AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಧಿಕಾರ ಪಿತ್ರಾರ್ಜಿತ ಆಸ್ತಿಯಲ್ಲ, ಸಿದ್ದರಾಮಯ್ಯ ಅದನ್ನು ಬಳುವಳಿಯಾಗಿ ಪಡೆದಿಲ್ಲ: ಸ್ನೇಹಮಯಿ ಕೃಷ್ಣ

ಅಧಿಕಾರ ಪಿತ್ರಾರ್ಜಿತ ಆಸ್ತಿಯಲ್ಲ, ಸಿದ್ದರಾಮಯ್ಯ ಅದನ್ನು ಬಳುವಳಿಯಾಗಿ ಪಡೆದಿಲ್ಲ: ಸ್ನೇಹಮಯಿ ಕೃಷ್ಣ

ಅರುಣ್​ ಕುಮಾರ್​ ಬೆಳ್ಳಿ
|

Updated on: Apr 17, 2025 | 3:04 PM

ಮುಖ್ಯಮಂತ್ರಿಯಾಗಿ ತಾನೇ 5 ವರ್ಷ ಮುಂದುವರಿಯುತ್ತೇನೆ ಎಂದು ಸಿದ್ದರಾಮಯ್ಯ ಹೇಳುತ್ತಿದ್ದರೆ ನೀವು ಅಧಿಕಾರ ಕಳೆದುಕೊಳ್ಳುತ್ತಾರೆ ಎನ್ನುತ್ತೀರಲ್ಲ ಅಂದಾಗ, ಅಧಿಕಾರ ಅನ್ನೋದು ಪಿತ್ರಾರ್ಜಿತ ಆಸ್ತಿಯಲ್ಲ, ಅದನ್ನು ಸಿದ್ದರಾಮಯ್ಯ ಬಳುವಳಿಯಾಗಿ ಪಡೆದುಕೊಂಡಿಲ್ಲ, ಜನ ಅವರಿಗೆ ಅಧಿಕಾರ ಕೊಟ್ಟಿದ್ದಾರೆ ಮತ್ತು ಅವರೇ ಅಲ್ಲಿಂದ ಕೆಳಗಿಳಿಸುತ್ತಾರೆ ಎಂದು ಕೃಷ್ಣ ಹೇಳಿದರು.

ಮೈಸೂರು, ಏಪ್ರಿಲ್ 17: ಜಯಪ್ರಕಾಶ್ ಹೆಗಡೆಯವರು ಒಂದು ವರ್ಷದ ಹಿಂದೆಯೇ ಸರ್ಕಾರಕ್ಕೆ ಸಲ್ಲಿಕೆ ಮಾಡಿದ ಜಾತಿ ಗಣತಿ ವರದಿಯನ್ನು ಇದುವರೆಗೆ ಬಿಡುಗಡೆ ಮಾಡದೆ ಮೀನ ಮೀಷ ಎಣಿಸುತ್ತಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಈಗ ಅದರ ಬಗ್ಗೆ ಮಾತಾಡುತ್ತಿರುವುದು ತಮ್ಮ ಆಧಿಕಾರ ಉಳಿಸಿಕೊಳ್ಳಲು ನಡೆಸುತ್ತಿರುವ ವ್ಯರ್ಥ ಪ್ರಯತ್ನವಲ್ಲದೆ ಬೇರೇನೂ ಅಲ್ಲ ಎಂದು ಸಾಮಾಜಿಕ ಹೋರಾಟಗಾರ ಸ್ನೇಹಮಯಿ ಕೃಷ್ಣ ಹೇಳಿದರು. ಮೈಸೂರಲ್ಲಿ ನಮ್ಮ ವರದಿಗಾರನೊಂದಿಗೆ ಮಾತಾಡಿದ ಅವರು, ಸಿದ್ದರಾಮಯ್ಯ ಆಧಿಕಾರದಲ್ಲಿ ಮುಂದುವರಿಯಲು ಕಸರತ್ತು ನಡೆಸಿದ್ದಾರೆ, ಅದರೆ ಅವರು ಜನರನ್ನು ಮೂರ್ಖರನ್ನಾಗಿಸುವುದು ಸಾಧ್ಯವಿಲ್ಲ, ದುರಹಂಕಾರದ ಮಾತುಗಳನ್ನಾಡುತ್ತಿರುವ ಅವರನ್ನು ಜನ ಅಧಿಕಾರದಿಂದ ಇಳಿಸಿಯೇ ತೀರುತ್ತಾರೆ ಎಂದು ಕೃಷ್ಣ ಹೇಳಿದರು.

ಇದನ್ನೂ ಓದಿ:  ಮುಡಾ ಹಗರಣ: ಹಲವು ದಾಖಲೆಗಳನ್ನು ನೀಡಿದ್ದೇ ಕಾಂಗ್ರೆಸ್ ಪಕ್ಷದವರು! ಸ್ನೇಹಮಯಿ ಕೃಷ್ಣ ಶಾಕಿಂಗ್ ಹೇಳಿಕೆ

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ