ನಿರಂತರ ಹೋರಾಟ, ಅಪಾರ ಸಾವು-ನೋವು: ಕದನ ವಿರಾಮಕ್ಕೆ ಕರೆ ನೀಡಿದ ಪಂಜಶಿರ್​ ಹೋರಾಟಗಾರರು

ಪಂಜಶಿರ್​ ವ್ಯಾಲಿಯ ಹೋರಾಟ ಮಾಡುತ್ತಿರುವ ನ್ಯಾಶನಲ್​ ರೆಸಿಸ್ಟೆನ್ಸ್​ ಫ್ರಂಟ್​ ಆಫ್​ ಅಫ್ಘಾನಿಸ್ತಾನ ಸಂಘಟನೆ ನಾಯಕ ಅಹ್ಮದ್​ ಮಸೂದ್​, ತಾವು ಶಾಂತಿ ಮಾತುಕತೆಗೆ ಸಿದ್ಧ ಎಂದು ಹೇಳಿದ್ದಾರೆ.

ನಿರಂತರ ಹೋರಾಟ, ಅಪಾರ ಸಾವು-ನೋವು: ಕದನ ವಿರಾಮಕ್ಕೆ ಕರೆ ನೀಡಿದ ಪಂಜಶಿರ್​ ಹೋರಾಟಗಾರರು
ಪಂಜಶಿರ್​ ಹೋರಾಟಗಾರರು
Follow us
| Updated By: Lakshmi Hegde

Updated on:Sep 06, 2021 | 9:36 AM

ತಾಲಿಬಾನಿಗಳಿಗೆ ಬಹುದೊಡ್ಡ ಸವಾಲಾಗಿದ್ದ ಪಂಜಶಿರ್​ ಕಣಿವೆಯಲ್ಲಿ ಹೋರಾಟ ಮುಂದುವರಿದಿದೆ. ಪಂಜಶಿರ್​ನ್ನು ತಾವು ವಶಪಡಿಸಿಕೊಂಡಿದ್ದಾಗಿ ತಾಲಿಬಾನ್​ ಪಡೆಗಳು ಹೇಳಿದ್ದರೂ, ಪಂಜಶಿರ್​ ಪ್ರತಿರೋಧಕ ಪಡೆ ಇದನ್ನು ಅಲ್ಲಗಳೆದಿದೆ. ತಾಲಿಬಾನಿಗಳು ಪಂಜಶಿರ್​ ರಸ್ತೆಯನ್ನಷ್ಟೇ ವಶಪಡಿಸಿಕೊಂಡಿದ್ದಾರೆ ಎಂದು ತಿರುಗೇಟು ನೀಡಿದೆ. ಈ ಮಧ್ಯೆ ಪಂಜಶಿರ್​ ಪ್ರತಿರೋಧಕ ಪಡೆ (National Resistance Front of Afghanistan) ಕದನ ವಿರಾಮಕ್ಕೆ ಕರೆ ನೀಡಿದೆ. ಅಫ್ಘಾನಿಸ್ತಾನದಲ್ಲಿ ಈಗ ತಾಲಿಬಾನಿಗಳ ಹೊಸ ನಿಯಮಗಳು ಜಾರಿಯಾದ ಬೆನ್ನಲ್ಲೇ ಪಂಜಶಿರ್​ ಕಣಿವೆಯಲ್ಲೂ ಹೆಚ್ಚೆಚ್ಚು ಸಂಘರ್ಷಗಳು ನಡೆಯುತ್ತಿವೆ. ಕಳೆದ ಕೆಲವು ದಿನಗಳಿಂದ ತಾಲಿಬಾನ್​ ಮತ್ತು ಪಂಜಶಿರ್​ ಹೋರಾಟ ಪಡೆಗಳ ನಡುವೆ ಸಿಕ್ಕಾಪಟೆ ಹೊಡೆದಾಟ, ಸಂಘರ್ಷಗಳು ನಡೆದ ಪರಿಣಾಮ ಎರಡೂ ಕಡೆಗಳಿಂದ ಸಾಕಷ್ಟು ಸಾವು-ನೋವು ಸಂಭವಿಸಿದೆ. ಈ ಮಧ್ಯೆ ಎನ್​​ಆರ್​ಎಫ್​​ಎ ಕದನ ವಿರಾಮಕ್ಕೆ ಕರೆ ನೀಡಿದೆ.  ತಾಲಿಬಾನ್​ ಕೂಡ ಒಪ್ಪಿಕೊಂಡು ಯುದ್ಧ ನಿಲ್ಲಿಸಿದೆ ಎಂದು ವರದಿಯಾಗಿದೆ. 

ಮಾತುಕತೆಗೆ ಸಿದ್ಧವೆಂದ ಅಹ್ಮದ್​ ಮಸೂದ್​ ಇನ್ನು ಪಂಜಶಿರ್​ ವ್ಯಾಲಿಯ ಹೋರಾಟ ಮಾಡುತ್ತಿರುವ ನ್ಯಾಶನಲ್​ ರೆಸಿಸ್ಟೆನ್ಸ್​ ಫ್ರಂಟ್​ ಆಫ್​ ಅಫ್ಘಾನಿಸ್ತಾನ ಸಂಘಟನೆ ನಾಯಕ ಅಹ್ಮದ್​ ಮಸೂದ್​, ತಾವು ಶಾಂತಿ ಮಾತುಕತೆಗೆ ಸಿದ್ಧ ಎಂದು ಹೇಳಿದ್ದಾರೆ. ಪ್ರಸ್ತುತ ಉಂಟಾಗಿರುವ ಸಮಸ್ಯೆಯನ್ನು, ದ್ವೇಷದ ಸ್ಥಿತಿಯನ್ನು ಅಂತ್ಯಗೊಳಿಸಲು ನಾವು ಒಪ್ಪುತ್ತೇವೆ. ಅದಕ್ಕೆ ತಾಲಿಬಾನ್​ ಕೂಡ ಒಪ್ಪಬೇಕು..ಮುಸ್ಲಿಂ ಧಾರ್ಮಿಕ ಗುರುಗಳ ಕರೆಗೆ ಅವರು ಸ್ಪಂದಿಸಿ, ದಾಳಿಯನ್ನು ನಿಲ್ಲಿಸಬೇಕು ಎಂದೂ ಮಸೂದ್​ ಹೇಳಿದ್ದಾರೆ.

ತಾಲಿಬಾನಿಗಳು ಪಂಜಶಿರ್​ ಮತ್ತು ಅಂದರಾಬ್​​ನಲ್ಲಿ ತಮ್ಮ ದಾಳಿ ಹಾಗೂ ಸೇನಾ ಕಾರ್ಯಾಚರಣೆಯನ್ನು ತಕ್ಷಣ ನಿಲ್ಲಿಸಬೇಕು. ಹಾಗೊಮ್ಮೆ ಮಾಡಿದರೆ ನಾವೂ ಕೂಡ ನಮ್ಮ ಹೋರಾಟವನ್ನು ಬಿಡುತ್ತೇವೆ. ಮಾತುಕತೆ ಮೂಲಕ ಬಗೆಹರಿಸಿಕೊಳ್ಳಲು ತಾಲಿಬಾನಿಗಳು ಬರಬೇಕು ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಮಗಳನ್ನು ಸೂರ್ಯ-ಜ್ಯೋತಿಕಾ ದಂಪತಿಯ ಕೈಗೆ ಒಪ್ಪಿಸಿದ ಸ್ಟಾರ್​ ನಿರ್ದೇಶಕ; ಏನಾಗಲಿದೆ ಅದಿತಿ ಶಂಕರ್​ ಭವಿಷ್ಯ?

ಐದು ರೂಪಾಯಿ ನಾಣ್ಯ ನುಂಗಿದ್ದ 4 ವರ್ಷದ ಬಾಲಕಿ ಸಾವು

Published On - 9:09 am, Mon, 6 September 21

ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಹೊಸ ಹಾನರ್ ಸ್ಮಾರ್ಟ್​ಫೋನ್​ನಲ್ಲಿದೆ 108 ಮೆಗಾಪಿಕ್ಸೆಲ್ ಸಖತ್ ಎಐ ಕ್ಯಾಮೆರಾ
ಹೊಸ ಹಾನರ್ ಸ್ಮಾರ್ಟ್​ಫೋನ್​ನಲ್ಲಿದೆ 108 ಮೆಗಾಪಿಕ್ಸೆಲ್ ಸಖತ್ ಎಐ ಕ್ಯಾಮೆರಾ
ಮುನಿರತ್ನ ವಿರುದ್ಧದ ಪ್ರಕರಣಗಳ ತನಿಖೆಗೆ SIT ರಚಿಸಿ: ಸಿಎಂಗೆ ಮನವಿ
ಮುನಿರತ್ನ ವಿರುದ್ಧದ ಪ್ರಕರಣಗಳ ತನಿಖೆಗೆ SIT ರಚಿಸಿ: ಸಿಎಂಗೆ ಮನವಿ
ಕಾಡಿಗೆ ಹೋಗುವ ದಾರಿ ಗೊತ್ತು ಅಂತ ಅರಣ್ಯ ಸಿಬ್ಬಂದಿ ಮೇಲೆ ತಿರುಗಿ ಬಿದ್ದ ಆನೆ
ಕಾಡಿಗೆ ಹೋಗುವ ದಾರಿ ಗೊತ್ತು ಅಂತ ಅರಣ್ಯ ಸಿಬ್ಬಂದಿ ಮೇಲೆ ತಿರುಗಿ ಬಿದ್ದ ಆನೆ