AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಧಿಕಾರಿಗಳ ಬೇಜವಾಬ್ದಾರಿತನ: 27 ವರ್ಷಗಳ ನಂತ್ರ ಮಗನ ಸಾವಿನ ಸುದ್ದಿ ಅರಿತ ತಾಯಿ!

ಬರೋಬ್ಬರಿ 27 ವರ್ಷಗಳ ಬಳಿಕ ವ್ಯಕ್ತಿಯೊಬ್ಬನ ಸಾವಿನ ಸುದ್ದಿ ಆತನ ಕುಟುಂಬಸ್ಥರಿಗೆ ತಲುಪಿರುವ ಸಂಗತಿ ಸ್ಪೇನ್​ ದೇಶದಲ್ಲಿ ವರದಿಯಾಗಿದೆ. ಸ್ಪೇನ್​ನ​ ದಕ್ಷಿಣ ಭಾಗದ ಗ್ರಾನಡಾ ಬಳಿಯ ಬಾಜಾ ಎಂಬ ಪಟ್ಟಣದಲ್ಲಿ ಡಿಸೆಂಬರ್ 8, 1990 ರಂದು ನಡೆದ ಕಾರು ಅಪಘಾತದಲ್ಲಿ 24 ವರ್ಷದ ವ್ಯಕ್ತಿಯೊಬ್ಬ ಸಾವನ್ನಪ್ಪಿದ್ದ. ಆದರೆ, ಈ ವಿಚಾರ ತಿಳಿಯದ ಆತನ ಪೋಷಕರು ಘಟನೆ ನಡೆದ 6 ದಿನಗಳ ಬಳಿಕ ಮಗ ಕಾಣೆಯಾಗಿದ್ದಾನೆಂದು ಪೊಲೀಸರಿಗೆ ದೂರು ನೀಡಿದ್ದರು. ಆದರೆ, ಇದೀಗ ಅಪಘಾತದಲ್ಲಿ ತಮ್ಮ ಪುತ್ರ ಮೃತಪಟ್ಟಿದ್ದಾನೆಂಬ […]

ಅಧಿಕಾರಿಗಳ ಬೇಜವಾಬ್ದಾರಿತನ: 27 ವರ್ಷಗಳ ನಂತ್ರ ಮಗನ ಸಾವಿನ ಸುದ್ದಿ ಅರಿತ ತಾಯಿ!
KUSHAL V
|

Updated on: Nov 15, 2020 | 6:48 PM

Share

ಬರೋಬ್ಬರಿ 27 ವರ್ಷಗಳ ಬಳಿಕ ವ್ಯಕ್ತಿಯೊಬ್ಬನ ಸಾವಿನ ಸುದ್ದಿ ಆತನ ಕುಟುಂಬಸ್ಥರಿಗೆ ತಲುಪಿರುವ ಸಂಗತಿ ಸ್ಪೇನ್​ ದೇಶದಲ್ಲಿ ವರದಿಯಾಗಿದೆ. ಸ್ಪೇನ್​ನ​ ದಕ್ಷಿಣ ಭಾಗದ ಗ್ರಾನಡಾ ಬಳಿಯ ಬಾಜಾ ಎಂಬ ಪಟ್ಟಣದಲ್ಲಿ ಡಿಸೆಂಬರ್ 8, 1990 ರಂದು ನಡೆದ ಕಾರು ಅಪಘಾತದಲ್ಲಿ 24 ವರ್ಷದ ವ್ಯಕ್ತಿಯೊಬ್ಬ ಸಾವನ್ನಪ್ಪಿದ್ದ. ಆದರೆ, ಈ ವಿಚಾರ ತಿಳಿಯದ ಆತನ ಪೋಷಕರು ಘಟನೆ ನಡೆದ 6 ದಿನಗಳ ಬಳಿಕ ಮಗ ಕಾಣೆಯಾಗಿದ್ದಾನೆಂದು ಪೊಲೀಸರಿಗೆ ದೂರು ನೀಡಿದ್ದರು.

ಆದರೆ, ಇದೀಗ ಅಪಘಾತದಲ್ಲಿ ತಮ್ಮ ಪುತ್ರ ಮೃತಪಟ್ಟಿದ್ದಾನೆಂಬ ವಿಚಾರವನ್ನು ಬರೋಬ್ಬರಿ 27 ವರ್ಷಗಳ ನಂತರ ಅಧಿಕಾರಿಗಳು ಆತನ ತಾಯಿ ಮತ್ತು ಕುಟುಂಬಸ್ಥರಿಗೆ ಮಾಹಿತಿ ನೀಡಿದ್ದಾರೆ. ಹೌದು, ತಮ್ಮ ಬೇಜವಾಬ್ದಾರಿತನದಿಂದ ಅಪಘಾತದಲ್ಲಿ ವ್ಯಕ್ತಿ ಮೃತಪಟ್ಟಿದ್ದಾನೆಂಬ ವಿಚಾರವನ್ನು  ಆತನ ಪೋಷಕರಿಗೆ ನೀಡದ ಅಧಿಕಾರಿಗಳು ಬಳಿಕ 2017ರಲ್ಲಿ ಈ ವಿಷಯ ತಿಳಿಸಿದ್ದಾರೆ. ಇಷ್ಟು ವರ್ಷಗಳ ನಂತರ ಮಗನ ಸಾವಿನ ಸುದ್ದಿ ಕೇಳಿದ್ದ ಪೋಷಕರಿಗೆ ಬರಸಿಡಿಲು ಬಡಿದಂತಾಗಿತ್ತು. ಜೊತೆಗೆ, ಅಧಿಕಾರಿಗಳ ನಡೆಯಿಂದ ಬಹಳಷ್ಟು ಆಕ್ರೋಶವೂ ಉಂಟಾಗಿತ್ತು.

ಹೀಗಾಗಿ, ಸ್ಪ್ಯಾನಿಶ್​ ಹೈಕೋರ್ಟ್ ಮೆಟ್ಟಿಲೇರಿದ್ದ ಮೃತನ ತಾಯಿ ಮತ್ತು ಆತನ ನಾಲ್ಕು ಸಹೋದರರಿಗೆ ಸೂಕ್ತ ಪರಿಹಾರ ನೀಡುವಂತೆ  ನ್ಯಾಯಾಲಯವು ಸರ್ಕಾರಕ್ಕೆ ಆದೇಶ ಹೊರಡಿಸಿತ್ತು. ಕೋರ್ಟ್​ ಸೂಚಿಸಿದ ಪರಿಹಾರವನ್ನು ನೀಡಲು ಮೃತನ ಕುಟುಂಬಸ್ಥರು ಸರ್ಕಾರಕ್ಕೆ ಒತ್ತಾಯ ಸಹ ಹೇರಿದ್ದರು. ಆದರೆ ಸರ್ಕಾರ, ಹೈಕೋರ್ಟ್​ ಆದೇಶ ಉಲ್ಲಂಘಿಸಿ ಕಡಿಮೆ ಪರಿಹಾರ ಮೊತ್ತವನ್ನು ನೀಡಿದೆ. ಹಾಗಾಗಿ, ಮೃತನ ಕುಟುಂಬದವರು ಇದೀಗ ಸೂಕ್ತ ಪರಿಹಾರ ಕೊಡಿಸಲು ಮತ್ತೊಮ್ಮೆ ನ್ಯಾಯಾಲಯದ ಮೊರೆ ಹೋಗಿದ್ದಾರೆ ಎಂದು ತಿಳಿದುಬಂದಿದೆ.

ರಣರೋಚಕ ಘಟ್ಟದಲ್ಲಿ ಆಸ್ಟ್ರೇಲಿಯಾ vs ಇಂಗ್ಲೆಂಡ್ ಟೆಸ್ಟ್ ಪಂದ್ಯ
ರಣರೋಚಕ ಘಟ್ಟದಲ್ಲಿ ಆಸ್ಟ್ರೇಲಿಯಾ vs ಇಂಗ್ಲೆಂಡ್ ಟೆಸ್ಟ್ ಪಂದ್ಯ
ಯಾವುದೇ ಕಾರ್ಯಗಳಲ್ಲಿ ಶಂಕುಸ್ಥಾಪನೆ ಮಾಡುವುದು ಯಾಕೆ?
ಯಾವುದೇ ಕಾರ್ಯಗಳಲ್ಲಿ ಶಂಕುಸ್ಥಾಪನೆ ಮಾಡುವುದು ಯಾಕೆ?
ಇಂದು ಈ ರಾಶಿಯವರಿಗೆ ಖರ್ಚು ಜಾಸ್ತಿ
ಇಂದು ಈ ರಾಶಿಯವರಿಗೆ ಖರ್ಚು ಜಾಸ್ತಿ
ಡಿಕೆ ಶಿವಕುಮಾರ್​ ಹಾಗೂ ಕೆಎನ್​​ ರಾಜಣ್ಣ ಭೇಟಿ: ಕುತೂಹಲ ಮೂಡಿಸಿದ ನಾಯಕರ ನಡ
ಡಿಕೆ ಶಿವಕುಮಾರ್​ ಹಾಗೂ ಕೆಎನ್​​ ರಾಜಣ್ಣ ಭೇಟಿ: ಕುತೂಹಲ ಮೂಡಿಸಿದ ನಾಯಕರ ನಡ
ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ