ಐಪಿಎಲ್ 18: ಪ್ರತಿ ಸಲ ಕಪ್ ನಮ್ದೇ ಎನ್ನುವ ಕನ್ನಡಿಗರಿಗೆ ರಜತ್ ಪಾಟೀದಾರ್ ಹಿಂದೆ ಸಾಧ್ಯವಾಗದ್ದನ್ನು ಸಾಧಿಸುತ್ತಾರೆಯೇ?

Updated on: Mar 12, 2025 | 11:42 AM

ಆರ್​ಸಿಬಿ ತಂಡಕ್ಕೆ ಈ ಬಾರಿ ರಜತ್ ಪಾಟೀದಾರ್ ನಾಯಕ. ವೇಗದ ಬೌಲರ್ ಜೋಷ್ ಹೇಜೆಲ್​ವುಡ್ ಗಾಯಗೊಂಡಿರುವುದು ದೊಡ್ಡ ಹೊಡೆತ. ಅವರು ಚಾಂಪಿಯನ್ ಬೌಲರ್ ಅನ್ನೋದ್ರಲ್ಲಿ ಎರಡು ಮಾತಿಲ್ಲ, ಅವರು ಈ ಐಪಿಎಲ್ ಸೀಸನ್​ನ ಮೊದಲ ಲೆಗ್ ಆಡಲಾರರು. ಪ್ರತಿಸಲದಂತೆ ಈ ಬಾರಿಯೂ ತಂಡದ ಬೌಲಿಂಗ್ ವಿಭಾಗ ದುರ್ಬಲ ಅನಿಸುತ್ತಿದೆ, ಭುವನೇಶ್ವರ್ ಕುಮಾರ್ ಬೌಲಿಂಗ್​ನಲ್ಲಿ ಮೊದಲಿನ ಮೊನಚು ಇಲ್ಲ.

ಬೆಂಗಳೂರು, ಮಾರ್ಚ್ 12 : ಇಂಡಿಯನ್ ಪ್ರಿಮೀಯರ್ ಲೀಗ್​ನ (Indian Premier League) ಪ್ರತಿ ಸೀಸನ್ ಶುರುವಾಗುವಾಗ ಈ ಸಲ ಕಪ್ ನಮ್ದೇ ಅಂತ ಕನ್ನಡಿಗರ ಆಶಯದೊಂದಿಗೆ ಅಭಿಯಾನ ಆರಂಭಿಸುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು 17 ನೇ ಸೀಸನ್​ವರೆಗೆ ನಿರಾಶೆಗೊಳಿಸಿದೆ. ವಿಶ್ವದ ಅಗ್ರಮಾನ್ಯ ಬ್ಯಾಟರ್ ವಿರಾಟ್ ಕೊಹ್ಲಿ ಆರ್​ಸಿಬಿಗೆ ಆಟಗಾರನಾಗಿ ಮತ್ತು ನಾಯಕನಾಗಿ ಆಡಿದಾಗ್ಯೂ ಕಪ್ ಸಿಕ್ಕಿಲ್ಲ! ಹೊಸ ಸೀಸನ್ ಒಂದೂವರೆ ವಾರದ ಅವಧಿಯಲ್ಲಿ ಶುರುವಾಗಲಿದೆ, ಹೇಗಿದೆ ತಂಡದ ತಯಾರಿ, ಯಾರು ಫಿಟ್ ಯಾರೆಲ್ಲ ಅನ್ಫಿಟ್? ಇಲ್ಲಿದೆ ವರದಿ.

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:   ಅನುಷ್ಕಾ ಎಂದರೆ ವಿರಾಟ್​​ಗೆ ಬೆಟ್ಟದಷ್ಟು ಪ್ರೀತಿ; ಮ್ಯಾಚ್ ಗೆದ್ದ ಬಳಿಕ ಕೊಹ್ಲಿ ಏನು ಮಾಡಿದ್ರು ನೋಡಿ

Follow Us
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.

Read More