2 ವಾರಗಳ ಹಿಂದೆಯಷ್ಟೇ ಅಮೆರಿಕ ತೆರಳಿದ್ದ ಇಬ್ಬರು ಭಾರತೀಯ ವಿದ್ಯಾರ್ಥಿಗಳು ಶವವಾಗಿ ಪತ್ತೆ

ಕುಟುಂಬದ ಸದಸ್ಯರ ಪ್ರಕಾರ, ದಿನೇಶ್ ಡಿಸೆಂಬರ್ 28, 2023 ರಂದು ಉನ್ನತ ವ್ಯಾಸಂಗಕ್ಕಾಗಿ ಯುಎಸ್‌ನ ಕನೆಕ್ಟಿಕಟ್‌ನ ಹಾರ್ಟ್‌ಫೋರ್ಡ್‌ಗೆ ಹೋಗಿದ್ದರು. ನಿಕೇಶ್ ಕೆಲವು ದಿನಗಳ ನಂತರ ತಲುಪಿದರು. ಪರಸ್ಪರ ಗೊತ್ತಿರುವ ಗೆಳೆಯರು ಇದ್ದ ಕಾರಣ ಇವರಿಬ್ಬರು ಸ್ಪರ ಸ್ನೇಹಿತರಾಗಿದ್ದರು. ಅಮೆರಿಕಕ್ಕೆ ಹೋದ ನಂತರ ರೂಮ್‌ಮೇಟ್‌ಗಳಾದರು.

2 ವಾರಗಳ ಹಿಂದೆಯಷ್ಟೇ ಅಮೆರಿಕ ತೆರಳಿದ್ದ ಇಬ್ಬರು ಭಾರತೀಯ ವಿದ್ಯಾರ್ಥಿಗಳು ಶವವಾಗಿ ಪತ್ತೆ
ಅಮೆರಿಕ ಪೊಲೀಸ್
Edited By: ರಶ್ಮಿ ಕಲ್ಲಕಟ್ಟ

Updated on: Jan 15, 2024 | 6:46 PM

ಅಮರಾವತಿ/ಹೈದರಾಬಾದ್ ಜನವರಿ 15:  ತೆಲಂಗಾಣದ (Telangana) ವನಪರ್ತಿಯ ಒಬ್ಬ ಮತ್ತು ಆಂಧ್ರಪ್ರದೇಶದ (Andhra Pradesh) ಶ್ರೀಕಾಕುಲಂನ ಇನ್ನೊಬ್ಬ ವಿದ್ಯಾರ್ಥಿ ಇತ್ತೀಚೆಗೆ ಯುಎಸ್‌ನಲ್ಲಿರುವ (US) ತಮ್ಮ ಕನೆಕ್ಟಿಕಟ್ ವಸತಿಗೃಹದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ ಎಂದು ಕುಟುಂಬದ ಸದಸ್ಯರು ಸೋಮವಾರ ತಿಳಿಸಿದ್ದಾರೆ. ವಿದ್ಯಾರ್ಥಿಗಳನ್ನು ತೆಲಂಗಾಣದ ವನಪರ್ತಿಯ ಜಿ ದಿನೇಶ್ (22) ಮತ್ತು ಆಂಧ್ರಪ್ರದೇಶದ ಶ್ರೀಕಾಕುಲಂ ನಿವಾಸಿ ನಿಕೇಶ್ (21) ಎಂದು ಗುರುತಿಸಲಾಗಿದೆ.ತೆಲಂಗಾಣ ವಿದ್ಯಾರ್ಥಿಯ ಕುಟುಂಬ ಸದಸ್ಯರಿಗೆ ಅವನ ಸಾವಿಗೆ ಕಾರಣ ಮತ್ತು ಅವನ ರೂಮ್‌ಮೇಟ್‌ನ ಬಗ್ಗೆ ಸುಳಿವು ಇಲ್ಲ.

ಹತ್ತಿರದ ಕೋಣೆಯಲ್ಲಿ ವಾಸಿಸುವ ದಿನೇಶ್ ಸ್ನೇಹಿತರು ಶನಿವಾರ ರಾತ್ರಿ ನಮಗೆ ಕರೆ ಮಾಡಿ ಅವರ ಸಾವಿನ ಬಗ್ಗೆ ಮತ್ತು ಅವರ ರೂಮ್‌ಮೇಟ್‌ನ ಬಗ್ಗೆ ತಿಳಿಸಿದರು. ಅವರು ಹೇಗೆ ಸತ್ತರು ಎಂಬ ಬಗ್ಗೆ ನಮಗೆ ಯಾವುದೇ ಸುಳಿವು ಸಿಕ್ಕಿಲ್ಲ ಎಂದು ದಿನೇಶ್ ಕುಟುಂಬದವರು ತಿಳಿಸಿದ್ದಾರೆ.

ಕುಟುಂಬದ ಸದಸ್ಯರ ಪ್ರಕಾರ, ದಿನೇಶ್ ಡಿಸೆಂಬರ್ 28, 2023 ರಂದು ಉನ್ನತ ವ್ಯಾಸಂಗಕ್ಕಾಗಿ ಯುಎಸ್‌ನ ಕನೆಕ್ಟಿಕಟ್‌ನ ಹಾರ್ಟ್‌ಫೋರ್ಡ್‌ಗೆ ಹೋಗಿದ್ದರು. ನಿಕೇಶ್ ಕೆಲವು ದಿನಗಳ ನಂತರ ತಲುಪಿದರು. ಪರಸ್ಪರ ಗೊತ್ತಿರುವ ಗೆಳೆಯರು ಇದ್ದ ಕಾರಣ ಇವರಿಬ್ಬರು ಸ್ಪರ ಸ್ನೇಹಿತರಾಗಿದ್ದರು. ಅಮೆರಿಕಕ್ಕೆ ಹೋದ ನಂತರ ರೂಮ್‌ಮೇಟ್‌ಗಳಾದರು.

ದಿನೇಶ್ ಅವರ ಮೃತದೇಹವನ್ನು ಮರಳಿ ತರಲು ಕೇಂದ್ರ ಪ್ರವಾಸೋದ್ಯಮ ಸಚಿವ ಜಿ ಕಿಶನ್ ರೆಡ್ಡಿ ಮತ್ತು ತೆಲಂಗಾಣ ಮುಖ್ಯಮಂತ್ರಿ ಎ ರೇವಂತ್ ರೆಡ್ಡಿ ಅವರ ಸಹಾಯವನ್ನು ಕೋರಿದ್ದೇವೆ ಎಂದು ದಿನೇಶ್ ಅವರ ಕುಟುಂಬದ ಸದಸ್ಯರೊಬ್ಬರು ತಿಳಿಸಿದ್ದಾರೆ. ವನಪರ್ತಿ ಶಾಸಕಿ ಮೇಘಾ ರೆಡ್ಡಿ ಕೂಡ ದಿನೇಶ್ ಮೃತದೇಹವನ್ನು ತರಲು ಸಹಾಯ ಮಾಡಿದ್ದಾರೆ. ಅವರು ವಿದ್ಯಾರ್ಥಿಯ ಕುಟುಂಬ ಸದಸ್ಯರನ್ನು ಭೇಟಿ ಮಾಡಿ ಸಾಂತ್ವನ ಹೇಳಿದರು.

ಇತ್ತೀಚೆಗಷ್ಟೇ ನಿಕೇಶ್ ಅವರ ಕುಟುಂಬ ಸದಸ್ಯರೊಂದಿಗೆ ಯಾವುದೇ ಸಂಪರ್ಕವನ್ನು ಹೊಂದಿಲ್ಲ ಎಂದು ದಿನೇಶ್ ಅವರ ಕುಟುಂಬದ ಸದಸ್ಯ ಹೇಳಿದರು.

ಇದನ್ನೂ ಓದಿ: ಹಣದುಬ್ಬರ: ಪಾಕಿಸ್ತಾನದಲ್ಲಿ ಒಂದು ಡಜನ್ ಮೊಟ್ಟೆಗೆ 400 ರೂ., ಕೆಜಿ ಈರುಳ್ಳಿಗೆ 250 ರೂ. ಚಿಕನ್ ಬೆಲೆಯಂತೂ ಕೇಳಲೇಬೇಡಿ

ಅದೇ ರೀತಿ ಶ್ರೀಕಾಕುಲಂ ಜಿಲ್ಲಾಡಳಿತಕ್ಕೂ ನಿಕೇಶ್ ಬಗ್ಗೆ ಇನ್ನೂ ಮಾಹಿತಿ ಇಲ್ಲ. ನಿಕೇಶ್ ಅಥವಾ ಅವರ ಕುಟುಂಬ ಸದಸ್ಯರ ಬಗ್ಗೆ ಜಿಲ್ಲಾಧಿಕಾರಿಗಳು ಸಹ ಮಾಹಿತಿ ಪಡೆದಿಲ್ಲ ಎಂದು ಶ್ರೀಕಾಕುಲಂ ಪೊಲೀಸ್ ವಿಶೇಷ ಬ್ರಾಂಚ್ ಡಿಎಸ್ಪಿ ಕೆ ಬಾಲರಾಜು ತಿಳಿಸಿದ್ದಾರೆ. ವಿದ್ಯಾರ್ಥಿ ಸಾವಿಗೆ ಸಂತಾಪ ಸೂಚಿಸಿದ ವನಪರ್ತಿ ಶಾಸಕ ಟಿ ಮೇಘಾ ರೆಡ್ಡಿ ವನಪರ್ತಿ ಪಟ್ಟಣದಲ್ಲಿ ವಿದ್ಯಾರ್ಥಿನಿ ಕುಟುಂಬ ಸದಸ್ಯರನ್ನು ಭೇಟಿ ಮಾಡಿ ಸಾಂತ್ವನ ಹೇಳಿದರು.

ವಿದ್ಯಾರ್ಥಿಯ ಮೃತದೇಹವನ್ನು ಅಮೆರಿಕದಿಂದ ಭಾರತಕ್ಕೆ ತರುವ ಕುರಿತು ತೆಲಂಗಾಣ ಮುಖ್ಯಮಂತ್ರಿ ಎ ರೇವಂತ್ ರೆಡ್ಡಿ ಅವರೊಂದಿಗೆ ಶಾಸಕರು ಮಾತನಾಡಿದ್ದಾರೆ. ಮುಖ್ಯಮಂತ್ರಿಗಳು ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಮೃತದೇಹವನ್ನು ಸ್ವಗ್ರಾಮಕ್ಕೆ ತರಲು ಕ್ರಮಕೈಗೊಳ್ಳುವುದಾಗಿ ತಿಳಿಸಿದರು.

ಮತ್ತಷ್ಟು ವಿದೇಶ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 6:46 pm, Mon, 15 January 24

Web contact

TV9 Kannada

Read More
Follow Us