AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಉಸಿರಿನಿಂದ ಕೊವಿಡ್ ಪರೀಕ್ಷೆ; ಕ್ಷಣ ಮಾತ್ರದಲ್ಲಿ ಫಲಿತಾಂಶ ಸಿಗುವ ಈ ಪರೀಕ್ಷೆಗೆ ಸಿಂಗಾಪುರ್ ಅನುಮೋದನೆ

Breath Test: ಸಿಂಗಾಪುರವು ಮಲೇಷ್ಯಾದಿಂದ ಒಳಬರುವ ಪ್ರಯಾಣಿಕರನ್ನು ದ್ವೀಪದ ಪಶ್ಚಿಮ ಭಾಗದಲ್ಲಿರುವ ಟುವಾಸ್ ಚೆಕ್‌ಪಾಯಿಂಟ್‌ನಲ್ಲಿ ಬ್ರೀಥಲೈಜರ್‌ಗಳನ್ನಿರಿಸಿ ಪ್ರಾಯೋಗಿಕ ಪರೀಕ್ಷೆ ನಡೆಸಿದೆ ಎಂದು ಸ್ಟ್ರೈಟ್ಸ್ ಟೈಮ್ಸ್ ವರದಿ ಮಾಡಿದೆ

ಉಸಿರಿನಿಂದ ಕೊವಿಡ್ ಪರೀಕ್ಷೆ; ಕ್ಷಣ ಮಾತ್ರದಲ್ಲಿ ಫಲಿತಾಂಶ ಸಿಗುವ ಈ ಪರೀಕ್ಷೆಗೆ ಸಿಂಗಾಪುರ್ ಅನುಮೋದನೆ
ಪ್ರಾತಿನಿಧಿಕ ಚಿತ್ರ
ರಶ್ಮಿ ಕಲ್ಲಕಟ್ಟ
|

Updated on:May 24, 2021 | 4:37 PM

Share

ಸಿಂಗಾಪುರ್: ಕೊವಿಡ್ -19 ಅನ್ನು ಪತ್ತೆಹಚ್ಚಲು ಮತ್ತು ಒಂದು ನಿಮಿಷದೊಳಗೆ ನಿಖರ ಫಲಿತಾಂಶಗಳನ್ನು ನೀಡಲು ವಿನ್ಯಾಸಗೊಳಿಸಲಾದ ಉಸಿರಾಟದ ಪರೀಕ್ಷೆಯನ್ನು (breath test) ಸಿಂಗಾಪುರದಲ್ಲಿ ಬಳಸಲು ಅನುಮೋದಿಸಲಾಗಿದೆ ಎಂದು ಸಿಂಗಾಪುರದ ರಾಷ್ಟ್ರೀಯ ವಿಶ್ವವಿದ್ಯಾಲಯ ಪ್ರಕಟಣೆಯಲ್ಲಿ ತಿಳಿಸಿದೆ. ಎನ್‌ಯುಎಸ್ ಸ್ಪಿನ್-ಆಫ್ ಸ್ಟಾರ್ಟ್ಅಪ್ ಬ್ರೀಥೋನಿಕ್ಸ್ ಅಭಿವೃದ್ಧಿಪಡಿಸಿದ ಈ ಪರೀಕ್ಷೆಯು ಸ್ಟ್ಯಾಂಡರ್ಡ್ ಬ್ರೀಥಲೈಜರ್ ಪರೀಕ್ಷೆಯಂತೆ ಕಾರ್ಯನಿರ್ವಹಿಸುತ್ತದೆ. ಇದು ಚಾಲಕ ಮದ್ಯ ಸೇವಿಸಿದ್ದಾನೆಯೇ ಎಂದು ಪತ್ತೆ ಹಚ್ಚಲು ಬಳಸುವ ಸಾಧನದಂತೆ ಕಾರ್ಯವೆಸಗುತ್ತದೆ. ಒಬ್ಬ ವ್ಯಕ್ತಿಯು ಏಕಮುಖ ಕವಾಟದಕ್ಕೆ ಊದಿದಾಗ ವ್ಯಕ್ತಿಯ ಉಸಿರಾಟದಲ್ಲಿನ ಕಣಗಳನ್ನು ಮೆಷೀನ್ ಲರ್ನಿಂಗ್ ಸಾಫ್ಟ್‌ವೇರ್‌ನಿಂದ ಹೋಲಿಸಲಾಗುತ್ತದೆ. ಇದನ್ನು ಬ್ರೀಥ್ ಸಿಗ್ನೇಚರ್ ಎನ್ನಲಾಗಿದೆ. ಸಾಮಾನ್ಯ ಬ್ರೀಥ್ ಸಿಗ್ನೆಚರ್ ಗಿಂತ ಇದು ಭಿನ್ನವಾಗಿದ್ದರೆ ಆ ವ್ಯಕ್ತಿಗೆ ಕೊವಿಡ್ ಪಾಸಿಟಿವ್ ಇದೆ ಎಂದರ್ಥ.

ಸಿಂಗಾಪುರವು ಮಲೇಷ್ಯಾದಿಂದ ಒಳಬರುವ ಪ್ರಯಾಣಿಕರನ್ನು ದ್ವೀಪದ ಪಶ್ಚಿಮ ಭಾಗದಲ್ಲಿರುವ ಟುವಾಸ್ ಚೆಕ್‌ಪಾಯಿಂಟ್‌ನಲ್ಲಿ ಬ್ರೀಥಲೈಜರ್‌ಗಳನ್ನಿರಿಸಿ ಪ್ರಾಯೋಗಿಕ ಪರೀಕ್ಷೆ ನಡೆಸಿದೆ ಎಂದು ಸ್ಟ್ರೈಟ್ಸ್ ಟೈಮ್ಸ್ ವರದಿ ಮಾಡಿದೆ. ಉಸಿರಾಟದ ಪರೀಕ್ಷೆಯಲ್ಲಿ ಪಾಸಿಟಿವ್ ಬಂದಿರುವ  ವ್ಯಕ್ತಿಯನ್ನು ಪಿಸಿಆರ್ ಸ್ವ್ಯಾಬ್ ಪರೀಕ್ಷೆಗೊಳಪಡಿಸಲಾಗುತ್ತದೆ.  ಸಿಂಗಾಪುರ್ ಪ್ರಸ್ತುತ ಆಂಟಿಜೆನ್ ಕ್ಷಿಪ್ರ ಪರೀಕ್ಷೆಗಳನ್ನು ನಡೆಸಿದ ನಂತರವೇ ಪ್ರವೇಶ ಅನುಮತಿಸುತ್ತಿದ್ದು ಅದರ ಜತೆಯಲ್ಲಿಯೇ ಬ್ರೀಥಲೈಜರ್‌ಗಳ ಪರೀಕ್ಷೆ ಮಾಡಲಾಗುತ್ತದೆ.

ಸಾಂಕ್ರಾಮಿಕ ಸಮಯದಲ್ಲಿ ಕ್ರಾಲ್ ಮಾಡಲು, ನಿಧಾನವಾಗಿ ಪ್ರಯಾಣ ವಲಯವನ್ನು ಅನ್ ಲಾಕ್ ಮಾಡಲು ಸಹಾಯ ಮಾಡುವ ವೇಗ ಮತ್ತು ನಿಖರವಾದ ಕೊವಿಡ್ ಪರೀಕ್ಷೆಗಳು ಮುಖ್ಯ ಪಾತ್ರ ವಹಿಸುತ್ತದೆ. ಅಮೆರಿಕ ಮತ್ತು ಯುರೋಪಿನ ಕೆಲವು ಭಾಗಗಳು ಹೆಚ್ಚಿನ ಪ್ರಕರಣಗಳೊಂದಿಗೆ ಮತ್ತೆ ತೆರೆಯಲು ಪ್ರಾರಂಭಿಸಿದರೂ ಸಹ, ಸಿಂಗಾಪುರ ಮತ್ತು ಏಷ್ಯಾದ ಇತರ “ಕೊವಿಡ್- ಜೀರೊ” ದೇಶಗಳು ಗಡಿಗಳನ್ನು ತೆರೆಯಲು ಹಿಂಜರಿಯುತ್ತಿವೆ. ಬ್ರೀಥೋನಿಕ್ಸ್ ಪರೀಕ್ಷೆಯು ಇಲ್ಲಿಯವರೆಗೆ ಮೂರು ಕ್ಲಿನಿಕಲ್ ಪ್ರಯೋಗಗಳಿಗೆ ಒಳಗಾಗಿದೆ.

ಸಿಂಗಾಪುರದಲ್ಲಿ ಎರಡು ಮತ್ತು ಇನ್ನೊಂದು ದುಬೈನಲ್ಲಿ ಈ ಕ್ಲಿನಿಕಲ್ ಪ್ರಯೋಗ ನಡೆದಿತ್ತು. 180 ರೋಗಿಗಳನ್ನು ಒಳಗೊಂಡ ಒಂದು ಆರಂಭಿಕ ಅಧ್ಯಯನದಲ್ಲಿ ಇದು 93% ನಷ್ಟು ಸೂಕ್ಷ್ಮತೆಯನ್ನು ಮತ್ತು 95% ನಷ್ಟು ನಿಖರತೆಯನ್ನು ಸಾಧಿಸಿದೆ.

ಇದನ್ನೂ ಓದಿ: ಕೊವಿಡ್ 3ನೇ ಅಲೆಯಿಂದ ಮಕ್ಕಳಿಗೆ ಹೆಚ್ಚಿನ ಅಪಾಯ, ಭಾರತದಲ್ಲಿ ತಯಾರಿಸಿದ ಮೂಗಿಗೆ ಹಾಕುವ ಲಸಿಕೆ ಗೇಮ್ ಚೇಂಜರ್; ಆಗುವ ಸಾಧ್ಯತೆ: ಸೌಮ್ಯ ಸ್ವಾಮಿನಾಥನ್

Singapore Strain: ದೆಹಲಿ ಸಿಎಂ ಹೇಳಿಕೆಗೆ ಸಿಂಗಾಪುರ್ ಆಕ್ಷೇಪ; ಅರವಿಂದ ಕೇಜ್ರಿವಾಲ್ ಭಾರತದ ಪರ ಮಾತಾಡಿಲ್ಲ ಎಂದ ಕೇಂದ್ರ ಸರ್ಕಾರ

Published On - 4:36 pm, Mon, 24 May 21

ಸಿಎಂ ವಿರುದ್ಧ ಬರ್ಮಣಿ ದೂರು ಸಲ್ಲಿಸಿದ್ದರೆ ಚೆನ್ನಾಗಿರುತಿತ್ತು: ಯತ್ನಾಳ್
ಸಿಎಂ ವಿರುದ್ಧ ಬರ್ಮಣಿ ದೂರು ಸಲ್ಲಿಸಿದ್ದರೆ ಚೆನ್ನಾಗಿರುತಿತ್ತು: ಯತ್ನಾಳ್
‘ರಾಮಾಯಣ’ ಗ್ಲಿಂಪ್ಸ್ ನೋಡಿದ ಅಭಿಮಾನಿಗಳು ಹೇಳಿದ್ದೇನು? ವಿಡಿಯೋ ನೋಡಿ
‘ರಾಮಾಯಣ’ ಗ್ಲಿಂಪ್ಸ್ ನೋಡಿದ ಅಭಿಮಾನಿಗಳು ಹೇಳಿದ್ದೇನು? ವಿಡಿಯೋ ನೋಡಿ
ಎಕ್ಸ್​ಟ್ರಾ ಕಾಫಿ ಕಪ್​ಗಾಗಿ ಗಲಾಟೆ: ಹೋಟೆಲ್‌ ಸಿಬ್ಬಂದಿ ಮೇಲೆ ಹಲ್ಲೆ!
ಎಕ್ಸ್​ಟ್ರಾ ಕಾಫಿ ಕಪ್​ಗಾಗಿ ಗಲಾಟೆ: ಹೋಟೆಲ್‌ ಸಿಬ್ಬಂದಿ ಮೇಲೆ ಹಲ್ಲೆ!
ಸುಖಾಸುಮ್ಮನೆ ಹೇಳಿಕೆ ನೀಡುವ ರಾಜಕಾರಣಿಗೆ ಯದುವೀರ್ ಮಾದರಿ
ಸುಖಾಸುಮ್ಮನೆ ಹೇಳಿಕೆ ನೀಡುವ ರಾಜಕಾರಣಿಗೆ ಯದುವೀರ್ ಮಾದರಿ
ಸ್ವಯಂ ನಿವೃತ್ತಿ ಬಗ್ಗೆ ಎಎಸ್​ಪಿ ನಾರಾಯಣ ಭರಮನಿ ಮೊದಲ ಪ್ರತಿಕ್ರಿಯೆ
ಸ್ವಯಂ ನಿವೃತ್ತಿ ಬಗ್ಗೆ ಎಎಸ್​ಪಿ ನಾರಾಯಣ ಭರಮನಿ ಮೊದಲ ಪ್ರತಿಕ್ರಿಯೆ
ಕೋವಿಡ್ ಲಸಿಕೆ ಪಡೆದವರಲ್ಲಿ ಹೃದಯಾಘಾತ ಅಪಾಯ ಕಡಿಮೆ: ಡಾ. ಮೋಹಿತ್ ಗುಪ್ತಾ
ಕೋವಿಡ್ ಲಸಿಕೆ ಪಡೆದವರಲ್ಲಿ ಹೃದಯಾಘಾತ ಅಪಾಯ ಕಡಿಮೆ: ಡಾ. ಮೋಹಿತ್ ಗುಪ್ತಾ
ಸಂಪುಟ ಸಭೆಯನ್ನು ಬೇರೆ ಬೇರೆ ಸ್ಥಳಗಳಲ್ಲಿ ನಡೆಸುವುದು ದುಂದು ವೆಚ್ಚವಲ್ಲವೇ?
ಸಂಪುಟ ಸಭೆಯನ್ನು ಬೇರೆ ಬೇರೆ ಸ್ಥಳಗಳಲ್ಲಿ ನಡೆಸುವುದು ದುಂದು ವೆಚ್ಚವಲ್ಲವೇ?
ಸಂವೇದನೆಯಿಲ್ಲದ, ಸೂಕ್ಷ್ಮತೆ ಗೊತ್ತಿರದ ಸಿಬ್ಬಂದಿಯಿಂದ ಸಮೀಕ್ಷೆ ಬೇಕಿತ್ತೇ?
ಸಂವೇದನೆಯಿಲ್ಲದ, ಸೂಕ್ಷ್ಮತೆ ಗೊತ್ತಿರದ ಸಿಬ್ಬಂದಿಯಿಂದ ಸಮೀಕ್ಷೆ ಬೇಕಿತ್ತೇ?
ಎಲ್ಲ ಮಂತ್ರಿಗಳು ಒಂದೇ ವಾಕ್ಯವನ್ನು ಪುನರಾವರ್ತಿಸುತ್ತಿದ್ದಾರೆ
ಎಲ್ಲ ಮಂತ್ರಿಗಳು ಒಂದೇ ವಾಕ್ಯವನ್ನು ಪುನರಾವರ್ತಿಸುತ್ತಿದ್ದಾರೆ
VIDEO: ಪಂದ್ಯದ ವೇಳೆ ಮೈದಾನಕ್ಕೆ ನುಗ್ಗಿದ ಹಾವು... ಆಮೇಲೇನಾಯ್ತು?
VIDEO: ಪಂದ್ಯದ ವೇಳೆ ಮೈದಾನಕ್ಕೆ ನುಗ್ಗಿದ ಹಾವು... ಆಮೇಲೇನಾಯ್ತು?