AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಮೆರಿಕದ ಜೈಲಿನೊಳಗೆ ತಿಗಣೆ ಮುತ್ತಿಕೊಂಡ ಸ್ಥಿತಿಯಲ್ಲಿ ಕೈದಿಯೊಬ್ಬನ ಮೃತದೇಹ ಪತ್ತೆ

ಮೂರು ತಿಂಗಳ ನಂತರ ಥಾಂಪ್ಸನ್  ಕೀಟಗಳು ಮತ್ತು ತಿಗಣೆಗಳಿಗೆ ಆಹಾರವಾಗಿದ್ದು ಹೊಲಸಾದ ಜೈಲಿನ ಕೋಣೆಯಲ್ಲಿ ಸತ್ತು ಬಿದ್ದಿದ್ದರು.  ಬಂಧನದ ಅಧಿಕಾರಿಗಳಲ್ಲಿ ಒಬ್ಬರು ಸಿಪಿಆರ್ ಅನ್ನು ನಿರ್ವಹಿಸಲು ನಿರಾಕರಿಸಿದ್ದರು ಎನ್ನಲಾಗುತ್ತಿದೆ.

ಅಮೆರಿಕದ ಜೈಲಿನೊಳಗೆ ತಿಗಣೆ ಮುತ್ತಿಕೊಂಡ ಸ್ಥಿತಿಯಲ್ಲಿ ಕೈದಿಯೊಬ್ಬನ ಮೃತದೇಹ ಪತ್ತೆ
ಪ್ರಾತಿನಿಧಿಕ ಚಿತ್ರ
ರಶ್ಮಿ ಕಲ್ಲಕಟ್ಟ
|

Updated on: Apr 15, 2023 | 7:58 PM

Share

ಅಮೆರಿಕದ (US) ಅಟ್ಲಾಂಟಾದ (Atlanta )ಜೈಲಿನಲ್ಲಿದ್ದ 35 ವರ್ಷದ ವ್ಯಕ್ತಿಯೊಬ್ಬರನ್ನು ಕೀಟಗಳು ಮತ್ತು ತಿಗಣೆ ತಿಂದು ಹಾಕಿದೆ ಎಂದು ಸಂತ್ರಸ್ತರ ಕುಟುಂಬದ ವಕೀಲರು ಆರೋಪಿಸಿದ್ದಾರೆ. ನ್ಯೂಯಾರ್ಕ್ ಪೋಸ್ಟ್ ಪ್ರಕಾರ ಮೃತ ವ್ಯಕ್ತಿಯ ಕುಟುಂಬವು ಈಗ ಅವರ ಸಾವಿನ ಬಗ್ಗೆ ಕ್ರಿಮಿನಲ್ ತನಿಖೆಗೆ ಒತ್ತಾಯಿಸುತ್ತಿದ್ದು ಜೈಲನ್ನು ಮುಚ್ಚಬೇಕು ಮತ್ತು ಅದನ್ನು ಅಲ್ಲಿಂದ ಬದಲಿಸಬೇಕೆಂದು ಒತ್ತಾಯಿಸುತ್ತಿದೆ. ಪೋಲೀಸರ ಪ್ರಕಾರ ಜೂನ್ 12, 2022 ರಂದು ಅಟ್ಲಾಂಟಾದಲ್ಲಿ ಬ್ಯಾಟರಿಯ ಆರೋಪದ ಮೇಲೆ ಲಾಶಾನ್ ಥಾಂಪ್ಸನ್ ಎಂಬಾತನನ್ನು ಬಂಧಿಸಲಾಗಿತ್ತು. ನಂತರ ಆತನನ್ನು ಫುಲ್ಟನ್ ಕೌಂಟಿ ಜೈಲಿಗೆ ಕರೆದೊಯ್ಯಲಾಯಿತು. ಅಲ್ಲಿ ಆತ ಮಾನಸಿಕ ಅಸ್ವಸ್ಥ ಎಂದು ಅಧಿಕಾರಿಗಳು ನಿರ್ಧರಿಸಿದ ನಂತರ ಅವರನ್ನು ಮನೋವೈದ್ಯಕೀಯ ವಿಭಾಗದಲ್ಲಿ ಇರಿಸಲಾಯಿತು. ಸೆಪ್ಟೆಂಬರ್ 13, 2022 ರಂದು, ಥಾಂಪ್ಸನ್ ಅವರ ಜೈಲು ಕೋಣೆಯಲ್ಲಿ ಪ್ರತಿಕ್ರಿಯೆ ನೀಡಲಿಲ್ಲ. ಅವರಿಗೆ CPR ನೀಡುವ ಪ್ರಯತ್ನ ಮಾಡಿದರೂ ಪ್ರಯೋಜನ ಆಗಲಿಲ್ಲ.

ಮೂರು ತಿಂಗಳ ನಂತರ ಥಾಂಪ್ಸನ್  ಕೀಟಗಳು ಮತ್ತು ತಿಗಣೆಗಳಿಗೆ ಆಹಾರವಾಗಿದ್ದು ಹೊಲಸಾದ ಜೈಲಿನ ಕೋಣೆಯಲ್ಲಿ ಸತ್ತು ಬಿದ್ದಿದ್ದರು.  ಬಂಧನದ ಅಧಿಕಾರಿಗಳಲ್ಲಿ ಒಬ್ಬರು ಸಿಪಿಆರ್ ಅನ್ನು ನಿರ್ವಹಿಸಲು ನಿರಾಕರಿಸಿದ್ದರು ಎನ್ನಲಾಗುತ್ತಿದೆ. ಥಾಂಪ್ಸನ್ ಇದ್ದ ಜೈಲು ಜೀವಿಗಳಿರುವ ಕೋಣೆಯಾಗಿತ್ತು. ಅವರು ಇದಕ್ಕೆ ಅರ್ಹರಾಗಿರಲಿಲ್ಲ. ಅವರ ಸಾವಿಗೆ ಯಾರನ್ನಾದರೂ ಹೊಣೆಗಾರರನ್ನಾಗಿ ಮಾಡಬೇಕು ಎಂದು ಥಾಂಪ್ಸನ್ ಅವರ ಕುಟುಂಬದ ವಕೀಲ ಮೈಕೆಲ್ ಡಿ ಹಾರ್ಪರ್ ಹೇಳಿದ್ದಾರೆ.

ಅವರು ಫುಲ್ಟನ್ ಕೌಂಟಿ ಜೈಲ್ ಕೊಳಕು ಪರಿಸ್ಥಿತಿಯೇ ಆತನ ಸಾವಿಗೆ ಕಾರಣವೆಂದು ಉಲ್ಲೇಖಿಸಿದ್ದಾರೆ. ಥಾಂಪ್ಸನ್ ಕುಸಿದುಹೋಗುತ್ತಿರುವುದನ್ನು ಜೈಲು ಸಿಬ್ಬಂದಿ ಗಮನಿಸಿದರು ಆದರೆ ಅವರಿಗೆ ಸಹಾಯ ಮಾಡಲು ಏನನ್ನೂ ಮಾಡಲಿಲ್ಲ ಎಂದು ಅವರು ಆರೋಪಿಸಿದರು.

ಜೈಲಿನ ಒಳಗಿನ ಚಿತ್ರಗಳು ಥಾಂಪ್ಸನ್ ಅವರ ದೇಹ ಮತ್ತು ಜೈಲು ಕೋಣೆಯ ಭಯಾನಕ ಮತ್ತು ಕೊಳಕು ಪರಿಸ್ಥಿತಿಗಳನ್ನು ತೋರಿಸುತ್ತವೆ. ಅಲ್ಲಿ ಕೊಳಕು ತುಂಬಿಕೊಂಡಿದೆ.

ಇದನ್ನೂ ಓದಿ: Sudan: ಸೇನೆ-ಅರೆಸೇನೆ ನಡುವೆ ಘರ್ಷಣೆ, ಸುಡಾನ್‌ನಲ್ಲಿರುವ ಭಾರತೀಯರು ಮನೆಯೊಳಗೆ ಇರುವಂತೆ ರಾಯಭಾರ ಕಚೇರಿ ಸೂಚನೆ

ಕೌಂಟಿ ವೈದ್ಯಕೀಯ ಪರೀಕ್ಷಕರ ಕಚೇರಿಯ ವರದಿಯು ಅವರ ದೇಹದಲ್ಲಿ ದೈಹಿಕ ಗಾಯದ ಯಾವುದೇ ಲಕ್ಷಣಗಳಿಲ್ಲ ಎಂದು ಹೇಳಿದೆ. ಆದರೆ ಯುಎಸ್ಎ ಟುಡೆ ಪ್ರಕಾರ ಅವರ ದೇಹಕ್ಕೆ ತಿಗಣೆ ಮುತ್ತಿರುವುದನ್ನು ಗಮನಿಸಿದೆ. ಆದಾಗ್ಯೂ, ಸಾವಿನ ಕಾರಣವನ್ನು ನಿರ್ಧರಿಸಲಾಗಿಲ್ಲ ಎಂದು ಅದು ಹೇಳಿದೆ.

ಮೃತದೇಹ ಮೇಲೆ ಆಘಾತದ ಯಾವುದೇ ಸ್ಪಷ್ಟ ಲಕ್ಷಣಗಳು ಕಂಡುಬಂದಿಲ್ಲ. ಮೃತನ ದೇಹವನ್ನು ತಿಗಣೆ ಮುಚ್ಚಿಕೊಂಡಿತ್ತು ಎಂದು ವೈದ್ಯಕೀಯ ಪರೀಕ್ಷಕರ ವರದಿ ತಿಳಿಸಿದೆ.

ಮತ್ತಷ್ಟು ವಿದೇಶ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇಂಗ್ಲೆಂಡ್ ವರನ ಕೈ ಹಿಡಿದ ಬೇಲೂರಿನ ವಧು! ನಡೆಯಿತು ಅದ್ದೂರಿ ಮದುವೆ
ಇಂಗ್ಲೆಂಡ್ ವರನ ಕೈ ಹಿಡಿದ ಬೇಲೂರಿನ ವಧು! ನಡೆಯಿತು ಅದ್ದೂರಿ ಮದುವೆ
ಎಲಿಮಿನೇಟ್ ಆಗದಿದ್ದರೂ ರಕ್ಷಿತಾ ಶೆಟ್ಟಿಗೆ ಶುರುವಾಯ್ತು ಹೊಸ ಚಿಂತೆ
ಎಲಿಮಿನೇಟ್ ಆಗದಿದ್ದರೂ ರಕ್ಷಿತಾ ಶೆಟ್ಟಿಗೆ ಶುರುವಾಯ್ತು ಹೊಸ ಚಿಂತೆ
Video: ಆರತಿ ಎತ್ತಿರೋ ಫುಟ್​ಪಾತ್​ ಮೇಲೆ ಗಾಡಿ ಓಡ್ಸವ್ರಿಗೆ
Video: ಆರತಿ ಎತ್ತಿರೋ ಫುಟ್​ಪಾತ್​ ಮೇಲೆ ಗಾಡಿ ಓಡ್ಸವ್ರಿಗೆ
ಸೈಕಲ್ ಸವಾರನಿಗೆ ಡಿಕ್ಕಿ ಹೊಡೆದು ತಿರುಗಿಯೂ ನೋಡದೆ ಹೋದ ಬೈಕ್ ಸವಾರ
ಸೈಕಲ್ ಸವಾರನಿಗೆ ಡಿಕ್ಕಿ ಹೊಡೆದು ತಿರುಗಿಯೂ ನೋಡದೆ ಹೋದ ಬೈಕ್ ಸವಾರ
ವಿಷ್ಣು ತುಳಿಸಿ, ಹಾಗೂ ಲಕ್ಷ್ಮೀ ತುಳಸಿ ಎರೆಡೂ ಮನೆಯಲ್ಲಿರಬೇಕು ಯಾಕೆ?
ವಿಷ್ಣು ತುಳಿಸಿ, ಹಾಗೂ ಲಕ್ಷ್ಮೀ ತುಳಸಿ ಎರೆಡೂ ಮನೆಯಲ್ಲಿರಬೇಕು ಯಾಕೆ?
ಇಂದು ಈ ರಾಶಿಯವರಿಗೆ ಐದು ಗ್ರಹಗಳ ಶುಭಫಲವಿರುತ್ತದೆ
ಇಂದು ಈ ರಾಶಿಯವರಿಗೆ ಐದು ಗ್ರಹಗಳ ಶುಭಫಲವಿರುತ್ತದೆ
ಮದ್ಯ ಕರ್ನಾಟದಲ್ಲಿ ಶಮನೂರು ಸಾಮ್ರಾಜ್ಯ: ಹೆಲಿಕಾಪ್ಟರ್, ಮಿನಿ ವಿಮಾನ ಒಡೆಯ
ಮದ್ಯ ಕರ್ನಾಟದಲ್ಲಿ ಶಮನೂರು ಸಾಮ್ರಾಜ್ಯ: ಹೆಲಿಕಾಪ್ಟರ್, ಮಿನಿ ವಿಮಾನ ಒಡೆಯ
ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?