AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊರೊನಾ ಔಷಧಿ ತಯಾರಿಕೆಯನ್ನು ಹ್ಯಾಕ್ ಮಾಡಲು ಯತ್ನಿಸಿದೆ ದುರುಳ ಚೀನಾ!

ವಾಷಿಂಗ್ಟನ್‌: ಕೊರೊನಾ ಮಾರಿಯಿಂದ ಮುಕ್ತಿ ಕಾಣಲು ಜಗತ್ತಿನಾದ್ಯಂತ ವಿವಿಧ ಕಂಪನಿಗಳು ಔಷಧ ಕಂಡುಹಿಡಿಯಲು ತಮ್ಮೆಲ್ಲೆ ಶಕ್ತಿಯನ್ನ ಧಾರೆಯೆರೆಯುತ್ತಿವೆ. ಆದ್ರೆ ದುರುಳ ಚೀನಾ ಮಾತ್ರ ಬೆವರು ಸುರಿಸದೇ ಕಳ್ಳದಾರಿಯಲ್ಲಿ ಔಷಧ ಪಡೆಯಲು ನೋಡುತ್ತಿದೆ. ಇದಕ್ಕಾಗಿ ಅದು ಅಮೆರಿಕದ ಪ್ರಮುಖ ವ್ಯಾಕ್ಸಿನ್‌ ಕಂಪನಿ ಮೊಡೆರ್ನಾ್‌ ಮೇಲೆ ತನ್ನ ಹ್ಯಾಕರ್‌ಗಳ ಮೂಲಕ ದಾಳಿ ನಡೆಸುತ್ತಿದೆ. ಹೌದು ದುರುಳ ಚೀನಾ ತನ್ನ ಕುಟಿಲ ಬುದ್ಧಿಯನ್ನ ಜಗತ್ತಿನಾದ್ಯಂತ ತೋರಿಸುತ್ತಿದೆ. ಕೊರೊನಾ ವೈರಸ್‌ ಜನಕ ಚೀನಾಗೆ ಅದರ ಮದ್ದು ಕಂಡು ಹಿಡಿಯಲು ಆಗುತ್ತಿಲ್ಲ. ಹೀಗಾಗಿ ಅಮೆರಿಕದ […]

ಕೊರೊನಾ ಔಷಧಿ ತಯಾರಿಕೆಯನ್ನು ಹ್ಯಾಕ್ ಮಾಡಲು ಯತ್ನಿಸಿದೆ ದುರುಳ ಚೀನಾ!
Guru
| Edited By: |

Updated on: Aug 01, 2020 | 5:00 PM

Share

ವಾಷಿಂಗ್ಟನ್‌: ಕೊರೊನಾ ಮಾರಿಯಿಂದ ಮುಕ್ತಿ ಕಾಣಲು ಜಗತ್ತಿನಾದ್ಯಂತ ವಿವಿಧ ಕಂಪನಿಗಳು ಔಷಧ ಕಂಡುಹಿಡಿಯಲು ತಮ್ಮೆಲ್ಲೆ ಶಕ್ತಿಯನ್ನ ಧಾರೆಯೆರೆಯುತ್ತಿವೆ. ಆದ್ರೆ ದುರುಳ ಚೀನಾ ಮಾತ್ರ ಬೆವರು ಸುರಿಸದೇ ಕಳ್ಳದಾರಿಯಲ್ಲಿ ಔಷಧ ಪಡೆಯಲು ನೋಡುತ್ತಿದೆ. ಇದಕ್ಕಾಗಿ ಅದು ಅಮೆರಿಕದ ಪ್ರಮುಖ ವ್ಯಾಕ್ಸಿನ್‌ ಕಂಪನಿ ಮೊಡೆರ್ನಾ್‌ ಮೇಲೆ ತನ್ನ ಹ್ಯಾಕರ್‌ಗಳ ಮೂಲಕ ದಾಳಿ ನಡೆಸುತ್ತಿದೆ.

ಹೌದು ದುರುಳ ಚೀನಾ ತನ್ನ ಕುಟಿಲ ಬುದ್ಧಿಯನ್ನ ಜಗತ್ತಿನಾದ್ಯಂತ ತೋರಿಸುತ್ತಿದೆ. ಕೊರೊನಾ ವೈರಸ್‌ ಜನಕ ಚೀನಾಗೆ ಅದರ ಮದ್ದು ಕಂಡು ಹಿಡಿಯಲು ಆಗುತ್ತಿಲ್ಲ. ಹೀಗಾಗಿ ಅಮೆರಿಕದ ಪ್ರಮಖ ಕಂಪನಿ ಮೊಡೆರ್ನಾ ಮೇಲೆ ತನ್ನ ಹ್ಯಾಕರ್‌ಗಳನ್ನು ಛೂ ಬಿಟ್ಟಿದೆ. ಈ ಹ್ಯಾಕರ್‌ಗಳು ಮೊಡೆರ್ನಾ ಕಂಪನಿಯ ಔಷಧಿಯ ಫಾರ್ಮುಲಾವನ್ನು ಕದಿಯಲು ಇನ್ನಿಲ್ಲದ ಪ್ರಯತ್ನ ನಡೆಸಿದ್ದಾರೆ.

ಚೀನಾದ ಈ ಕಳ್ಳ ಖದೀಮರ ಸುಳಿವು ಅರಿತ ಕಂಪನಿ ಅಮೆರಿಕದ ಸರ್ಕಾರಕ್ಕೆ ಈ ಬಗ್ಗೆ ದೂರು ನೀಡಿದೆ. ಹೀಗಾಗಿ ಅಮೆರಿಕದ ಫೆಡರಲ್‌ ಬ್ಯೂರೋ ಆಫ್‌ ಇನ್‌ವೆಸ್ಟಿಗೇಶನ್‌ ಮೆಸೆಚುಸೆಟ್ಸ್‌ನಲ್ಲಿರುವ ಮೊಡೆರ್ನಾ ಕಂಪನಿಗೆ ಫುಲ್‌ ಸೆಕ್ಯುರಿಟಿ ನೀಡಿದೆ.

ಆದ್ರೆ ಚೀನಾ ಸರ್ಕಾರ ಮಾತ್ರ ಇದನ್ನು ನಿರಾಕರಿಸಿದೆ. ನಾವೇ ಔಷಧಿಯನ್ನ ತಯಾರಿಸುವಲ್ಲಿ ಮುಂಚೂಣಿಯಲ್ಲಿದ್ದೇವೆ. ಹೀಗಿರುವಾಗ ಕಳವು ಮಾಡುವುದೆಲ್ಲಿಂದ ಬಂತು? ಎಂದು ಆರೋಪವನ್ನ ನಿರಾಕರಿಸಿದೆೆ.

ಅಂದ ಹಾಗೆ ಮೊಡೆರ್ನಾ ಕಂಪನಿಯ ವ್ಯಾಕ್ಸಿನ್‌ ಭಾರೀ ಭರವಸೆ ಮೂಡಿಸಿದ್ದು,  ಪ್ರಮುಖ ಮೂರು ಔಷಧಿಗಳಲ್ಲಿ ಅದೂ ಒಂದು. ಈಗಾಗಲೇ ಪ್ರಾಥಮಿಕ ಹಂತದ ಟ್ರಯಲ್ಸ್‌ ನಡೆಸಿರುವ ಮೊಡೆರ್ನಾ ಕಂಪನಿ ಇನ್ನು ಕೆಲವೇ ದಿನಗಳಲ್ಲಿ ನಿರ್ಣಾಯಕ ಹಂತದ ಮಾನವ ಪರೀಕ್ಷೆ ನಡೆಸಲಿದೆ. ಇದಾದ ನಂತರ ವ್ಯಾಕ್ಸಿನ್‌ ಸಾರ್ವಜನಿಕರ ಉಪಯೋಗಕ್ಕೆ ಲಭ್ಯವಾಗಲಿದೆ.

ಮಲ್ಲಿಕಾರ್ಜುನ ಖರ್ಗೆ, ಪರಮೇಶ್ವರ್ ಯಾವತ್ತೋ ಸಿಎಂ ಆಗಬೇಕಿತ್ತು: ಹೆಚ್​ಡಿಕೆ
ಮಲ್ಲಿಕಾರ್ಜುನ ಖರ್ಗೆ, ಪರಮೇಶ್ವರ್ ಯಾವತ್ತೋ ಸಿಎಂ ಆಗಬೇಕಿತ್ತು: ಹೆಚ್​ಡಿಕೆ
ಮಗನಿಗೆ ದುಬಾರಿ ಬೆಲೆಯ ಕಾರನ್ನು ಉಡುಗೊರೆಯಾಗಿ ನೀಡಿದ ಹಾರ್ದಿಕ್ ಪಾಂಡ್ಯ
ಮಗನಿಗೆ ದುಬಾರಿ ಬೆಲೆಯ ಕಾರನ್ನು ಉಡುಗೊರೆಯಾಗಿ ನೀಡಿದ ಹಾರ್ದಿಕ್ ಪಾಂಡ್ಯ
ಹನುಮನ ಆಶೀರ್ವಾದದಿಂದಲೇ ರಿಷಬ್​​ಗೆ ಪಾತ್ರ ಸಿಕ್ಕಿದೆ ಎಂದ ಪತ್ನಿ: ವಿಡಿಯೋ
ಹನುಮನ ಆಶೀರ್ವಾದದಿಂದಲೇ ರಿಷಬ್​​ಗೆ ಪಾತ್ರ ಸಿಕ್ಕಿದೆ ಎಂದ ಪತ್ನಿ: ವಿಡಿಯೋ
40 ಭಾರತೀಯ ಮೂಲದ ಆಟಗಾರರನ್ನು ಶ್ಲಾಘಿಸಿದ ಮೋದಿ
40 ಭಾರತೀಯ ಮೂಲದ ಆಟಗಾರರನ್ನು ಶ್ಲಾಘಿಸಿದ ಮೋದಿ
ಮೋದಿ ಪ್ರಸ್ತಾಪಿಸಿದ ಅಂಗಾಂಗ ದಾನದ ಬಗ್ಗೆ ಡಾಕ್ಟರ್ ಹೇಳಿದ್ದಿಷ್ಟು
ಮೋದಿ ಪ್ರಸ್ತಾಪಿಸಿದ ಅಂಗಾಂಗ ದಾನದ ಬಗ್ಗೆ ಡಾಕ್ಟರ್ ಹೇಳಿದ್ದಿಷ್ಟು
ಗುಡ್ ನ್ಯೂಸ್: ಶೀಘ್ರದಲ್ಲೇ ನೈಸ್‌ ರೋಡ್‌ ಸಂಪರ್ಕಿಸುವ ರಸ್ತೆ ಆರಂಭ
ಗುಡ್ ನ್ಯೂಸ್: ಶೀಘ್ರದಲ್ಲೇ ನೈಸ್‌ ರೋಡ್‌ ಸಂಪರ್ಕಿಸುವ ರಸ್ತೆ ಆರಂಭ
ಭಾರೀ ಅಗ್ನಿ ಅವಘಡ:20 ಕೋಟಿ ರೂ.ಹೆಚ್ಚು ಮೌಲ್ಯದ ವಸ್ತುಗಳು ಭಸ್ಮ
ಭಾರೀ ಅಗ್ನಿ ಅವಘಡ:20 ಕೋಟಿ ರೂ.ಹೆಚ್ಚು ಮೌಲ್ಯದ ವಸ್ತುಗಳು ಭಸ್ಮ
ಶಾಸಕ ಚಂದ್ರು ಲಮಾಣಿ ವಿರುದ್ಧ ನಡೆದಿತ್ತಾ ಷಡ್ಯಂತ್ರ?ಸ್ವಾಮೀಜಿ ಆಡಿಯೋ ವೈರಲ್
ಶಾಸಕ ಚಂದ್ರು ಲಮಾಣಿ ವಿರುದ್ಧ ನಡೆದಿತ್ತಾ ಷಡ್ಯಂತ್ರ?ಸ್ವಾಮೀಜಿ ಆಡಿಯೋ ವೈರಲ್
ಶಾರ್ಟ್​ ಸರ್ಕ್ಯೂಟ್​ನಿಂದ ಸುಗಂಧ ದ್ರವ್ಯ ಗೋದಾಮು ಧಗಧಗ!
ಶಾರ್ಟ್​ ಸರ್ಕ್ಯೂಟ್​ನಿಂದ ಸುಗಂಧ ದ್ರವ್ಯ ಗೋದಾಮು ಧಗಧಗ!
ಲಂಚ ಸ್ವೀಕರಿಸುವಾಗ ಸಿಕ್ಕಿಬಿದ್ದ ಬಿಜೆಪಿ ಶಾಸಕನ ಪರ ರಾಜಣ್ಣ ಬ್ಯಾಟಿಂಗ್
ಲಂಚ ಸ್ವೀಕರಿಸುವಾಗ ಸಿಕ್ಕಿಬಿದ್ದ ಬಿಜೆಪಿ ಶಾಸಕನ ಪರ ರಾಜಣ್ಣ ಬ್ಯಾಟಿಂಗ್