AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪೋಲೆಂಡ್​​ನಲ್ಲಿರುವ ರಷ್ಯಾದ ರಾಯಭಾರಿ ಮುಖಕ್ಕೆ ಕೆಂಪು ಬಣ್ಣ ಎರಚಿದ ಯುದ್ಧ ವಿರೋಧಿ ಪ್ರತಿಭಟನಾಕಾರರು

ರಷ್ಯಾ ವಿದೇಶಾಂಗ ಸಚಿವಾಲಯದ ವಕ್ತಾರ ಮಾರಿಯಾ ಜಖರೋವಾ ಸೆರ್ಗೆ ಮೇಲಿನ ದಾಳಿ ಖಂಡಿಸಿದ್ದು "ನಾವು ಹೆದರುವುದಿಲ್ಲ. ಆದರೆ "ಯುರೋಪಿನ ಜನರು ಕನ್ನಡಿಯಲ್ಲಿ ತಮ್ಮ ಪ್ರತಿಬಿಂಬವನ್ನು ನೋಡಲು ಭಯಪಡಬೇಕು" ಎಂದು ಹೇಳಿದ್ದಾರೆ.

ಪೋಲೆಂಡ್​​ನಲ್ಲಿರುವ ರಷ್ಯಾದ ರಾಯಭಾರಿ ಮುಖಕ್ಕೆ ಕೆಂಪು ಬಣ್ಣ ಎರಚಿದ ಯುದ್ಧ ವಿರೋಧಿ ಪ್ರತಿಭಟನಾಕಾರರು
ಸೆರ್ಗೆ ಆಂಡ್ರೀವ್
TV9 Web
| Edited By: |

Updated on:May 10, 2022 | 3:18 PM

Share

ಎರಡನೇ ಮಹಾಯುದ್ಧದಲ್ಲಿ (World War II) ಮಡಿದ ರೆಡ್ ಆರ್ಮಿ ಸೈನಿಕರಿಗೆ ವಾರ್ಸಾ ಸ್ಮಶಾನದಲ್ಲಿ (Warsaw cemetery) ಗೌರವ ಸಲ್ಲಿಸಲು ತೆರಳುತ್ತಿದ್ದ ಪೋಲೆಂಡ್‌ನಲ್ಲಿರುವ ರಷ್ಯಾದ ರಾಯಭಾರಿ ಸೆರ್ಗೆ ಆಂಡ್ರೀವ್ (Sergey Andreev) ಅವರ ಮುಖಕ್ಕೆ ಉಕ್ರೇನ್ ಯುದ್ಧವನ್ನು ವಿರೋಧಿಸುವ ಪ್ರತಿಭಟನಾಕಾರರು ಸೋಮವಾರ ಕೆಂಪು ಬಣ್ಣವನ್ನು ಎರಚಿ ಪ್ರತಿಭಟನೆ ವ್ಯಕ್ತಪಡಿಸಿದ್ದಾರೆ. ರಷ್ಯಾ ವಿದೇಶಾಂಗ ಸಚಿವಾಲಯದ ವಕ್ತಾರ ಮಾರಿಯಾ ಜಖರೋವಾ ಸೆರ್ಗೆ ಮೇಲಿನ ದಾಳಿ ಖಂಡಿಸಿದ್ದು “ನಾವು ಹೆದರುವುದಿಲ್ಲ. ಆದರೆ “ಯುರೋಪಿನ ಜನರು ಕನ್ನಡಿಯಲ್ಲಿ ತಮ್ಮ ಪ್ರತಿಬಿಂಬವನ್ನು ನೋಡಲು ಭಯಪಡಬೇಕು” ಎಂದು ಹೇಳಿದ್ದಾರೆ.

ರಾಯಭಾರಿ ಸೆರ್ಗೆ ಆಂಡ್ರೀವ್ ಅವರು ವಿಜಯ ದಿನದಂದು ವಾರ್ಸಾದಲ್ಲಿನ ಸೋವಿಯತ್ ಮಿಲಿಟರಿ ಸ್ಮಶಾನಕ್ಕೆ ಪುಷ್ಪ ನಮನ ಸಲ್ಲಿಸಲು ಆಗಮಿಸಿದ್ದರು. ಸ್ಮಶಾನಕ್ಕೆ ಅವರು ಆಗಮಿಸಿದಾಗ, ಆಂಡ್ರೀವ್ ಅವರನ್ನು ಉಕ್ರೇನ್ ಮೇಲೆ ರಷ್ಯಾದ ಆಕ್ರಮಣದ ವಿರುದ್ಧ ಪ್ರತಿಭಟಿಸುವ ಹಲವಾರು ಯುದ್ಧ-ವಿರೋಧಿ ಕಾರ್ಯಕರ್ತರು ಭೇಟಿಯಾಗಿದ್ದರು.

ಪ್ರತಿಭಟನಾಕಾರರು ಮೊದಲು ಸ್ಮಶಾನದಲ್ಲಿ ಇಡಲು ಉದ್ದೇಶಿಸಿದ್ದ ಹೂವಿನ ಮಾಲೆಯನ್ನು ಕಸಿದುಕೊಂಡು ತುಳಿದರು. ನಂತರ ಅವರ ಪಕ್ಕದಲ್ಲಿ ನಿಂತಿದ್ದ ಪ್ರತಿಭಟನಾಕಾರ ಕೆಂಪು ಬಣ್ಣವನ್ನು ಎಸೆದಾಗ ಅದು ಅವರ ಮುಖಕ್ಕೆ ಸ್ವಲ್ಪವೇ ತಾಗಿತ್ತು. ಅಷ್ಟೊತ್ತರಲ್ಲಿ ಮತ್ತೊಬ್ಬ ಪ್ರತಿಭಟನಾಕಾರ ಕೆಂಪು ಬಣ್ಣ ಎರಚಿದ್ದಾರೆ.

ಪ್ರತಿಭಟನಾಕಾರರು ಉಕ್ರೇನಿಯನ್ ಧ್ವಜಗಳನ್ನು ಹಿಡಿದುಕೊಂಡು “ಫ್ಯಾಸಿಸ್ಟ್‌ಗಳು” ಮತ್ತು “ಕೊಲೆಗಾರರು” ಎಂದು ಕೂಗಿದ್ದಾರೆ. ರಷ್ಯಾದ ಯುದ್ಧದಲ್ಲಿ ಉಕ್ರೇನಿಯನ್ ಸಂತ್ರಸ್ತರ ಸಂಕೇತವಾಗಿ ಕೆಲವರು ಕೆಂಪು ಲೇಪಿತ ಬಿಳಿ ಹಾಳೆಗಳನ್ನು ಧರಿಸಿದ್ದರು. ಕೆಲವರು ಕೆಂಪು ಬಣ್ಣಗಳನ್ನು ಬಳಿದಿದ್ದರು.

Published On - 2:53 pm, Tue, 10 May 22

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ