AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಯಾವ ಸೌಲಭ್ಯವೂ ಇಲ್ಲದ ಮನೆಯಲ್ಲಿ 9 ವರ್ಷದ ಮಗನನ್ನು 2 ವರ್ಷಗಳ ಕಾಲ ಒಂಟಿಯಾಗಿರಿಸಿದ್ದ ಮಹಿಳೆಗೆ ಜೈಲು ಶಿಕ್ಷೆ

ವಿದ್ಯುತ್ ಇಲ್ಲ, ಆಹಾರವನ್ನು ಬಿಸಿ ಮಾಡಲು ಸಿಲಿಂಡರ್​ ಕೂಡ ಇಲ್ಲ, ತಿನ್ನಲು ಆಹಾರವಿಲ್ಲ ಈ ಸ್ಥಿತಿಯಲ್ಲಿ ಮಗನನ್ನು 9 ವರ್ಷಗಳ ಕಾಲ ಮನೆಯಲ್ಲಿ ಒಂಟಿಯಾಗಿರಿಸಿದ್ದ ಫ್ರಾನ್ಸ್​ ಮಹಿಳೆಗೆ 18 ತಿಂಗಳ ಜೈಲು ಶಿಕ್ಷೆಯನ್ನು ನ್ಯಾಯಾಲಯ ವಿಧಿಸಿದೆ. ಮಗನನ್ನು ಯಾವುದೇ ಸೌಲಭ್ಯವಿಲ್ಲದ ಅಪಾರ್ಟ್​ಮೆಂಟ್​ನ ಮನೆಯಲ್ಲಿ ಒಂಟಿಯಾಗಿ ಬಿಟ್ಟು ಆಕೆ ತನ್ನ ಲಿವ್ ಇನ್ ಸಂಗಾತಿ ಜತೆ ಅಲ್ಲಿಂದ ಐದು ಕಿ.ಮೀ ದೂರದಲ್ಲಿರುವ ಅಪಾರ್ಟ್​ಮೆಂಟ್​ನಲ್ಲಿ ನಡೆದಿದೆ. ಆಕೆಗೆ ನ್ಯಾಯಾಲಯ 18 ತಿಂಗಳ ಜೈಲು ಶಿಕ್ಷೆ ವಿಧಿಸಿದೆ.

ಯಾವ ಸೌಲಭ್ಯವೂ ಇಲ್ಲದ ಮನೆಯಲ್ಲಿ 9 ವರ್ಷದ ಮಗನನ್ನು 2 ವರ್ಷಗಳ ಕಾಲ ಒಂಟಿಯಾಗಿರಿಸಿದ್ದ ಮಹಿಳೆಗೆ ಜೈಲು ಶಿಕ್ಷೆ
ಸಾಂದರ್ಭಿಕ ಚಿತ್ರ
ನಯನಾ ರಾಜೀವ್
|

Updated on: Jan 25, 2024 | 11:04 AM

Share

ವಿದ್ಯುತ್ ಇಲ್ಲ, ಆಹಾರವನ್ನು ಬಿಸಿ ಮಾಡಲು ಸಿಲಿಂಡರ್​ ಕೂಡ ಇಲ್ಲ, ತಿನ್ನಲು ಆಹಾರವಿಲ್ಲ ಈ ಸ್ಥಿತಿಯಲ್ಲಿ ಮಗನನ್ನು 9 ವರ್ಷಗಳ ಕಾಲ ಮನೆಯಲ್ಲಿ ಒಂಟಿಯಾಗಿರಿಸಿದ್ದ ಫ್ರಾನ್ಸ್​ ಮಹಿಳೆಗೆ 18 ತಿಂಗಳ ಜೈಲು ಶಿಕ್ಷೆಯನ್ನು ನ್ಯಾಯಾಲಯ ವಿಧಿಸಿದೆ. ಮಗನನ್ನು ಯಾವುದೇ ಸೌಲಭ್ಯವಿಲ್ಲದ ಅಪಾರ್ಟ್​ಮೆಂಟ್​ನ ಮನೆಯಲ್ಲಿ ಒಂಟಿಯಾಗಿ ಬಿಟ್ಟು ಆಕೆ ತನ್ನ ಲಿವ್ ಇನ್ ಸಂಗಾತಿ ಜತೆ ಅಲ್ಲಿಂದ ಐದು ಕಿ.ಮೀ ದೂರದಲ್ಲಿರುವ ಅಪಾರ್ಟ್​ಮೆಂಟ್​ನಲ್ಲಿ ನಡೆದಿದೆ. ಆಕೆಗೆ ನ್ಯಾಯಾಲಯ 18 ತಿಂಗಳ ಜೈಲು ಶಿಕ್ಷೆ ವಿಧಿಸಿದೆ.

ಬಾಲಕ 2020ರಿಂದ 2022ರವರೆಗೆ ಕುಟುಂಬದವರ ಸಂಪರ್ಕವೇ ಇಲ್ಲದೆ ಮನೆಯಲ್ಲಿಯೇ ಇದ್ದ. ಕೆಲವೊಮ್ಮೆ ಆತನಿಗೆ ಆಹಾರ ನೀಡಲು ಮನೆಗೆ ಬಂದಾಗ ತಾಯಿ ಮುಖವನ್ನು ನೋಡಿದ್ದ, ಕೇಕ್​, ಹತ್ತಿರದ ಬಾಲ್ಕನಿಯಿಂದ ಕದ್ದ ಟೊಮೆಟೊ, ಮನೆಯಲ್ಲಿ ಅಳಿದುಳಿದ ಆಹಾರವನ್ನೇ ತಿಂದು 2 ವರ್ಷಗಳವರೆಗೆ ಜೀವ ಉಳಿಸಿಕೊಂಡಿದ್ದ.

ಆಹಾರ ಬಿಸಿ ಮಾಡಿಕೊಳ್ಳಲು ಸಿಲಿಂಡರ್​ ಕೂಡ ಇರಲಿಲ್ಲ, ವಿದ್ಯುತ್ ಸಂಪರ್ಕವೂ ಇಲ್ಲ, ಬಿಸಿನೀರು ಕೂಡ ಇರಲಿಲ್ಲ. ಆತ ದಿನವೂ ಶಾಲೆಗೆ ಹೋಗುತ್ತಿದ್ದ, ಪ್ರತಿ ದಿನ ನಗುನಗುತ್ತಾ ಶಾಲೆಗೆ ಬರುತ್ತಿದ್ದ, ಆತನ ಮುಖದಲ್ಲಿ ಅಸಹಜವಾಗಿದ್ದನ್ನು ಏನನ್ನೂ ಕಂಡಿರಲಿಲ್ಲ ಎಂದು ಶಿಕ್ಷಕರು ತಿಳಿಸಿದ್ದಾರೆ.

ಮತ್ತಷ್ಟು ಓದಿ: ಕ್ಯಾಲಿಫೋರ್ನಿಯಾ: ಪ್ರಿಯಕರನಿಗೆ 100ಕ್ಕೂ ಹೆಚ್ಚು ಬಾರಿ ಇರಿದಿದ್ದರೂ ಮಹಿಳೆ ಜೈಲಿಗೆ ಹೋಗಲಿಲ್ಲ ಏಕೆ?

ಉತ್ತಮ ವಿದ್ಯಾರ್ಥಿ, ಸದಾ ಸ್ವಚ್ಛವಾಗಿರುತ್ತಿದ್ದ, ಎಲ್ಲರ ಬಳಿಯೂ ನಗುತ್ತಾ ಮಾತನಾಡುತ್ತಿದ್ದ ಮಗನನ್ನು ವರ್ಷಗಳ ಕಾಲ ತಾಯಿ ದೂರವಿಟ್ಟಿದ್ದಾಳೆ ಎಂಬ ಸಂಶಯವೂ ಬರಲಿಲ್ಲ ಎಂದಿದ್ದಾರೆ. ಕೆಲವೊಮ್ಮೆ ಸಹಪಾಟಿಗಳಿಗೆ ಅವನ ಬಗ್ಗೆ ಅನುಮಾನ ಬಂದಿತ್ತು, ಆತ ಶಾಲೆಯ ಬಸ್​ನಲ್ಲಿ ಬರುವುದಿಲ್ಲ, ಊಟವನ್ನು ತೆಗೆದುಕೊಂಡು ಹೋಗುತ್ತಿರಲಿಲ್ಲ. ಕೆಲವೊಮ್ಮೆ ಅಕ್ಕಪಕ್ಕದ ಮನೆಯವರು ಆತನಿಗೆ ಆಹಾರ ನೀಡುತ್ತಾರೆ ಎನ್ನುವ ವಿಚಾರ ತಿಳಿಯಿತು.

2022ರಲ್ಲಿ ಮೇಯರ್ ಆತನ ತಾಯಿಯನ್ನು ಭೇಟಿಯಾದಾಗ ಹಣದ ಅಭಾವವಿದೆ ಎಂದು ಹೇಳಿಕೊಂಡಿದ್ದರು. ಸಂಸ್ಕರಿಸಿದ ಆಹಾರ, ಆಹಾರಕ್ಕಾಗಿ ನಾಲ್ಕು ವೋಚರ್​ಗಳನ್ನು ಕೂಡ ತೆಗೆದುಕೊಂಡಿದ್ದರು. ಬಳಿಕ ಮಗು ಒಂಟಿಯಾಗಿ ಅಲ್ಲಿ ವಾಸಿಸುತ್ತಿದೆ ಎಂಬ ವಿಚಾರ ತಿಳಿದು ಪೊಲೀಸರಿಗೆ ಮೇಯರ್ ಕರೆ ಮಾಡಿ ವಿಚಾರ ತಿಳಿಸಿದ್ದರು. ನ್ಯಾಯಾಲಯದಲ್ಲಿ ಆಕೆ ತನ್ನ ಮೇಲಿರುವ ಎಲ್ಲಾ ಆರೋಪಗಳನ್ನು ನಿರಾಕರಿಸಿದ್ದಾಳೆ. ಎರಡು ವರ್ಷದಲ್ಲಿ ಆಕೆ ಎರಡು ಬಾರಿ ಮಾತ್ರ ಆತನನ್ನು ನೋಡಿದ್ದಳು ಎಂದು ತಿಳಿದಾಗ ಆಕೆಗೆ 18 ತಿಂಗಳ ಶಿಕ್ಷೆಯನ್ನು ವಿಧಿಸಲಾಯಿತು.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us
Nayana Rajeev
Nayana Rajeev

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!
ನರ್ಮದಾ-ಕ್ಷಿಪ್ರ ಪೈಪ್​ಲೈನ್ ಸ್ಫೋಟ, ಮುಗಿಲೆತ್ತರಕ್ಕೆ ಚಿಮ್ಮಿದ ನೀರು
ನರ್ಮದಾ-ಕ್ಷಿಪ್ರ ಪೈಪ್​ಲೈನ್ ಸ್ಫೋಟ, ಮುಗಿಲೆತ್ತರಕ್ಕೆ ಚಿಮ್ಮಿದ ನೀರು