AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಉಕ್ರೇನ್​​ನಲ್ಲಿ ಆಸ್ಪತ್ರೆಗಳ ಮೇಲೆ 34 ಬಾರಿ ದಾಳಿ ನಡೆಸಿದ ರಷ್ಯಾ ಸೇನಾ ಪಡೆ; ವಾರ್​ ಕ್ರೈಂ ನಡೆಯುತ್ತಿರುವುದಕ್ಕೆ ಇದು ಪುರಾವೆ

ರಷ್ಯಾ ಸೇನೆಗಳು ಆಸ್ಪತ್ರೆಗಳನ್ನೂ ಬಿಟ್ಟಿಲ್ಲ ಎಂದೂ ಈ ಹಿಂದೆಯೂ ವರದಿಯಾಗಿತ್ತು. ಆಸ್ಪತ್ರೆಗಳ ಮೇಲೆ ದಾಳಿ ಮಾಡುತ್ತಿರುವುದಾಗಿ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್​ ಝೆಲೆನ್ಕ್ಸಿ ಕೂಡ ಆರೋಪಿಸಿದ್ದರು.

ಉಕ್ರೇನ್​​ನಲ್ಲಿ ಆಸ್ಪತ್ರೆಗಳ ಮೇಲೆ 34 ಬಾರಿ ದಾಳಿ ನಡೆಸಿದ ರಷ್ಯಾ ಸೇನಾ ಪಡೆ; ವಾರ್​ ಕ್ರೈಂ ನಡೆಯುತ್ತಿರುವುದಕ್ಕೆ ಇದು ಪುರಾವೆ
ಉಕ್ರೇನ್ ಆಸ್ಪತ್ರೆಗಳ ಮೇಲೆ ರಷ್ಯಾ ದಾಳಿ
TV9 Web
| Updated By: Lakshmi Hegde|

Updated on: Mar 26, 2022 | 8:18 AM

Share

ಉಕ್ರೇನ್​ ಮೇಲೆ ರಷ್ಯಾ ಯುದ್ಧ (Russia-Ukraine War) ಸಾರಿ ಒಂದು ತಿಂಗಳಾಯಿತು. ಇಲ್ಲಿಯವರೆಗೆ ಉಕ್ರೇನ್​​ನ ವೈದ್ಯಕೀಯ ವ್ಯವಸ್ಥೆಗಳು, ಆಸ್ಪತ್ರೆಗಳ ಮೇಲೆ ರಷ್ಯಾ ಪಡೆಗಳು ಸುಮಾರು 34 ಬಾರಿ ದಾಳಿ ನಡೆಸಿವೆ ಎಂದು ಅಸೋಸಿಯೇಟೆಡ್​ ಪ್ರೆಸ್​ನಲ್ಲಿ ವರದಿಯಾಗಿದೆ. ಫೆಬ್ರವರಿ 24ರಂದು ರಷ್ಯಾ ಅಧ್ಯಕ್ಷ ವ್ಲಾದಿಮಿರ್​ ಪುಟಿನ್​ ಅವರು ಉಕ್ರೇನ್​ ಮೇಲೆ ಸೇನಾ ಕಾರ್ಯಾಚರಣೆಗೆ ಆದೇಶಿಸಿದ್ದರು. ನಮಗೆ ಉಕ್ರೇನ್ (Ukraine)​ ವಶಪಡಿಸಿಕೊಳ್ಳುವ ಇರಾದೆಯಿಲ್ಲ. ಉಕ್ರೇನ್​ ಸೇನೆಯನ್ನು ಹಿಮ್ಮೆಟ್ಟಿಸುವುದಷ್ಟೇ ನಮ್ಮ ಉದ್ದೇಶ ಎಂದಿದ್ದರು. ಆದರೆ ಬರುಬರುತ್ತ ಸೇನಾ ಪಡೆಗಳು ಸಿಕ್ಕಸಿಕ್ಕಲ್ಲ ದಾಳಿ ನಡೆಸಿವೆ. ರಷ್ಯಾ ವಾರ್​ ಕ್ರೈಂ (ಯುದ್ಧಾಪರಾಧ) ನಡೆಸುತ್ತಿದೆ ಎಂದು ಉಕ್ರೇನ್​ ಅಂತಾರಾಷ್ಟ್ರೀಯ ನ್ಯಾಯಾಲಯಕ್ಕೂ ದೂರು ನೀಡಿತ್ತು.

ರಷ್ಯಾ ಸೇನೆಗಳು ಆಸ್ಪತ್ರೆಗಳನ್ನೂ ಬಿಟ್ಟಿಲ್ಲ ಎಂದೂ ಈ ಹಿಂದೆಯೂ ವರದಿಯಾಗಿತ್ತು. ಆಸ್ಪತ್ರೆಗಳ ಮೇಲೆ ದಾಳಿ ಮಾಡುತ್ತಿರುವುದಾಗಿ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್​ ಝೆಲೆನ್ಕ್ಸಿ ಕೂಡ ಆರೋಪಿಸಿದ್ದರು. ರಷ್ಯಾ ಸೇನೆಗಳ ಆಕ್ರಮಣ ಮಿತಿಮೀರಿದೆ. ಆಸ್ಪತ್ರೆಗಳ ಹೆರಿಗೆ ಆಸ್ಪತ್ರೆಗಳ ಮೇಲೆ ಬಾಂಬ್​ ದಾಳಿ ಮಾಡುತ್ತಿದ್ದಾರೆ. ನಾಗರಿಕರ ವಸತಿ ಪ್ರದೇಶಗಳನ್ನೂ ಬಿಡುತ್ತಿಲ್ಲ. ಪತ್ರಕರ್ತರನ್ನೂ ಹತ್ಯೆ ಮಾಡುತ್ತಿದ್ದಾರೆ ಎಂದು ಎಪಿ ತನ್ನ ವರದಿಯಲ್ಲಿ ಉಲ್ಲೇಖಿಸಿದೆ.

ಯುದ್ಧ ಶುರುವಾದಾಗಿನಿಂದ ಇಲ್ಲಿಯವರೆಗೂ ಸಂಗ್ರಹಿಸಿದ ಡಾಟಾಗಳು, ಸ್ವತಂತ್ರವಾಗಿ ಮಾಡಿದ ತನಿಖೆಯ ಪ್ರಕಾರ, ರಷ್ಯಾ ಸೈನಿಕರು ಉಕ್ರೇನ್​ ಆಸ್ಪತ್ರೆಗಳ ಮೇಲೆ ಇದುವರೆಗೆ 34 ಬಾರಿ ದಾಳಿ ನಡೆಸಿದ್ದಾರೆ. ಇದಕ್ಕೆ ಸಾಕಷ್ಟು ಪುರಾವೆಗಳು ಇವೆ. ರಷ್ಯಾ ಯುದ್ಧ ಅಪರಾಧ ನಡೆಸುತ್ತಿದೆ ಎಂಬುದಕ್ಕೆ ಇವು ಸಾಕ್ಷಿಗಳಾಗಬಹುದು ಎಂದೂ ಮಾಧ್ಯಮ ವರದಿಯಲ್ಲಿ ಉಲ್ಲೇಖಿಸಿದೆ. ಅಲ್ಲಿನ ನಾಗರಿಕರು ಸುರಕ್ಷಿತ ಜೀವನ ನಡೆಸಲು, ನಿರಾಶ್ರಿತರು ವಾಸವಾಗಿರಲು ಕಟ್ಟಲಾದ ವಸತಿ ಕಟ್ಟಡಗಳೂ, ಸೌಕರ್ಯಗಳ ಮೇಲೆಲ್ಲ ದಾಳಿ ನಡೆಸಿ, ಅದನ್ನು ಹಾಳುಗೆಡವಿದ್ದಕ್ಕೆ ಸಾಕಷ್ಟು ಪುರಾವೆಗಳು ಸಿಗುತ್ತಿವೆ ಎಂದೂ ಹೇಳಿದೆ.

ಇದನ್ನೂ ಓದಿ: ರಜೆಯನ್ನ ಯಾವ ರೀತಿಯಾಗಿ ಸದ್ಬಳಕೆ ಮಾಡಿಕೊಳ್ಬೇಕು ಗೊತ್ತಾ..! ಡಾ. ಸೌಜನ್ಯ ವಶಿಷ್ಟ ಹೇಳ್ತಾರೆ ಕೇಳಿ

ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?