Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚೀನಾ ಆಯ್ತು ಈಗ ರಷ್ಯಾ: ಮಿತಿಮೀರಿದ ಕೊರೊನಾ ಸೋಂಕು, ಮಾಸ್ಕೋದಲ್ಲಿ 11 ದಿನ ಲಾಕ್​​ಡೌನ್​​

ಕೊರೊನಾ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಅಕ್ಟೋಬರ್​ 30ರಂದ ನವೆಂಬರ್​ 7ರವರೆಗೆ ವೇತನ ಸಹಿತ ಸರ್ಕಾರಿ ರಜೆಯನ್ನು ಅಧ್ಯಕ್ಷ ವ್ಲಾಡಿಮಿರ್​ ಪುತಿನ್​ ಘೋಷಣೆ ಮಾಡಿದ್ದಾರೆ.

ಚೀನಾ ಆಯ್ತು ಈಗ ರಷ್ಯಾ: ಮಿತಿಮೀರಿದ ಕೊರೊನಾ ಸೋಂಕು, ಮಾಸ್ಕೋದಲ್ಲಿ 11 ದಿನ ಲಾಕ್​​ಡೌನ್​​
ಮಾಸ್ಕೋದಲ್ಲಿ ಮತ್ತೆ ಲಾಕ್​ಡೌನ್​
Follow us
TV9 Web
| Updated By: Lakshmi Hegde

Updated on: Oct 28, 2021 | 3:32 PM

ಮಾಸ್ಕೋ:  ಚೀನಾದಲ್ಲಿ ಕೊರೊನಾ (Coronavirus) ಹೆಚ್ಚಳವುಂಟಾಗಿ ಎರಡ್ಮೂರು ನಗರಗಳು ಸಂಪೂರ್ಣ ಲಾಕ್​​ಡೌನ್​ ಆಗಿರುವ ಬೆನ್ನಲ್ಲೇ ರಷ್ಯಾದಲ್ಲೂ ಕೂಡ ಕೊರೊನಾ ಸಾಂಕ್ರಾಮಿಕ ಉಲ್ಬಣಗೊಂಡಿದೆ. ಸಾವಿನ ಸಂಖ್ಯೆಯೂ ಹೆಚ್ಚಾಗುತ್ತಿದೆ.  ಈ ಹಿನ್ನೆಲೆಯಲ್ಲಿ ರಾಜಧಾನಿ ಮಾಸ್ಕೋದಲ್ಲಿ 11 ದಿನಗಳ ಕಾಲ ಲಾಕ್​ಡೌನ್ (Lockdown)​ ಘೋಷಿಸಲಾಗಿದ್ದು, ಇಂದು ಅಂಗಡಿಗಳು, ಶಾಲೆಗಳು, ರೆಸ್ಟೋರೆಂಟ್​​ಗಳೆಲ್ಲ ಬಂದ್​ ಆಗಿವೆ.  ಅಗತ್ಯವಲ್ಲದ ಸೇವೆಗಳನ್ನು ಹೊರತುಪಡಿಸಿ ಉಳಿದೆಲ್ಲ ರೀತಿಯ ಅಂದರೆ, ರೆಸ್ಟೋರೆಂಟ್​ಗಳು, ಚಿಲ್ಲರೆ ವ್ಯಾಪಾರ ಅಂಗಡಿಗಳು, ಮನರಂಜನಾ ಸ್ಥಳಗಳು, ಶಾಲೆಗಳು ನವೆಂಬರ್​ 7ರವರೆಗೆ ಮುಚ್ಚಿರುತ್ತವೆ ಎಂದು ಸ್ಥಳೀಯ ಸರ್ಕಾರ ಘೋಷಿಸಿದೆ.  ಇನ್ನು ಆಹಾರ ಮತ್ತು ಔಷಧ ಪೂರೈಕೆಗಳಲ್ಲಿ ಯಾವುದೇ ವ್ಯತ್ಯಯ ಆಗುವುದಿಲ್ಲ ಎಂದೂ ಹೇಳಲಾಗಿದೆ.  

ರಷ್ಯಾದಲ್ಲಿ ಮತ್ತೀಗ ಕೊರೊನಾ ಪ್ರಕರಣಗಳು ಮಿತಿಮೀರುತ್ತಿರುವ ಹಿನ್ನೆಲೆಯಲ್ಲಿ ಲಾಕ್​ಡೌನ್ ವಿಧಿಸಲಾಗಿದೆ.  ಒಟ್ಟಾರೆ ಕೊರೊನಾದಿಂದ ಅತ್ಯಂತ ಹೆಚ್ಚು ಹಾನಿಗೆ ಒಳಗಾದ ರಾಷ್ಟ್ರಗಳಲ್ಲಿ ರಷ್ಯಾ ಕೂಡ ಒಂದು. ಅಲ್ಲಿ ಇದುವರೆಗೆ ಸುಮಾರು 2,30,000 ಮಂದಿ ಕೊರೊನಾದಿಂದ ಮೃತಪಟ್ಟಿದ್ದಾರೆ.  ರಷ್ಯಾದಲ್ಲಿ ಕೊರೊನಾ ಲಸಿಕೆಯನ್ನೂ ಕೂಡ ನೀಡಲಾಗುತ್ತಿದೆ. ರಷ್ಯಾದಲ್ಲಿ ತಯಾರಾದ ಸ್ಪುಟ್ನಿಕ್​ ವಿ ಕೊರೊನಾ ಲಸಿಕೆಯನ್ನೇ ಜನರಿಗೆ ಕೊಡಲು ಪ್ರಯತ್ನಿಸಲಾಗುತ್ತಿದೆ. ಆದರೆ ರಷ್ಯಾದ ಜನರು ಕೊವಿಡ್​ 19 ಲಸಿಕೆ ಹಾಕಿಸಿಕೊಳ್ಳಲೂ ಹಿಂದೇಟು ಹಾಕುತ್ತಿದ್ದಾರೆ ಎಂದು ವರದಿಯಾಗಿದೆ.  ಇಂದಿನವರೆಗೆ ರಷ್ಯಾದಲ್ಲಿ ಕೇವಲ ಶೇ.32ರಷ್ಟು ಜನರಿಗೆ ಮಾತ್ರ ಕೊವಿಡ್​ 19 ಲಸಿಕೆ ನೀಡಿ ಮುಗಿದಿದೆ. ಈ ಬಗ್ಗೆ ರಷ್ಯಾ ಸರ್ಕಾರದ ವೆಬ್​​ಸೈಟ್​​ನಲ್ಲಿಯೇ ದಾಖಲಾಗಿದೆ.

ಇನ್ನು ಕೊರೊನಾ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಅಕ್ಟೋಬರ್​ 30ರಂದ ನವೆಂಬರ್​ 7ರವರೆಗೆ ವೇತನ ಸಹಿತ ಸರ್ಕಾರಿ ರಜೆಯನ್ನು ಅಧ್ಯಕ್ಷ ವ್ಲಾಡಿಮಿರ್​ ಪುತಿನ್​ ಘೋಷಣೆ ಮಾಡಿದ್ದಾರೆ. ಮಾಸ್ಕೋ ನಗರದಲ್ಲಿ ಇಂದು ಮುಂಜಾನೆಯಿಂದಲೇ ಲಾಕ್​ಡೌನ್​ ಪರಿಣಾಮ ಕಾಣಿಸಿದೆ. ವಾಹನ ಸಂಚಾರ ಕಡಿಮೆ ಇತ್ತು. ಜನರ ಓಡಾಟವೂ ವಿರಳವಾಗಿತ್ತು. ಆದರೆ ಮೆಟ್ರೋ ಬಳಿ ಮಾತ್ರ ಎಂದಿನಂತೆ ಜನಜಂಗುಳಿಯಿತ್ತು. ಅದರಲ್ಲೂ ಹಲವರು ಮಾಸ್ಕ್​ ಧರಿಸದೆ ಓಡಾಡುತ್ತಿದ್ದರು.  ಅಕ್ಟೋಬರ್ 30ರಿಂದ ವೇತನ ಸಹಿತ ರಜೆ ಘೋಷಣೆಯಾಗಿದ್ದರಿಂದ ಅಲ್ಲಿನ ಜನರು ಇಂದಿನಿಂದಲೇ ಪ್ರವಾಸಿ ತಾಣಗಳು, ಮತ್ತಿತರ ಕಡೆ ಕುಟುಂಬ ಸಮೇತ ಹೊರಟಿದ್ದಾರೆ ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ.  ನಿನ್ನೆ ಒಂದೇ ದಿನ ರಷ್ಯಾದಲ್ಲಿ ಕೊವಿಡ್​ 19 ನಿಂದ 1,123 ಮಂದಿ ಮೃತಪಟ್ಟಿದ್ದು ವರದಿಯಾಗಿದೆ.

ಇದನ್ನೂ ಓದಿ: ಜಾನ್ವಿ ಕಪೂರ್​ ದಕ್ಷಿಣ ಭಾರತಕ್ಕೆ ಕಾಲಿಡದೇ ಇರಲು ಕಾರಣವೇನು? ಅವರಿಂದಲೇ ಸಿಕ್ತು ಉತ್ತರ

T20 World Cup 2021: ಟೂರ್ನಿಯಿಂದ ಹೊರಬೀಳುವ ಭಯ! ಕೊಹ್ಲಿ ತಲೆನೋವು ಹೆಚ್ಚಿಸಿವೆ ತಂಡದ ಈ 4 ಸಮಸ್ಯೆಗಳು

ತಕ್ಕ ಪಾಠ ಕಲಿಸುತ್ತೇವೆ; ಉಗ್ರರ ದಾಳಿಗೆ ಸಚಿವ ಪ್ರಲ್ಹಾದ್ ಜೋಶಿ ಖಂಡನೆ
ತಕ್ಕ ಪಾಠ ಕಲಿಸುತ್ತೇವೆ; ಉಗ್ರರ ದಾಳಿಗೆ ಸಚಿವ ಪ್ರಲ್ಹಾದ್ ಜೋಶಿ ಖಂಡನೆ
ಮಂಜುನಾಥ್, ಸಾವಿಗೂ ಮುನ್ನ ಪತ್ನಿಯೊಂದಿಗೆ ಕಾಶ್ಮೀರದಲ್ಲಿ ಕಳೆದ ಕೊನೆ ಕ್ಷಣ
ಮಂಜುನಾಥ್, ಸಾವಿಗೂ ಮುನ್ನ ಪತ್ನಿಯೊಂದಿಗೆ ಕಾಶ್ಮೀರದಲ್ಲಿ ಕಳೆದ ಕೊನೆ ಕ್ಷಣ
ಉಗ್ರರ ದಾಳಿ ಬಳಿಕ ಭದ್ರತಾ ಪರಿಶೀಲನೆಗೆ ಶ್ರೀನಗರಕ್ಕೆ ತೆರಳಿದ ಅಮಿತ್ ಶಾ
ಉಗ್ರರ ದಾಳಿ ಬಳಿಕ ಭದ್ರತಾ ಪರಿಶೀಲನೆಗೆ ಶ್ರೀನಗರಕ್ಕೆ ತೆರಳಿದ ಅಮಿತ್ ಶಾ
ಪಹಲ್ಗಾಮ್‌: ಪತ್ನಿ ಎದುರೇ ಪತಿಯನ್ನ ಕೊಂದು ಮೋದಿಗೆ ಹೋಗಿ ಹೇಳು ಎಂದ ಉಗ್ರ
ಪಹಲ್ಗಾಮ್‌: ಪತ್ನಿ ಎದುರೇ ಪತಿಯನ್ನ ಕೊಂದು ಮೋದಿಗೆ ಹೋಗಿ ಹೇಳು ಎಂದ ಉಗ್ರ
ಪತ್ನಿ ಪಲ್ಲವಿ ಹಾಗೂ ಮಗನೊಂದಿಗೆ ಪ್ರವಾಸ ತೆರಳಿದ್ದ ಮಂಜುನಾಥ್
ಪತ್ನಿ ಪಲ್ಲವಿ ಹಾಗೂ ಮಗನೊಂದಿಗೆ ಪ್ರವಾಸ ತೆರಳಿದ್ದ ಮಂಜುನಾಥ್
ಕೇವಲ ಕಳ್ಳತನಕ್ಕಾಗಿ ನಡೆದ ಕೊಲೆ ಅಲ್ಲ ಇದು, ಬೇರೆ ಕಾರಣವೂ ಇದೆ: ಡಿಸಿಪಿ
ಕೇವಲ ಕಳ್ಳತನಕ್ಕಾಗಿ ನಡೆದ ಕೊಲೆ ಅಲ್ಲ ಇದು, ಬೇರೆ ಕಾರಣವೂ ಇದೆ: ಡಿಸಿಪಿ
ದರ್ಶನ್ ಜಾಮೀನು ರದ್ದು ಅರ್ಜಿ: ಸುಪ್ರೀಂಕೋರ್ಟ್​ನಲ್ಲಿ ಇಂದು ನಡೆದ ವಾದವೇನು?
ದರ್ಶನ್ ಜಾಮೀನು ರದ್ದು ಅರ್ಜಿ: ಸುಪ್ರೀಂಕೋರ್ಟ್​ನಲ್ಲಿ ಇಂದು ನಡೆದ ವಾದವೇನು?
ದರ್ಶನ್, ಪವಿತ್ರಾ ಗೌಡ ಸಂಬಂಧದ ಬಗ್ಗೆ ಸುಪ್ರೀಂಕೋರ್ಟ್ ಕೇಳಿದ ಪ್ರಶ್ನೆ ಏನು?
ದರ್ಶನ್, ಪವಿತ್ರಾ ಗೌಡ ಸಂಬಂಧದ ಬಗ್ಗೆ ಸುಪ್ರೀಂಕೋರ್ಟ್ ಕೇಳಿದ ಪ್ರಶ್ನೆ ಏನು?
ನಾವು ಇದುವರೆಗೆ ಯಾರನ್ನೂ ಅಪರಾಧಿಗಳು ಅಂತ ಹೇಳಿಲ್ಲ: ರಿಕ್ಕಿ ರೈ ವಕೀಲ
ನಾವು ಇದುವರೆಗೆ ಯಾರನ್ನೂ ಅಪರಾಧಿಗಳು ಅಂತ ಹೇಳಿಲ್ಲ: ರಿಕ್ಕಿ ರೈ ವಕೀಲ
ವಿಜಯಪುರದಲ್ಲಿ ವಿಜಯೇಂದ್ರ ಭಾಷಣ ಮಾಡುವಾಗ ಸ್ವಲ್ಪ ಜನರಿದ್ದರು: ಯತ್ನಾಳ್
ವಿಜಯಪುರದಲ್ಲಿ ವಿಜಯೇಂದ್ರ ಭಾಷಣ ಮಾಡುವಾಗ ಸ್ವಲ್ಪ ಜನರಿದ್ದರು: ಯತ್ನಾಳ್