AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Ahmad Massoud: ಪಂಜ್​ಶಿರ್​ ಕಣಿವೆಯಲ್ಲಿ ತಾಲಿಬಾನ್ ವಿರೋಧಿ ಹೋರಾಟ ಮುಂದುವರಿಸುತ್ತಿರುವ ಅಹ್ಮದ್ ಮಸೂದ್ ಯಾರು?

ತಂದೆಯ ಹಾದಿಯಲ್ಲಿ ಮುನ್ನಡೆದಿರುವ ಅಹ್ಮದ್ ಮಸೂದ್ ಇದೀಗ ಪಂಜ್​ಶಿರ್ ಕಣಿವೆಯಲ್ಲಿ ತಾಲಿಬಾನ್ ವಿರೋಧಿ ಹೋರಾಟವನ್ನು ಮುನ್ನಡೆಸುತ್ತಿದ್ದಾರೆ.

Ahmad Massoud: ಪಂಜ್​ಶಿರ್​ ಕಣಿವೆಯಲ್ಲಿ ತಾಲಿಬಾನ್ ವಿರೋಧಿ ಹೋರಾಟ ಮುಂದುವರಿಸುತ್ತಿರುವ ಅಹ್ಮದ್ ಮಸೂದ್ ಯಾರು?
ಅಹ್ಮದ್ ಮಸೂದ್
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ|

Updated on: Aug 24, 2021 | 10:46 PM

Share

1980ರ ದಶಕದಲ್ಲಿ ಸೋವಿಯತ್ ಒಕ್ಕೂಟದ ವಿರುದ್ಧ ಅಫ್ಘಾನಿಸ್ತಾನದಲ್ಲಿ ನಡೆದ ಸಂಘರ್ಷದ ನೇತೃತ್ವ ವಹಿಸಿದ್ದ ಮುಂಚೂಣಿಯ ನಾಯಕರಲ್ಲಿ ಅಹ್ಮದ್ ಶಾ ಮಸೂದ್ ಸಹ ಒಬ್ಬರು. ಸೆಪ್ಟೆಂಬರ್ 9, 2001ರಂದು ತಾಲಿಬಾನ್ ಮತ್ತು ಅಲ್​ಖೈದಾ ಉಗ್ರರು ಮಸೂದ್​ರನ್ನು ಕೊಂದಿದ್ದರು. ಇದೇ ಅಹ್ಮದ್ ಶಾ ಮಸೂದ್​ರ ಮಗ ಅಹ್ಮದ್ ಮಸೂದ್. ತಂದೆಯ ಹಾದಿಯಲ್ಲಿ ಮುನ್ನಡೆದಿರುವ ಈತ ಇದೀಗ ಪಂಜ್​ಶಿರ್ ಕಣಿವೆಯಲ್ಲಿ ತಾಲಿಬಾನ್ ವಿರೋಧಿ ಹೋರಾಟವನ್ನು ಮುನ್ನಡೆಸುತ್ತಿದ್ದಾರೆ.

ಅಫ್ಘಾನಿಸ್ತಾನದ ರಾಷ್ಟ್ರೀಯ ಪ್ರತಿರೋಧ ಹೋರಾಟವನ್ನು (National Resistance Front) ಅಹ್ಮದ್ ಮಸೂದ್ ಸಂಘಟಿಸಿದ್ದಾರೆ. ದಾಳಿ ಸಂಘಟನೆ, ವ್ಯೂಹ ರಚನೆ ಮತ್ತು ನಾಯಕತ್ವದ ಗುಣದಲ್ಲಿ ಅಹ್ಮದ್ ಮಸೂದ್ ತನ್ನ ತಂದೆಯನ್ನೇ ಬಹುಪಾಲು ಹೋಲುತ್ತಾರೆ,

ತಾಲಿಬಾನ್ ವಿರೋಧಿ ಹೋರಾಟದ ಸಂಘಟನೆ ಮತ್ತು ಮುಂದಿನ ಹಾದಿಗಳ ಬಗ್ಗೆ ವಾಷಿಂಗ್​ಟನ್​ ಪೋಸ್ಟ್​ ದಿನಪತ್ರಿಕೆಗೆ ಅಹ್ಮದ್ ಮಸೂದ್ ಲೇಖನವೊಂದನ್ನು ಬರೆದಿದ್ದಾರೆ. ‘ನಾನು ಪಂಜ್​ಶಿರ್​ ಕಣಿವೆಯಿಂದ ಈ ಬರಹ ಬರೆಯುತ್ತಿದ್ದೇನೆ. ಮುಜಾಹಿದ್ದೀನ್ ಹೋರಾಟಗಾರರೊಂದಿಗೆ ನನ್ನ ತಂದೆಯ ಹೆಜ್ಜೆಗುರುತುಗಳನ್ನೇ ಅನುಸರಿಸುತ್ತೇನೆ. ತಾಲಿಬಾನ್ ವಿರುದ್ಧ ಮತ್ತೊಮ್ಮೆ ಹೋರಾಡಲು ಸಿದ್ಧವಾಗಿದ್ದೇವೆ. ನಮಗೆ ಶಸ್ತ್ರಾಸ್ತ್ರಗಳ ಕೊರತೆಯಿಲ್ಲ. ನನ್ನ ತಂದೆಯ ಕಾಲದಿಂದಲೂ ಸಂಗ್ರಹಿಸಿದ್ದ ಶಸ್ತ್ರಾಸ್ತ್ರಗಳ ಸಂಗ್ರಹ ನಮ್ಮ ಬಳಿಯಿವೆ. ಇಂಥ ಪರಿಸ್ಥಿತಿ ಬರಬಹುದು ಎಂದು ಮೊದಲೇ ಊಹಿಸಿದ್ದೆವು ಎಂದು ಹೇಳಿದ್ದರು.

ತಾಲಿಬಾನ್ ಕೇವಲ ಅಫ್ಘಾನಿಸ್ತಾನ ಒಂದರ ಸಮಸ್ಯೆಯಲ್ಲ. ತಾಲಿಬಾನ್ ನಿಯಂತ್ರಣದಲ್ಲಿರುವ ಅಫ್ಘಾನಿಸ್ತಾನವು ಮುಂದಿನ ದಿನಗಳಲ್ಲಿ ಇಸ್ಲಾಮಿಕ್ ಉಗ್ರಗಾಮಿಗಳ ತವರೂರು ಆಗಲಿದೆ. ವಿವಿಧ ದೇಶಗಳ ಪ್ರಜಾಸತ್ತಾತ್ಮಕ ಸರ್ಕಾರಗಳ ವಿರುದ್ಧ ಸಂಚುಗಳು ಇಲ್ಲಿ ರೂಪುಗೊಳ್ಳುತ್ತವೆ ಎಂದು ವಿಶ್ಲೇಷಿಸಿದ್ದರು. ತಾಲಿಬಾನ್ ವಿರುದ್ಧ ಎಲ್ಲರೂ ಕೈಜೋಡಿಸಬೇಕು ಎಂದು ಫ್ರೆಂಚ್ ತತ್ವಶಾಸ್ತ್ರಜ್ಞ ಬರ್​ನರ್ಡ್​-ಹೆನ್ರಿ ಲಿವಿ ಅವರೊಂದಿಗೆ ಮಾತನಾಡುವಾಗ ಹೇಳಿದ್ದ ಮಸೂದ್, ಪ್ರತಿರೋಧ ಇದೀಗ ಆರಂಭವಾಗಿದೆ. ಶರಣಾಗತಿ ಎನ್ನುವ ಪದವೇ ನನ್ನ ಪದಕೋಶದಲ್ಲಿ ಇಲ್ಲ ಎಂದು ಹೇಳಿದ್ದರು.

1998ರಲ್ಲಿ ಪಂಜ್​ಶಿರ್​ ಗುಹೆಗಳಲ್ಲಿ ಅಹ್ಮದ್ ಶಾ ಮಸೂದ್​ರ ತಂದೆ ಹೋರಾಟಗಾರರನ್ನು ಸಂಘಟಿಸಿದಾಗ ಮಸೂದ್​ಗೆ ಕೇವಲ 9 ವರ್ಷ. ನೀವು ನಿಮ್ಮ ಸ್ವಾತಂತ್ರ್ಯಕ್ಕಾಗಿ ಹೋರಾಡುವಾಗ, ನಮ್ಮ ಸ್ವಾತಂತ್ರ್ಯಕ್ಕೂ ಹೋರಾಡುತ್ತಿರುತ್ತೀರಿ ಎಂಬುದು ಅವರ ನಂಬಿಕೆ.

ತಮ್ಮ ಬರಹದಲ್ಲಿಯೂ ಮಸೂದ್ ಇದೇ ವಿಚಾರವನ್ನು ಪ್ರತಿಪಾದಿಸಿ, ಪಾಶ್ಚಿಮಾತ್ಯ ದೇಶಗಳ ನೆರವು ಯಾಚಿಸಿದ್ದಾರೆ. ಸ್ವತಂತ್ರ ಸಮಾಜ ನಿರ್ಮಿಸಲು ನಾವು ಬಹುಕಾಲದಿಂದ ಹೋರಾಡಿದ್ದೇವೆ. ನಮ್ಮ ಹೆಣ್ಮಕ್ಕಳು ವೈದ್ಯರಾಗಲು, ನಮ್ಮ ಪತ್ರಕರ್ತರು ಮುಕ್ತವಾಗಿ ವರದಿ ಮಾಡಲು, ಯುವಜನರು ತಮಗೆ ಬೇಕಾದಂತೆ ಹಾಡಿ-ಕುಣಿಯಲು, ಫುಟ್​ಬಾಲ್ ಮ್ಯಾಚ್ ನೋಡಲು ಅವಕಾಶವಿರುವ ಸಮಾಜ ರೂಪಿಸಲು ಶ್ರಮಿಸಿದ್ದೆವು ಎಂದು ಹೇಳಿದ್ದರು. ತಾಲಿಬಾನ್ ಆಡಳಿತದಲ್ಲಿ ಇವೆಲ್ಲವೂ ಮರಣದಂಡನೆಗೆ ಯೋಗ್ಯ ಎನಿಸುವ ಅಪರಾಧಗಳಾಗಿದ್ದವು.

(Details about Ahmad Massoud who is leading fight against Taliban in Panjjshir Valley)

ಇದನ್ನೂ ಓದಿ: ಪಂಜ್​ಶಿರ್​ ಹೋರಾಟಕ್ಕೆ ತಜಕಿಸ್ತಾನ್ ಬೆಂಬಲ: ಮತ್ತೊಂದು ಮಜಲಿಗೆ ಅಫ್ಘಾನಿಸ್ತಾನ ಯುದ್ಧ

ಇದನ್ನೂ ಓದಿ: ಮತ್ತೊಂದು ರಕ್ತಸಿಕ್ತ ಅಧ್ಯಾಯ: ತಾಲಿಬಾನ್ ವಿರೋಧಿಗಳ ಹಿಡಿತದಲ್ಲಿರುವ ಪಂಜ್​ಶಿರ್​ ಕಣಿವೆಯತ್ತ ಧಾವಿಸಿದ ಉಗ್ರರು

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ