AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Happiest Countries in the World: ವಿಶ್ವದ ಅತ್ಯಂತ ಸಂತೋಷಭರಿತ 10 ರಾಷ್ಟ್ರಗಳಿವು, ಭಾರತಕ್ಕೆ ಎಷ್ಟನೇ ಸ್ಥಾನ?

ವಿಶ್ವಸಂಸ್ಥೆಯು ವಿಶ್ವದ ಅತ್ಯಂತ ಸಂತೋಷಭರಿತ ದೇಶಗಳ ಮಾಹಿತಿಯನ್ನು ಬಿಡುಗಡೆ ಮಾಡಿದೆ. ಅದರ ಪ್ರಕಾರ ವಿಶ್ವದ ಅತ್ಯಂತ ಸಂತೋಷಭರಿತ ದೇಶಗಳ ಪೈಕಿ 10 ರಲ್ಲಿ 8 ದೇಶಗಳು ಯುರೋಪಿಯನ್ ರಾಷ್ಟ್ರಗಳಾಗಿವೆ.

Happiest Countries in the World: ವಿಶ್ವದ ಅತ್ಯಂತ ಸಂತೋಷಭರಿತ 10 ರಾಷ್ಟ್ರಗಳಿವು, ಭಾರತಕ್ಕೆ ಎಷ್ಟನೇ ಸ್ಥಾನ?
ಫಿನ್​ಲೆಂಡ್Image Credit source: Visit Finland
ನಯನಾ ರಾಜೀವ್
|

Updated on: Mar 21, 2023 | 10:54 AM

Share

ವಿಶ್ವಸಂಸ್ಥೆಯು ವಿಶ್ವದ ಅತ್ಯಂತ ಸಂತೋಷಭರಿತ ದೇಶಗಳ ಮಾಹಿತಿಯನ್ನು ಬಿಡುಗಡೆ ಮಾಡಿದೆ. ಅದರ ಪ್ರಕಾರ ವಿಶ್ವದ ಅತ್ಯಂತ ಸಂತೋಷಭರಿತ ದೇಶಗಳ ಪೈಕಿ 10 ರಲ್ಲಿ 8 ದೇಶಗಳು ಯುರೋಪಿಯನ್ ರಾಷ್ಟ್ರಗಳಾಗಿವೆ. ಯುನೈಟೆಡ್ ನೇಷನ್ಸ್ ಸಸ್ಟೈನೇಬಲ್ ಡೆವಲಪ್​ಮೆಂಟ್ ಸಲ್ಯೂಷನ್ಸ್​ ನೆಟ್​ವರ್ಕ್ ಪ್ರಕಟಿಸಿರುವ ವರ್ಲ್ಡ್​ ಹ್ಯಾಪಿನೆಸ್ ರಿಪೋರ್ಟ್​ ಪ್ರಕಾರ, ಫೆನ್​ಲೆಂಡ್ ಜಗತ್ತಿನ ಅತ್ಯಂತ ಸಂತೋಷಭರಿತ ದೇಶ, ವಿಶೇಷವೆಂದರೆ ಸತತ ಆರನೇ ವರ್ಷವೂ ಈ ದೇಶ ಪ್ರಥಮ ಸ್ಥಾನ ಪಡೆದಿದೆ.

ಎರಡು ಹಾಗೂ ಮೂರನೇ ಸ್ಥಾನ ಕ್ರಮವಾಗಿ ಡೆನ್ಮಾರ್ಕ್​ ಮತ್ತು ಐಲೆಂಡ್ ಪಡೆದುಕೊಂಡಿದೆ. ದೇಶದ ಜನರ ಆರೋಗ್ಯ, ಆದಾಯ, ಜನರ ಸ್ಪಂದನೆ, ಜನರು ಜೀವನದ ಕುರಿತ ನಿರ್ಣಯ ತೆಗೆದುಕೊಳ್ಳುವಲ್ಲಿ ಸ್ವಾತಂತ್ರ್ಯ, ಜನತೆಗೆ ಔದಾರ್ಯ ಮತ್ತು ಭ್ರಷ್ಟಾಚಾರರಹಿತ ವಾತಾವರಣ ಮುಂತಾದವುಗಳನ್ನು ಪರಿಗಣನೆಗೆ ತೆಗೆದುಕೊಳ್ಳಲಾಗಿದೆ.

ಮತ್ತಷ್ಟು ಓದಿ: ಸ್ವಾಮಿ ನಿತ್ಯಾನಂದನ ನಕಲಿ ಕೈಲಾಸದೊಂದಿಗೆ ಅಮೆರಿಕದ 30 ನಗರಗಳು ಕೈಜೋಡಿಸಿವೆಯಂತೆ! ನಿತ್ಯಾನಂದನ ವಂಚನೆ ಪುರಾಣ ಕೇಳಿ ಬೇಸ್ತು ಬಿದ್ದ ಅಮೆರಿಕನ್ನರು!

ಸಂತೋಷದ ಶ್ರೇಯಾಂಕದಲ್ಲಿ ಸ್ವೀಡನ್ ಆರನೇ ಸ್ಥಾನದಲ್ಲಿದೆ, ನಾರ್ವೆ ಏಳನೇ, ಸ್ವಿಟ್ಜರ್ಲೆಂಡ್ ಎಂಟನೇ, ಲಕ್ಸೆಂಬರ್ಗ್ ಒಂಬತ್ತನೇ ಮತ್ತು ನ್ಯೂಜಿಲೆಂಡ್ 10 ನೇ ಸ್ಥಾನದಲ್ಲಿದೆ. ಇವುಗಳಲ್ಲಿ ಯಾವುದೂ ಏಷ್ಯಾದ ದೇಶವಲ್ಲ. ಈ ಪಟ್ಟಿಯಲ್ಲಿ ಅಮೆರಿಕ 15ನೇ ಸ್ಥಾನದಲ್ಲಿದ್ದು, ಬ್ರಿಟನ್ 19ನೇ ಸ್ಥಾನದಲ್ಲಿದೆ.

ನಾವು ಭಾರತದ ಬಗ್ಗೆ ಮಾತನಾಡಿದರೆ, ಸಂತೋಷದ ದೇಶಗಳ ಶ್ರೇಯಾಂಕದಲ್ಲಿ ಅದು ತುಂಬಾ ಹಿಂದುಳಿದಿದೆ. ಭಾರತವು 150 ದೇಶಗಳಲ್ಲಿ 136 ನೇ ಸ್ಥಾನದಲ್ಲಿದೆ. ಆದರೆ, ಕಳೆದ ಬಾರಿ 139ನೇ ಸ್ಥಾನದಲ್ಲಿದ್ದ ಭಾರತದ ಶ್ರೇಯಾಂಕ ಸುಧಾರಿಸಿದೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಗ್ರಾಮಸ್ಥರ ಮೇಲೆ ಏಕಾಏಕಿ ದಾಳಿ ಮಾಡಿದ ಹೆಜ್ಜೇನು
ಗ್ರಾಮಸ್ಥರ ಮೇಲೆ ಏಕಾಏಕಿ ದಾಳಿ ಮಾಡಿದ ಹೆಜ್ಜೇನು
60 ಲಕ್ಷ ರೂ ಮೌಲ್ಯದ ಮೆಕ್ಕೆಜೋಳಕ್ಕೆ ಬೆಂಕಿಯಿಟ್ಟ ದುಷ್ಕರ್ಮಿಗಳು
60 ಲಕ್ಷ ರೂ ಮೌಲ್ಯದ ಮೆಕ್ಕೆಜೋಳಕ್ಕೆ ಬೆಂಕಿಯಿಟ್ಟ ದುಷ್ಕರ್ಮಿಗಳು
ಕಾಶ್ಮೀರದ ಹೈವೇಯಲ್ಲಿ ಪರ್ವತ ಕುಸಿತ; ಶ್ರೀನಗರ-ಬಾರಾಮುಲ್ಲಾ ಮಾರ್ಗ ಬಂದ್
ಕಾಶ್ಮೀರದ ಹೈವೇಯಲ್ಲಿ ಪರ್ವತ ಕುಸಿತ; ಶ್ರೀನಗರ-ಬಾರಾಮುಲ್ಲಾ ಮಾರ್ಗ ಬಂದ್
ಜನಾರ್ದನ ರೆಡ್ಡಿ ಮನೆಯತ್ತಲೇ ಫೈರ್ ಮಾಡಿದ್ದ ಖಾಸಗಿ ಗನ್​ಮ್ಯಾನ್
ಜನಾರ್ದನ ರೆಡ್ಡಿ ಮನೆಯತ್ತಲೇ ಫೈರ್ ಮಾಡಿದ್ದ ಖಾಸಗಿ ಗನ್​ಮ್ಯಾನ್
ಸಚಿವ ಜಮೀರ್ 2ನೇ ಟಿಪ್ಪು ಸುಲ್ತಾನ್ ಎಂದ ಪ್ರಮೋದ್ ಮುತಾಲಿಕ್
ಸಚಿವ ಜಮೀರ್ 2ನೇ ಟಿಪ್ಪು ಸುಲ್ತಾನ್ ಎಂದ ಪ್ರಮೋದ್ ಮುತಾಲಿಕ್
ಬ್ಯಾನರ್​​​ ಕಿತ್ತಾಟದಲ್ಲಿ ಅಮಾಯಕ ಕಾರ್ಯಕರ್ತ ಬಲಿ, ಹೆಗಲು ಕೊಟ್ಟ ಶಾಸಕರು
ಬ್ಯಾನರ್​​​ ಕಿತ್ತಾಟದಲ್ಲಿ ಅಮಾಯಕ ಕಾರ್ಯಕರ್ತ ಬಲಿ, ಹೆಗಲು ಕೊಟ್ಟ ಶಾಸಕರು
ಬ್ಯಾನರ್​​ ಗಲಾಟೆ ವೇಳೆ ಫೈರಿಂಗ್​: ಸ್ಫೋಟಕ ಸಾಕ್ಷಿಕೊಟ್ಟ ಶ್ರೀರಾಮುಲು
ಬ್ಯಾನರ್​​ ಗಲಾಟೆ ವೇಳೆ ಫೈರಿಂಗ್​: ಸ್ಫೋಟಕ ಸಾಕ್ಷಿಕೊಟ್ಟ ಶ್ರೀರಾಮುಲು
ಗುಂಡೇಟಿಗೆ ಕಾಂಗ್ರೆಸ್ ಕಾರ್ಯಕರ್ತ ಸಾವು: ಸಿಎಂ ಫಸ್ಟ್ ರಿಯಾಕ್ಷನ್
ಗುಂಡೇಟಿಗೆ ಕಾಂಗ್ರೆಸ್ ಕಾರ್ಯಕರ್ತ ಸಾವು: ಸಿಎಂ ಫಸ್ಟ್ ರಿಯಾಕ್ಷನ್
ಬೈಕ್‌ನಲ್ಲಿ ಬಂದು ಕ್ಷಣಾರ್ಧದಲ್ಲಿ ಮೊಬೈಲ್ ಕಿತ್ತು ಪರಾರಿ!
ಬೈಕ್‌ನಲ್ಲಿ ಬಂದು ಕ್ಷಣಾರ್ಧದಲ್ಲಿ ಮೊಬೈಲ್ ಕಿತ್ತು ಪರಾರಿ!
ಗಣಿದಣಿಗೆ ಭರತ್​​ ರೆಡ್ಡಿ ಓಪನ್​ ಚಾಲೆಂಜ್​​: 'ಕೈ​​' ಶಾಸಕ ಹೇಳಿದ್ದೇನು?
ಗಣಿದಣಿಗೆ ಭರತ್​​ ರೆಡ್ಡಿ ಓಪನ್​ ಚಾಲೆಂಜ್​​: 'ಕೈ​​' ಶಾಸಕ ಹೇಳಿದ್ದೇನು?