AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇಂಗ್ಲೆಂಡ್​ನಲ್ಲೊಂದು ‘ಪತಿ ಪತ್ನಿ ಔರ್ ವೋ’ ಪ್ರಕರಣ, ಪತಿಗೆ ಈಗ ತ್ರಿಶಂಕು ಸ್ಥಿತಿ!

ಆದರೆ ಟೋನಿ ಉಕ್ರೇನಿನ ಹೆಂಗಸಿನೊಂದಿಗೆ ತನ್ನ ದಶಕದ ಸಂಗಾತಿಯನ್ನು ಮರೆತು ದೈಹಿಕ ಸಂಪರ್ಕ ಬೆಳೆಸಿದ. ಅಂತಿಮವಾಗಿ ಲೋರ್ನಾ ಮತ್ತು ಮಕ್ಕಳನ್ನು ತೊರೆದು ಸೋಫಿಯಾಳೊಂದಿಗೆ ಬೇರೆ ಮನೆಯಲ್ಲಿ ವಾಸಮಾಡತೊಡಗಿದ.

ಇಂಗ್ಲೆಂಡ್​ನಲ್ಲೊಂದು ‘ಪತಿ ಪತ್ನಿ ಔರ್ ವೋ’ ಪ್ರಕರಣ, ಪತಿಗೆ ಈಗ ತ್ರಿಶಂಕು ಸ್ಥಿತಿ!
ಲೋರ್ನಾ ಮತ್ತು ಟೋನಿ ಗಾರ್ನೆಟ್
TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ|

Updated on: Sep 29, 2022 | 7:36 AM

Share

ಆಶ್ರಯ ನೀಡಿದ ಮನೆಯಲ್ಲೇ ನಡೆದ ವಂಚನೆ ಪ್ರಕರಣವೊಂದರ ವಿಚಿತ್ರ ಕತೆಯಿದು. ಅಸಲಿಗೆ ನಾವು ಮಾತಾಡುತ್ತಿರೋದು ಉಕ್ರೇನ್ ನಲ್ಲಿ ಯುದ್ಧ ಶುರುವಾದ ಬಳಿಕ ಯುನೈಟೆಡ್ ಕಿಂಗ್ಡಮ್ ಗೆ ವಲಸೆ ಹೋದ ಸೋಫಿಯ ಕರ್ಕಾಡಿಮ್ ಹೆಸರಿನ ಮಹಿಳೆಯ ಬಗ್ಗೆ. ಪಶ್ಚಿಮ ಯಾರ್ಕ್ಶೈರ್ ನಲ್ಲಿರುವ ಬ್ರಾಡ್ ಫೋರ್ಡ್ ಗೆ ಸುಮಾರು 4 ತಿಂಗಳ ಹಿಂದೆ ಸೋಫಿಯ ಒಬ್ಬ ನಿರಾಶ್ರಿತಳಾಗಿ ಬಂದಾಗ, ಅವಳ ಸ್ಥಿತಿ ಕಂಡು ಕನಿಕರಪಟ್ಟ 30-ವರ್ಷ ವಯಸ್ಸಿನ ಟೋನಿ ಗಾರ್ನೆಟ್ ಅವನ ಸಂಗಾತಿ ಲೋರ್ನಾ ಗಾರ್ನೆಟ್ ಮತ್ತು ಅವರ ಇಬ್ಬರು ಮಕ್ಕಳು ಅವಳಿಗೆ ತಮ್ಮ ಮನೆಯಲ್ಲಿ ಆಶ್ರಯ ನೀಡಿದರು. ಟೋನಿ ಮತ್ತು ಲೋರ್ನಾ ಆ ಮನೆಯಲ್ಲಿ 10 ವರ್ಷಗಳಿಂದ ಒಟ್ಟಿಗೆ ಜೀವಿಸುತ್ತಿದ್ದರು.

ಆದರೆ ಟೋನಿ ಉಕ್ರೇನಿನ ಹೆಂಗಸಿನೊಂದಿಗೆ ತನ್ನ ದಶಕದ ಸಂಗಾತಿಯನ್ನು ಮರೆತು ದೈಹಿಕ ಸಂಪರ್ಕ ಬೆಳೆಸಿದ. ಅಂತಿಮವಾಗಿ ಲೋರ್ನಾ ಮತ್ತು ಮಕ್ಕಳನ್ನು ತೊರೆದು ಸೋಫಿಯಾಳೊಂದಿಗೆ ಬೇರೆ ಮನೆಯಲ್ಲಿ ವಾಸಮಾಡತೊಡಗಿದ.

ಸೋಫಿಯಾ ಮನೆಗೆ ಬಂದ ಕೆಲವೇ ದಿನಗಳ ನಂತರ ಲೋ-ಕಟ್ ಉಡುಪು ಧರಿಸಿ ತುಟಿಗಳಿಗೆ ಕೆಂಪು ಲಿಪ್ ಸ್ಟಿಕ್ ಮೆತ್ತಿಕೊಂಡು ತನ್ನ ಗಂಡನನ್ನು ಬುಟ್ಟಿಗೆ ಹಾಕಿಕೊಳ್ಳುವ ಪ್ರಯತ್ನ ಆರಂಭಿಸಿದಳೆಂದು ಲೋರ್ನಾ ಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾಳೆ.

ಆದರೆ 4-ತಿಂಗಳು ಸೋಫಿಯಾಳೊಂದಿಗೆ ಜೀವಿಸುವುದರಲ್ಲೇ ಟೋನಿಗೆ ಸಾಕಾಗಿಬಿಟ್ಟಿದೆ. ಕಳೆದ ವಾರ ಅದ್ಯಾವುದೋ ಕಾರಣಕ್ಕೆ ಅವರ ನಡುವೆ ಜಗಳವಾಗಿ ಟೋನಿ ಅವಳ ವಿರುದ್ಧ ಪೊಲೀಸ್ ಗೆ ದೂರು ಸಲ್ಲಿಸಿದ್ದಾನೆ. ಪೊಲೀಸರು ಬಂದು ಅವಳನ್ನು ಕರೆದೊಯ್ಯುವಾಗ ‘ಟೋನಿ ಐ ಲವ್ ಯೂ, ನನ್ನನ್ನು ದೂರ ಮಾಡಬೇಡ,’ ಅಂತ ಜೋರಾಗಿ ಕಿರುಚಿದ್ದನ್ನು ನೆರೆಹೊರೆಯವರು ಕೇಳಿಸಿಕೊಂಡಿದ್ದಾರೆ.

Sofia and Tony Garnett

ಸೋಫಿಯ ಮತ್ತು ಟೋನಿ

ಅದಲ್ಲದೆ ಅವಳು ಅಲ್ಲಿಂದ ಹೋಗುವಾಗ ಟೋನಿಯ ಕಾರಿಗೆ ಜೋರಾಗಿ ಒದ್ದಳಂತೆ. ಪೊಲೀಸರು ಅರೆಸ್ಟ್ ಮಾಡಲು ಬಂದಾಗ ಅವಳು ಮನೆ ಪಕ್ಕದಲ್ಲಿರುವ ಉದ್ಯಾನವನದ ಪೊದೆಯಲ್ಲಿ ಅವಿತಿದ್ದಳೆಂದು ಅಕ್ಕಪಕ್ಕದ ಮನೆಯವರು ಹೇಳಿದ್ದಾರೆ.

ಅವಳನ್ನು ವಿಚಾರಣೆಗೆ ಕರೆದೊಯ್ದ ಪೊಲೀಸರು ಯಾವುದೇ ಚಾರ್ಜ್ ಅವಳ ಮೇಲೆ ವಿಧಿಸದೆ ವಾಪಸ್ಸು ಕಳಿಸಿದ್ದಾರೆ.

ತನ್ನ ಮತ್ತು ಸೋಫಿಯಾಳ ಸಂಬಂಧ ಮುರಿದುಬಿದ್ದ ಮೇಲೆ ಟೋನಿ, ‘ಅವಳೊಂದಿಗೆ ಬದುಕುವುದು ಸಾಧ್ಯವೇ ಇಲ್ಲ. ದಂಪತಿಯಾಗಿ ನಮ್ಮ ಸಂಬಂಧ ಮುಗಿದುಹೋಗಿದೆ,’ ಎಂದು ಪತ್ರಿಕೆಯೊಂದಕ್ಕೆ ತಿಳಿಸಿದ್ದಾನೆ.

‘ಅವಳಿಗೋಸ್ಕರ ನಾನು ಲೋರ್ನಾ ಮತ್ತು ಎರಡು ಮಕ್ಕಳನ್ನು ತ್ಯಜಿಸಿದೆ. ಸೋಫಿಯಾಳನ್ನು ಸಂತೋಷವಾಗಿಡಲು ಮತ್ತು ನಮ್ಮ ರಿಲೇಶನ್ ಶಿಪ್ ಮುಂದುವರಿಸಿಕೊಂಡು ಹೋಗಲು ನಾನು ಶಕ್ತಿಮೀರಿ ಪ್ರಯತ್ನಿಸಿದೆ. ನನ್ನ ಪ್ರಯತ್ನಗಳೆಲ್ಲ ವಿಫಲಗೊಂಡವು. ನಾನು ಮಾಧ್ಯಮದಲ್ಲಿ ಕೆಲಸ ಮಾಡುವುದರಿಂದ ಟಿವಿ ಮತ್ತು ಇಂಟರ್ನೆಟ್ ಗಮನವೆಲ್ಲ ನನ್ನ ಮೇಲಿತ್ತು,’ ಎಂದು ಟೋನಿ ಹೇಳಿದ್ದಾನೆ.

ಕಳೆದ ಶನಿವಾರ ಟೋನಿಯ 30ನೇ ವರ್ಷದ ಬರ್ತ್ ಡೇ ಸಮಾರಂಭದಲ್ಲಿ ಅವರಿಬ್ಬರ ನಡುವೆ ಕಲಹ ಶುರುವಿಟ್ಟುಕೊಂಡಿತ್ತಂತೆ. ಅದಾದ ಬಳಿಕ ಪ್ರತಿದಿನ ಅವರಿಬ್ಬರು ಜಗಳವಾಡಿದ್ದಾರೆ.

ಸೋಫಿಯಾ ಜೊತೆಗಿನ ಸಂಬಂಧವನ್ನು ಟೋನಿ ಒಂದು ಪ್ರಮಾದವೆಂದು ಬಣ್ಣಸಿರುವನಾದರೂ ಅವಳ ಖರ್ಚುವೆಚ್ಚಗಳನ್ನು ನೋಡಿಕೊಳ್ಳುತ್ತಿರುವುದಾಗಿ ಹೇಳಿದ್ದಾನೆ. ಬ್ರೇಕ್-ಅಪ್ ನಂತರ ಕೂಡ ಅವಳ ತಾಯಿಗೆ ಟೆಕ್ಸ್ಟ್ ಮೆಸೇಜುಗಳನ್ನು ಕಳಿಸುತ್ತಿರುವುದಾಗಿ ಪತ್ರಿಕೆಗೆ ಹೇಳಿದ್ದಾನೆ.

ಗೃಹ ಇಲಾಖೆ ಸಂಬಂಧಪಟ್ಟ ಇಲಾಖೆಗಳನ್ನು ಸಂಪರ್ಕಿಸಿ ಸೋಫಿಯಾಗೆ ಒಂದು ಹೊಸ ಮನೆಯ ವ್ಯವಸ್ಥೆ ಮಾಡುವುದಾಗಿ ಟೋನಿ ಹೇಳಿದ್ದಾನೆ. ಅವಳೊಂದಿಗೆ ರಿಲೇಶನ್ ಶಿಪ್ ನಲ್ಲಿದ್ದಾಗ ಲೋರ್ನಾ ಜೊತೆಗಿನ ಸಂಬಂಧ ಮುಗಿದು ಹೋದ ಕತೆಯೆಂದು ಅವನು ಹೇಳಿದ್ದ. ಹಾಗಾಗಿ ಅವಳಲ್ಲಿಗೆ ವಾಪಸ್ಸು ಹೋಗುವಂತೆಯೂ ಇಲ್ಲ.

ತ್ರಿಶಂಕು ಸ್ಥಿತಿ ಅಂದರೆ ಇದೇ ಇರಬೇಕು ಮಾರಾಯ್ರೇ!

ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?