AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Greek Earthquake: ಗ್ರೀಕ್​ನ ದ್ವೀಪದಲ್ಲಿ ಪ್ರಬಲ ಭೂಕಂಪ; ಒಬ್ಬ ಸಾವು, 9 ಜನರಿಗೆ ಗಾಯ

ಭೂಕಂಪ ಸೋಮವಾರ ಬೆಳಗ್ಗೆ 9.17ರ ಹೊತ್ತಿಗೆ ಗ್ರೀಕ್​ ರಾಜಧಾನಿ ಅಥೆನ್ಸ್​​ನ ದಕ್ಷಿಣ-ಆಗ್ನೇಯಕ್ಕೆ 246 ಕಿಮೀ ದೂರಲ್ಲಿ ಸಂಭವಿಸಿದೆ ಎಂದು  ಅಥೆನ್ಸ್ ಜಿಯೋಡೈನಾಮಿಕ್ ಸಂಸ್ಥೆ ಮಾಹಿತಿ ನೀಡಿದೆ.

Greek Earthquake: ಗ್ರೀಕ್​ನ ದ್ವೀಪದಲ್ಲಿ ಪ್ರಬಲ ಭೂಕಂಪ; ಒಬ್ಬ ಸಾವು, 9 ಜನರಿಗೆ ಗಾಯ
ಭೂಕಂಪವಾಗುತ್ತಿದ್ದಂತೆ ಶಾಲೆಯೊಳಗಿಂದ ಮಕ್ಕಳನ್ನು ಹೊರಗೆ ಕರೆತರಲಾಯಿತು
TV9 Web
| Edited By: |

Updated on: Sep 27, 2021 | 4:26 PM

Share
ಗ್ರೀಕ್​ನ ಕ್ರೀಟ್​ ದ್ವೀಪ (Greek Earthquake)ದಲ್ಲಿ ಇಂದು ಪ್ರಬಲ ಭೂಕಂಪ ಸಂಭವಿಸಿದ್ದು, ಒಬ್ಬ ವ್ಯಕ್ತಿ ಮೃತಪಟ್ಟಿದ್ದಾರೆ. ಸುಮಾರು 9 ಮಂದಿ ಗಾಯಗೊಂಡಿದ್ದಾರೆ. ಸ್ಥಳದಲ್ಲಿದ್ದ ಮನೆಗಳು, ಚರ್ಚೆಗಳು ಕುಸಿದಿದ್ದು, ಕಲ್ಲುಬಂಡೆಗಳೆಲ್ಲ ಒಡೆದುಬಿದ್ದಿವೆ.  ಅರ್ಕಲೋಹರಿ ಗ್ರಾಮದಲ್ಲಿರುವ ಚರ್ಚ್​ವೊಂದು ಕುಸಿದುಬಿದ್ದ ಪರಿಣಾಮ ವ್ಯಕ್ತಿ ಮೃತಪಟ್ಟಿದ್ದಾನೆ. ಗಾಯಗೊಂಡ 9 ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ. ಭೂಕಂಪದ ತೀವ್ರತೆ ರಿಕ್ಟರ್ ಮಾಪಕದಲ್ಲಿ 5.8ರಷ್ಟು ದಾಖಲಾಗಿದೆ. ಹೆರಾಕ್ಲಿಯನ್​ ನಗರದಲ್ಲಿ ಭೂಮಿ ನಡುಗುತ್ತಿದ್ದಂತೆ ಜನರೆಲ್ಲ ಬೀದಿಗೆ ಓಡಿದ್ದಾರೆ. ಶಾಲೆಗಳನ್ನು ಮುಚ್ಚಿ, ಮಕ್ಕಳಿಗೆ  ಮನೆಗೆ ಹೋಗುವ ವ್ಯವಸ್ಥೆ ಮಾಡಲಾಗಿದೆ. 
ಭೂಕಂಪ ಸೋಮವಾರ ಬೆಳಗ್ಗೆ 9.17ರ ಹೊತ್ತಿಗೆ ಗ್ರೀಕ್​ ರಾಜಧಾನಿ ಅಥೆನ್ಸ್​​ನ ದಕ್ಷಿಣ-ಆಗ್ನೇಯಕ್ಕೆ 246 ಕಿಮೀ ದೂರಲ್ಲಿ ಸಂಭವಿಸಿದೆ ಎಂದು  ಅಥೆನ್ಸ್ ಜಿಯೋಡೈನಾಮಿಕ್ ಸಂಸ್ಥೆ ಮಾಹಿತಿ ನೀಡಿದೆ. ನಾವು ಹಲವು ತಿಂಗಳುಗಳಿಂದ ಈ ಪ್ರದೇಶವನ್ನು ಗಮನಿಸುತ್ತಿದ್ದೇವೆ. ಈಗ ಸಂಭವಿಸಿದ ಭೂಕಂಪದ ಬಗ್ಗೆ ಹಿಂದೆಯೇ ಎಚ್ಚರಿಕೆಯನ್ನೂ ನೀಡಿದ್ದೆವು. ಇಂದಿನ ಭೂಕಂಪ ಸಾಗರದ ಅಡಿಯಿಂದ ಆಗಿದ್ದಲ್ಲ, ಭೂಮಿಯಡಿಯಲ್ಲೇ ಆಗಿದೆ. ಜನರಿಗೆ ತೊಂದರೆಯನ್ನುಂಟು ಮಾಡಿದೆ ಎಂದು ಗ್ರೀಸ್​ನ ಭೂಕಂಪಶಾಸ್ತ್ರಜ್ಞ ಗೆರಾಸಿಮೊಸ್ ಪಾಪಡೋಪೌಲೋಸ್ ಹೇಳಿದ್ದಾರೆ.
ಇದೀಗ ಗ್ರೀಕ್​​ನ ದ್ವೀಪದಲ್ಲಿ ಉಂಟಾದ ಭೂಕಂಪದ ತೀವ್ರತೆಯನ್ನು ವಿವಿಧ ಭೂಕಂಪನಶಾಸ್ತ್ರ ಕೇಂದ್ರಗಳು ಬೇರೆಬೇರೆ ರೀತಿಯಲ್ಲಿ ದಾಖಲಿಸಿವೆ. ಯುರೋಪಿಯನ್ ಮೆಡಿಟರೇನಿಯನ್ ಭೂಕಂಪನ ಕೇಂದ್ರದ ಪ್ರಕಾರ ಇಂದು ಕ್ರೀಟ್​ ದ್ವೀಪದಲ್ಲಿ 6.5ರಷ್ಟು ತೀವ್ರತೆಯ ಭೂಕಂಪವಾಗಿದೆ. ಹಾಗೇ, ಇಲ್ಲಿ 6.0ರಷ್ಟು ತೀವ್ರತೆಯಲ್ಲಿ ಭೂಮಿ ನಡುಗಿದೆ ಎಮದು ಯುಎಸ್​​ನ ಜಿಲಾಜಿಕಲ್​ ಸರ್ವೇ ಹೇಳಿದೆ.  ಹಾನಿಗೊಳಗಾದ ಸ್ಥಳದಲ್ಲಿ ರಕ್ಷಣಾ ಕಾರ್ಯ ನಡೆಯುತ್ತಿದೆ.
(1 dead after strong earthquake hits Greek island of Crete homes and churches damaged)

ನಗಾರಿ ಬಾರಿಸಿ ಐತಿಹಾಸಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಸಿಎಂ ಸಿದ್ದರಾಮಯ್ಯ
ನಗಾರಿ ಬಾರಿಸಿ ಐತಿಹಾಸಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಸಿಎಂ ಸಿದ್ದರಾಮಯ್ಯ
ಬಾಯ್​ಫ್ರೆಂಡ್ ಜೊತೆ ಜಗಳವಾಡಿ 4ನೇ ಮಹಡಿಯಿಂದ ಹಾರಿದ ಯುವತಿ!
ಬಾಯ್​ಫ್ರೆಂಡ್ ಜೊತೆ ಜಗಳವಾಡಿ 4ನೇ ಮಹಡಿಯಿಂದ ಹಾರಿದ ಯುವತಿ!
ಜೋಸೈಮನ್ ನಿಧನ: ಫಿಲಂ ಚೇಂಬರ್ ಅಧ್ಯಕ್ಷೆ ಜಯಮಾಲ ಹೇಳಿದ್ದೇನು?
ಜೋಸೈಮನ್ ನಿಧನ: ಫಿಲಂ ಚೇಂಬರ್ ಅಧ್ಯಕ್ಷೆ ಜಯಮಾಲ ಹೇಳಿದ್ದೇನು?
ಸಿಎಂ ಪೂಜೆ ಸಲ್ಲಿಸುವ ವೇಳೆ ಬಿತ್ತು ಬೆಂಕಿ, ತಪ್ಪಿದ ದೊಡ್ಡ ಅನಾಹುತ
ಸಿಎಂ ಪೂಜೆ ಸಲ್ಲಿಸುವ ವೇಳೆ ಬಿತ್ತು ಬೆಂಕಿ, ತಪ್ಪಿದ ದೊಡ್ಡ ಅನಾಹುತ
ಜೋ ಸೈಮನ್ ನಿಧನ ಹೇಗಾಯ್ತು: ಫಿಲಂ ಚೇಂಬರ್​​ನಲ್ಲಿ ಆಗಿದ್ದೇನು?
ಜೋ ಸೈಮನ್ ನಿಧನ ಹೇಗಾಯ್ತು: ಫಿಲಂ ಚೇಂಬರ್​​ನಲ್ಲಿ ಆಗಿದ್ದೇನು?
ಆಫೀಸರ್ಸ್ ಮನೆಯಲ್ಲಿ ಕಂತೆ ಕಂತೆ ಹಣ ನೋಡಿ ಶಾಕ್
ಆಫೀಸರ್ಸ್ ಮನೆಯಲ್ಲಿ ಕಂತೆ ಕಂತೆ ಹಣ ನೋಡಿ ಶಾಕ್
ಬನ್ನೇರುಘಟ್ಟ ಉದ್ಯಾನವನದಲ್ಲಿ ಸಿಬ್ಬಂದಿ ಮೇಲೆ ಚಿರತೆ ದಾಳಿ; ಗಂಭೀರ ಗಾಯ
ಬನ್ನೇರುಘಟ್ಟ ಉದ್ಯಾನವನದಲ್ಲಿ ಸಿಬ್ಬಂದಿ ಮೇಲೆ ಚಿರತೆ ದಾಳಿ; ಗಂಭೀರ ಗಾಯ
ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಭಾರತದ ಸ್ಫೋಟಕ ದಾಂಡಿಗ ನಾಯಕ
ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಭಾರತದ ಸ್ಫೋಟಕ ದಾಂಡಿಗ ನಾಯಕ
ಕನ್ಯಾ ರಾಶಿಯ ಮೇಲೆ ರಾಹುಗ್ರಸ್ತ ಸೂರ್ಯಗ್ರಹಣದ ಪ್ರಭಾವ ಹೇಗಿರಲಿದೆ?
ಕನ್ಯಾ ರಾಶಿಯ ಮೇಲೆ ರಾಹುಗ್ರಸ್ತ ಸೂರ್ಯಗ್ರಹಣದ ಪ್ರಭಾವ ಹೇಗಿರಲಿದೆ?
ಮಹಾಶಿವರಾತ್ರಿ ಎಫೆಕ್ಟ್​​: ಹೂ, ಹಣ್ಣುಗಳ ದರ ಗಗನಕ್ಕೆ; ಗ್ರಾಹಕರು ಕಂಗಾಲು
ಮಹಾಶಿವರಾತ್ರಿ ಎಫೆಕ್ಟ್​​: ಹೂ, ಹಣ್ಣುಗಳ ದರ ಗಗನಕ್ಕೆ; ಗ್ರಾಹಕರು ಕಂಗಾಲು