AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಷ್ಯಾದಲ್ಲಿ ಇನ್ಫೋಸಿಸ್ ಕಾರ್ಯನಿರ್ವಹಣೆ; ನಾರಾಯಣ ಮೂರ್ತಿ ಅಳಿಯ, ಬ್ರಿಟನ್​ ಹಣಕಾಸು ಸಚಿವ ರಿಷಿ ಸುನಕ್​ಗೆ ಕಠಿಣ ಪ್ರಶ್ನೆ

Rishi Sunak | Russia Ukraine Crisis: ರಷ್ಯಾಗೆ ಜಾಗತಿಕ ನಿರ್ಬಂಧ ಹೇರುವ ದೃಷ್ಟಿಯಿಂದ ಬ್ರಿಟನ್​ನ ಪ್ರಮುಖ ಕಂಪನಿಗಳು ರಷ್ಯಾದಲ್ಲಿ ಸೇವೆ ನಿಲ್ಲಿಸಿವೆ. ಆದರೆ ಭಾರತೀಯ ಮೂಲದ ಕಂಪನಿ ಇನ್ಫೋಸಿಸ್ ರಷ್ಯಾದಲ್ಲಿ ಕಾರ್ಯನಿರ್ವಹಿಸುತ್ತಿದೆ. ರಿಷಿ ಸುನಕ್ ಪತ್ನಿ, ನಾರಾಯಣ ಮೂರ್ತಿ ಪುತ್ರಿ ಅಕ್ಷತಾ ಮೂರ್ತಿ ಕಂಪನಿಯಲ್ಲಿ ಪಾಲನ್ನು ಹೊಂದಿದ್ದಾರೆ. ಅವರ ಉಪಸ್ಥಿತಿಯಿರುವ ಕಂಪನಿ ರಷ್ಯಾದಲ್ಲಿ ಕಾರ್ಯನಿರ್ವಹಿಸುತ್ತಿರುವುದರ ಬಗ್ಗೆ ಬ್ರಿಟನ್ ಸಂಸದ ರಿಷಿ ಸುನಕ್​ಗೆ ಕಠಿಣ ಪ್ರಶ್ನೆಗಳನ್ನು ಕೇಳಲಾಗಿದೆ.

ರಷ್ಯಾದಲ್ಲಿ ಇನ್ಫೋಸಿಸ್ ಕಾರ್ಯನಿರ್ವಹಣೆ; ನಾರಾಯಣ ಮೂರ್ತಿ ಅಳಿಯ, ಬ್ರಿಟನ್​ ಹಣಕಾಸು ಸಚಿವ ರಿಷಿ ಸುನಕ್​ಗೆ ಕಠಿಣ ಪ್ರಶ್ನೆ
ರಿಷಿ ಸುನಕ್, ಅಕ್ಷತಾ ಮೂರ್ತಿ
TV9 Web
| Edited By: |

Updated on:Mar 25, 2022 | 10:03 AM

Share

ಇನ್ಫೋಸಿಸ್ ಸಹ-ಸಂಸ್ಥಾಪಕ ನಾರಾಯಣ ಮೂರ್ತಿ ಅವರ ಅಳಿಯ, ಬ್ರಿಟನ್​ನ ಭಾವಿ ಪ್ರಧಾನಿ ಎಂದೇ ಗುರುತಿಸಲ್ಪಡುವ ಯುಕೆ ಸಂಸದ ರಿಷಿ ಸುನಕ್ (Rishi Sunak) ಅವರಿಗೆ ರಷ್ಯಾದ ಮೇಲೆ ಹೇರಿರುವ ನಿರ್ಬಂಧದ ಕುರಿತು ಹಲವು ಪ್ರಶ್ನೆಗಳು ಎದುರಾಗಿವೆ. ರಷ್ಯಾಗೆ ಜಾಗತಿಕ ನಿರ್ಬಂಧ ಹೇರುವ ದೃಷ್ಟಿಯಿಂದ ಬ್ರಿಟನ್​ನ ಪ್ರಮುಖ ಕಂಪನಿಗಳು ರಷ್ಯಾದಲ್ಲಿ ಸೇವೆ ನಿಲ್ಲಿಸಿವೆ. ಆದರೆ ಭಾರತೀಯ ಮೂಲದ ಕಂಪನಿ ಇನ್ಫೋಸಿಸ್ ರಷ್ಯಾದಲ್ಲಿ ಕಾರ್ಯನಿರ್ವಹಿಸುತ್ತಿದೆ. ರಿಷಿ ಸುನಿಕ್ ಪತ್ನಿ, ನಾರಾಯಣ ಮೂರ್ತಿ ಪುತ್ರಿ ಅಕ್ಷತಾ ಮೂರ್ತಿ ಕಂಪನಿಯಲ್ಲಿ ಪಾಲನ್ನು ಹೊಂದಿದ್ದಾರೆ. ಅವರ ಉಪಸ್ಥಿತಿಯಿರುವ ಕಂಪನಿ ರಷ್ಯಾದಲ್ಲಿ ಕಾರ್ಯನಿರ್ವಹಿಸುತ್ತಿರುವುದರ ಬಗ್ಗೆ ರಿಷಿ ಸುನಕ್​ಗೆ ಕಠಿಣ ಪ್ರಶ್ನೆಗಳನ್ನು ಕೇಳಲಾಗಿದೆ. ಬ್ರಿಟನ್ ಖಜಾನೆ ಕುಲಪತಿಯಾಗಿರುವ ರಿಷಿ ಸುನಕ್​ ಗುರುವಾರ ಪ್ರಶ್ನೆಗಳನ್ನು ಎದುರಿಸಿದರು. ರಷ್ಯಾದ ಮೇಲೆ ಕಟ್ಟುನಿಟ್ಟಿನ ನಿರ್ಬಂಧಗಳನ್ನು ವಿಧಿಸಿರುವುದನ್ನು ಉಲ್ಲೇಖಿಸಿ, ಹಣಕಾಸು ಸಚಿವರು ತಮ್ಮ ಸ್ವಂತ ಮನೆಯಲ್ಲಿ ನಿರ್ಬಂಧದ ಸಲಹೆಯನ್ನು ಅನುಸರಿಸುತ್ತಿಲ್ಲವೇ ಎಂದು ಕೇಳಲಾಯಿತು. ಈ ಪ್ರಶ್ನೆಗೆ ಉತ್ತರಿಸಿದ ರಿಷಿ, ಇದು ಪ್ರತ್ಯೇಕ ಕಂಪನಿಗಳ ಕಾರ್ಯಾಚರಣೆಗೆ ಸಂಬಂಧಿಸಿದ ವಿಷಯ ಎಂದು ಹೇಳಿದ್ದಾರೆ.

‘ನಿಮ್ಮ ಕುಟುಂಬ ರಷ್ಯಾದ ಸಂಪರ್ಕ ಹೊಂದಿದೆ ಎಂದು ವರದಿಯಾಗಿದೆ. ನಿಮ್ಮ ಪತ್ನಿ ಭಾರತೀಯ ಸಂಸ್ಥೆ ಇನ್ಫೋಸಿಸ್‌ನಲ್ಲಿ ಪಾಲನ್ನು ಹೊಂದಿದ್ದಾರೆಂದು ವರದಿಯಾಗಿದೆ’’ ಎಂದು ಸ್ಕೈನ್ಯೂಸ್ ದೂರದರ್ಶನ ಸಂದರ್ಶನದಲ್ಲಿ ಕೇಳಲಾಗಿದೆ. ಜತೆಗೆ, ‘‘ಇನ್ಫೋಸಿಸ್ ಮಾಸ್ಕೋದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಅಲ್ಲಿ ಕಚೇರಿಯನ್ನು ಹೊಂದಿದ್ದಾರೆ. ಅವರು ಮಾಸ್ಕೋದಲ್ಲಿರುವ ಆಲ್ಫಾ ಬ್ಯಾಂಕ್‌ನೊಂದಿಗೆ ಸಂಪರ್ಕ ಹೊಂದಿದ್ದಾರೆ. ನಿಮ್ಮ ಸ್ವಂತ ಮನೆಯಲ್ಲಿ ನೀವು ನಿರ್ಬಂಧಗಳನ್ನು ಅನುಸರಿಸುತ್ತಿಲ್ಲ. ಆದರೆ ನೀವು ಇತರರಿಗೆ ಸಲಹೆ ನೀಡುತ್ತೀರಲ್ಲಾ?’’ ಎಂದು ನಿರೂಪಕಿ ಕಠಿಣ ಪ್ರಶ್ನೆಯನ್ನು ರಿಷಿ ಮುಂದಿಟ್ಟಿದ್ದಾರೆ.

ಬ್ರಿಟನ್​ನ ಚುನಾಯಿತ ರಾಜಕಾರಣಿಯಾಗಿರುವ ರಿಷಿ ಸುನಕ್ ಇದಕ್ಕೆ ಉತ್ತರಿಸಿ, ತಾವು ಯಾವುದಕ್ಕೆ ಜವಾಬ್ದಾರರು ಎಂದು ಸ್ಪಷ್ಟನೆ ನೀಡಿದ್ದಾರೆ. ‘ನಾನು ಚುನಾಯಿತ ಪ್ರತಿನಿಧಿ, ಇಲ್ಲಿ ನಾನು ಯಾವುದಕ್ಕೆ ಜವಾಬ್ದಾರನೋ ಅದನ್ನು ಮಾತನಾಡಲು ಬಂದಿದ್ದೇನೆ. ಆದರೆ ನನ್ನ ಪತ್ನಿಯ ಕುರಿತು ಅಲ್ಲ’ ಎಂಬರ್ಥದಲ್ಲಿ ರಿಷಿ ಪ್ರತಿಕ್ರಿಯಿಸಿದ್ದಾರೆ.

‘‘ಎಲ್ಲಾ ಕಂಪನಿಗಳ ಕಾರ್ಯಾಚರಣೆ ಅವರವರಿಗೆ ಬಿಟ್ಟಿದ್ದು’’ ಎಂದಿರುವ ರಿಷಿ, ‘‘ನಾವು ಮಹತ್ವದ ನಿರ್ಬಂಧಗಳನ್ನು ಹಾಕಿದ್ದೇವೆ. ಜವಾಬ್ದಾರಿಯುತ ಕಂಪನಿಗಳು ಅದನ್ನು ಅನುಸರಿಸುತ್ತಿದ್ದು, ಪುಟಿನ್ ಆಕ್ರಮಣಶೀಲತೆಗೆ ಪ್ರತ್ಯುತ್ತರ ನೀಡುತ್ತಿದ್ದಾರೆ’’ ಎಂದು ರಿಷಿ ಹೇಳಿದ್ದಾರೆ. ‘‘ನಿಮ್ಮ ಪತ್ನಿಯ ಕಂಪನಿ ಇನ್ಫೋಸಿಸ್ ಕೂಡ ಹೀಗೆ ಬಲವಾದ ಪ್ರತ್ಯುತ್ತರ ನೀಡುತ್ತಿದೆಯೇ?’’ ಎಂದು ಪುನಃ ಪ್ರಶ್ನಿಸಲಾಯಿತು.

ಈ ಪ್ರಶ್ನೆಗೆ ಉತ್ತರಿಸಿದ ರಿಷಿ, ‘‘ನನಗೆ ಪೂರ್ಣ ತಿಳಿದಿಲ್ಲ. ಕಾರಣ, ಆ ಕಂಪನಿಯೊಂದಿಗೆ ನನಗೆ ಯಾವುದೇ ಸಂಬಂಧವಿಲ್ಲ’’ ಎಂದು ಹೇಳಿದ್ದಾರೆ. ಸಂದರ್ಶನದಲ್ಲಿ ರಿಷಿ ಸುನಕ್ ರಷ್ಯಾದಲ್ಲಿ ಹೂಡಿಕೆ ಮಾಡುವ ಬಗ್ಗೆ ಎಲ್ಲಾ ಕಂಪನಿಗಳು ಎಚ್ಚರಿಕೆಯಿಂದಿರುವಂತೆ ಕರೆ ನೀಡಿದ್ದಾರೆ.

ಸ್ಕೈ ನ್ಯೂಸ್ ಸಂದರ್ಶನ ಇಲ್ಲಿದೆ:

ಇನ್ಫೋಸಿಸ್ ರಷ್ಯಾದೊಂದಿಗಿನ ಆರ್ಥಿಕ ಸಂಬಂಧದ ಬಗ್ಗೆ ಮಾಹಿತಿ ನೀಡಿದೆ. ರಷ್ಯಾ ಮತ್ತು ಉಕ್ರೇನ್ ನಡುವೆ ಶಾಂತಿಯನ್ನು ಬೆಂಬಲಿಸುತ್ತದೆ ಮತ್ತು ಪ್ರತಿಪಾದಿಸುತ್ತದೆ ಎಂದು ಇನ್ಫೋಸಿಸ್ ಹೇಳಿದೆ. ತನ್ನ ಹೇಳಿಕೆಯಲ್ಲಿ ಅದು, ‘‘ಇನ್ಫೋಸಿಸ್ ರಷ್ಯಾ ಮೂಲದ ಉದ್ಯೋಗಿಗಳ ಸಣ್ಣ ತಂಡವನ್ನು ಹೊಂದಿದೆ. ಅದು ನಮ್ಮ ಕೆಲವು ಜಾಗತಿಕ ಗ್ರಾಹಕರಿಗೆ ಪ್ರಾದೇಶಿಕವಾಗಿ ಸೇವೆ ಸಲ್ಲಿಸುತ್ತದೆ. ನಾವು ಸ್ಥಳೀಯ ರಷ್ಯಾದ ಉದ್ಯಮಗಳೊಂದಿಗೆ ಯಾವುದೇ ಸಕ್ರಿಯ ವ್ಯಾಪಾರ ಸಂಬಂಧವನ್ನು ಹೊಂದಿಲ್ಲ’’ ಎಂದು ಸ್ಪಷ್ಟನೆ ನೀಡಿದೆ.

ಇದನ್ನೂ ಓದಿ:

ಮುಸ್ಲಿಮರಿಗೆ ಯಾವುದೇ ವಸ್ತು ಮಾರಾಟ ಮಾಡುವುದಿಲ್ಲ ಎಂದು ಹಿಂದೂ ವ್ಯಾಪಾರಿಗಳ ಅಂಗಡಿ ವಿರುದ್ಧ ತಪ್ಪು ಸಂದೇಶ; ದೂರು ದಾಖಲು

Yogi Adityanath: ಇಂದು ಪ್ರಮಾಣವಚನ ಸ್ವೀಕರಿಸಲಿರುವ ಯೋಗಿ; ಪ್ರಧಾನಿ ಮೋದಿ, ಸಿಎಂ ಬೊಮ್ಮಾಯಿ ಭಾಗಿ

Published On - 9:59 am, Fri, 25 March 22

ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ