ಪ್ರಪಂಚದಾದ್ಯಂತ ಮುಸ್ಲಿಮರು ಹಿಂಸಾಚಾರಕ್ಕೆ ಗುರಿಯಾಗುತ್ತಿದ್ದಾರೆ: ಅಮೆರಿಕ ಅಧ್ಯಕ್ಷ ಜೋ ಬೈಡನ್

ಇಂದು  ಪ್ರಪಂಚದಾದ್ಯಂತ ಮುಸ್ಲಿಮರನ್ನು ಹಿಂಸಾಚಾರಕ್ಕೆ ಗುರಿಪಡಿಸುವುದನ್ನು ನಾವು ನೋಡುತ್ತಿದ್ದೇವೆ.ಯಾರೊಬ್ಬರೂ ತುಳಿತಕ್ಕೊಳಗಾದವರ ವಿರುದ್ಧ ತಾರತಮ್ಯ ಮಾಡಬಾರದು ಅಥವಾ ಅವರ ಧಾರ್ಮಿಕ ನಂಬಿಕೆಗಳಿಗಾಗಿ ತುಳಿತಕ್ಕೊಳಗಾಗಬಾರದು ಎಂದು ಬೈಡನ್...

ಪ್ರಪಂಚದಾದ್ಯಂತ ಮುಸ್ಲಿಮರು ಹಿಂಸಾಚಾರಕ್ಕೆ ಗುರಿಯಾಗುತ್ತಿದ್ದಾರೆ: ಅಮೆರಿಕ ಅಧ್ಯಕ್ಷ ಜೋ ಬೈಡನ್
ಅಮೆರಿಕ ಅಧ್ಯಕ್ಷ ಜೋ ಬೈಡನ್
Follow us
| Updated By: ರಶ್ಮಿ ಕಲ್ಲಕಟ್ಟ

Updated on:May 03, 2022 | 3:39 PM

ಪ್ರಪಂಚದಾದ್ಯಂತ ಮುಸ್ಲಿಮರು(Muslims) ಹಿಂಸಾಚಾರಕ್ಕೆ ಗುರಿಯಾಗುತ್ತಿದ್ದಾರೆ, ಅವರು ವಾಸಿಸುವ ಸಮಾಜದಲ್ಲಿ ನಿಜವಾದ ಸವಾಲುಗಳು ಮತ್ತು ಬೆದರಿಕೆಗಳನ್ನು ಎದುರಿಸುತ್ತಿರುವಾಗಲೂ ಮುಸ್ಲಿಮರು ಪ್ರತಿದಿನ ಅಮೆರಿಕವನ್ನು ಬಲಿಷ್ಠಗೊಳಿಸುತ್ತಾರೆ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡೆನ್ (Joe Biden) ಸೋಮವಾರ ಹೇಳಿದ್ದಾರೆ. ಈದ್ ಅಲ್-ಫಿತರ್ (Eid al-Fitr) ಆಚರಿಸಲು ಸಜ್ಜಾದ ಶ್ವೇತಭವನದಲ್ಲಿ ಮಾತನಾಡಿದ ಬೈಡನ್, ಅಂತರರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯಕ್ಕಾಗಿ ರಾಯಭಾರಿಯಾಗಿ ಸೇವೆ ಸಲ್ಲಿಸಲು ಮೊದಲ ಮುಸ್ಲಿಂನನ್ನು ನೇಮಿಸಿರುವುದಾಗಿ ಹೇಳಿದರು. ಇದು ವಿಶೇಷವಾಗಿ ಪ್ರಮುಖ ಸಂಗತಿ ಯಾಕೆಂದರೆ ಇಂದು  ಪ್ರಪಂಚದಾದ್ಯಂತ ಮುಸ್ಲಿಮರನ್ನು ಹಿಂಸಾಚಾರಕ್ಕೆ ಗುರಿಪಡಿಸುವುದನ್ನು ನಾವು ನೋಡುತ್ತಿದ್ದೇವೆ.ಯಾರೊಬ್ಬರೂ ತುಳಿತಕ್ಕೊಳಗಾದವರ ವಿರುದ್ಧ ತಾರತಮ್ಯ ಮಾಡಬಾರದು ಅಥವಾ ಅವರ ಧಾರ್ಮಿಕ ನಂಬಿಕೆಗಳಿಗಾಗಿ ತುಳಿತಕ್ಕೊಳಗಾಗಬಾರದು ಎಂದು ಬೈಡನ್ ಹೇಳಿದ್ದಾರೆ. ಪಾಕಿಸ್ತಾನಿ ಗಾಯಕ ಮತ್ತು ಸಂಯೋಜಕ ಅರೂಜ್ ಅಫ್ತಾಬ್ ಅವರು, ವಾಷಿಂಗ್ಟನ್ ಡಿಸಿಯಲ್ಲಿನ ‘ದಿ ನೇಷನ್ಸ್ ಮಸೀದಿ’ ಎಂದು ಕರೆಯಲ್ಪಡುವ ಮಸ್ಜಿದ್ ಮುಹಮ್ಮದ್ ನ ಇಮಾಮ್ ಡಾ. ತಾಲಿಬ್ ಎಂ. ಶರೀಫ್ ಅವರು ಪ್ರಥಮ ಮಹಿಳೆ ಜಿಲ್ ಬೈಡನ್ ಅವರೊಂದಿಗೆ ಈ ಕಾರ್ಯಕ್ರಮದ ಭಾಷಣಕಾರರಲ್ಲಿ ಒಬ್ಬರಾಗಿದ್ದರು.

“ಇಂದು, ಉಯಿಘರ್‌ಗಳು ಮತ್ತು ರೋಹಿಂಗ್ಯಾಗಳು ಮತ್ತು ಕ್ಷಾಮ, ಹಿಂಸಾಚಾರ, ಸಂಘರ್ಷ ಮತ್ತು ರೋಗವನ್ನು ಎದುರಿಸುತ್ತಿರುವ ಎಲ್ಲರನ್ನು ಒಳಗೊಂಡಂತೆ ಈ ರಜಾದಿನವನ್ನು ಆಚರಿಸಲು ಸಾಧ್ಯವಾಗದ ಎಲ್ಲರನ್ನು ನಾವು ನೆನಪಿಸಿಕೊಳ್ಳುತ್ತೇವೆ” ಎಂದು ಬೈಡನ್ ಹೇಳಿದರು.

ಕದನ ವಿರಾಮ ಸೇರಿದಂತೆ ನಾವು ನೋಡಲು ಬಯಸುವ ಪ್ರಪಂಚದ ಕಡೆಗೆ ಭರವಸೆ ಮತ್ತು ಪ್ರಗತಿಯ ಸಂಕೇತಗಳನ್ನು ಗೌರವಿಸಿ, ಇದು ಆರು ವರ್ಷಗಳಲ್ಲಿ ಮೊದಲ ಬಾರಿಗೆ ರಂಜಾನ್ ಅನ್ನು ಗೌರವಿಸಲು ಮತ್ತು ಈದ್ ಅನ್ನು ಶಾಂತಿಯಿಂದ ಆಚರಿಸಲು ಯೆಮೆನ್‌ನಲ್ಲಿ ಜನರಿಗೆ ಅವಕಾಶ ಮಾಡಿಕೊಟ್ಟಿತು ಎಂದು ಅವರು ಹೇಳಿದರು.

“ಆದರೆ ಅದೇ ಸಮಯದಲ್ಲಿ, ವಿದೇಶದಲ್ಲಿ ಮತ್ತು ಇಲ್ಲಿ ಮಾಡಲು ಬಹಳಷ್ಟು ಕೆಲಸಗಳು ಉಳಿದಿವೆ ಎಂದು ನಾವು ಒಪ್ಪಿಕೊಳ್ಳಬೇಕು. ಮುಸ್ಲಿಮರು ಪ್ರತಿ ದಿನವೂ ನಮ್ಮ ರಾಷ್ಟ್ರವನ್ನು ಬಲಿಷ್ಠಗೊಳಿಸುತ್ತಾರೆ, ಅವರು ಉದ್ದೇಶಿತ ಹಿಂಸಾಚಾರ ಮತ್ತು ಅಸ್ತಿತ್ವದಲ್ಲಿರುವ ಇಸ್ಲಾಮೋಫೋಬಿಯಾ ಸೇರಿದಂತೆ ಇನ್ನೂ ನಮ್ಮ ಸಮಾಜದಲ್ಲಿ ನಿಜವಾದ ಸವಾಲುಗಳು ಮತ್ತು ಬೆದರಿಕೆಗಳನ್ನು ಎದುರಿಸುತ್ತಿದ್ದಾರೆ ಎಂದು ಅವರು ಹೇಳಿದರು. ಅಮೆರಿಕವನ್ನು ಹೆಚ್ಚು ಸಮಾನವಾಗಿಸುವುದು, ಮುಸ್ಲಿಂ ಅಮೆರಿಕನ್ನರನ್ನು ಹೆಚ್ಚು ಒಳಗೊಳ್ಳುವಂತೆ ಮಾಡುವುದು ಹೆಚ್ಚು ಪರಿಪೂರ್ಣವಾದ ಒಕ್ಕೂಟವನ್ನು ರೂಪಿಸುವ ನಿರಂತರ ಕೆಲಸದ ಅಗತ್ಯ ಭಾಗವಾಗಿದೆ. “ವಿಶ್ವದ ಎಲ್ಲಾ ಇತಿಹಾಸದಲ್ಲಿ ನಾವು ಧರ್ಮ, ಜನಾಂಗ, ಜನಾಂಗೀಯತೆ, ಭೌಗೋಳಿಕತೆಯನ್ನು ಆಧರಿಸಿಲ್ಲ, ಆದರೆ ಕಲ್ಪನೆಯ ಆಧಾರದ ಮೇಲೆ ಸಂಘಟಿತವಾಗಿರುವ ಏಕೈಕ ರಾಷ್ಟ್ರವಾಗಿದೆ. ಅದರ ಬಗ್ಗೆ ಯೋಚಿಸಿ ಎೆಂದು ಅವರು ಹೇಳಿದರು.

ಕಾರ್ಯಕ್ರಮದ ನಂತರ ಟ್ವೀಟ್ ಮಾಡಿದ ಬೈಡನ್ ಇಂದು ರಾತ್ರಿ ಶ್ವೇತಭವನದಲ್ಲಿ ಈದ್ ಅಲ್-ಫಿತರ್ ಸ್ವಾಗತವನ್ನು ಆಯೋಜಿಸಲು ಜಿಲ್ ಮತ್ತು ನನಗೆ ಗೌರವ ನೀಡಲಾಯಿತು. ಪ್ರಪಂಚದಾದ್ಯಂತ ಆಚರಿಸುತ್ತಿರುವ ಪ್ರತಿಯೊಬ್ಬರಿಗೂ ನಾವು ನಮ್ಮ ಆತ್ಮೀಯ ಶುಭಾಶಯಗಳನ್ನು ಕಳುಹಿಸುತ್ತೇವೆ. ಈದ್ ಮುಬಾರಕ್!” ಎಂದಿದ್ದಾರೆ. ಇದೇ ವೇಳೆ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಕೂಡ ಜನರಿಗೆ ಶುಭ ಹಾರೈಸಿದರು. “ಡೌಗ್ ಮತ್ತು ನಾನು ಈದ್ ಅಲ್-ಫಿತರ್ ಅನ್ನು ಆಚರಿಸುತ್ತಿರುವ ಎಲ್ಲರಿಗೂ ನಮ್ಮ ಆತ್ಮೀಯ ಶುಭಾಶಯಗಳನ್ನು ಕೋರುತ್ತೇವೆ. ಅಮೆರಿಕ ಮತ್ತು ಪ್ರಪಂಚದಾದ್ಯಂತದ ಮುಸ್ಲಿಮರು ಒಂದು ತಿಂಗಳ ವ್ರತ ನಂತರ ಆಚರಿಸುತ್ತಾರೆ, ಅಗತ್ಯವಿರುವವರಿಗೆ ಸಹಾಯ ಮಾಡುತ್ತಾರೆ ಮತ್ತು ಸಮುದಾಯದೊಂದಿಗೆ ಸಂಪರ್ಕ ಸಾಧಿಸುತ್ತಾರೆ. ನಮ್ಮ ಕುಟುಂಬದಿಂದ ನಿಮಗೆ ಈದ್ ಮುಬಾರಕ್!” ಎಂದು ಕಮಲಾ ಹ್ಯಾರಿಸ್ ಟ್ವೀಟ್ ಮಾಡಿದ್ದಾರೆ.

ವಿದೇಶದ ಇತರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ ಪ್ರಮುಖ  ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 3:37 pm, Tue, 3 May 22

ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ