AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇಸ್ಲಾಂ ಕಾನೂನು ವಿರುದ್ಧ ನಡೆಯಿತೇ ಪಾಕ್ ಮಾಜಿ ಪ್ರಧಾನಿ ಇಮ್ರಾನ್ ಖಾನ್ ವಿವಾಹ?

ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ ಅಧ್ಯಕ್ಷರು ತಮ್ಮ ಪ್ರಸ್ತುತ ಪತ್ನಿ ಬುಶ್ರಾ ಬೀಬಿಯನ್ನು ಇದ್ದತ್‌ನಲ್ಲಿದ್ದಾಗ  ಮದುವೆಯಾಗಿದ್ದಕ್ಕಾಗಿ ಕಾನೂನು ಕ್ರಮವನ್ನು ಕೋರಿ ಸಲ್ಲಿಸಲಾದ ಅರ್ಜಿಯ ವಿಚಾರಣೆಯ ಸಂದರ್ಭದಲ್ಲಿ ಸಯೀದ್ ಬುಧವಾರ ಸಾಕ್ಷ್ಯವನ್ನು ಒದಗಿಸಿದ್ದಾರೆ.

ಇಸ್ಲಾಂ ಕಾನೂನು ವಿರುದ್ಧ ನಡೆಯಿತೇ ಪಾಕ್ ಮಾಜಿ ಪ್ರಧಾನಿ ಇಮ್ರಾನ್ ಖಾನ್ ವಿವಾಹ?
ಇಮ್ರಾನ್ ಖಾನ್
ರಶ್ಮಿ ಕಲ್ಲಕಟ್ಟ
ರಶ್ಮಿ ಕಲ್ಲಕಟ್ಟ|

Updated on: Apr 13, 2023 | 8:15 PM

Share

ಪಾಕಿಸ್ತಾನದ (Pakistan) ಮಾಜಿ ಪ್ರಧಾನಿ ಇಮ್ರಾನ್ ಖಾನ್ (Imran Khan) ಮತ್ತು ಬುಶ್ರಾ ಬೀಬಿ (Bushra Bibi) ಅವರ ವಿವಾಹವನ್ನು ಶಾಸ್ತ್ರೋಕ್ತವಾಗಿ ನಡೆಸಿದ ಪಾಕಿಸ್ತಾನಿ ಮೌಲ್ವಿಯೊಬ್ಬರು ಇಸ್ಲಾಮಿಕ್ ಷರಿಯಾ ಕಾನೂನಿನ ಪ್ರಕಾರ ಸಮಾರಂಭವನ್ನು ನಡೆಸಲಾಗಿಲ್ಲ ಎಂದು ಬಹಿರಂಗಪಡಿಸಿದ್ದಾರೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ. 2018ರಲ್ಲಿ ದಂಪತಿಗಳ ಇಸ್ಲಾಮಿಕ್ ವಿವಾಹವನ್ನು ನೆರವೇರಿಸಿದ ಮೌಲ್ವಿ ಮುಫ್ತಿ ಮೊಹಮ್ಮದ್ ಸಯೀದ್, ಇದು ಬುಶ್ರಾ ಬೀಬಿಯ ಇದ್ದತ್ ಅವಧಿಯಲ್ಲಿ ನಡೆಯಿತು ಎಂದು ಹೇಳಿದ್ದಾರೆ. ಸಾಮಾನ್ಯವಾಗಿ ಮೂರು ತಿಂಗಳ ಅವಧಿಯ ಇದ್ದತ್ ಅವಧಿಯನ್ನು ಮುಸ್ಲಿಂ ಮಹಿಳೆಯು ತನ್ನ ಗಂಡನ ಮರಣ ಅಥವಾ ವಿಚ್ಛೇದನ ಆದ ಕಾರಣದಿಂದ ಕಾಯುವ ಅವಧಿ ಎಂದು ವ್ಯಾಖ್ಯಾನಿಸಲಾಗಿದೆ.

ಸುದ್ದಿ ಸಂಸ್ಥೆಯ ಪ್ರಕಾರ ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ ಅಧ್ಯಕ್ಷರು ತಮ್ಮ ಪ್ರಸ್ತುತ ಪತ್ನಿ ಬುಶ್ರಾ ಬೀಬಿಯನ್ನು ಇದ್ದತ್‌ನಲ್ಲಿದ್ದಾಗ  ಮದುವೆಯಾಗಿದ್ದಕ್ಕಾಗಿ ಕಾನೂನು ಕ್ರಮವನ್ನು ಕೋರಿ ಸಲ್ಲಿಸಲಾದ ಅರ್ಜಿಯ ವಿಚಾರಣೆಯ ಸಂದರ್ಭದಲ್ಲಿ ಸಯೀದ್ ಬುಧವಾರ ಸಾಕ್ಷ್ಯವನ್ನು ಒದಗಿಸಿದ್ದಾರೆ.

ಮುಹಮ್ಮದ್ ಹನೀಫ್ ಎಂಬುವರು ಅರ್ಜಿ ಸಲ್ಲಿಸಿದ್ದು, ಈ ವಿಷಯ ಸಾರ್ವಜನಿಕ ವಲಯದಲ್ಲಿ ಬಂದಿತ್ತು. ಅವರು ಮಾಜಿ ಪ್ರಧಾನಿಯೊಂದಿಗೆ ಉತ್ತಮ ಸಂಬಂಧ ಹೊಂದಿದ್ದರು ಮತ್ತು ಅವರ ಕೋರ್ ಕಮಿಟಿಯ ಸದಸ್ಯರೂ ಆಗಿದ್ದರು ಎಂದು ಮೌಲ್ವಿ ಹೇಳಿದ್ದು, ದಂಪತಿಗಳ ನಿಖಾಹ್ ನಿರ್ವಹಿಸಲು ಖಾನ್ ತಮ್ಮನ್ನು ಲಾಹೋರ್‌ಗೆ ಕರೆದೊಯ್ದಿದ್ದರು ಎಂದು ಅವರು ಹೇಳಿದ್ದಾರೆ.

ಬುಶ್ರಾ ಅವರ ಸಹೋದರಿ ಎಂದು ಗುರುತಿಸಿಕೊಳ್ಳುವ ಮಹಿಳೆಯೊಬ್ಬರು ತಮ್ಮ ಮದುವೆಗೆ ಎಲ್ಲಾ ಷರಿಯಾ ಪೂರ್ವಾಪೇಕ್ಷಿತಗಳನ್ನು ಪೂರೈಸಿದ್ದರಿಂದ ದಂಪತಿಗಳು ಮದುವೆಯಾಗಬಹುದು ಎಂದು ಹೇಳಿದ್ದರು. ಸಯೀದ್ ಅವರು ಜನವರಿ 1, 2018 ರಂದು ಖಾನ್ ಮದುವೆಯನ್ನು ಅಧಿಕೃತಗೊಳಿಸಿದರು. ಇದರ ನಂತರ, ದಂಪತಿಗಳು ಇಸ್ಲಾಮಾಬಾದ್‌ನಲ್ಲಿ ಒಟ್ಟಿಗೆ ವಾಸಿಸಲು ಪ್ರಾರಂಭಿಸಿದರು.

ಮೌಲ್ವಿ ಪ್ರಕಾರ ಖಾನ್, ಫೆಬ್ರವರಿ 2018 ರಲ್ಲಿ ಮತ್ತೆ ಅವರಿಗೆ ಕರೆ ಮಾಡಿ ಮತ್ತೊಮ್ಮೆ ಸಮಾರಂಭವನ್ನು ಮಾಡುವಂತೆ ಕೇಳಿಕೊಂಡಿದ್ದಾರೆ. ನವೆಂಬರ್ 2017 ರಲ್ಲಿ ಬುಶ್ರಾ ವಿಚ್ಛೇದನ ಪಡೆದಿದ್ದರಿಂದ ಅವರ ಇದ್ದತ್ ಅವಧಿಯು ಇನ್ನೂ ಕೊನೆಗೊಂಡಿಲ್ಲ ಎಂದು ಖಾನ್ ಹೇಳಿದ್ದರು. ಆದ್ದರಿಂದ, ಮಾಜಿ ಪ್ರಧಾನಿ ಬುಶ್ರಾ ಬೀಬಿ ಅವರೊಂದಿಗಿನ ಅವರ ಮೊದಲ ವಿವಾಹವು ಷರಿಯಾಕ್ಕೆ ಅನುಗುಣವಾಗಿಲ್ಲ ಎಂದಿದ್ದರು.

ಖಾನ್ ಮತ್ತು ಬುಶ್ರಾ ಬೀಬಿ ಅವರು ಏನೋ ಒಂದು ಭವಿಷ್ಯವಾಣಿಯನ್ನು ನಂಬಿ ಉದ್ದೇಶಪೂರ್ವಕವಾಗಿ ಕಾನೂನುಬಾಹಿರ ಮತ್ತು ಇಸ್ಲಾಮಿಕ್ ಅಲ್ಲದ ಒಕ್ಕೂಟಕ್ಕೆ ಪ್ರವೇಶಿಸಿದ್ದಾರೆ ಧರ್ಮ ಗುರು ಹೇಳಿರುವುದಾಗಿಪಾಕಿಸ್ತಾನದ ಪತ್ರಿಕೆ ಡಾನ್ ಉಲ್ಲೇಖಿಸಿದ್ದಾರೆ. 2018 ರಲ್ಲಿ ಹೊಸ ವರ್ಷದ ದಿನದಂದು ವಿವಾಹವಾದರೆ ಅವರು ಪ್ರಧಾನಿಯಾಗುತ್ತಾರೆ ಎಂದು ಖಾನ್ ನಂಬಿದ್ದರು.

ಇದನ್ನೂ ಓದಿ: H3N8 Bird Flu: ಚೀನಾದ ಕೋಳಿಗಳಲ್ಲಿ H3N8 ವೈರಸ್ ಪತ್ತೆ! ​ರೋಗಲಕ್ಷಣ, ಮುನ್ನೆಚ್ಚರಿಕೆ ಕ್ರಮ?

ರಂಜಾನ್‌ನ ನಾಲ್ಕನೇ ದಿನದಂದು, ಅರ್ಜಿದಾರರಾದ ಮುಹಮ್ಮದ್ ಹನೀಫ್, ತರಾವೀಹ್ ಪ್ರಾರ್ಥನೆಯ ನಂತರ ನನ್ನನ್ನು ಸಂಪರ್ಕಿಸಿದರು. ಅವರು ದಂಪತಿಗಳ ಮದುವೆಯ ಬಗ್ಗೆ ಕೇಳಿದಾಗ ನಾನು ಇದನ್ನು ಹೇಳಿದ್ದೇನೆ ಎಂದಿದ್ದಾರೆ.

ಮತ್ತಷ್ಟು ವಿದೇಶ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
Rashmi Kallakatta
Rashmi Kallakatta

ಊರು ಕಾಸರಗೋಡು. ಓದಿದ್ದು ಇಂಜಿನಿಯರಿಂಗ್, ಪಬ್ಲಿಕ್ ಅಡ್ಮಿನಿಸ್ಟ್ರೇಷನ್ ಮತ್ತು ಇಂಗ್ಲಿಷ್ ಸ್ನಾತಕೋತ್ತರ ಪದವಿ. ಕನ್ನಡಪ್ರಭ, ಪ್ರಜಾವಾಣಿ ಡಿಜಿಟಲ್ ಮತ್ತು ಪ್ರಿಂಟ್ ವಿಭಾಗದಲ್ಲಿ ಕೆಲಸದ ಅನುಭವ. ಬ್ಲಾಗರ್, ಸಾಹಿತ್ಯ ಪ್ರೇಮಿ. ಇಲ್ಲಿವರೆಗೆ 2 ಪುಸ್ತಕಗಳು ಪ್ರಕಟವಾಗಿವೆ. ಕಲೆ,ಸಾಹಿತ್ಯ,ತಂತ್ರಜ್ಞಾನ,ಸಂದರ್ಶನ, ಫ್ಯಾಕ್ಟ್ ಚೆಕಿಂಗ್ ಆಸಕ್ತಿಕರ ವಿಷಯಗಳು. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷ ಅನುಭವ

CLP Meeting: ಡಿಕೆಶಿ ಹೆಸರು ಘೋಷಿಸಿದ ಸಿದ್ರಾಮಯ್ಯ Exclusive ವಿಡಿಯೋ
CLP Meeting: ಡಿಕೆಶಿ ಹೆಸರು ಘೋಷಿಸಿದ ಸಿದ್ರಾಮಯ್ಯ Exclusive ವಿಡಿಯೋ
ಸಿದ್ದರಾಮಯ್ಯ ಪದತ್ಯಾಗಕ್ಕೆ ಪುತ್ರನಿಗೆ ಹೈಕಮಾಂಡ್ ಬಂಪರ್: ಗುಟ್ಟು ರಟ್ಟು
ಸಿದ್ದರಾಮಯ್ಯ ಪದತ್ಯಾಗಕ್ಕೆ ಪುತ್ರನಿಗೆ ಹೈಕಮಾಂಡ್ ಬಂಪರ್: ಗುಟ್ಟು ರಟ್ಟು
ಡಿಕೆಶಿ ಪ್ರಮಾಣವಚನ ಯಾವಾಗ-ಎಲ್ಲಿ, ಎಷ್ಟು ಗಂಟೆಗೆ? ಇಲ್ಲಿದೆ ಅಧಿಕೃತ ವಿವರ
ಡಿಕೆಶಿ ಪ್ರಮಾಣವಚನ ಯಾವಾಗ-ಎಲ್ಲಿ, ಎಷ್ಟು ಗಂಟೆಗೆ? ಇಲ್ಲಿದೆ ಅಧಿಕೃತ ವಿವರ
ಶಾಸಕಾಂಗ ಸಭೆಯಲ್ಲಿ ಅಚ್ಚರಿ: ಡಿಕೆಶಿ, ಹೈಕಮಾಂಡ್ ನಾಯಕರು ಕಕ್ಕಾಬಿಕ್ಕಿ
ಶಾಸಕಾಂಗ ಸಭೆಯಲ್ಲಿ ಅಚ್ಚರಿ: ಡಿಕೆಶಿ, ಹೈಕಮಾಂಡ್ ನಾಯಕರು ಕಕ್ಕಾಬಿಕ್ಕಿ
‘ಇಂದು ನಮಗೆ ಅತ್ಯಂತ ಭಾವುಕ ದಿನ’: ವೇಣುಗೋಪಾಲ್ ಭಾವುಕ ಮಾತು
‘ಇಂದು ನಮಗೆ ಅತ್ಯಂತ ಭಾವುಕ ದಿನ’: ವೇಣುಗೋಪಾಲ್ ಭಾವುಕ ಮಾತು
17 ವರ್ಷಗಳ ಬಳಿಕ ಮಹತ್ವದ ಸ್ಥಾನ ಬಿಟ್ಟುಕೊಟ್ಟ ಸಿದ್ದರಾಮಯ್ಯ
17 ವರ್ಷಗಳ ಬಳಿಕ ಮಹತ್ವದ ಸ್ಥಾನ ಬಿಟ್ಟುಕೊಟ್ಟ ಸಿದ್ದರಾಮಯ್ಯ
ಸಿಎಲ್​​​ಪಿ ಸಭೆಗೂ ಮುನ್ನವೇ ಅಜ್ಜಯ್ಯನಿಗೆ ವಿಶೇಷ ಪೂಜೆ ಸಲ್ಲಿಸಿದ ಡಿಕೆಶಿ
ಸಿಎಲ್​​​ಪಿ ಸಭೆಗೂ ಮುನ್ನವೇ ಅಜ್ಜಯ್ಯನಿಗೆ ವಿಶೇಷ ಪೂಜೆ ಸಲ್ಲಿಸಿದ ಡಿಕೆಶಿ
CLP ಸಭೆಗೆ ತೆರಳುವ ಮುನ್ನ ವಿಧಾನಸೌಧದ ಬಾಗಿಲಿಗೆ ನಮಿಸಿದ ಡಿಕೆಶಿ
CLP ಸಭೆಗೆ ತೆರಳುವ ಮುನ್ನ ವಿಧಾನಸೌಧದ ಬಾಗಿಲಿಗೆ ನಮಿಸಿದ ಡಿಕೆಶಿ
RCB ಅಭಿಮಾನಿಗಳಿಗೆ ಬಿಗ್ ಶಾಕ್: ರಸ್ತೆಗಳಲ್ಲಿ ಸಂಭ್ರಮಾಚರಣೆ ಮಾಡಿದ್ರೆ ಕ್ರಮ
RCB ಅಭಿಮಾನಿಗಳಿಗೆ ಬಿಗ್ ಶಾಕ್: ರಸ್ತೆಗಳಲ್ಲಿ ಸಂಭ್ರಮಾಚರಣೆ ಮಾಡಿದ್ರೆ ಕ್ರಮ
ಏಕಾಏಕಿ ಸಲೂನ್​​ ಒಳಗೆ ನುಗ್ಗಿದ ಹೋರಿ; ಸಿಸಿಟಿವಿ ದೃಶ್ಯ ವೈರಲ್!
ಏಕಾಏಕಿ ಸಲೂನ್​​ ಒಳಗೆ ನುಗ್ಗಿದ ಹೋರಿ; ಸಿಸಿಟಿವಿ ದೃಶ್ಯ ವೈರಲ್!