ವಿಡಿಯೋ: ರಾಮ-ಆಂಜನೇಯನ ಮೂರ್ತಿ ಉದ್ಘಾಟಿಸಿದ ಶಿವರಾಜ್ ಕುಮಾರ್

Shiva Rajkumar: ರಾಜಾಜಿನಗರದ ರಾಮಮಂದಿರದ ದೇಗುಲದ ಬಳಿ ಬೃಹತ್ ಶ್ರೀರಾಮ ಮತ್ತು ಆಂಜನೇಯ ಮೂರ್ತಿಯನ್ನು ನಿರ್ಮಿಸಲಾಗಿದ್ದು, ಶಿವರಾಜ್ ಕುಮಾರ್ ಹಾಗೂ ಗೀತಾ ಶಿವರಾಜ್ ಕುಮಾರ್ ಅವರು ಈ ಬೃಹತ್ ಮೂರ್ತಿಯನ್ನು ಉದ್ಘಾಟನೆ ಮಾಡಿದರು. 63 ಅಡಿ ಎತ್ತರದ ರಾಮ, 25 ಅಡಿ ಎತ್ತರದ ಆಂಜನೇಯ ಮೂರ್ತಿ ಇದಾಗಿದ್ದು ಮೂರ್ತಿಗಳನ್ನು ಉದ್ಘಾಟನೆ ಮಾಡಿದ ಶಿವರಾಜ್ ಕುಮಾರ್, ‘ಶ್ರೀರಾಮ್, ಭಜರಂಗಿ ಸಿನಿಮಾಗಳಲ್ಲಿ ನಾನು ನಟಿಸಿದ್ದೀನಿ. ಶ್ರೀರಾಮ ಮತ್ತು ಆಂಜನೇಯನೊಟ್ಟಿಗೆ ಆಧ್ಯಾತ್ಮಿಕ ಸಂಬಂಧ ಇದೆ ಎಂದರು.

ರಾಜಾಜಿನಗರದ ರಾಮಮಂದಿರದ ದೇಗುಲದ ಬಳಿ ಬೃಹತ್ ಶ್ರೀರಾಮ ಮತ್ತು ಆಂಜನೇಯ ಮೂರ್ತಿಯನ್ನು ನಿರ್ಮಿಸಲಾಗಿದ್ದು, ಶಿವರಾಜ್ ಕುಮಾರ್ ಹಾಗೂ ಗೀತಾ ಶಿವರಾಜ್ ಕುಮಾರ್ ಅವರು ಈ ಬೃಹತ್ ಮೂರ್ತಿಯನ್ನು ಉದ್ಘಾಟನೆ ಮಾಡಿದರು. 63 ಅಡಿ ಎತ್ತರದ ರಾಮ, 25 ಅಡಿ ಎತ್ತರದ ಆಂಜನೇಯ ಮೂರ್ತಿ ಇದಾಗಿದ್ದು ಮೂರ್ತಿಗಳನ್ನು ಉದ್ಘಾಟನೆ ಮಾಡಿದ ಶಿವರಾಜ್ ಕುಮಾರ್, ‘ಶ್ರೀರಾಮ್, ಭಜರಂಗಿ ಸಿನಿಮಾಗಳಲ್ಲಿ ನಾನು ನಟಿಸಿದ್ದೀನಿ. ಶ್ರೀರಾಮ ಮತ್ತು ಆಂಜನೇಯನೊಟ್ಟಿಗೆ ಆಧ್ಯಾತ್ಮಿಕ ಸಂಬಂಧ ಇದೆ ಎಂದರು. ರಾಜಾಜಿನಗರದ ಬಗ್ಗೆ ಮಾತನಾಡಿ, ಈ ಏರಿಯಾ ನನಗೆ ಬಹಳ ಹಳೆಯದ್ದು, ಇಲ್ಲಿ ಬಹಳ ಮಂದಿ ಹಳೆಯ ಗೆಳೆಯರು ನನಗೆ ಇದ್ದಾರೆ’ ಎಂದರು. ಬೆಂಗಳೂರಿನಲ್ಲಿ ಸುರಿಯುತ್ತಿರುವ ಸತತ ಮನೆಯ ಬಗ್ಗೆ ಮಾತನಾಡಿ, ‘ಮಳೆ ಒಳ್ಳೆಯದು, ಅದರಿಂದಲೇ ಕಳೆ, ಅದರಿಂದಲೇ ಬೆಳೆ. ಆದರೆ ಜನ ಈ ಸಮಯದಲ್ಲಿ ಎಚ್ಚರಿಕೆಯಿಂದ ಓಡಾಡಬೇಕು’ ಎಂದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 4:38 pm, Tue, 22 October 24

Manjunatha C

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
Follow Us