AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇಂಗ್ಲೆಂಡ್​ನಲ್ಲೊಂದು ‘ಪತಿ ಪತ್ನಿ ಔರ್ ವೋ’ ಪ್ರಕರಣ, ಪತಿಗೆ ಈಗ ತ್ರಿಶಂಕು ಸ್ಥಿತಿ!

ಆದರೆ ಟೋನಿ ಉಕ್ರೇನಿನ ಹೆಂಗಸಿನೊಂದಿಗೆ ತನ್ನ ದಶಕದ ಸಂಗಾತಿಯನ್ನು ಮರೆತು ದೈಹಿಕ ಸಂಪರ್ಕ ಬೆಳೆಸಿದ. ಅಂತಿಮವಾಗಿ ಲೋರ್ನಾ ಮತ್ತು ಮಕ್ಕಳನ್ನು ತೊರೆದು ಸೋಫಿಯಾಳೊಂದಿಗೆ ಬೇರೆ ಮನೆಯಲ್ಲಿ ವಾಸಮಾಡತೊಡಗಿದ.

ಇಂಗ್ಲೆಂಡ್​ನಲ್ಲೊಂದು ‘ಪತಿ ಪತ್ನಿ ಔರ್ ವೋ’ ಪ್ರಕರಣ, ಪತಿಗೆ ಈಗ ತ್ರಿಶಂಕು ಸ್ಥಿತಿ!
ಲೋರ್ನಾ ಮತ್ತು ಟೋನಿ ಗಾರ್ನೆಟ್
TV9 Web
| Edited By: ಅರುಣ್​ ಕುಮಾರ್​ ಬೆಳ್ಳಿ|

Updated on: Sep 29, 2022 | 7:36 AM

Share

ಆಶ್ರಯ ನೀಡಿದ ಮನೆಯಲ್ಲೇ ನಡೆದ ವಂಚನೆ ಪ್ರಕರಣವೊಂದರ ವಿಚಿತ್ರ ಕತೆಯಿದು. ಅಸಲಿಗೆ ನಾವು ಮಾತಾಡುತ್ತಿರೋದು ಉಕ್ರೇನ್ ನಲ್ಲಿ ಯುದ್ಧ ಶುರುವಾದ ಬಳಿಕ ಯುನೈಟೆಡ್ ಕಿಂಗ್ಡಮ್ ಗೆ ವಲಸೆ ಹೋದ ಸೋಫಿಯ ಕರ್ಕಾಡಿಮ್ ಹೆಸರಿನ ಮಹಿಳೆಯ ಬಗ್ಗೆ. ಪಶ್ಚಿಮ ಯಾರ್ಕ್ಶೈರ್ ನಲ್ಲಿರುವ ಬ್ರಾಡ್ ಫೋರ್ಡ್ ಗೆ ಸುಮಾರು 4 ತಿಂಗಳ ಹಿಂದೆ ಸೋಫಿಯ ಒಬ್ಬ ನಿರಾಶ್ರಿತಳಾಗಿ ಬಂದಾಗ, ಅವಳ ಸ್ಥಿತಿ ಕಂಡು ಕನಿಕರಪಟ್ಟ 30-ವರ್ಷ ವಯಸ್ಸಿನ ಟೋನಿ ಗಾರ್ನೆಟ್ ಅವನ ಸಂಗಾತಿ ಲೋರ್ನಾ ಗಾರ್ನೆಟ್ ಮತ್ತು ಅವರ ಇಬ್ಬರು ಮಕ್ಕಳು ಅವಳಿಗೆ ತಮ್ಮ ಮನೆಯಲ್ಲಿ ಆಶ್ರಯ ನೀಡಿದರು. ಟೋನಿ ಮತ್ತು ಲೋರ್ನಾ ಆ ಮನೆಯಲ್ಲಿ 10 ವರ್ಷಗಳಿಂದ ಒಟ್ಟಿಗೆ ಜೀವಿಸುತ್ತಿದ್ದರು.

ಆದರೆ ಟೋನಿ ಉಕ್ರೇನಿನ ಹೆಂಗಸಿನೊಂದಿಗೆ ತನ್ನ ದಶಕದ ಸಂಗಾತಿಯನ್ನು ಮರೆತು ದೈಹಿಕ ಸಂಪರ್ಕ ಬೆಳೆಸಿದ. ಅಂತಿಮವಾಗಿ ಲೋರ್ನಾ ಮತ್ತು ಮಕ್ಕಳನ್ನು ತೊರೆದು ಸೋಫಿಯಾಳೊಂದಿಗೆ ಬೇರೆ ಮನೆಯಲ್ಲಿ ವಾಸಮಾಡತೊಡಗಿದ.

ಸೋಫಿಯಾ ಮನೆಗೆ ಬಂದ ಕೆಲವೇ ದಿನಗಳ ನಂತರ ಲೋ-ಕಟ್ ಉಡುಪು ಧರಿಸಿ ತುಟಿಗಳಿಗೆ ಕೆಂಪು ಲಿಪ್ ಸ್ಟಿಕ್ ಮೆತ್ತಿಕೊಂಡು ತನ್ನ ಗಂಡನನ್ನು ಬುಟ್ಟಿಗೆ ಹಾಕಿಕೊಳ್ಳುವ ಪ್ರಯತ್ನ ಆರಂಭಿಸಿದಳೆಂದು ಲೋರ್ನಾ ಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾಳೆ.

ಆದರೆ 4-ತಿಂಗಳು ಸೋಫಿಯಾಳೊಂದಿಗೆ ಜೀವಿಸುವುದರಲ್ಲೇ ಟೋನಿಗೆ ಸಾಕಾಗಿಬಿಟ್ಟಿದೆ. ಕಳೆದ ವಾರ ಅದ್ಯಾವುದೋ ಕಾರಣಕ್ಕೆ ಅವರ ನಡುವೆ ಜಗಳವಾಗಿ ಟೋನಿ ಅವಳ ವಿರುದ್ಧ ಪೊಲೀಸ್ ಗೆ ದೂರು ಸಲ್ಲಿಸಿದ್ದಾನೆ. ಪೊಲೀಸರು ಬಂದು ಅವಳನ್ನು ಕರೆದೊಯ್ಯುವಾಗ ‘ಟೋನಿ ಐ ಲವ್ ಯೂ, ನನ್ನನ್ನು ದೂರ ಮಾಡಬೇಡ,’ ಅಂತ ಜೋರಾಗಿ ಕಿರುಚಿದ್ದನ್ನು ನೆರೆಹೊರೆಯವರು ಕೇಳಿಸಿಕೊಂಡಿದ್ದಾರೆ.

Sofia and Tony Garnett

ಸೋಫಿಯ ಮತ್ತು ಟೋನಿ

ಅದಲ್ಲದೆ ಅವಳು ಅಲ್ಲಿಂದ ಹೋಗುವಾಗ ಟೋನಿಯ ಕಾರಿಗೆ ಜೋರಾಗಿ ಒದ್ದಳಂತೆ. ಪೊಲೀಸರು ಅರೆಸ್ಟ್ ಮಾಡಲು ಬಂದಾಗ ಅವಳು ಮನೆ ಪಕ್ಕದಲ್ಲಿರುವ ಉದ್ಯಾನವನದ ಪೊದೆಯಲ್ಲಿ ಅವಿತಿದ್ದಳೆಂದು ಅಕ್ಕಪಕ್ಕದ ಮನೆಯವರು ಹೇಳಿದ್ದಾರೆ.

ಅವಳನ್ನು ವಿಚಾರಣೆಗೆ ಕರೆದೊಯ್ದ ಪೊಲೀಸರು ಯಾವುದೇ ಚಾರ್ಜ್ ಅವಳ ಮೇಲೆ ವಿಧಿಸದೆ ವಾಪಸ್ಸು ಕಳಿಸಿದ್ದಾರೆ.

ತನ್ನ ಮತ್ತು ಸೋಫಿಯಾಳ ಸಂಬಂಧ ಮುರಿದುಬಿದ್ದ ಮೇಲೆ ಟೋನಿ, ‘ಅವಳೊಂದಿಗೆ ಬದುಕುವುದು ಸಾಧ್ಯವೇ ಇಲ್ಲ. ದಂಪತಿಯಾಗಿ ನಮ್ಮ ಸಂಬಂಧ ಮುಗಿದುಹೋಗಿದೆ,’ ಎಂದು ಪತ್ರಿಕೆಯೊಂದಕ್ಕೆ ತಿಳಿಸಿದ್ದಾನೆ.

‘ಅವಳಿಗೋಸ್ಕರ ನಾನು ಲೋರ್ನಾ ಮತ್ತು ಎರಡು ಮಕ್ಕಳನ್ನು ತ್ಯಜಿಸಿದೆ. ಸೋಫಿಯಾಳನ್ನು ಸಂತೋಷವಾಗಿಡಲು ಮತ್ತು ನಮ್ಮ ರಿಲೇಶನ್ ಶಿಪ್ ಮುಂದುವರಿಸಿಕೊಂಡು ಹೋಗಲು ನಾನು ಶಕ್ತಿಮೀರಿ ಪ್ರಯತ್ನಿಸಿದೆ. ನನ್ನ ಪ್ರಯತ್ನಗಳೆಲ್ಲ ವಿಫಲಗೊಂಡವು. ನಾನು ಮಾಧ್ಯಮದಲ್ಲಿ ಕೆಲಸ ಮಾಡುವುದರಿಂದ ಟಿವಿ ಮತ್ತು ಇಂಟರ್ನೆಟ್ ಗಮನವೆಲ್ಲ ನನ್ನ ಮೇಲಿತ್ತು,’ ಎಂದು ಟೋನಿ ಹೇಳಿದ್ದಾನೆ.

ಕಳೆದ ಶನಿವಾರ ಟೋನಿಯ 30ನೇ ವರ್ಷದ ಬರ್ತ್ ಡೇ ಸಮಾರಂಭದಲ್ಲಿ ಅವರಿಬ್ಬರ ನಡುವೆ ಕಲಹ ಶುರುವಿಟ್ಟುಕೊಂಡಿತ್ತಂತೆ. ಅದಾದ ಬಳಿಕ ಪ್ರತಿದಿನ ಅವರಿಬ್ಬರು ಜಗಳವಾಡಿದ್ದಾರೆ.

ಸೋಫಿಯಾ ಜೊತೆಗಿನ ಸಂಬಂಧವನ್ನು ಟೋನಿ ಒಂದು ಪ್ರಮಾದವೆಂದು ಬಣ್ಣಸಿರುವನಾದರೂ ಅವಳ ಖರ್ಚುವೆಚ್ಚಗಳನ್ನು ನೋಡಿಕೊಳ್ಳುತ್ತಿರುವುದಾಗಿ ಹೇಳಿದ್ದಾನೆ. ಬ್ರೇಕ್-ಅಪ್ ನಂತರ ಕೂಡ ಅವಳ ತಾಯಿಗೆ ಟೆಕ್ಸ್ಟ್ ಮೆಸೇಜುಗಳನ್ನು ಕಳಿಸುತ್ತಿರುವುದಾಗಿ ಪತ್ರಿಕೆಗೆ ಹೇಳಿದ್ದಾನೆ.

ಗೃಹ ಇಲಾಖೆ ಸಂಬಂಧಪಟ್ಟ ಇಲಾಖೆಗಳನ್ನು ಸಂಪರ್ಕಿಸಿ ಸೋಫಿಯಾಗೆ ಒಂದು ಹೊಸ ಮನೆಯ ವ್ಯವಸ್ಥೆ ಮಾಡುವುದಾಗಿ ಟೋನಿ ಹೇಳಿದ್ದಾನೆ. ಅವಳೊಂದಿಗೆ ರಿಲೇಶನ್ ಶಿಪ್ ನಲ್ಲಿದ್ದಾಗ ಲೋರ್ನಾ ಜೊತೆಗಿನ ಸಂಬಂಧ ಮುಗಿದು ಹೋದ ಕತೆಯೆಂದು ಅವನು ಹೇಳಿದ್ದ. ಹಾಗಾಗಿ ಅವಳಲ್ಲಿಗೆ ವಾಪಸ್ಸು ಹೋಗುವಂತೆಯೂ ಇಲ್ಲ.

ತ್ರಿಶಂಕು ಸ್ಥಿತಿ ಅಂದರೆ ಇದೇ ಇರಬೇಕು ಮಾರಾಯ್ರೇ!

Follow Us
ಜಾಗತಿಕ ನಾಯಕರಿಂದ ಭಾರತದ ಸಾಂಪ್ರದಾಯಿಕ ಸಿರಿಧಾನ್ಯಗಳ ಮೆನುಗೆ ಮೆಚ್ಚುಗೆ
ಜಾಗತಿಕ ನಾಯಕರಿಂದ ಭಾರತದ ಸಾಂಪ್ರದಾಯಿಕ ಸಿರಿಧಾನ್ಯಗಳ ಮೆನುಗೆ ಮೆಚ್ಚುಗೆ
ವಂದೇ ಮಾತರಂ ಗೀತೆ ವಿವಾದ: ಸರ್ಕಾರದ ಆದೇಶಕ್ಕೆ ಜನಾರ್ದನ ರೆಡ್ಡಿ ಸೆಡ್ಡು
ವಂದೇ ಮಾತರಂ ಗೀತೆ ವಿವಾದ: ಸರ್ಕಾರದ ಆದೇಶಕ್ಕೆ ಜನಾರ್ದನ ರೆಡ್ಡಿ ಸೆಡ್ಡು
ಸೆಪ್ಟೆಂಬರ್ 14 ರಿಂದ 20ರ ವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ಸೆಪ್ಟೆಂಬರ್ 14 ರಿಂದ 20ರ ವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ವಿನಯ್ ಜತೆ ಜೋಡಿಯಾಗಿ ನಟಿಸಿ, ರಿಯಲ್ ಲೈಫ್​ನಲ್ಲಿ ಅಣ್ಣ ಎಂದು ಕರೆದಿದ್ದ ನಟಿ
ವಿನಯ್ ಜತೆ ಜೋಡಿಯಾಗಿ ನಟಿಸಿ, ರಿಯಲ್ ಲೈಫ್​ನಲ್ಲಿ ಅಣ್ಣ ಎಂದು ಕರೆದಿದ್ದ ನಟಿ
ಹಾಸನದಲ್ಲಿ ಕೆಎಸ್‌ಆರ್‌ಟಿಸಿ ಬಸ್ ಅಪಘಾತ: ಗೃಹಿಣಿ ಸಾವು
ಹಾಸನದಲ್ಲಿ ಕೆಎಸ್‌ಆರ್‌ಟಿಸಿ ಬಸ್ ಅಪಘಾತ: ಗೃಹಿಣಿ ಸಾವು
ಗಣಪತಿ ಮೂರ್ತಿ ಅನಾವರಣದ ವೇಳೆ ಅವಘಡ: ಶಾಸಕ ಗಣಿಗ ರವಿಕುಮಾರ್‌ಗೆ ಗಾಯ
ಗಣಪತಿ ಮೂರ್ತಿ ಅನಾವರಣದ ವೇಳೆ ಅವಘಡ: ಶಾಸಕ ಗಣಿಗ ರವಿಕುಮಾರ್‌ಗೆ ಗಾಯ
ಗೌರಿ-ಗಣೇಶ ಹಬ್ಬದ ಖರೀದಿ ಭರಾಟೆ: ಕೆ.ಆರ್​.ಮಾರ್ಕೆಟ್​​ನಲ್ಲಿ ಜನ ಸಾಗರ
ಗೌರಿ-ಗಣೇಶ ಹಬ್ಬದ ಖರೀದಿ ಭರಾಟೆ: ಕೆ.ಆರ್​.ಮಾರ್ಕೆಟ್​​ನಲ್ಲಿ ಜನ ಸಾಗರ
ಇಂದು ಈ ರಾಶಿಯವರು ಹಣಕಾಸಿನ ವಿಷಯದಲ್ಲಿ ಎಚ್ಚರದಿಂದಿರಿ
ಇಂದು ಈ ರಾಶಿಯವರು ಹಣಕಾಸಿನ ವಿಷಯದಲ್ಲಿ ಎಚ್ಚರದಿಂದಿರಿ
ಓಡಿಬಂದು ನಟ ಅಜಿತ್​​ನನ್ನು ತಬ್ಬಿಕೊಂಡ ತಮಿಳುನಾಡು ಸಿಎಂ ವಿಜಯ್
ಓಡಿಬಂದು ನಟ ಅಜಿತ್​​ನನ್ನು ತಬ್ಬಿಕೊಂಡ ತಮಿಳುನಾಡು ಸಿಎಂ ವಿಜಯ್
ಆರ್ಯನ್ ಕಿಡ್ಸ್ ಗಾರ್ಡನ್ ಶಾಲೆಯಲ್ಲಿ ಕೃಷ್ಣ-ರಾಧೆಯಾಗಿ ಮಿಂಚಿದ ಪುಟಾಣಿಗಳು
ಆರ್ಯನ್ ಕಿಡ್ಸ್ ಗಾರ್ಡನ್ ಶಾಲೆಯಲ್ಲಿ ಕೃಷ್ಣ-ರಾಧೆಯಾಗಿ ಮಿಂಚಿದ ಪುಟಾಣಿಗಳು