AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಯುಕೆಯಿಂದ ಕಳುವಾಗಿದ್ದ ದುಬಾರಿ ಬೆಂಟ್ಲಿ ಕಾರು ಕರಾಚಿಯಲ್ಲಿ ಪತ್ತೆ

ಈ ಕಾರನ್ನು ಕೆಲವು ವಾರಗಳ ಹಿಂದೆ ಲಂಡನ್‌ನಲ್ಲಿ ಕಳವು ಮಾಡಲಾಗಿತ್ತು, ಈ ಯೋಜನೆಗೆ ಕಾರಣರಾದವರು ಪೂರ್ವ ಯುರೋಪಿಯನ್ ರಾಷ್ಟ್ರದ ಹಿರಿಯ ಅಧಿಕಾರಿಯ ರುಜುವಾತುಗಳನ್ನು ಬಳಸಿಕೊಂಡು ಅದನ್ನು ಪಾಕಿಸ್ತಾನಕ್ಕೆ ತಂದಿದ್ದಾರೆ.

ಯುಕೆಯಿಂದ ಕಳುವಾಗಿದ್ದ ದುಬಾರಿ ಬೆಂಟ್ಲಿ ಕಾರು ಕರಾಚಿಯಲ್ಲಿ ಪತ್ತೆ
ಪ್ರಾತಿನಿಧಿಕ ಚಿತ್ರ
TV9 Web
| Edited By: |

Updated on:Sep 06, 2022 | 3:56 PM

Share

ಪಾಕಿಸ್ತಾನದ ಕಸ್ಟಮ್ಸ್ ಅಧಿಕಾರಿಗಳು ಕರಾಚಿಯ (Karachi) ಶ್ರೀಮಂತ ವಿಲ್ಲಾದ ಮೇಲೆ ದಾಳಿ ನಡೆಸಿದಾಗ, ಯುಕೆಯಿಂದ ಕದ್ದ ದುಬಾರಿ ಬೆಂಟ್ಲಿ ಮಲ್ಜಾನ್ (Bentley Mulsanne)ಕಾರನ್ನು ಪತ್ತೆಯಾಗಿದೆ ಯುಕೆ ನ್ಯಾಷನಲ್ ಕ್ರೈಮ್ ಏಜೆನ್ಸಿಯಿಂದ ಕದ್ದ ಕಾರಿನ ಬಗ್ಗೆ ಮಾಹಿತಿ ಪಡೆದ ನಂತರ ಅಧಿಕಾರಿಗಳು ಮನೆಯ ಮೇಲೆ ದಾಳಿ ನಡೆಸಿದಾಗ, ಮತ್ತೊಂದು ಬಂಗಲೆಯಲ್ಲಿ ಪರವಾನಗಿ ಪಡೆಯದ ಶಸ್ತ್ರಾಸ್ತ್ರಗಳನ್ನು ಪತ್ತೆ ಮಾಡಿದ್ದಾರೆ. ಕಸ್ಟಮ್ಸ್ ಇನ್ಸ್‌ಪೆಕ್ಟರ್ ಪ್ರಕಾರ, ಕರಾಚಿಯ ಕೆಲವು ಡಿಎಚ್‌ಎ ನಿವಾಸಗಳ ಪಾರ್ಕಿಂಗ್ ಪ್ರದೇಶದಲ್ಲಿ ವಾಹನವನ್ನು ಪತ್ತೆಹಚ್ಚಲಾಗಿದೆ. ಇಬ್ಬರು ಆರೋಪಿಗಳಾದ ಜಮೀಲ್ ಶಫಿ ಮತ್ತು ನವೀದ್ ಬಿಲ್ವಾನಿ ಅವರನ್ನು ಬಂಧಿಸಲಾಗಿದೆ. ಬಂಧಿತರು 10 ನೇ ಸೌತ್ ಸ್ಟ್ರೀಟ್, ಹೌಸ್ ನಂ 15-ಬಿ, ಎರಡನೇ ಹಂತದ ವಿಸ್ತರಣೆಯ ನಿವಾಸಿ ಶಫಿ ಅಹ್ಮದ್ ಅವರ ಪುತ್ರ ಜಮೀಲ್ ಶಾಫಿ ಮತ್ತು ಖಯಾಬಾನ್-ಎ-ರೂಮಿಯ ಹೌಸ್ ನಂ 159 ರ ನಿವಾಸಿ ರಫೀಕ್ ಅವರ ಮಗ ನವೀದ್ ಬಿಲ್ವಾನಿ ಎಂದು ಗುರುತಿಸಲಾಗಿದೆ ಎಂದು ಅಧಿಕಾರಿ  ಹೇಳಿದ್ದಾರೆ.

“ಇನ್ನೋರ್ವ ಆರೋಪಿ ನವೈದ್ ಯಾಮಿನ್, ಕೆಡಿಎ ಆಫೀಸರ್ಸ್ ಸೊಸೈಟಿಯ ನಿವಾಸಿ, ಮೋಟಾರು ನೋಂದಣಿ ಪ್ರಾಧಿಕಾರ, ಅಬಕಾರಿ ಮತ್ತು ತೆರಿಗೆ ಇಲಾಖೆಯ ಫೆಸಿಲಿಟೇಟರ್ ನಾಪತ್ತೆಯಾಗಿದ್ದು, ತನಿಖೆಯ ಸಮಯದಲ್ಲಿ ಖಚಿತವಾಗಬೇಕಾದ ಇತರ ಹಣಕಾಸುದಾರರು, ಕುಮ್ಮಕ್ಕು ನೀಡುವವರು ಮತ್ತು ಸಹಚರರನ್ನು ಇನ್ನೂ ಬಂಧಿಸಬೇಕಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಈ ಕಾರನ್ನು ಕೆಲವು ವಾರಗಳ ಹಿಂದೆ ಲಂಡನ್‌ನಲ್ಲಿ ಕಳವು ಮಾಡಲಾಗಿತ್ತು, ಈ ಯೋಜನೆಗೆ ಕಾರಣರಾದವರು ಪೂರ್ವ ಯುರೋಪಿಯನ್ ರಾಷ್ಟ್ರದ ಹಿರಿಯ ಅಧಿಕಾರಿಯ ರುಜುವಾತುಗಳನ್ನು ಬಳಸಿಕೊಂಡು ಅದನ್ನು ಪಾಕಿಸ್ತಾನಕ್ಕೆ ತಂದಿದ್ದಾರೆ.ಈ ಕಾರು ಕಂಪನಿಯು ತಯಾರಿಸಿದ ಅತ್ಯಂತ ದುಬಾರಿ ಹ್ಯಾಂಡ್ ಕ್ರಾಫ್ಟೆಡ್ ಸೆಡಾನ್ ಆಗಿದೆ. ಇದರ ಬೆಲೆ ₹2 ಕೋಟಿ ($300,000 ಕ್ಕಿಂತ ಹೆಚ್ಚು). ಮನೆಯ ಮಾಲೀಕರು ಸಾಕಷ್ಟು ದಾಖಲೆಗಳನ್ನು ಒದಗಿಸಲು ವಿಫಲವಾದ ನಂತರ, ಅಧಿಕಾರಿಗಳು ಅವನನ್ನು ಮತ್ತು ಕಾರನ್ನು ಮಾರಾಟ ಮಾಡಿದ ಬ್ರೋಕರ್ ಇಬ್ಬರನ್ನೂ ಬಂಧಿಸಿದ್ದಾರೆ. ಕಸ್ಟಮ್ಸ್ ಅಧಿಕಾರಿಗಳ ಪ್ರಕಾರ ವಾಹನದ ನೋಂದಣಿಯನ್ನು ಸಹ  ನಕಲಿ ಎಂದಿದ್ದಾರೆ. ಡಿಎಚ್‌ಎ ನಿವಾಸದ ಮೇಲೆ ದಾಳಿ ನಡೆಸಿದಾಗ, ಕಸ್ಟಮ್ಸ್ ಅದೇ ವ್ಯಕ್ತಿಯಿಂದ ಮತ್ತೊಂದು ವಾಹನವನ್ನು ತೆಗೆದುಕೊಂಡಿರುವುದಾಗಿ ಹೇಳಿಕೊಂಡಿದೆ. ಪ್ರಕರಣ ದಾಖಲಿಸಿಕೊಂಡಿದ್ದು, ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Published On - 3:56 pm, Tue, 6 September 22

ಗ್ರಾಮಸ್ಥರ ಮೇಲೆ ಏಕಾಏಕಿ ದಾಳಿ ಮಾಡಿದ ಹೆಜ್ಜೇನು
ಗ್ರಾಮಸ್ಥರ ಮೇಲೆ ಏಕಾಏಕಿ ದಾಳಿ ಮಾಡಿದ ಹೆಜ್ಜೇನು
60 ಲಕ್ಷ ರೂ ಮೌಲ್ಯದ ಮೆಕ್ಕೆಜೋಳಕ್ಕೆ ಬೆಂಕಿಯಿಟ್ಟ ದುಷ್ಕರ್ಮಿಗಳು
60 ಲಕ್ಷ ರೂ ಮೌಲ್ಯದ ಮೆಕ್ಕೆಜೋಳಕ್ಕೆ ಬೆಂಕಿಯಿಟ್ಟ ದುಷ್ಕರ್ಮಿಗಳು
ಕಾಶ್ಮೀರದ ಹೈವೇಯಲ್ಲಿ ಪರ್ವತ ಕುಸಿತ; ಶ್ರೀನಗರ-ಬಾರಾಮುಲ್ಲಾ ಮಾರ್ಗ ಬಂದ್
ಕಾಶ್ಮೀರದ ಹೈವೇಯಲ್ಲಿ ಪರ್ವತ ಕುಸಿತ; ಶ್ರೀನಗರ-ಬಾರಾಮುಲ್ಲಾ ಮಾರ್ಗ ಬಂದ್
ಜನಾರ್ದನ ರೆಡ್ಡಿ ಮನೆಯತ್ತಲೇ ಫೈರ್ ಮಾಡಿದ್ದ ಖಾಸಗಿ ಗನ್​ಮ್ಯಾನ್
ಜನಾರ್ದನ ರೆಡ್ಡಿ ಮನೆಯತ್ತಲೇ ಫೈರ್ ಮಾಡಿದ್ದ ಖಾಸಗಿ ಗನ್​ಮ್ಯಾನ್
ಸಚಿವ ಜಮೀರ್ 2ನೇ ಟಿಪ್ಪು ಸುಲ್ತಾನ್ ಎಂದ ಪ್ರಮೋದ್ ಮುತಾಲಿಕ್
ಸಚಿವ ಜಮೀರ್ 2ನೇ ಟಿಪ್ಪು ಸುಲ್ತಾನ್ ಎಂದ ಪ್ರಮೋದ್ ಮುತಾಲಿಕ್
ಬ್ಯಾನರ್​​​ ಕಿತ್ತಾಟದಲ್ಲಿ ಅಮಾಯಕ ಕಾರ್ಯಕರ್ತ ಬಲಿ, ಹೆಗಲು ಕೊಟ್ಟ ಶಾಸಕರು
ಬ್ಯಾನರ್​​​ ಕಿತ್ತಾಟದಲ್ಲಿ ಅಮಾಯಕ ಕಾರ್ಯಕರ್ತ ಬಲಿ, ಹೆಗಲು ಕೊಟ್ಟ ಶಾಸಕರು
ಬ್ಯಾನರ್​​ ಗಲಾಟೆ ವೇಳೆ ಫೈರಿಂಗ್​: ಸ್ಫೋಟಕ ಸಾಕ್ಷಿಕೊಟ್ಟ ಶ್ರೀರಾಮುಲು
ಬ್ಯಾನರ್​​ ಗಲಾಟೆ ವೇಳೆ ಫೈರಿಂಗ್​: ಸ್ಫೋಟಕ ಸಾಕ್ಷಿಕೊಟ್ಟ ಶ್ರೀರಾಮುಲು
ಗುಂಡೇಟಿಗೆ ಕಾಂಗ್ರೆಸ್ ಕಾರ್ಯಕರ್ತ ಸಾವು: ಸಿಎಂ ಫಸ್ಟ್ ರಿಯಾಕ್ಷನ್
ಗುಂಡೇಟಿಗೆ ಕಾಂಗ್ರೆಸ್ ಕಾರ್ಯಕರ್ತ ಸಾವು: ಸಿಎಂ ಫಸ್ಟ್ ರಿಯಾಕ್ಷನ್
ಬೈಕ್‌ನಲ್ಲಿ ಬಂದು ಕ್ಷಣಾರ್ಧದಲ್ಲಿ ಮೊಬೈಲ್ ಕಿತ್ತು ಪರಾರಿ!
ಬೈಕ್‌ನಲ್ಲಿ ಬಂದು ಕ್ಷಣಾರ್ಧದಲ್ಲಿ ಮೊಬೈಲ್ ಕಿತ್ತು ಪರಾರಿ!
ಗಣಿದಣಿಗೆ ಭರತ್​​ ರೆಡ್ಡಿ ಓಪನ್​ ಚಾಲೆಂಜ್​​: 'ಕೈ​​' ಶಾಸಕ ಹೇಳಿದ್ದೇನು?
ಗಣಿದಣಿಗೆ ಭರತ್​​ ರೆಡ್ಡಿ ಓಪನ್​ ಚಾಲೆಂಜ್​​: 'ಕೈ​​' ಶಾಸಕ ಹೇಳಿದ್ದೇನು?