ತಿರುಪತಿ ಎಕ್ಸ್ಪ್ರೆಸ್ ಹೋರಿಗೆ ಅದ್ದೂರಿ ಜನ್ಮದಿನ ಆಚರಣೆ: ಕೇಕ್ ಕತ್ತರಿಸಿ ಸಂಭ್ರಮಿಸಿದ ಅಭಿಮಾನಿಗಳು!
ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲೂಕಿನ ಬೆಳಗುತ್ತಿ ಗ್ರಾಮದಲ್ಲಿ ಹಲವು ಹೋರಿ ಸ್ಪರ್ಧೆಗಳಲ್ಲಿ ಪ್ರಶಸ್ತಿ ಗೆದ್ದಿರುವ ‘ತಿರುಪತಿ ಎಕ್ಸ್ಪ್ರೆಸ್’ ಹೋರಿಯ ಜನ್ಮದಿನವನ್ನು ಅಭಿಮಾನಿಗಳು ಅದ್ದೂರಿಯಾಗಿ ಆಚರಿಸಿದರು. ಇದೇ ವೇಳೆ ಮಲ್ಲಿಗೆನಹಳ್ಳಿಯಲ್ಲಿ ‘ಹೈ ಸ್ಪೀಡ್ ಸುಲ್ತಾನ್’ ಹೋರಿಯ ಜನ್ಮದಿನವೂ ನಡೆಯಿತು. ಎಂಪಿ ರೇಣುಕಾಚಾರ್ಯ ಸೇರಿ ಹಲವು ಗಣ್ಯರು ಸಹ ಭಾಗವಹಿಸಿ ಶುಭ ಹಾರೈಸಿದರು.
ದಾವಣಗೆರೆ, ಸೆಪ್ಟೆಂಬರ್ 14: ಹತ್ತಾರು ಹೋರಿ ಸ್ಪರ್ಧೆಗಳಲ್ಲಿ ಪಾಲ್ಗೊಂಡು ಪ್ರಶಸ್ತಿಗಳನ್ನು ಗೆದ್ದಿರುವ ‘ತಿರುಪತಿ ಎಕ್ಸ್ಪ್ರೆಸ್’ ಹೋರಿಯ ಜನ್ಮದಿನವನ್ನು ಅದ್ದೂರಿಯಾಗಿ ಆಚರಿಸಲಾಯಿತು. ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲೂಕಿನ ಬೆಳಗುತ್ತಿ ಗ್ರಾಮದ ತೀರ್ಥಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಭಿಮಾನಿಗಳು ಕೇಕ್ ಕತ್ತರಿಸಿ ಸಂಭ್ರಮಿಸಿದರು. ಮಲ್ಲಿಗೆನಹಳ್ಳಿ ಗ್ರಾಮದ ರಂಗಪ್ಪ ಹಾಗೂ ರಾಜಪ್ಪ ಅವರಿಗೆ ಸೇರಿದ ‘ತಿರುಪತಿ ಎಕ್ಸ್ಪ್ರೆಸ್’ ಹೋರಿ ಹಲವು ಸ್ಪರ್ಧೆಗಳಲ್ಲಿ ಗಮನ ಸೆಳೆದಿದೆ. ಇದೇ ವೇಳೆ ಮಲ್ಲಿಗೆನಹಳ್ಳಿ ಗ್ರಾಮದಲ್ಲಿ ಭರ್ಜರಿ ಬಾಯ್ಸ್ ಸಾಮ್ರಾಜ್ಯದ ‘ಹೈ ಸ್ಪೀಡ್ ಸುಲ್ತಾನ್’ ಹೋರಿಯ ಜನ್ಮದಿನವನ್ನೂ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಸೇರಿದಂತೆ ನ್ಯಾಮತಿ ಹಾಗೂ ಹೊನ್ನಾಳಿ ತಾಲೂಕಿನ ಹಲವು ಮುಖಂಡರು ಭಾಗವಹಿಸಿ ಹೋರಿಗಳಿಗೆ ಶುಭ ಹಾರೈಸಿದರು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

