AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೊಯ್ಸಳ ಪದ ಹುಟ್ಟಿಗೆ ಕಾರಣವೇನು ಗೊತ್ತಾ? ವಸಂತಿಕಾದೇವಿ ದೇವಾಲಯದ ಇತಿಹಾಸ ಇಲ್ಲಿದೆ

ಹೊಯ್ಸಳ ಪದ ಹುಟ್ಟಿಗೆ ಕಾರಣವೇನು ಗೊತ್ತಾ? ವಸಂತಿಕಾದೇವಿ ದೇವಾಲಯದ ಇತಿಹಾಸ ಇಲ್ಲಿದೆ

TV9 Web
| Edited By: ಆಯೇಷಾ ಬಾನು|

Updated on: Sep 20, 2021 | 6:56 AM

Share

ಸಳನ ನಿಜವಾದ ಹೆಸರು ನೃಪಕಾಮ, ಅಂಗಡಿಯ ಮೂಲ ಹೆಸರು ಶಶಕಪುರ. ಹೊಯ್ಸಳ ಶಬ್ದ ಹುಟ್ಟಿ, ನೃಪಕಾಮ ರಾಜನಾಗಲು ಕಾರಣಿಭೂತವಾದ ಸ್ಥಳ ವಸಂತಿಕಾದೇವಿ ದೇವಸ್ಥಾನ.

ಚಿಕ್ಕಮಗಳೂರು: ಹೊಯ್ಸಳರ ಮೂಲಸ್ಥಾನ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಅಂಗಡಿ ಗ್ರಾಮಲ್ಲಿದೆ ಪುರಾತನ ವಸಂತಿಕಾದೇವಿ ದೇವಸ್ಥಾನ. ಅಂಗಡಿ ಗುರುಕುಲದಲ್ಲಿ ಪಾಠ ನಡೆಯುವಾಗ ಹುಲಿಯೊಂದು ಅಲ್ಲಿಗೆ ಬರುತ್ತದೆ. ಆ ವೇಳೆ ಗುರು ಸುದತ್ತಚಾರ್ಯರಿಂದ ಶಿಷ್ಯ ಸಳನಿಗೆ ಹುಲಿ ಓಡಿಸಲು ಸೂಚನೆ ನೀಡುತ್ತಾರೆ. ಪೊಯ್ ಸಳ (ಸಳ ಹೊಡಿ) ಅಂತಾ ಹುಲಿಯನ್ನ ಹೊಡೆಯಲು ಹೇಳುತ್ತಾರೆ. ಹುಲಿಯನ್ನ ಸಂಹಾರ ಮಾಡುವ ಸಳನನ್ನ ಕಲ್ಯಾಣಿ ಚಾಲುಕ್ಯರು ರಾಜನಾಗಿ ಮಾಡುತ್ತಾರೆ. ಈ ರೀತಿ ಮೊಟ್ಟ ಮೊದಲ ಬಾರಿಗೆ ಹೊಯ್(ಪೊಯ್) ಸಳ ಶಬ್ದ ಹುಟ್ಟಿ ಹೊಯ್ಸಳ ಆಗಿ ಮಾರ್ಪಾಡಾಗುತ್ತದೆ. ಸಳನ ನಿಜವಾದ ಹೆಸರು ನೃಪಕಾಮ, ಅಂಗಡಿಯ ಮೂಲ ಹೆಸರು ಶಶಕಪುರ. ಹೊಯ್ಸಳ ಶಬ್ದ ಹುಟ್ಟಿ, ನೃಪಕಾಮ ರಾಜನಾಗಲು ಕಾರಣಿಭೂತವಾದ ಸ್ಥಳ ವಸಂತಿಕಾದೇವಿ ದೇವಸ್ಥಾನ.

Follow Us
Web contact
Web contact

TV9 Kannada

Read More