AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಾಲಿಯಲ್ಲಿ ಒಂದೇ ದಿನ ಎರಡು ಕಡೆ ಉಗ್ರ ದಾಳಿ; ಯುಎನ್​ ಕಾರ್ಯಕರ್ತ ಸೇರಿ 32 ಜನರ ಭೀಕರ ಹತ್ಯೆ

ಶುಕ್ರವಾರ ಮಾಲಿಯ ಉತ್ತರ ಭಾಗದಲ್ಲಿ ವಿಶ್ವಸಂಸ್ಥೆಯ ಶಾಂತಿಪಾಲನಾ ಮಿಷನ್​ಗೆ ಸೇರಿದ ಬೆಂಗಾವಲು ವಾಹನದ ಮೇಲೆಯೂ ಉಗ್ರರು ದಾಳಿ ನಡೆಸಿದ್ದು, ಈ ಅಟ್ಯಾಕ್​​ನಲ್ಲಿ ನಾಗರಿಕ ಕಾರ್ಯಕರ್ತರೊಬ್ಬರು ಸಾವನ್ನಪ್ಪಿದ್ದಾರೆ.

ಮಾಲಿಯಲ್ಲಿ ಒಂದೇ ದಿನ ಎರಡು ಕಡೆ ಉಗ್ರ ದಾಳಿ; ಯುಎನ್​ ಕಾರ್ಯಕರ್ತ ಸೇರಿ 32 ಜನರ ಭೀಕರ ಹತ್ಯೆ
ಸಾಂಕೇತಿಕ ಚಿತ್ರ
TV9 Web
| Edited By: |

Updated on: Dec 04, 2021 | 3:46 PM

Share

ಆಫ್ರಿಕಾದ ದಕ್ಷಿಣ ಭಾಗದಲ್ಲಿರುವ ಮಾಲಿ ದೇಶದಲ್ಲಿ ಭಯೋತ್ಪಾದಕ ದಾಳಿಗೆ 31 ಮಂದಿ ಮೃತಪಟ್ಟಿದ್ದಾರೆ. ಈ ಘಟನೆ ನಡೆದದ್ದು ಮಾಲಿ ದೇಶದ ಕೇಂದ್ರ ಭಾಗದಲ್ಲಿ. ಸ್ಥಳೀಯ ಮಾರುಕಟ್ಟೆಗೆ ಜನರನ್ನು ಸಾಗಿಸುತ್ತಿದ್ದ ಬಸ್​ ಮೇಲೆ ಉಗ್ರರು ಗುಂಡಿನ ದಾಳಿ ನಡೆಸಿದ ಪರಿಣಾಮ 31 ಮಂದಿ ಮೃತಪಟ್ಟಿದ್ದಾರೆ. ಶುಕ್ರವಾರ ಈ ಘಟನೆ ನಡೆದಿದೆ..ಅಷ್ಟೇ ಅಲ್ಲ, ಇದೇ ದಿನ ಮಾಲಿ ದೇಶದ ಉತ್ತರ ಭಾಗದಲ್ಲಿ ವಿಶ್ವಸಂಸ್ಥೆಗೆ ಸೇರಿದ ಬೆಂಗಾವಲು ವಾಹನದ ಮೇಲೆಯೂ ಉಗ್ರರು ದಾಳಿ ಮಾಡಿದ್ದಾರೆ. ಇದರಲ್ಲಿ ಯುಎನ್​ ಕಾರ್ಯಕರ್ತನೊಬ್ಬ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.  

ಈ ಬಸ್​ ಸಾಮಾನ್ಯವಾಗಿ ವಾರದಲ್ಲಿ ಎರಡು ದಿನ ಸೊಂಘೋ ಎಂಬ ಹಳ್ಳಿಯಿಂದ ಆರು ಮೈಲುಗಳಷ್ಟು ದೂರದಲ್ಲಿರುವ ಬಂಡಿಯಾಗರಾ ಎಂಬಲ್ಲಿಗೆ ಸಂಚಾರ ಮಾಡುತ್ತದೆ. ಈ ಬಸ್​ ಮೂಲಕ ಸೋಂಘೋ ಮತ್ತು ಸುತ್ತಲಿನ ಜನರು ಮಾರುಕಟ್ಟೆಗೆ ಹೋಗುತ್ತಾರೆ. ಆದರೆ ಶುಕ್ರವಾರ ಬಸ್​ ಮೇಲೆ ಅಪರಿಚಿತ ಬಂದೂಕುಧಾರಿಗಳು ಗುಂಡಿನ ದಾಳಿ ನಡೆಸಿದ್ದಾರೆ ಎಂದು ಬಂಕಾಸ್​ ಎಂಬ ಪಟ್ಟಣದ ಮೇಯರ್ ಮೌಲೇ ಗಿಂಡೋ ತಿಳಿಸಿದ್ದಾರೆ. ಸಶಸ್ತ್ರ ಸಹಿತರಾಗಿ ಬಂದ ಜನರು ಬಸ್​​ ಮೇಲೆ ಒಂದೇ ಸಮನೆ ಗುಂಡಿನ ದಾಳಿ ನಡೆಸಿದ್ದಾರೆ, ಜನರಿಗೆ ಗುರಿಯಿಟ್ಟು ಫೈರಿಂಗ್ ಮಾಡಿದ್ದಾರೆ. ಈ ದುರ್ಘಟನೆಯಲ್ಲಿ 31 ಮಂದಿ ಮೃತಪಟ್ಟಿದ್ದಾರೆ. ಹಲವರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಇನ್ನೂ ಒಂದಷ್ಟು ಮಂದಿ ಕಾಣೆಯಾಗಿದ್ದಾರೆ ಎಂದು ಗಿಂಡೋ ಹೇಳಿದ್ದಾರೆ. ಇನ್ನು ಬಸ್​ ಮೇಲೆ ನಡೆದ ಭಯೋತ್ಪಾದಕ ದಾಳಿಯ ಕ್ರೂರತೆಯನ್ನು ಬಿಂಬಿಸುವ ಚಿತ್ರಗಳೂ ಕೂಡ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.

ಹಾಗೇ, ಶುಕ್ರವಾರ ಮಾಲಿಯ ಉತ್ತರ ಭಾಗದಲ್ಲಿ ವಿಶ್ವಸಂಸ್ಥೆಯ ಶಾಂತಿಪಾಲನಾ ಮಿಷನ್​ಗೆ ಸೇರಿದ ಬೆಂಗಾವಲು ವಾಹನದ ಮೇಲೆಯೂ ಉಗ್ರರು ದಾಳಿ ನಡೆಸಿದ್ದು, ಈ ಅಟ್ಯಾಕ್​​ನಲ್ಲಿ ನಾಗರಿಕ ಕಾರ್ಯಕರ್ತರೊಬ್ಬರು ಸಾವನ್ನಪ್ಪಿದ್ದಾರೆ. ಇನ್ನೊಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಹೇಳಲಾಗಿದೆ. ಈ ಬೆಂಗಾವಲು ಪಡೆ ಉತ್ತರದ ನಗರವಾದ ಕಿಡಾಲ್‌ನಿಂದ ಗಾವೊಗೆ ಪ್ರಯಾಣಿಸುತ್ತಿತ್ತು. ಬೌರೆಮ್ ಪಟ್ಟಣದ ಈಶಾನ್ಯಕ್ಕೆ 62 ಮೈಲುಗಳಷ್ಟು ದೂರದಲ್ಲಿ ಗುಂಡಿನ ದಾಳಿ ಆಯಿತು ಎಂದೂ ಮಿಷನ್​ ತಿಳಿಸಿದೆ. ಅಂದಹಾಗೆ, ಮಾಲಿಯ ಈ ಭಾಗಗಳಲ್ಲಿ ಅಲ್​-ಖೈದಾ ಮತ್ತು ಐಸಿಸ್​ ಉಗ್ರಸಂಘಟನೆಗಳ ಉಗ್ರರು ಆಗಾಗ ದಾಳಿ ನಡೆಸುತ್ತಾರೆ. ಸದ್ಯಕ್ಕೆ ಯಾರೂ ದಾಳಿಯ ಹೊಣೆ ಹೊತ್ತುಕೊಂಡಿಲ್ಲ. ಆದರೆ ಇಲ್ಲಿ ಯಾವಾಗಲೂ ಹಿಂಸಾಚಾರ, ಧಂಗೆಗಳು ನಡೆಯುತ್ತಲೇ ಇರುತ್ತವೆ.

ಇದನ್ನೂ ಓದಿ: Jio Cashback Offer: ಬೆಲೆ ಏರಿಕೆ ಬೆನ್ನಲ್ಲೇ ಆಫರ್​ಗಳ ಸುರಿಮಳೆ: ಏರ್ಟೆಲ್ ಬಳಿಕ ಜಿಯೋದಿಂದ ಬಂಪರ್ ಆಫರ್ ಘೋಷಣೆ

Follow Us
7 ವರ್ಷಗಳ ಬಳಿಕ ಇರಾನ್​ನಿಂದ ಗ್ಯಾಸ್ ಖರೀದಿ: ಮಂಗಳೂರಿಗೆ ಬರಲಿದೆ LPG ಹಡಗು!
7 ವರ್ಷಗಳ ಬಳಿಕ ಇರಾನ್​ನಿಂದ ಗ್ಯಾಸ್ ಖರೀದಿ: ಮಂಗಳೂರಿಗೆ ಬರಲಿದೆ LPG ಹಡಗು!
ಬೆಲೆ ಕುಸಿತ;ರಸ್ತೆಗೆ 25 ಕ್ವಿಂಟಾಲ್ ಟೊಮ್ಯಾಟೋ ಸುರಿದು ಪ್ರತಿಭಟಿಸಿದ ರೈತರು
ಬೆಲೆ ಕುಸಿತ;ರಸ್ತೆಗೆ 25 ಕ್ವಿಂಟಾಲ್ ಟೊಮ್ಯಾಟೋ ಸುರಿದು ಪ್ರತಿಭಟಿಸಿದ ರೈತರು
‘ಗೂಗಲ್​ನಲ್ಲಿ ಸಿಕ್ಕ ಕಥೆ ತನ್ನದು ಅಂತಾರೆ’: ಕಿಡಿಕಾರಿದ ಡಾರ್ಲಿಂಗ್ ಕೃಷ್ಣ
‘ಗೂಗಲ್​ನಲ್ಲಿ ಸಿಕ್ಕ ಕಥೆ ತನ್ನದು ಅಂತಾರೆ’: ಕಿಡಿಕಾರಿದ ಡಾರ್ಲಿಂಗ್ ಕೃಷ್ಣ
ನಂಜನಗೂಡಿಗೆ ಹೋದ ದಂಪತಿ ವಾಪಸ್ ಬರುವಷ್ಟರಲ್ಲಿ ಮನೆ ಖಾಲಿ
ನಂಜನಗೂಡಿಗೆ ಹೋದ ದಂಪತಿ ವಾಪಸ್ ಬರುವಷ್ಟರಲ್ಲಿ ಮನೆ ಖಾಲಿ
ಬಿಲ್ ಪಾವತಿಸಲು ಲಂಚ ಪಡೆಯುತ್ತರಿವಾಗಲೇ ಲೋಕಾಯುಕ್ತ ಬಲೆಗೆ ಬಿದ್ದ ಅಧಿಕಾರಿ
ಬಿಲ್ ಪಾವತಿಸಲು ಲಂಚ ಪಡೆಯುತ್ತರಿವಾಗಲೇ ಲೋಕಾಯುಕ್ತ ಬಲೆಗೆ ಬಿದ್ದ ಅಧಿಕಾರಿ
ಕಥೆ ಕದ್ದ ಆರೋಪಕ್ಕೆ ಡಾರ್ಲಿಂಗ್ ಕೃಷ್ಣ ಖಡಕ್ ತಿರುಗೇಟು: ಕಾನೂನು ಕ್ರಮ
ಕಥೆ ಕದ್ದ ಆರೋಪಕ್ಕೆ ಡಾರ್ಲಿಂಗ್ ಕೃಷ್ಣ ಖಡಕ್ ತಿರುಗೇಟು: ಕಾನೂನು ಕ್ರಮ
ಬಸ್ ಸೀಟ್ ಹಿಡಿಯುವ ಆತುರ ತಂದ ಆಪತ್ತು!
ಬಸ್ ಸೀಟ್ ಹಿಡಿಯುವ ಆತುರ ತಂದ ಆಪತ್ತು!
ವಿಮಾನ ನಿಲ್ದಾಣದಲ್ಲಿ ಶ್ಲೋಕ ಪಠಿಸಿದ ಬಿಜೆಪಿ ನಾಯಕಿ ಮಾಧವಿ ಲತಾ
ವಿಮಾನ ನಿಲ್ದಾಣದಲ್ಲಿ ಶ್ಲೋಕ ಪಠಿಸಿದ ಬಿಜೆಪಿ ನಾಯಕಿ ಮಾಧವಿ ಲತಾ
ಚಿನ್ನಸ್ವಾಮಿಯಲ್ಲಿ ಶಾಶ್ವತವಾಗಿ ಉಳಿಯಲಿದೆ ಅಗಲಿದ 11 ಜೀವಗಳ ನೆನಪು
ಚಿನ್ನಸ್ವಾಮಿಯಲ್ಲಿ ಶಾಶ್ವತವಾಗಿ ಉಳಿಯಲಿದೆ ಅಗಲಿದ 11 ಜೀವಗಳ ನೆನಪು
ಸಿಎಂ ಸಿದ್ದರಾಮಯ್ಯ, ಸುನಿಲ್ ಕುಮಾರ್ ನಡುವೆ ಜಟಾಪಟಿ
ಸಿಎಂ ಸಿದ್ದರಾಮಯ್ಯ, ಸುನಿಲ್ ಕುಮಾರ್ ನಡುವೆ ಜಟಾಪಟಿ