AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚನ್ನಪಟ್ಟಣದಲ್ಲಿ ಮಣ್ಣಿನ ಮಗ ಕುಮಾರಸ್ವಾಮಿಯಿಂದ ಎತ್ತಿನ ಗಾಡಿಯಲ್ಲಿ ಪ್ರಚಾರ

ಚನ್ನಪಟ್ಟಣದಲ್ಲಿ ಮಣ್ಣಿನ ಮಗ ಕುಮಾರಸ್ವಾಮಿಯಿಂದ ಎತ್ತಿನ ಗಾಡಿಯಲ್ಲಿ ಪ್ರಚಾರ

ಅರುಣ್​ ಕುಮಾರ್​ ಬೆಳ್ಳಿ
|

Updated on: Oct 31, 2024 | 2:13 PM

ಕುಮಾರಸ್ವಾಮಿ ಜೊತೆ ಮತಬೇಟೆಗೆ ಇವತ್ತು ಮಾಜಿ ಸಚಿವ ಬಿಸಿ ಪಾಟೀಲ್ ಅಗಮಿಸಿದ್ದರು. ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಬೇರೆ ಕಡೆ ಪ್ರಚಾರಕ್ಕೆ ತೆರಳಿದ್ದರೇ ಅಥವಾ ಮನೆಯಲ್ಲಿ ಉಳಿದು ದೀಪಾವಳಿ ಹಬ್ಬ ಆಚರಿಸುತ್ತಿದ್ದಾರೆಯೇ ಅಂತ ಗೊತ್ತಾಗಲಿಲ್ಲ. ಪ್ರಚಾರದ ಭಾರವನ್ನು ಅವರು ತಮ್ಮ ತಂದೆಯ ಹೆಗಲಿಗೆ ಹೊರೆಸಿದಂತಿದೆ.

ರಾಮನಗರ: ಚನ್ನಪಟ್ಟಣ ವಿಧಾನಸಭಾ ಉಪ ಚುನಾವಣೆಯಲ್ಲಿ ತಾನೇ ಅಭ್ಯರ್ಥಿಯೆಂಬಂತೆ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಪ್ರಚಾರ ಮಾಡುತ್ತಿದ್ದಾರೆ. ಮಣ್ಣಿನ ಮಗ, ರೈತನ ಮಗ ಎಂದು ಹೇಳಿಕೊಳ್ಳುವ ಅವರು ಕ್ಷೇತ್ರದ ತಿಟ್ಟಮಾರನಹಳ್ಳಿಯಲ್ಲಿ ಇಂದು ಎತ್ತಿನಗಾಡಿಯಲ್ಲಿ ಪ್ರಚಾರ ಮಾಡಿದರು. ಗ್ರಾಮದ ಮಹಿಳೆಯರು ಕುಮಾರಸ್ವಮಿಗೆ ಬೆಲ್ಲದ ಅರತಿ ಬೆಳಗಿ ಬರಮಾಡಿಕೊಂಡರು. ಎತ್ತಿನಗಾಡಿಯಲ್ಲಿ ನಿಂತು ಜನರಿಗೆ ಎರಡೂ ಕೈ ಜೋಡಿಸುತ್ತಾ ಅವರು ಮತ ಯಾಚಿಸಿದರು. ಬಸ್ಸುಗಳಲ್ಲಿದ್ದ ಜನ ಸಹ ಅವರತ್ತ ಕೈಬೀಸಿ ಹರ್ಷ ವ್ಯಕ್ತಪಡಿಸಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:   ಸಿದ್ದರಾಮಯ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಿಂದ ರಾಜ್ಯ ದಿವಾಳಿಯಾಗದಿದ್ದರೆ ಸಾಕು: ಕುಮಾರಸ್ವಾಮಿ