ವಿಜಯಪುರ, ಅಕ್ಟೋಬರ್ 11: ಗೃಹಲಕ್ಷ್ಮಿ ಯೋಜನೆಯ (gruha lakshmi scheme) ಹಣವನ್ನು ಕೂಡಿಟ್ಟ ಮಹಿಳಯೊಬ್ಬರು ಅದರಿಂದ ನಾಡದೇವಿಗೆ 250 ಗ್ರಾಂ ಬೆಳ್ಳಿ ಕಿರೀಟ ಮಾಡಿಸಿರುವಂತಹ ಘಟನೆ ಜಿಲ್ಲೆಯ ಆಲಮೇಲ ತಾಲೂಕಿನ ಹೂವಿನಹಳ್ಳಿ ಗ್ರಾಮದಲ್ಲಿ ನಡೆದಿದೆ. ಭಾಗಮ್ಮ ಗುರುಶಾಂತಗೌಡ ಬಿರಾದಾರ ಎಂಬುವವರು ಗೃಹಲಕ್ಷ್ಮಿ ಯೋಜನೆಯ ಹಣವನ್ನು ಕೂಡಿಟ್ಟು ಬೆಳ್ಳಿ ಕಿರೀಟ ಮಾಡಿಸಿದ ಮಹಿಳೆ. ಈ ವೇಳೆ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯರನ್ನು ಹಾಡಿಹೊಗಳಿದ್ದಾರೆ. ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಸರ್ಕಾರ ಗೃಹಲಕ್ಷ್ಮಿ ಯೋಜನೆಯ ಮೂಲಕ ಹಣ ಹಾಕುವದರಿಂದ ಸಾಕಷ್ಟು ಕುಟುಂಬಗಳಿಗೆ ಅನುಕೂಲವಾಗಿದೆ. ಅವರ ಸೇವೆ ಹೀಗೆ ಮುಂದುವರೆಯಲಿ. ನಾಡದೇವಿಯ ಆಶಿರ್ವಾದ ಸಿದ್ದರಾಮಯ್ಯರ ಮೇಲಿರಲಿ ಎಂದು ಹಾರೈಸಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.
Published On - 8:37 pm, Fri, 11 October 24