AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊರೊನಾ ಹುಟ್ಟಿದ ದೇಶದ ಈ ನಗರದಲ್ಲಿ ಲಾಕ್​ಡೌನ್​​ನಿಂದ ಬಸವಳಿದು ಹೋದ ಜನರು; ಆಹಾರ ಸಂರಕ್ಷಣೆಗಾಗಿ ಪರದಾಟ

ಜನರಿಗೆ ಬರೀ ಆಹಾರ, ಅಗತ್ಯವಸ್ತುಗಳ ಸಮಸ್ಯೆ ಮಾತ್ರವಲ್ಲ, ಮನೆಯಲ್ಲೇ ಇದ್ದು ಮಾನಸಿಕವಾಗಿಯೂ ಕುಗ್ಗಿ ಹೋಗುತ್ತಿದ್ದಾರೆ. ಕಠಿಣ ಲಾಕ್​ಡೌನ್​ ನಿಯಮ ಹೇರಿ ಈಗಾಗಲೇ 2 ವಾರಗಳ ಮೇಲಾಯಿತು.

ಕೊರೊನಾ ಹುಟ್ಟಿದ ದೇಶದ ಈ ನಗರದಲ್ಲಿ ಲಾಕ್​ಡೌನ್​​ನಿಂದ ಬಸವಳಿದು ಹೋದ ಜನರು; ಆಹಾರ ಸಂರಕ್ಷಣೆಗಾಗಿ ಪರದಾಟ
ಪ್ರಾತಿನಿಧಿಕ ಚಿತ್ರ
TV9 Web
| Edited By: |

Updated on: Apr 06, 2022 | 12:18 PM

Share

ಚೆನ್ನೈನ ಹಣಕಾಸು ಕೇಂದ್ರ ಎಂದೇ ಖ್ಯಾತವಾಗಿರುವ ಶಾಂಘೈನಲ್ಲಿ ಕೊವಿಡ್​ 19 ಹೊಡೆತಕ್ಕೆ ಜನ ನಲುಗುತ್ತಿದ್ದಾರೆ. ಇಲ್ಲಿ ಕಠಿಣ ಲಾಕ್​ಡೌನ್​ ವಿಧಿಸಲಾಗಿದ್ದು, ಸೂಪರ್​ ಮಾರ್ಕೆಟ್​ಗಳು, ಮಾಲ್​ಗಳು ಬಂದ್​ ಆಗಿವೆ. ಮನೆಗೆ ಫುಡ್​, ಅಗತ್ಯ ವಸ್ತುಗಳ ಡಿಲೆವರಿ ಕೊಡುವ ವ್ಯವಸ್ಥೆಯನ್ನೂ ನಿರ್ಬಂಧಿಸಲಾಗಿದೆ. ಅಗತ್ಯ ವಸ್ತುಗಳು, ಆಹಾರ ಪದಾರ್ಥಗಳು ಸರಿಯಾಗಿ ಸಿಗದೆ ಕಷ್ಟಪಡುತ್ತಿರುವ ಅವರು ಆಹಾರ ಸಂರಕ್ಷಣೆಯನ್ನೂ ಮಾಡಿಕೊಳ್ಳಲಾಗದೆ ಪರದಾಡುತ್ತಿದ್ದಾರೆ. ಒಟ್ಟಾರೆ ಇಲ್ಲಿನ ಸುಮಾರು 26 ಮಿಲಿಯನ್​ ಜನರ ಜೀವನ ಅಸ್ತವ್ಯಸ್ತಗೊಂಡಿದೆ.  ಶಾಂಘೈನಲ್ಲಿ ಕೊರೊನಾ ಮಿತಿಮೀರಿದ ಹಿನ್ನೆಲೆಯಲ್ಲಿ ಸ್ಥಳೀಯ ಸರ್ಕಾರ ನಿಯಂತ್ರಣ ಕ್ರಮಗಳನ್ನು ಬಿಗಿ ಗೊಳಿಸಿದೆ. ಅಷ್ಟೇ ಅಲ್ಲ, ನಗರದಾದ್ಯಂತ ಕೊವಿಡ್​ 19 ತಪಾಸಣಾ ಅಭಿಯಾನ ನಡೆಯುತ್ತಿದೆ. ಅದು ಮುಗಿಯುವವರೆಗೂ ಲಾಕ್​ಡೌನ್​ ನಿಯಮಗಳನ್ನು ತೆಗೆದು ಹಾಕುವುದಿಲ್ಲ ಎಂದು ಇಂದು ಅಲ್ಲಿನ ಸರ್ಕಾರ ಪ್ರಕಟಣೆಯನ್ನೂ ಹೊರಡಿಸಿದೆ. 

ಜನರಿಗೆ ಬರೀ ಆಹಾರ, ಅಗತ್ಯವಸ್ತುಗಳ ಸಮಸ್ಯೆ ಮಾತ್ರವಲ್ಲ, ಮನೆಯಲ್ಲೇ ಇದ್ದು ಮಾನಸಿಕವಾಗಿಯೂ ಕುಗ್ಗಿ ಹೋಗುತ್ತಿದ್ದಾರೆ. ಕಠಿಣ ಲಾಕ್​ಡೌನ್​ ನಿಯಮ ಹೇರಿ ಈಗಾಗಲೇ 2 ವಾರಗಳ ಮೇಲಾಯಿತು. ಇದೆಲ್ಲದರಿಂದ ಬಸವಳಿದು ಹೋಗುತ್ತಿದ್ದಾರೆ. ಸ್ಥಳೀಯ ಆಡಳಿತದ ವಿರುದ್ಧ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ರೋಗಲಕ್ಷಣಗಳೇ ಇಲ್ಲದೆ ಕೊವಿಡ್ 19 ಪಾಸಿಟಿವ್​ ಆಗಿರುವ ರೋಗಿಗಳನ್ನು ಮನೆಯಲ್ಲೇ ಕ್ವಾರಂಟೈನ್​ ಮಾಡಬೇಕು ಎಂಬ ಆಗ್ರಹ ಹೆಚ್ಚುತ್ತಿದೆ. ಕೊರೊನಾ ಕಾಣಿಸಿಕೊಂಡಿರುವ ಮಕ್ಕಳನ್ನು ಅವರ ಪಾಲಕರಿಂದ ಪ್ರತ್ಯೇಕ ಮಾಡುತ್ತಿರುವ ಸರ್ಕಾರದ ಕ್ರಮಕ್ಕೆ ತೀವ್ರ ವಿರೋಧವೂ ವ್ಯಕ್ತವಾಗಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಶಾಂಘೈನಲ್ಲಿ ಮಂಗಳವಾರ 16,766 ಹೊಸ ಕೊರೊನಾ ಕೇಸ್​ಗಳು ದಾಖಲಾಗಿವೆ. ಹೀಗೆ ಪಾಸಿಟಿವ್​ ಬಂದವರಲ್ಲಿ ಯಾರಿಗೂ ಕೊರೊನಾದ ಲಕ್ಷಣಗಳಿಲ್ಲ. ಸೋಮವಾರ 13,086 ಕೇಸ್​ಗಳು ದಾಖಲಾಗಿದ್ದವು. ಮಂಗಳವಾರ 16ಸಾವಿರ ದಾಟಿವೆ. ಹಾಗೇ, ಲಕ್ಷಣಗಳುಳ್ಳ ಕೇಸ್​ಗಳು ಸೋಮವಾರ 268 ದಾಖಲಾಗಿದ್ದರೆ, ಮಂಗಳವಾರ 311ಕ್ಕೆ ಏರಿಕೆಯಾಗಿದೆ. ಇಷ್ಟೆಲ್ಲದ ಮಧ್ಯೆ ಈಗ ಹೇರಿರುವ ನಿರ್ಬಂಧಗಳು ಆರ್ಥಿಕತೆಯ ಮೇಲೆ ಪರಿಣಾಮ ಬೀರುತ್ತಿವೆ. ಅದರಲ್ಲೂ ಸಣ್ಣ ಪ್ರಮಾಣದ ಉದ್ಯಮಗಳಿಗೆ ತೀವ್ರ ಹೊಡೆತ ಕೊಡುತ್ತಿವೆ ಎಂದೂ ಹೇಳಲಾಗಿದೆ.

ಇದನ್ನೂ ಓದಿ: ಉರ್ದು ಮಾತಾಡಲು ನಿರಾಕರಿಸಿದ್ದಕ್ಕೆ ಕೊಲೆ ಮಾಡಲಾಗಿದೆ: ಮತೀಯ ತಿರುವು ಪಡೆದುಕೊಂಡ ಚಂದ್ರು ಹತ್ಯೆ ಪ್ರಕರಣ

Follow Us
ರೈಲ್ವೆ ನಿಲ್ದಾಣಗಳಲ್ಲಿ ಆಹಾರ ಸೇವಿಸುವವರೇ ಹುಷಾರ್: ವಿಡಿಯೋ ನೋಡಿ
ರೈಲ್ವೆ ನಿಲ್ದಾಣಗಳಲ್ಲಿ ಆಹಾರ ಸೇವಿಸುವವರೇ ಹುಷಾರ್: ವಿಡಿಯೋ ನೋಡಿ
ED ತನಿಖೆಯಲ್ಲಿ KPSC ಕರ್ಮಕಾಂಡ ಸ್ಫೋಟಕ ಸಂಗತಿ ಬಯಲು
ED ತನಿಖೆಯಲ್ಲಿ KPSC ಕರ್ಮಕಾಂಡ ಸ್ಫೋಟಕ ಸಂಗತಿ ಬಯಲು
‘ಟಾಕ್ಸಿಕ್’ ಸ್ವಾಗತಕ್ಕೆ ಸಿದ್ಧವಾಗಿವೆ ‘ರಾಕಿಂಗ್ ಸ್ಟಾರ್’ ಯಶ್ ಕಟೌಟ್​ಗಳು
‘ಟಾಕ್ಸಿಕ್’ ಸ್ವಾಗತಕ್ಕೆ ಸಿದ್ಧವಾಗಿವೆ ‘ರಾಕಿಂಗ್ ಸ್ಟಾರ್’ ಯಶ್ ಕಟೌಟ್​ಗಳು
ರೈಲ್ವೆ ನಿಲ್ದಾಣಗಳ ಆಹಾರ ಮಳಿಗೆಗಳಲ್ಲಿ ತಪಾಸಣೆ: ಯುಟಿ ಖಾದರ್ ಹೇಳಿದ್ದಿಷ್ಟು
ರೈಲ್ವೆ ನಿಲ್ದಾಣಗಳ ಆಹಾರ ಮಳಿಗೆಗಳಲ್ಲಿ ತಪಾಸಣೆ: ಯುಟಿ ಖಾದರ್ ಹೇಳಿದ್ದಿಷ್ಟು
ವಿಧಾನಸಭೆಯಲ್ಲಿ ಆಕ್ಷೇಪಾರ್ಹ ಪದ ಬಳಸಿದ ಸಚಿವ ಶಿವಲಿಂಗೇಗೌಡ
ವಿಧಾನಸಭೆಯಲ್ಲಿ ಆಕ್ಷೇಪಾರ್ಹ ಪದ ಬಳಸಿದ ಸಚಿವ ಶಿವಲಿಂಗೇಗೌಡ
KPSC Scam: ಇಡಿಯಿಂದಲೂ ಅಭ್ಯರ್ಥಿಗಳಿಗೆ ಟೆಸ್ಟ್
KPSC Scam: ಇಡಿಯಿಂದಲೂ ಅಭ್ಯರ್ಥಿಗಳಿಗೆ ಟೆಸ್ಟ್
ಮೌನದಿಂದಲೇ ಆಧ್ಯಾತ್ಮ: ರಾಷ್ಟ್ರಭಕ್ತಿ ಬಿತ್ತುವ ಹವಾ ಮಲ್ಲಿನಾಥ ಮಹಾರಾಜರು
ಮೌನದಿಂದಲೇ ಆಧ್ಯಾತ್ಮ: ರಾಷ್ಟ್ರಭಕ್ತಿ ಬಿತ್ತುವ ಹವಾ ಮಲ್ಲಿನಾಥ ಮಹಾರಾಜರು
ವರಮಹಾಲಕ್ಷ್ಮಿ ವ್ರತ:ಇಷ್ಟಾರ್ಥ ಸಿದ್ಧಿಗಾಗಿ ಪೂಜಾ ವಿಧಿವಿಧಾನಗಳ ಮಾರ್ಗದರ್ಶಿ
ವರಮಹಾಲಕ್ಷ್ಮಿ ವ್ರತ:ಇಷ್ಟಾರ್ಥ ಸಿದ್ಧಿಗಾಗಿ ಪೂಜಾ ವಿಧಿವಿಧಾನಗಳ ಮಾರ್ಗದರ್ಶಿ
ಚಿತ್ರರಂಗಕ್ಕೆ ಬಂದು 10 ವರ್ಷ, ಅಭಿಮಾನಿಗಳೊಟ್ಟಿಗೆ ನಟಿ ಆಶಿಕಾ ಸಂಭ್ರಮಾಚರಣೆ
ಚಿತ್ರರಂಗಕ್ಕೆ ಬಂದು 10 ವರ್ಷ, ಅಭಿಮಾನಿಗಳೊಟ್ಟಿಗೆ ನಟಿ ಆಶಿಕಾ ಸಂಭ್ರಮಾಚರಣೆ
ಹೊಳೆ ಆಲೂರು - ಅಮರಗೋಳ ರಸ್ತೆ ಸಂಪೂರ್ಣ ಅದ್ವಾನ
ಹೊಳೆ ಆಲೂರು - ಅಮರಗೋಳ ರಸ್ತೆ ಸಂಪೂರ್ಣ ಅದ್ವಾನ