‘ಕುಡಿಯೋ ಎಂದು ಅಂಬರೀಷ್ ಯಾವತ್ತೂ ಒತ್ತಾಯ ಮಾಡಲಿಲ್ಲ, ಅದು ದೊಡ್ಡಗುಣ’; ರವಿಚಂದ್ರನ್
‘ಇವತ್ತಿನವರೆಗೂ ನನಗೆ ಬಾಟಲಿ ಮುಟ್ಟಲು ಸಾಧ್ಯವಾಗಿಲ್ಲ. ಕುಡಿಯಬೇಕು ಅಂತ ಅನಿಸಲೇ ಇಲ್ಲ. ಯಾವಾಗಲೂ ನಾನು ಕೆಲಸದ ಮತ್ತಿನಲ್ಲಿ ಇರುತ್ತೇನೆ’ ಎಂದು ರವಿಚಂದ್ರನ್ ಹೇಳಿದ್ದಾರೆ.
ರಿಯಲ್ ಲೈಫ್ನಲ್ಲಿ ರವಿಚಂದ್ರನ್ ಅವರು ಧೂಮಪಾನ, ಮದ್ಯಪಾನ ಮಾಡುವುದಿಲ್ಲ. ಆ ರೀತಿಯ ಶಿಸ್ತನ್ನು ಅವರು ಇಂದಿಗೂ ಪಾಲಿಸಿಕೊಂಡು ಬಂದಿದ್ದಾರೆ. ಚಿತ್ರರಂಗದಲ್ಲಿ ಅವರಿಗೆ ಹಲವು ಮಂದಿ ಗೆಳೆಯರು ಇದ್ದಾರೆ. ಅವರ ಜೊತೆ ಒಟ್ಟಿಗೆ ಪಾರ್ಟಿ ಮಾಡಿದ್ದರೂ ಕೂಡ ರವಿಚಂದ್ರನ್ ಮದ್ಯಪಾನ ಮಾಡಲೇ ಇಲ್ಲ. ಆ ಬಗ್ಗೆ ಅವರು ಟಿವಿ9 ಜೊತೆಗಿನ ಸಂದರ್ಶನದಲ್ಲಿ ಮನಬಿಚ್ಚಿ ಮಾತನಾಡಿದ್ದಾರೆ. ‘ಇಂಡಸ್ಟ್ರಿಗೆ ಬಂದಾಗ ಅಂಬರೀಷ್ ನನಗೆ ಕ್ಲೋಸ್ ಫ್ರೆಂಡ್. ಅಣ್ಣ ಇದ್ದಂಗೆ ಅವನು. ಅಂಬರೀಷ್ ಹೇಗೆ ಎಂದು ನಿಮಗೆಲ್ಲ ಗೊತ್ತು. ಆದರೆ ಒಂದು ದಿನ ಕೂಡ ಜೊತೆಯಲ್ಲಿ ಕುಳಿತುಕೊಂಡು ಗುಂಡು ಹಾಕು ಅಂತ ಅವನು ಹೇಳಿಲ್ಲ. ಯಾವತ್ತೂ ಅವನು ಒತ್ತಾಯ ಮಾಡಿಲ್ಲ. ಅದೇ ಅವನ ದೊಡ್ಡಗುಣ’ ಎಂದು ರವಿಚಂದ್ರನ್ ಹೇಳಿದ್ದಾರೆ.
‘ಇವತ್ತಿನವರೆಗೂ ನನಗೆ ಬಾಟಲಿ ಮುಟ್ಟಲು ಸಾಧ್ಯವಾಗಿಲ್ಲ. ಕುಡಿಯಬೇಕು ಅಂತ ಅನಿಸಲೇ ಇಲ್ಲ. ಯಾವಾಗಲೂ ನಾನು ಕೆಲಸದ ಮತ್ತಿನಲ್ಲಿ ಇರುತ್ತೇನೆ. ಸಿಗರೇಟ್ ಮ್ಯಾಜಿಕ್ ಕಲಿಯುವಾಗ ಒಂದು ದಿನಕ್ಕೆ 20 ಪ್ಯಾಕ್ ಸಿಗರೇಟ್ ಸೇದಬೇಕಿತ್ತು. ಆದರೆ ಹೊಗೆಯನ್ನು ಪೂರ್ತಿ ಎಳೆದುಕೊಳ್ಳುತ್ತಿರಲಿಲ್ಲ. ಸಿನಿಮಾದಲ್ಲಿ ಈಗಲೂ ನಾನು ಹಾಗೆಯೇ ಮಾಡುತ್ತೇನೆ’ ಎಂದು ರವಿಚಂದ್ರನ್ ಹೇಳಿದ್ದಾರೆ.
ಇದನ್ನೂ ಓದಿ:
‘ಮೊದಲ ಸಿನಿಮಾದಲ್ಲಿ ರಾಜ್ಕುಮಾರ್ ತಬ್ಬಿದ್ದಕ್ಕೆ ನಟನಾಗಿ ಬಂದೆ ಅನಿಸುತ್ತೆ’; ರವಿಚಂದ್ರನ್
ದುಡ್ಡಿಲ್ಲದಾಗ ರವಿಚಂದ್ರನ್ ಬಳಿ 200 ರೂಪಾಯಿ ಕೇಳಿದ್ದ ಜಗ್ಗೇಶ್; ಕ್ರೇಜಿಸ್ಟಾರ್ ಉತ್ತರ ಹೇಗಿತ್ತು?
Published on: Sep 12, 2021 09:58 AM
ಸಂಪುಟ ವಿಸ್ತರಣೆ ಕ್ಲೈಮ್ಯಾಕ್ಸ್: ಕುತೂಹಲ ಮೂಡಿಸಿದ ರಾಹುಲ್ ಗಾಂಧಿ ನಡೆ
ಯಾದಗಿರಿಯಲ್ಲಿ ಒಂದೂವರೆ ಗಂಟೆ ಅಬ್ಬರಿಸಿದ ಮಳೆ: ನಿಟ್ಟುಸಿರುವ ಬಿಟ್ಟ ರೈತರು
ಕನ್ನಡ ಚಿತ್ರರಂಗಕ್ಕೆ ಮರಳಿದ ನಟಿ ಊರ್ವಶಿ: ಶೀರ್ಷಿಕೆ, ಫಸ್ಟ್ ಲುಕ್ ಪೋಸ್ಟರ್
ಬೆಂಗಳೂರಿನ ಬ್ಯಾಡರಹಳ್ಳಿಯಲ್ಲಿ ಐದನೇ ಬಾರಿ ಚಿರತೆ ಪ್ರತ್ಯಕ್ಷ!

