AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಉತ್ತರ ಕೊರಿಯಾದಲ್ಲಿ ಕೋವಿಡ್ ಉಲ್ಬಣವಾಗಿದ್ದಾಗ ತೀವ್ರ ಅಸ್ವಸ್ಥರಾಗಿದ್ದರು ಕಿಮ್ ಜಾಂಗ್ ಉನ್

ಉತ್ತರ ಕೊರಿಯಾದ ನಾಯಕ ಜ್ವರದಿಂದ ಬಳಲುತ್ತಿದ್ದರು ಮತ್ತು ಗಂಭೀರವಾಗಿ ಅನಾರೋಗ್ಯಕ್ಕೆ ಒಳಗಾಗಿದ್ದಾರೆ. ಆದರೂ ಜನರ ಮೇಲಿನ ಕಾಳಜಿಯಿಂದಾಗಿ ಕಿಮ್ ಒಂದು ಕ್ಷಣವೂ ಮಲಗಲು ಸಾಧ್ಯವಾಗಲಿಲ್ಲ ಎಂದು ಕಿಮ್ ಯೋ ಜಾಂಗ್ ಭಾಷಣದಲ್ಲಿ..

ಉತ್ತರ ಕೊರಿಯಾದಲ್ಲಿ ಕೋವಿಡ್ ಉಲ್ಬಣವಾಗಿದ್ದಾಗ ತೀವ್ರ ಅಸ್ವಸ್ಥರಾಗಿದ್ದರು ಕಿಮ್ ಜಾಂಗ್ ಉನ್
ಕಿಮ್ ಜಾಂಗ್ ಉನ್
TV9 Web
| Edited By: |

Updated on:Aug 11, 2022 | 12:57 PM

Share

ಸಿಯೋಲ್: ಇತ್ತೀಚಿಗೆ ಕೊವಿಡ್ (Covid 19) ಉಲ್ಬಣಗೊಂಡಾಗ ಉತ್ತರ ಕೊರಿಯಾದ (North Korea)ನಾಯಕ ಕಿಮ್ ಜಾಂಗ್ ಉನ್ (Kim Jong Un) ಅವರಿಗೆ ತೀವ್ರ ಜ್ವರ ಇತ್ತು ಎಂದು ಅವರ ಪ್ರಭಾವಿ ಸಹೋದರಿ ಬಹಿರಂಗಪಡಿಸಿದ್ದಾರೆ. ಪ್ರಚಾರ ಕರಪತ್ರಗಳನ್ನು ಗಡಿ ದಾಟಲು ಅವಕಾಶ ನೀಡಿದರೆ ದಕ್ಷಿಣ ಕೊರಿಯಾದ ನಾಯಕರನ್ನು “ನಿರ್ಮೂಲನೆ” ಮಾಡುವುದಾಗಿ ಈಕೆ ಪ್ರತಿಜ್ಞೆ ಮಾಡಿದ್ದಾರೆ. ಉತ್ತರ ಕೊರಿಯಾದಲ್ಲಿ ಇತ್ತೀಚೆಗೆ ಕೊವಿಡ್ ಏರಿಕೆ ಉಂಟಾಗಿದ್ದಕ್ಕೆ ಕರಪತ್ರಗಳೇ ಕಾರಣ ಎಂಬ ಸಂಶಯಾಸ್ಪದ ಹೇಳಿಕೆಗಳನ್ನು ಪುನರಾವರ್ತಿಸಿದ ಕಿಮ್ ಯೋ ಜಾಂಗ್, ದಕ್ಷಿಣ ಕೊರಿಯಾದ ಬೊಂಬೆಗಳು ಬಲೂನ್‌ಗಳ ಮೂಲಕ ಸಾಗಿಸುವ ಕರಪತ್ರಗಳಲ್ಲಿ ಗಡಿಯುದ್ದಕ್ಕೂ ಕೊಳಕು ವಸ್ತುಗಳನ್ನು ಸಾಗಿಸಿವೆ ಎಂದು ದೂಷಿಸಿರುವುದಾಗಿ ಅಧಿಕೃತ ಕೊರಿಯನ್ ಸೆಂಟ್ರಲ್ ನ್ಯೂಸ್ ಏಜೆನ್ಸಿ (KCNA) ಗುರುವಾರ ವರದಿ ಮಾಡಿದೆ. ಕಿಮ್ ಜಾಂಗ್ ಉನ್ ಅನಾರೋಗ್ಯದ ಬಗ್ಗೆ ಈ ಈ ರೀತಿ ಬಹಿರಂಗ ಪಡಿಸಿರುವುದು ಇದೇ ಮೊದಲು. ಜನರು ಎದುರಿಸುತ್ತಿರುವ ಅದೇ ಸಮಸ್ಯೆಗಳನ್ನು ಅವರೂ ಎದುರಿಸಿದ್ದಾರೆ ಎಂದು ತೋರಿಸುವುದಕ್ಕಾಗಿ ಈ ರೀತಿ ಹೇಳಿಕೆ ನೀಡಿದ್ದು ಸಾಮಾನ್ಯವಾಗಿ ಇದನ್ನು ರಾಜಕೀಯ ಉದ್ದೇಶಗಳಿಗಾಗಿ ಮಾಡಲಾಗುತ್ತದೆ.

ಉತ್ತರ ಕೊರಿಯಾದ ನಾಯಕ ಜ್ವರದಿಂದ ಬಳಲುತ್ತಿದ್ದರು ಮತ್ತು ಗಂಭೀರವಾಗಿ ಅನಾರೋಗ್ಯಕ್ಕೆ ಒಳಗಾಗಿದ್ದಾರೆ. ಆದರೂ ಜನರ ಮೇಲಿನ ಕಾಳಜಿಯಿಂದಾಗಿ ಕಿಮ್ ಒಂದು ಕ್ಷಣವೂ ಮಲಗಲು ಸಾಧ್ಯವಾಗಲಿಲ್ಲ ಎಂದು ಕಿಮ್ ಯೋ ಜಾಂಗ್ ಭಾಷಣದಲ್ಲಿ ಹೇಳಿರುವುದಾಗಿ ಕೆಸಿಎನ್ಎ ವರದಿ ಮಾಡಿದೆ.ಅಂದಹಾಗೆ ಯಾವ ದಿನ ಅವರು ಅನಾರೋಗ್ಯಕ್ಕೆ ಒಳಗಾದರು ಎಂಬುದನ್ನು ಆಕೆ ವಿವರಿಸಿಲ್ಲ.

ಅಧಿಕ ತೂಕ ಮತ್ತು ಧೂಮಪಾನಿ ಆಗಿರುವ ಕಿಮ್ ಜಾಂಗ್ ಉನ್ ಅವರ ಆರೋಗ್ಯದ ಬಗ್ಗೆ ವರ್ಷಗಳಿಂದ ಊಹಾಪೋಹಗಳು ಕೇಳಿ ಬರುತ್ತಲೇ ಇರುತ್ತವೆ. ಪ್ಯೊಂಗ್ಯಾಂಗ್‌ನಲ್ಲಿನ ನಿರಂಕುಶಾಧಿಕಾರ ಮತ್ತು ರಹಸ್ಯ ಆಡಳಿತದ ಒಳನೋಟಗಳಿಗಾಗಿ ಅವರ ಸಾರ್ವಜನಿಕ ಪ್ರದರ್ಶನಗಳನ್ನು ನಿಕಟವಾಗಿ ಟ್ರ್ಯಾಕ್ ಮಾಡಲಾಗುತ್ತದೆ.

ಉತ್ತರ ಕೊರಿಯಾದಲ್ಲಿ ಲಕ್ಷಾಂತರ ಜ್ವರ ಪ್ರಕರಣಗಳಿದ್ದರೂ ಅದನ್ನು ಕೋವಿಡ್ ಎಂದು ಕರೆಯಲಿಲ್ಲ. ಬಹುಶಃ ಈ ದೇಶದಲ್ಲಿ ಕೊರೊನಾವೈರಸ್​​ನಿಂದ ಪ್ರಕರಣಗಳು ಉಂಟಾಗಿವೆ ಎಂದು ಖಚಿತಪಡಿಸಲು ಸಾಕಷ್ಟು ಪರೀಕ್ಷಾ ಕಿಟ್‌ಗಳನ್ನು ಹೊಂದಿಲ್ಲದಿರಬಹುದು. ಇದು ವಿಶ್ವ ಆರೋಗ್ಯ ಸಂಸ್ಥೆಯಿಂದ ಬೆಂಬಲಿತವಾದ ಕೋವಾಕ್ಸ್‌ನ ನಿಯಮಗಳನ್ನು ಅನುಸರಿಸಲು ಇಷ್ಟವಿಲ್ಲದ ಕಾರಣ ಯೋಜಿತ ಲಸಿಕೆ ಸಾಗಣೆಗೆ ತಡೆಯೊಡ್ಡಿದ್ದು, ಹೊರ ರಾಷ್ಟ್ರಗಳಿಂದ ಲಸಿಕೆ ಪಡೆಯುವುದನ್ನು ನಿರಾಕರಿಸಿದೆ.

ಉತ್ತರ ಕೊರಿಯಾದ ಒತ್ತಡದ ಪ್ರಚಾರದ ಮುಖವಾಗಿರುವ ಕಿಮ್ ಯೋ ಜಾಂಗ್ ಅವರ ಹೇಳಿಕೆಗಳು, ವಾಷಿಂಗ್ಟನ್ ಮತ್ತು ಸಿಯೋಲ್ ವಿರುದ್ಧ ಮೇ ತಿಂಗಳಲ್ಲಿ ಅಧಿಕಾರ ವಹಿಸಿಕೊಂಡ ದಕ್ಷಿಣ ಕೊರಿಯಾದ ಅಧ್ಯಕ್ಷ ಯೂನ್ ಸುಕ್ ಯೋಲ್ ಅವರ ಸರ್ಕಾರದ ವಿರುದ್ಧ ಮೊದಲ ಬೆದರಿಕೆಯನ್ನು ಒಳಗೊಂಡಿತ್ತು.

ನಮ್ಮ ಗಣರಾಜ್ಯಕ್ಕೆ ವೈರಸ್ ಅನ್ನು ಪರಿಚಯಿಸುವಂತಹ ಅಪಾಯಕಾರಿ ಕೆಲಸವನ್ನು ಶತ್ರುಗಳು ಮುಂದುವರಿಸಿದರೆ, ನಾವು ವೈರಸ್ ಅನ್ನು ನಿರ್ಮೂಲನೆ ಮಾಡುವ ಮೂಲಕ ಪ್ರತಿಕ್ರಿಯಿಸುತ್ತೇವೆ. ಅದರ ಜತೆಗೆ ಆದರೆ ದಕ್ಷಿಣ ಕೊರಿಯಾದ ಅಧಿಕಾರಿಗಳನ್ನು ಸಹ ನಿರ್ಮೂಲನೆ ಮಾಡುತ್ತೇವೆ ಎಂದು ಜಾಂಗ್ ಎಚ್ಚರಿಕೆ ನೀಡಿದ್ದಾರೆ. ಸಿಯೋಲ್ ವಿರುದ್ಧ ಉತ್ತರ ಕೊರಿಯಾದ ಹೆಚ್ಚುತ್ತಿರುವ ವಾಗ್ದಾಳಿಗಳು ಇತ್ತೀಚಿನ ತಿಂಗಳುಗಳಲ್ಲಿ ನಿಧಾನಗೊಂಡ ಮಿಲಿಟರಿ ಪ್ರಚೋದನೆಗಳ ಪುನರಾರಂಭಕ್ಕೆ ವೇದಿಕೆಯಾಗಬಲ್ಲದು. ಉತ್ತರ ಕೊರಿಯಾ 2017 ರಿಂದ ಮೊದಲ ಪರಮಾಣು ಪರೀಕ್ಷೆಯನ್ನು ನಡೆಸಲು ಸಿದ್ಧವಾಗಿದೆ ಎಂದು ಜಪಾನ್, ದಕ್ಷಿಣ ಕೊರಿಯಾ ಮತ್ತು ಯುಎಸ್ ಸರ್ಕಾರಿ ಅಧಿಕಾರಿಗಳು ತಿಳಿಸಿದ್ದಾರೆ.

ಹೆಚ್ಚಿನ ವಿದೇಶ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 12:56 pm, Thu, 11 August 22

Follow Us
ತೆಲುಗಿನ ರೀತಿ ಕನ್ನಡ ಚಿತ್ರರಂಗದಲ್ಲಿ ಯಾಕೆ ಇಲ್ಲ; ಬೇಸರ ತೋಡಿಕೊಂಡ ದಿಗಂತ್
ತೆಲುಗಿನ ರೀತಿ ಕನ್ನಡ ಚಿತ್ರರಂಗದಲ್ಲಿ ಯಾಕೆ ಇಲ್ಲ; ಬೇಸರ ತೋಡಿಕೊಂಡ ದಿಗಂತ್
ಇನ್ನೇನು ವಿಶೇಷ ಚೇತನರಿಗೆ ಹಸ್ತಾಂತರಿಸಬೇಕಿದ್ದ ವಾಹನಗಳು ಸುಟ್ಟು ಭಸ್ಮ
ಇನ್ನೇನು ವಿಶೇಷ ಚೇತನರಿಗೆ ಹಸ್ತಾಂತರಿಸಬೇಕಿದ್ದ ವಾಹನಗಳು ಸುಟ್ಟು ಭಸ್ಮ
ಬಂಗಾಳದ ಮತಗಟ್ಟೆಗೆ ಕಾಡಾನೆ ಎಂಟ್ರಿ; ಕಂಗಾಲಾದ ಮತದಾರರು
ಬಂಗಾಳದ ಮತಗಟ್ಟೆಗೆ ಕಾಡಾನೆ ಎಂಟ್ರಿ; ಕಂಗಾಲಾದ ಮತದಾರರು
ಟಿಎಂಸಿಯ ಗೂಂಡಾಗಿರಿ ಅಂತ್ಯವಾಗುವ ಸಮಯ ಬಂದಿದೆ; ಬಂಗಾಳದಲ್ಲಿ ಅಮಿತ್ ಶಾ
ಟಿಎಂಸಿಯ ಗೂಂಡಾಗಿರಿ ಅಂತ್ಯವಾಗುವ ಸಮಯ ಬಂದಿದೆ; ಬಂಗಾಳದಲ್ಲಿ ಅಮಿತ್ ಶಾ
ದೆಹಲಿಯಲ್ಲಿ ಡಿಕೆಶಿ ಸ್ಫೋಟಕ ಹೇಳಿಕೆ, ರಾಜ್ಯ ರಾಜಕಾರಣದಲ್ಲಿ ಸಂಚಲನ
ದೆಹಲಿಯಲ್ಲಿ ಡಿಕೆಶಿ ಸ್ಫೋಟಕ ಹೇಳಿಕೆ, ರಾಜ್ಯ ರಾಜಕಾರಣದಲ್ಲಿ ಸಂಚಲನ
ಬಂಗಾಳದ ಹೌರಾದಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಬಂಗಾಳದ ಹೌರಾದಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಶುರುವಾಯ್ತು ಸಲ್ಮಾನ್ ಖಾನ್-ನಯನತಾರಾ ಸಿನಿಮಾ: ವಿಡಿಯೋ
ಶುರುವಾಯ್ತು ಸಲ್ಮಾನ್ ಖಾನ್-ನಯನತಾರಾ ಸಿನಿಮಾ: ವಿಡಿಯೋ