AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೈಮರೆಯಬೇಡಿ, ಕೊವಿಡ್ 19 ಮುಂದಿನ ರೂಪಾಂತರ ಇನ್ನಷ್ಟು ಮಾರಣಾಂತಿಕವಾಗಿರಬಹುದು: ವಿಶ್ವ ಆರೋಗ್ಯ ಸಂಸ್ಥೆಯಿಂದ ಎಚ್ಚರಿಕೆ

ಡೆಲ್ಟಾ ನಂತರ ಹುಟ್ಟಿದ್ದು ಒಮಿಕ್ರಾನ್​. 2021ರ ನವೆಂಬರ್​ನಲ್ಲಿ ದಕ್ಷಿಣ ಆಫ್ರಿಕಾದಲ್ಲಿ ಮೊದಲು ಕಾಣಿಸಿಕೊಂಡ ಈ ವೈರಸ್ ಅತ್ಯಂತ ಕಡಿಮೆ ಸಮಯದಲ್ಲಿ ಜಗತ್ತನ್ನು ಆವರಿಸಿದೆ. ಡೆಲ್ಟಾಕ್ಕಿಂತ ನಾಲ್ಕು ಪಟ್ಟು ಹೆಚ್ಚು ವೇಗವಾಗಿ ಹರಡಿದ ಒಮಿಕ್ರಾನ್ ಆರೋಗ್ಯದಲ್ಲಿ ಗಂಭೀರ ಸಮಸ್ಯೆಯನ್ನು ಉಂಟು ಮಾಡಿದ್ದು ತುಂಬ ಕಡಿಮೆ.

ಮೈಮರೆಯಬೇಡಿ, ಕೊವಿಡ್ 19 ಮುಂದಿನ ರೂಪಾಂತರ ಇನ್ನಷ್ಟು ಮಾರಣಾಂತಿಕವಾಗಿರಬಹುದು: ವಿಶ್ವ ಆರೋಗ್ಯ ಸಂಸ್ಥೆಯಿಂದ ಎಚ್ಚರಿಕೆ
ಪ್ರಾತಿನಿಧಿಕ ಚಿತ್ರ
TV9 Web
| Edited By: |

Updated on: Feb 09, 2022 | 12:58 PM

Share

ಒಮಿಕ್ರಾನ್ ರೂಪಾಂತರದಿಂದ ಜಗತ್ತಿನಾದ್ಯಂತ ಅತ್ಯಂತ ಹೆಚ್ಚಾಗಿದ್ದ ಕೊರೊನಾ ಸೋಂಕಿನ (Coronavirus) ಪ್ರಮಾಣ ನಿಧಾನವಾಗಿ ತಗ್ಗುತ್ತಿದೆ. ಹಾಗೇ ಜಗತ್ತು ಕೂಡ ಒಂದೊಂದೇ ಹಂತವಾಗಿ ಸಹಜ ಸ್ಥಿತಿಗೆ ಮರಳುತ್ತಿದೆ. ಆದರೆ ಜನರು ನಿರ್ಲಕ್ಷ್ಯ ಮಾಡುವಂತಿಲ್ಲ. ಯಾಕೆಂದರೆ ಕೊವಿಡ್ 19ನ ಮುಂದಿನ ರೂಪಾಂತರ ಈ ಹಿಂದಿನ ಎಲ್ಲ ರೂಪಾಂತರಿ ವೈರಾಣುಗಳಿಗಿಂತಲೂ ಅತ್ಯಂತ ಹೆಚ್ಚು ಪ್ರಸರಣ ಹೊಂದುತ್ತದೆ ಮತ್ತು ಬಹುಶಃ ಒಮಿಕ್ರಾನ್​​ಗಿಂತಲೂ ಮಾರಣಾಂತಿಕವಾಗಿ ಇರಬಹುದು ಎಂದು ಆರೋಗ್ಯ ತಜ್ಞರು ಎಚ್ಚರಿಕೆ ನೀಡಿದ್ದಾರೆ. ಇತ್ತೀಚೆಗೆ ಸುದ್ದಿಗೋಷ್ಠಿ ನಡೆಸಿದ ವಿಶ್ವ ಆರೋಗ್ಯ ಸಂಸ್ಥೆ (WHO)ಯ ಸಾಂಕ್ರಾಮಿಕ ರೋಗಶಾಸ್ತ್ರಜ್ಞರಾದ ಡಾ.ಮಾರಿಯಾ ವ್ಯಾನ್ ಕೆರ್ಕೋವ್, ಕೊವಿಡ್​ 19 ಸಾಂಕ್ರಾಮಿಕ ಇನ್ನೂ ಕೊನೆಗೊಂಡಿಲ್ಲ. ಅದರ ಭವಿಷ್ಯದ ತಳಿಗಳು ಇನ್ನಷ್ಟು ಅಪಾಯಕಾರಿ ಎಂಬುದನ್ನು ಒತ್ತಿ ಹೇಳಿದ್ದಾರೆ. 

ಒಮಿಕ್ರಾನ್​ ಕೊವಿಡ್​ 19 ನ ಕೊನೇ ರೂಪಾಂತರವಲ್ಲ. ಇದರ ಮುಂದಿನ ರೂಪಾಂತರ ಇನ್ನಷ್ಟು ವೇಗವಾಗಿ ಅಂದರೆ ಇದೀಗ ಹರಡುತ್ತಿರುವ ಒಮಿಕ್ರಾನ್​​ನ್ನೂ ಹಿಂದಿಕ್ಕಿ ಪ್ರಸರಣಗೊಳ್ಳುತ್ತದೆ. ಆದರೆ ಅದರ ಗಂಭೀರತೆ ಎಷ್ಟಿರಲಿದೆ ಎಂಬುದು ಸದ್ಯ ಇರುವ ಪ್ರಶ್ನೆ.  ಮುಂದಿನ ರೂಪಾಂತರ ಮನುಷ್ಯರ ದೇಹದಲ್ಲಿರುವ ರೋಗ ನಿರೋಧಕ ಶಕ್ತಿಯನ್ನು ಅತ್ಯಂತ ಸುಲಭವಾಗಿ ತಗ್ಗಿಸಬಹುದು. ಈಗಾಗಲೇ ಇರುವ ಕೊವಿಡ್​ 19 ಲಸಿಕೆಗಳ ಶಕ್ತಿಯನ್ನೂ ಕುಂದಿಸುವಂತಿರಬಹುದು ಡಾ.ಮಾರಿಯಾ ವ್ಯಾನ್ ಕೆರ್ಕೋವ್ ಹೇಳಿದ್ದಾರೆ.

ಕೊವಿಡ್ 19 ವೈರಸ್​ ಶುರುವಾದ ಮೇಲೆ ಅದರಿಂದ ಹಲವು ರೂಪಾಂತರಗಳು ಉಂಟಾಗಿದ್ದರೂ, ಜಗತ್ತಿಗೆ ಹೆಚ್ಚು ಬಾಧಿಸಿದವು ಡೆಲ್ಟಾ ಮತ್ತು ಒಮಿಕ್ರಾನ್​. ಅದರಲ್ಲಿ ಡೆಲ್ಟಾ ಅತ್ಯಂತ ಮಾರಣಾಂತಿಕವಾಗಿ ಪರಿಣಮಿಸಿತ್ತು. ಅದಕ್ಕೆ ಹೋಲಿಸದರೆ ಒಮಿಕ್ರಾನ್​ ಗಂಭೀರತೆ ತುಂಬ ಕಡಿಮೆಯಿತ್ತು. ಡೆಲ್ಟಾ ಮೊಟ್ಟ ಮೊದಲು ಭಾರತದಲ್ಲಿ ಪತ್ತೆಯಾಗಿದ್ದು 2020ರ ಅಕ್ಟೋಬರ್​​ನಲ್ಲಿ. ಅದರ ಹಿಂದಿನ ಆಲ್ಪಾ ರೂಪಾಂತರಿಗಿಂತಲೂ ಶೇ.50ರಷ್ಟು ವೇಗವಾಗಿ ಹರಡಿತ್ತು. ಹಾಗೇ ಮೂಲ ವೈರಸ್ ಆದ ಕೊರೊನಾ ವೈರಸ್​ಗಿಂತಲೂ ಶೇ.50ರಷ್ಟು ಅಧಿಕ ಸಾಂಕ್ರಾಮಿಕವಾಗಿತ್ತು. ಈ ಡೆಲ್ಟಾ ಭಾರತದಲ್ಲಿ ಎರಡನೇ ಅಲೆಗೆ ಕಾರಣವಾಗಿತ್ತು. ಅದು ಬಿಟ್ಟರೆ ಯುಕೆ, ಇಸ್ರೇಲ್​, ರಷ್ಯಾ, ಆಸ್ಟ್ರೇಲಿಯಾ ಸೇರಿ ಜಗತ್ತಿನ ಇತರ ದೇಶಗಳಿಗೂ ಅತ್ಯಂತ ಹೆಚ್ಚಾಗಿ ಬಾಧಿಸಿತ್ತು.

ಡೆಲ್ಟಾ ನಂತರ ಹುಟ್ಟಿದ್ದು ಒಮಿಕ್ರಾನ್​. 2021ರ ನವೆಂಬರ್​ನಲ್ಲಿ ದಕ್ಷಿಣ ಆಫ್ರಿಕಾದಲ್ಲಿ ಮೊದಲು ಕಾಣಿಸಿಕೊಂಡ ಈ ವೈರಸ್ ಅತ್ಯಂತ ಕಡಿಮೆ ಸಮಯದಲ್ಲಿ ಜಗತ್ತನ್ನು ಆವರಿಸಿದೆ. ಡೆಲ್ಟಾಕ್ಕಿಂತ ನಾಲ್ಕು ಪಟ್ಟು ಹೆಚ್ಚು ವೇಗವಾಗಿ ಹರಡಿದ ಒಮಿಕ್ರಾನ್ ಆರೋಗ್ಯದಲ್ಲಿ ಗಂಭೀರ ಸಮಸ್ಯೆಯನ್ನು ಉಂಟು ಮಾಡಿದ್ದು ತುಂಬ ಕಡಿಮೆ. ಹಾಗೇ, ಇದು ಡೆಲ್ಟಾಕ್ಕಿಂತಲೂ 5 ಪಟ್ಟು ಹೆಚ್ಚು ಮರುಸೋಂಕಿನ ಅಪಾಯ ಹೊಂದಿದೆ. ಸದ್ಯ ಭಾರತದಲ್ಲಿ ನಡೆಯುತ್ತಿರುವ ಮೂರನೇ ಅಲೆಗೆ ಕಾರಣವಾಗಿದ್ದು ಇದೇ ಒಮಿಕ್ರಾನ್ ಸೋಂಕಾಗಿದೆ.  ಒಮಿಕ್ರಾನ್ ಶುರುವಾದಾಗ, ಇದು ಕೊರೊನಾದ ಕೊನೇ ರೂಪಾಂತರ ಎಂಬ ಅಭಿಪ್ರಾಯ ವ್ಯಕ್ತವಾಗಿತ್ತು. ಆದರೆ ಅದನ್ನೀಗ ಆರೋಗ್ಯ ತಜ್ಞರು ಅಲ್ಲಗಳೆದಿದ್ದಾರೆ.

ಇದನ್ನೂ ಓದಿ: Hijab Row: ಉಡುಪಿಯಲ್ಲಿ ತಲೆ ಎತ್ತಿದ್ದ ಹಿಜಾಬ್ ವಿವಾದ: ತಕ್ಷಣ ಉಪನಿರ್ದೇಶಕರಿಗೆ ಪ್ರಿನ್ಸಿಪಾಲ್ ಕಳಿಸಿದ್ದ ವಾಟ್ಸಾಪ್ ಸಂದೇಶ ಹೀಗಿದೆ

Follow Us
ರವಿ ಕರ್ಕಾಟಕ, ಚಂದ್ರ ಕುಂಭರಾಶಿಯಲ್ಲಿ ಸಂಚಾರ: 12 ರಾಶಿಗಳ ದಿನ ಭವಿಷ್ಯ
ರವಿ ಕರ್ಕಾಟಕ, ಚಂದ್ರ ಕುಂಭರಾಶಿಯಲ್ಲಿ ಸಂಚಾರ: 12 ರಾಶಿಗಳ ದಿನ ಭವಿಷ್ಯ
ಪರಪ್ಪನ ಅಗ್ರಹಾರ ಜೈಲಿನಿಂದ ನಗುನಗುತ್ತಲೇ ಹೊರ ಬಂದ ವಿನಯ್ ಕುಲಕರ್ಣಿ
ಪರಪ್ಪನ ಅಗ್ರಹಾರ ಜೈಲಿನಿಂದ ನಗುನಗುತ್ತಲೇ ಹೊರ ಬಂದ ವಿನಯ್ ಕುಲಕರ್ಣಿ
ಆಂಧ್ರದಲ್ಲಿ ಮೋದಿ ಸ್ವಾಗತಕ್ಕೆ ಸಜ್ಜು;ವಿದ್ಯಾರ್ಥಿಗಳಿಂದ ನೃತ್ಯ ತಾಲೀಮು
ಆಂಧ್ರದಲ್ಲಿ ಮೋದಿ ಸ್ವಾಗತಕ್ಕೆ ಸಜ್ಜು;ವಿದ್ಯಾರ್ಥಿಗಳಿಂದ ನೃತ್ಯ ತಾಲೀಮು
ವಿನಯ್ ಕುಲಕರ್ಣಿಗೆ ಜಾಮೀನು: ಅಚ್ಚರಿ ಮೂಡಿಸಿದ ಯೋಗೇಶ್ ಗೌಡ ಪತ್ನಿ ನಿರ್ಧಾರ
ವಿನಯ್ ಕುಲಕರ್ಣಿಗೆ ಜಾಮೀನು: ಅಚ್ಚರಿ ಮೂಡಿಸಿದ ಯೋಗೇಶ್ ಗೌಡ ಪತ್ನಿ ನಿರ್ಧಾರ
ಸಂಸತ್ ಆವರಣದಲ್ಲಿ ಡ್ರಾಮಾ; ಸನ್ಯಾಸಿಯ ವೇಷ ಧರಿಸಿ ಪಪ್ಪು ಯಾದವ್ ಪ್ರತಿಭಟನೆ
ಸಂಸತ್ ಆವರಣದಲ್ಲಿ ಡ್ರಾಮಾ; ಸನ್ಯಾಸಿಯ ವೇಷ ಧರಿಸಿ ಪಪ್ಪು ಯಾದವ್ ಪ್ರತಿಭಟನೆ
ಜೈಲಿನಲ್ಲಿ ದರ್ಶನ್ ಜೊತೆ 1 ಗಂಟೆಗೂ ಹೆಚ್ಚು ಕಾಲ ವಿಜಯಲಕ್ಷ್ಮಿ ಸಮಾಲೋಚನೆ
ಜೈಲಿನಲ್ಲಿ ದರ್ಶನ್ ಜೊತೆ 1 ಗಂಟೆಗೂ ಹೆಚ್ಚು ಕಾಲ ವಿಜಯಲಕ್ಷ್ಮಿ ಸಮಾಲೋಚನೆ
ಪೊಲೀಸ್ ನೇಮಕಾತಿ ಪರೀಕ್ಷೆ: ಸುಳ್ಳು ಪೋಸ್ಟ್ ಹಾಕಿದ್ರೆ ಕೇಸ್ ಬುಕ್; ಕೆಇಎ ಎಚ
ಪೊಲೀಸ್ ನೇಮಕಾತಿ ಪರೀಕ್ಷೆ: ಸುಳ್ಳು ಪೋಸ್ಟ್ ಹಾಕಿದ್ರೆ ಕೇಸ್ ಬುಕ್; ಕೆಇಎ ಎಚ
ಊರ್ವಶಿ ಚಿತ್ರಮಂದಿರದಿಂದ ‘ಜನ ನಾಯಗನ್’ ಎತ್ತಂಗಡಿ: ವಿಡಿಯೋ ನೋಡಿ
ಊರ್ವಶಿ ಚಿತ್ರಮಂದಿರದಿಂದ ‘ಜನ ನಾಯಗನ್’ ಎತ್ತಂಗಡಿ: ವಿಡಿಯೋ ನೋಡಿ
ರೈತ ದಂಪತಿ ಸಾವು: ಕುಟುಂಬಕ್ಕೆ ಹೆಚ್.ಡಿ. ಕುಮಾರಸ್ವಾಮಿ ಸಾಂತ್ವನ
ರೈತ ದಂಪತಿ ಸಾವು: ಕುಟುಂಬಕ್ಕೆ ಹೆಚ್.ಡಿ. ಕುಮಾರಸ್ವಾಮಿ ಸಾಂತ್ವನ
ಹಿಂಗಾರು ಮಳೆ ಬಗ್ಗೆ ಬಿಗ್ ಅಪ್ಡೇಟ್ ಕೊಟ್ಟ ಹವಾಮಾನ ಇಲಾಖೆ ನಿರ್ದೇಶಕ
ಹಿಂಗಾರು ಮಳೆ ಬಗ್ಗೆ ಬಿಗ್ ಅಪ್ಡೇಟ್ ಕೊಟ್ಟ ಹವಾಮಾನ ಇಲಾಖೆ ನಿರ್ದೇಶಕ