ದರ್ಶನ್​ ನೋಡಲು ಬಂದ ಸಾಧು ಕೋಕಿಲ ಈ ರೀತಿ ರಿಯಾಕ್ಷನ್​ ಕೊಟ್ಟಿದ್ದು ಯಾಕೆ?

| Updated By: ಮದನ್​ ಕುಮಾರ್​

Updated on: Jul 23, 2024 | 7:28 PM

ದರ್ಶನ್​ ಅವರನ್ನು ಭೇಟಿ ಮಾಡಲು ಇಂದು (ಜುಲೈ 23) ಸಾಧು ಕೋಕಿಲ ಅವರು ಪರಪ್ಪನ ಅಗ್ರಹಾರಕ್ಕೆ ಬಂದಿದ್ದಾರೆ. ಈ ವೇಳೆ ಅವರು ಮಾಧ್ಯಮಗಳ ಕ್ಯಾಮೆರಾ ನೋಡಿದಾಗ ಈ ರೀತಿ ಪ್ರತಿಕ್ರಿಯಿಸಿದರು. ರೇಣುಕಾ ಸ್ವಾಮಿ ಕೊಲೆ ಕೇಸ್​ನಲ್ಲಿ ದರ್ಶನ್​ ಜೈಲು ವಾಸ ಅನುಭವಿಸುತ್ತಿದ್ದಾರೆ. ಅವರ ಭೇಟಿಯಾಗಿ ಆಪ್ತರು ಮತ್ತು ಕುಟುಂಬದವರು ಬರುತ್ತಿದ್ದಾರೆ.

ನಟ ದರ್ಶನ್​ ಅವರು ಚಿತ್ರರಂಗದ ಅನೇಕರ ಜೊತೆ ಒಡನಾಟ ಹೊಂದಿದ್ದಾರೆ. ಆದರೆ ಈಗ ಅವರು ರೇಣುಕಾ ಸ್ವಾಮಿಯ ಕೊಲೆ ಆರೋಪದಲ್ಲಿ ಜೈಲಿನಲ್ಲಿ ಇದ್ದಾರೆ. ದರ್ಶನ್​ ಅವರನ್ನು ನೋಡಲು ಪ್ರತಿ ದಿನ ಅವರ ಆಪ್ತರು ಬರುತ್ತಿದ್ದಾರೆ. ಈಗಾಗಲೇ ವಿನೋದ್ ರಾಜ್​, ವಿನೋದ್​ ಪ್ರಭಾಕರ್​, ತರುಣ್ ಸುಧೀರ್​ ಮುಂತಾದವರು ಬಂದು ಭೇಟಿ ಮಾಡಿದ್ದಾರೆ. ಕುಟುಂಬದವರು ಕೂಡ ಆಗಾಗ ಬಂದು ಕಾನೂನಿನ ಪ್ರಕ್ರಿಯೆ ಬಗ್ಗೆ ಮಾತನಾಡುತ್ತಿದ್ದಾರೆ. ಮಂಗಳವಾರ (ಜುಲೈ 23) ನಟ ಸಾಧು ಕೋಕಿಲ ಅವರು ಪರಪ್ಪನ ಅಗ್ರಹಾರಕ್ಕೆ ಬಂದಿದ್ದಾರೆ. ದರ್ಶನ್​ ಭೇಟಿ ಮಾಡುವ ಸಲುವಾಗಿ ಜೈಲಿನ ಬಳಿ ಬಂದ ಅವರು ಮಾಧ್ಯಮಗಳ ಕ್ಯಾಮೆರಾ ಕಂಡು ಈ ರೀತಿ ರಿಯಾಕ್ಷನ್​ ನೀಡಿದ್ದಾರೆ. ಹತ್ತಿರದಿಂದ ಅವರ ವಿಡಿಯೋ ಚಿತ್ರಿಸಲು ಮುಂದಾಗಿದ್ದಕ್ಕೆ ಸಾಧು ಕೋಕಿಲ ಅವರು ಹೀಗೆ ಪ್ರತಿಕ್ರಿಯಿಸಿದರು. ಇಂದು ಅವರಿಗೆ ದರ್ಶನ್​ನ ಭೇಟಿಯಾಗಲು ಸಾಧ್ಯವಾಗಿಲ್ಲ. ಇನ್ನೊಂದಿನ ಬರುವುದಾಗಿ ಸಾಧು ಕೋಕಿಲ ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow us on