ಐಪಿಎಲ್ 18: ಪ್ರತಿ ಸಲ ಕಪ್ ನಮ್ದೇ ಎನ್ನುವ ಕನ್ನಡಿಗರಿಗೆ ರಜತ್ ಪಾಟೀದಾರ್ ಹಿಂದೆ ಸಾಧ್ಯವಾಗದ್ದನ್ನು ಸಾಧಿಸುತ್ತಾರೆಯೇ?
ಆರ್ಸಿಬಿ ತಂಡಕ್ಕೆ ಈ ಬಾರಿ ರಜತ್ ಪಾಟೀದಾರ್ ನಾಯಕ. ವೇಗದ ಬೌಲರ್ ಜೋಷ್ ಹೇಜೆಲ್ವುಡ್ ಗಾಯಗೊಂಡಿರುವುದು ದೊಡ್ಡ ಹೊಡೆತ. ಅವರು ಚಾಂಪಿಯನ್ ಬೌಲರ್ ಅನ್ನೋದ್ರಲ್ಲಿ ಎರಡು ಮಾತಿಲ್ಲ, ಅವರು ಈ ಐಪಿಎಲ್ ಸೀಸನ್ನ ಮೊದಲ ಲೆಗ್ ಆಡಲಾರರು. ಪ್ರತಿಸಲದಂತೆ ಈ ಬಾರಿಯೂ ತಂಡದ ಬೌಲಿಂಗ್ ವಿಭಾಗ ದುರ್ಬಲ ಅನಿಸುತ್ತಿದೆ, ಭುವನೇಶ್ವರ್ ಕುಮಾರ್ ಬೌಲಿಂಗ್ನಲ್ಲಿ ಮೊದಲಿನ ಮೊನಚು ಇಲ್ಲ.
ಬೆಂಗಳೂರು, ಮಾರ್ಚ್ 12 : ಇಂಡಿಯನ್ ಪ್ರಿಮೀಯರ್ ಲೀಗ್ನ (Indian Premier League) ಪ್ರತಿ ಸೀಸನ್ ಶುರುವಾಗುವಾಗ ಈ ಸಲ ಕಪ್ ನಮ್ದೇ ಅಂತ ಕನ್ನಡಿಗರ ಆಶಯದೊಂದಿಗೆ ಅಭಿಯಾನ ಆರಂಭಿಸುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು 17 ನೇ ಸೀಸನ್ವರೆಗೆ ನಿರಾಶೆಗೊಳಿಸಿದೆ. ವಿಶ್ವದ ಅಗ್ರಮಾನ್ಯ ಬ್ಯಾಟರ್ ವಿರಾಟ್ ಕೊಹ್ಲಿ ಆರ್ಸಿಬಿಗೆ ಆಟಗಾರನಾಗಿ ಮತ್ತು ನಾಯಕನಾಗಿ ಆಡಿದಾಗ್ಯೂ ಕಪ್ ಸಿಕ್ಕಿಲ್ಲ! ಹೊಸ ಸೀಸನ್ ಒಂದೂವರೆ ವಾರದ ಅವಧಿಯಲ್ಲಿ ಶುರುವಾಗಲಿದೆ, ಹೇಗಿದೆ ತಂಡದ ತಯಾರಿ, ಯಾರು ಫಿಟ್ ಯಾರೆಲ್ಲ ಅನ್ಫಿಟ್? ಇಲ್ಲಿದೆ ವರದಿ.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಅನುಷ್ಕಾ ಎಂದರೆ ವಿರಾಟ್ಗೆ ಬೆಟ್ಟದಷ್ಟು ಪ್ರೀತಿ; ಮ್ಯಾಚ್ ಗೆದ್ದ ಬಳಿಕ ಕೊಹ್ಲಿ ಏನು ಮಾಡಿದ್ರು ನೋಡಿ
Loading...
Unable to load recommendations.
Follow Us
