ರವಿಚಂದ್ರನ್​ ತಂದೆ ಅಂದು ಮಾಡಿದ್ದ ಸಹಾಯವನ್ನು ಖುಷ್ಬೂ ಇನ್ನೂ ಮರೆತಿಲ್ಲ; ‘ಕ್ರೇಜಿ ಸ್ಟಾರ್’​ ಹೇಳ್ತಾರೆ ಕೇಳಿ..

ನಟಿ ಖುಷ್ಬೂ ಬಗ್ಗೆ ರವಿಚಂದ್ರನ್​ ಅವರು ಮನಸಾರೆ ಮಾತನಾಡಿದ್ದಾರೆ. ತಮ್ಮ ಮತ್ತು ಖುಷ್ಬೂ ನಡುವಿನ ಸ್ನೇಹ ಎಂಥದ್ದು ಎಂಬುದನ್ನು ಅವರು ವಿವರಿಸಿದ್ದಾರೆ.

ರವಿಚಂದ್ರನ್​ ತಂದೆ ಅಂದು ಮಾಡಿದ್ದ ಸಹಾಯವನ್ನು ಖುಷ್ಬೂ ಇನ್ನೂ ಮರೆತಿಲ್ಲ; ‘ಕ್ರೇಜಿ ಸ್ಟಾರ್’​ ಹೇಳ್ತಾರೆ ಕೇಳಿ..
| Updated By: ಡಾ. ಭಾಸ್ಕರ ಹೆಗಡೆ

Updated on:Sep 13, 2021 | 11:45 AM

‘ರಣಧೀರ’, ‘ಅಂಜದ ಗಂಡು’ ಮುಂತಾದ ಸಿನಿಮಾಗಳಲ್ಲಿ ರವಿಚಂದ್ರನ್​ ಮತ್ತು ಖುಷ್ಬೂ ಜೊಡಿಯಾಗಿ ನಟಿಸಿದ್ದರು. ಆ ಸಿನಿಮಾಗಳಿಂದ ಕರುನಾಡಿನಲ್ಲಿ ಖುಷ್ಬೂ ಖ್ಯಾತಿ ಹೆಚ್ಚಿತು. ಇಂದಿಗೂ ರವಿಚಂದ್ರನ್​ ಜೊತೆ ಅವರಿಗೆ ಆತ್ಮೀಯ ಒಡನಾಟ ಇದೆ. ಇಬ್ಬರೂ ಫ್ಯಾಮಿಲಿ ಫ್ರೆಂಡ್ಸ್ ಆಗಿ ತಮ್ಮ ಸ್ನೇಹವನ್ನು ಮುಂದುವರಿಸಿದ್ದಾರೆ. ಟಿವಿ9 ನಡೆಸಿದ ಸಂದರ್ಶನದಲ್ಲಿ ಆ ಬಗ್ಗೆ ರವಿಚಂದ್ರನ್​ ಮಾತನಾಡಿದ್ದಾರೆ. ರವಿಚಂದ್ರನ್​ ತಂದೆ ಎನ್​. ವೀರಾ​ಸ್ವಾಮಿ ಅವರು ಆ ಕಾಲಿದಲ್ಲಿ ಮಾಡಿದ ಒಂದು ಸಹಾಯವನ್ನು ಖುಷ್ಬೂ ಇಂದಿಗೂ ಮರೆತಿಲ್ಲ ಎಂದಿದ್ದಾರೆ ಕ್ರೇಜಿ ಸ್ಟಾರ್.​

‘ಖುಷ್ಬೂ ನನಗೆ ಫ್ಯಾಮಿಲಿ ಫ್ರೆಂಡ್​. ಅಂದು ಹೇಗೆ ಮಾತನಾಡಿಸಿದ್ದಳೋ ಈಗಲೂ ಹಾಗೆಯೇ ಮಾತನಾಡಿಸುತ್ತಾಳೆ. ನಮ್ಮ ಫ್ಯಾಮಿಲಿ ಮತ್ತು ನಮ್ಮ ತಂದೆ ಬಗ್ಗೆ ಅವಳಿಗೆ ದೊಡ್ಡ ಗೌರವ ಇದೆ. ಯಾವಾಗಲೋ ಇಲ್ಲೊಂದು ಅಪಾರ್ಟ್​ಮೆಂಟ್​ ತೆಗೆದುಕೊಳ್ಳುವಾಗ ನಮ್ಮ ಅಪ್ಪ ಆಕೆಗೆ ಸಹಾಯ ಮಾಡಿದ್ದರು. ಅದನ್ನೆಲ್ಲ ಆ ಹುಡುಗಿ ಇನ್ನೂ ಮರೆತಿಲ್ಲ. ಇವತ್ತು ಜನರು ಕೋಟಿ ರೂ. ಸಂಪಾದನೆ ಮಾಡುತ್ತಿರಬಹುದು. ಆದರೆ ಅಂದು ನಾವು ಕೊಟ್ಟ ನೂರು ರೂಪಾಯಿಯೇ ಎಷ್ಟೋ ಮುಖ್ಯ ಆಗುತ್ತದೆ. ಆ ನೂರು ರೂಪಾಯಿಯ ಮೌಲ್ಯ ಎಂದಿಗೂ ಕಡಿಮೆ ಆಗುವುದಿಲ್ಲ. ಹೀಗೆ ಚಿಕ್ಕ ಸಹಾಯವನ್ನು ನೆನಪಿನಲ್ಲಿ ಇಟ್ಟುಕೊಂಡವರು ಜೀವನದಲ್ಲಿ ಬೆಳೆಯುತ್ತಾರೆ ಎಂಬುದಕ್ಕೆ ಖುಷ್ಬೂ ಉದಾಹರಣೆ’ ಎಂದು ರವಿಚಂದ್ರನ್​ ಹೇಳಿದ್ದಾರೆ.

ಇದನ್ನೂ ಓದಿ:

‘ಪ್ರೇಮಲೋಕ’ ಚಿತ್ರಕ್ಕೆ ಜೂಹಿ ಚಾವ್ಲಾ ಆಯ್ಕೆ ಆಗಿದ್ದು ಹೇಗೆ? ರವಿಚಂದ್ರನ್​ ತೆರೆದಿಟ್ಟ ರೆಟ್ರೋ ಸ್ಟೋರಿ

‘ಕುಡಿಯೋ ಎಂದು ಅಂಬರೀಷ್​ ಯಾವತ್ತೂ ಒತ್ತಾಯ ಮಾಡಲಿಲ್ಲ, ಅದು ದೊಡ್ಡಗುಣ’; ರವಿಚಂದ್ರನ್​

Published On - 9:58 am, Mon, 13 September 21

Follow us