಹಾಕುತ್ತಿರುವುದು ನಿಮಗಾಗಿ. ಹಾಗಿದ್ದ ಮೇಲೆ, ನಿಮ್ಮ ಭವಿಷ್ಯಕ್ಕಾಗಿ ನೀವು ಈಗಿನಿಂದಲೇ ಶ್ರಮಿಸಬೇಡವೇ?” ಎಂದು ಪ್ರಧಾನಿ ಮೋದಿ ಅವರು ವಿದ್ಯಾರ್ಥಿಗಳಲ್ಲಿ ಕೇಳಿದ್ದಾರೆ. ನಾವು ಬಳಸುವ ವಸ್ತುಗಳು, ಆಟಿಕೆಗಳು ಅಥವಾ ತಂತ್ರಜ್ಞಾನ ಇರಲಿ, ಸಾಧ್ಯವಾದಷ್ಟು ಭಾರತೀಯ ಉತ್ಪನ್ನಗಳಿಗೆ ಆದ್ಯತೆ ನೀಡಬೇಕು ಎಂದು ಹೇಳಿದ್ದಾರೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ