AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Sri Lanka: ಐಎಂಎಫ್​ನಿಂದ ಶ್ರೀಲಂಕಾಗೆ ಮತ್ತೆ ನೆರವು; 25,000 ಕೋಟಿ ರೂ ಸಾಲಕ್ಕೆ ಅನುಮೋದನೆ

IMF Loan To Sri Lanka: ಶ್ರೀಲಂಕಾದ ಆರ್ಥಿಕತೆಗೆ ಪುಷ್ಟಿ ಕೊಡಲು 3 ಬಿಲಿಯನ್ ಡಾಲರ್ ಹಣವನ್ನು ನಾಲ್ಕು ವರ್ಷಗಳಲ್ಲಿ ಹಂತ ಹಂತವಾಗಿ ಐಎಂಎಫ್ ಬಿಡುಗಡೆ ಮಾಡಲಿದೆ. ಸದ್ಯ 333 ಮಿಲಿಯನ್ ಡಾಲರ್ ಹಣವನ್ನು ತತ್​ಕ್ಷಣದ ಬಳಕೆಗೆಂದು ಲಂಕಾಗೆ ಕೊಡಲಿದೆ.

Sri Lanka: ಐಎಂಎಫ್​ನಿಂದ ಶ್ರೀಲಂಕಾಗೆ ಮತ್ತೆ ನೆರವು; 25,000 ಕೋಟಿ ರೂ ಸಾಲಕ್ಕೆ ಅನುಮೋದನೆ
ಶ್ರೀಲಂಕಾ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Mar 21, 2023 | 12:54 PM

Share

ಕೊಲಂಬೋ: ಹಣಕಾಸು ಮತ್ತು ಆರ್ಥಿಕ ಮುಗ್ಗಟ್ಟಿಗೆ ಸಿಲುಕಿರುವ ಶ್ರೀಲಂಕಾಗೆ ಐಎಂಎಫ್ (IMF- International Monetary Fund) ಮತ್ತೊಮ್ಮೆ ನೆರವಿನ ಹಸ್ತ ಚಾಚಿದೆ. ಶ್ರೀಲಂಕಾಗೆ 3 ಬಿಲಿಯನ್ ಡಾಲರ್ (ಸುಮಾರು 25 ಸಾವಿರ ಕೋಟಿ ರುಪಾಯಿ) ಸಹಾಯದನವನ್ನು ಬಿಡುಗಡೆ ಮಾಡಲು ಅಂತರರಾಷ್ಟ್ರೀಯ ಹಣಕಾಸು ನಿಧಿಯ ಕಾರ್ಯಕಾರಿ ಮಂಡಳಿ (IMF Executive Board) ಮಾರ್ಚ್ 20ರಂದು ಅನುಮೋದನೆ ನೀಡಿದೆ. ಶ್ರೀಲಂಕಾದ ಆರ್ಥಿಕತೆಗೆ ಪುಷ್ಟಿ ಕೊಡಲು ಈ ಹಣವನ್ನು ನಾಲ್ಕು ವರ್ಷಗಳಲ್ಲಿ ಹಂತ ಹಂತವಾಗಿ ಐಎಂಎಫ್ ಬಿಡುಗಡೆ ಮಾಡಲಿದೆ. ಸದ್ಯ 333 ಮಿಲಿಯನ್ ಡಾಲರ್ (ಸುಮಾರು 2,750 ಕೋಟಿ ರುಪಾಯಿ) ಹಣವನ್ನು ತತ್​ಕ್ಷಣದ ಬಳಕೆಗೆಂದು ಲಂಕಾಗೆ ಕೊಡಲಿದೆ.

ಶ್ರೀಲಂಕಾ ಕೆಲವಾರು ವರ್ಷಗಳಿಂದ ಆರ್ಥಿಕ ಸಂಕಷ್ಟದ ಸ್ಥಿತಿಯಲ್ಲಿ ಸಿಲುಕಿದೆ. ವಿಪರೀತ ಹಣದುಬ್ಬರ, ದೊಡ್ಡ ಪ್ರಮಾಣದಲ್ಲಿ ಸಾಲ, ಫಾರೆಕ್ಸ್ ರಿಸರ್ವ್ ನಿಧಿಯಲ್ಲಿ ಭಾರೀ ಕುಸಿತಗೊಂಡು ಶ್ರೀಲಂಕಾ ಆರ್ಥಿಕವಾಗಿ ಮಾತ್ರವಲ್ಲ, ಸಾಮಾಜಿಕವಾಗಿಯೂ ಭಾರೀ ಸಮಸ್ಯೆಗೆ ಸಿಲುಕಿದೆ. ಲಂಕಾದ ಆಡಳಿತ ಸಂಸ್ಥೆಗಳಲ್ಲಿ ಬಹಳ ಹೆಚ್ಚು ಸುಧಾರಣೆ ಆಗಬೇಕಿದೆ ಎಂದು ಐಎಂಎಫ್​ನ ಮ್ಯಾನೇಜಿಂಗ್ ಡೈರೆಕ್ಟರ್ ಕ್ರಿಸ್ಟಾಲಿನಾ ಜಾರ್ಜಿಯೆವಾ ಹೇಳಿದ್ದಾರೆ.

ಐಎಂಎಫ್​ನಿಂದ ಈಗ 3 ಬಿಲಿಯನ್ ಡಾಲರ್ ನೆರವಿನ ಯೋಜನೆ ಬಿಡುಗಡೆ ಆಗಿರುವುದು ಶ್ರೀಲಂಕಾಗೆ ಇನ್ನಷ್ಟು ಅಂತಾರಾಷ್ಟ್ರೀಯ ನೆರವು ಸಿಗಲು ಕಾರಣವಾಗಲಿದೆ. ಇತರ ಜಾಗತಿಕ ಹಣಕಾಸು ಸಂಸ್ಥೆಗಳೂ ಶ್ರೀಲಂಕಾಗೆ ಸಾಲ ಒದಗಿಸುವ ಸಾಧ್ಯತೆ ಇದೆ. ಐಎಂಎಫ್​ನದ್ದೂ ಸೇರಿ ಲಂಕಾಗೆ ಒಟ್ಟು 7 ಬಿಲಿಯನ್ ಡಾಲರ್ (ಸುಮಾರು 57,000 ಕೋಟಿ ರುಪಾಯಿ) ಮೊತ್ತದಷ್ಟು ನೆರವು ಹರಿದುಬರುವ ನಿರೀಕ್ಷೆ ಇದೆ.

ಇದನ್ನೂ ಓದಿ: Amazon Layoffs: ಅಮೇಜಾನ್​ನಿಂದ ಇನ್ನಷ್ಟು 9,000 ಮಂದಿ ಮನೆಗೆ; ಈ ವರ್ಷ ಕೆಲಸ ಕಳೆದುಕೊಳ್ಳುವವರ ಸಂಖ್ಯೆ 27 ಸಾವಿರ

ಐಎಂಎಫ್ ಸಾಲ ಸಿಗಬೇಕೆಂದರೆ ಶ್ರೀಲಂಕಾ ತನ್ನ ನೀತಿಯಲ್ಲಿ ಒಂದಷ್ಟು ಪ್ರಮುಖ ಬದಲಾವಣೆಗಳನ್ನು ಮಾಡುವುದು ಅಗತ್ಯ ಇತ್ತು. ತೆರಿಗೆ ಹೆಚ್ಚಳ, ಸಬ್ಸಿಡಿ ಕಡಿತ ಇತ್ಯಾದಿ ಕ್ರಮಗಳನ್ನು ಸರ್ಕಾರ ತೆಗೆದುಕೊಳ್ಳಬೇಕೆಂಬುದು ಐಎಂಎಫ್ ವಿಧಿಸುವ ಪ್ರಮುಖ ಷರತ್ತುಗಳಲ್ಲಿದೆ. ಅಂತೆಯೇ, ರಾನಿಲ್ ವಿಕ್ರಮಸಿಂಘೆ ಪ್ರಧಾನಿಯಾದ ಬಳಿಕ ಶ್ರೀಲಕಾದಲ್ಲಿ ಆದಾಯ ತೆರಿಗೆಗಳನ್ನು ಗಮನಾರ್ಹ ಮಟ್ಟಕ್ಕೆ ಏರಿಸಲಾಗಿದೆ. ವಿದ್ಯುತ್ ಮತ್ತು ಪೆಟ್ರೋಲ್ ಮೇಲಿನ ಸಬ್ಸಿಡಿಗಳನ್ನು ಹಿಂಪಡೆಯಲಾಗಿದೆ. ಹೀಗಾಗಿ, ಶ್ರೀಲಂಕಾಗೆ ಐಎಂಎಫ್ ಸಾಲ ಬೇಗ ಸಿಕ್ಕಲು ಸಾಧ್ಯವಾಗಿದೆ.

ಇದು ಶ್ರೀಲಂಕಾಗೆ ಐಎಂಎಫ್ ನೀಡಿದ 17ನೇ ಸಾಲ ಯೋಜನೆಯಾಗಿದೆ. ಮುಂದಿನ ದಿನಗಳಲ್ಲಿ ಈ ಸಾಲದ ಹಣ ಬಳಸಿ ಹೇಗೆ ಆರ್ಥಿಕತೆಗೆ ಚೇತರಿಕೆ ತರುವುದು ಎಂಬುದು ಶ್ರೀಲಂಕಾ ಮುಂದಿರುವ ಸವಾಲಾಗಿದೆ. ಹಾಗೆಯೇ, ಈ ಅಂತಾರಾಷ್ಟ್ರೀಯ ಸಾಲವನ್ನು ಶ್ರೀಲಂಕಾಗೆ ಹೇಗೆ ಮರುಪಾವತಿ ಮಾಡುತ್ತದೆ ಎಂಬುದೂ ಪ್ರಶ್ನೆ.

ಇದನ್ನೂ ಓದಿAadhaar: ವ್ಯಕ್ತಿ ಸತ್ತ ಬಳಿಕ ಆತನ ಆಧಾರ್ ಕಾರ್ಡ್ ಏನಾಗುತ್ತದೆ? ಸ್ವಯಂ ಆಗಿ ನಿಷ್ಕ್ರಿಯಗೊಳ್ಳುವ ವ್ಯವಸ್ಥೆ ಬರುತ್ತಿದೆಯಾ?

ಇನ್ನೊಂದೆಡೆ ಪಾಕಿಸ್ತಾನ ಕೂಡ ಶ್ರೀಲಂಕಾ ರೀತಿಯಲ್ಲೇ ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿದೆ. ಐಎಂಎಫ್​ನಿಂದ ಸಾಲ ಮಂಜೂರಾತಿಯಾದರೂ ಹಣ ಬಿಡುಗಡೆ ಆಗುತ್ತಿಲ್ಲ. ಪಾಕಿಸ್ತಾನಕ್ಕೆ ಒಂದು ರೀತಿ ಕೈಗೆ ಬಂದ ತುತ್ತು ಬಾಯಿಗೆ ಬರುತ್ತಿಲ್ಲ ಎನ್ನುವಂತಾಗಿದೆ. ಐಎಂಎಫ್ ನಿರೀಕ್ಷಿಸಿದ ರೀತಿಯಲ್ಲಿ ಪಾಕಿಸ್ತಾನದಲ್ಲಿ ಆರ್ಥಿಕ ಕ್ರಮಗಳನ್ನು ಕೈಗೊಳ್ಳುವುದು ವಿಳಂಬವಾಗಿ. ಹೀಗಾಗಿ, ಪಾಕಿಸ್ತಾನಕ್ಕೆ ಐಎಂಎಫ್ ಹಣ ಬಿಡುಗಡೆ ಮಾಡುತ್ತಿಲ್ಲ. ಇತ್ತೀಚಿನ ಕೆಲ ದಿನಗಳಿಂದ ಪಾಕಿಸ್ತಾನದ ಆರ್ಥಿಕ ಕ್ರಮಗಳು ಐಎಂಎಫ್​ಎ ಸಮಾಧಾನ ತಂದಿದೆ. ಸದ್ಯದಲ್ಲೇ ಹಣ ಬಿಡುಗಡೆ ಆಗುವ ನಿರೀಕ್ಷೆ ಇದೆ ಎನ್ನಲಾಗುತ್ತಿದೆ.

ಇನ್ನಷ್ಟು ಅಂತರರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಇನ್ನಷ್ಟು ವ್ಯವಹಾರ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ರಾಯ್ ಆತ್ಮಹತ್ಯೆ ತನಿಖೆ ಬಗ್ಗೆ ಗೃಹ ಸಚಿವ ಪರಮೇಶ್ವರ್ ಹೇಳಿದ್ದೇನು?
ರಾಯ್ ಆತ್ಮಹತ್ಯೆ ತನಿಖೆ ಬಗ್ಗೆ ಗೃಹ ಸಚಿವ ಪರಮೇಶ್ವರ್ ಹೇಳಿದ್ದೇನು?
ವೆಸ್ಟ್ ಇಂಡೀಸ್ ಸ್ಕೋರ್ 114 ರನ್: 118 ರನ್ ಬಾರಿಸಿ ಸೋತ ಸೌತ್ ಆಫ್ರಿಕಾ
ವೆಸ್ಟ್ ಇಂಡೀಸ್ ಸ್ಕೋರ್ 114 ರನ್: 118 ರನ್ ಬಾರಿಸಿ ಸೋತ ಸೌತ್ ಆಫ್ರಿಕಾ
ಮಹಿಳಾ ಸಬಲೀಕರಣ ಮತ್ತು ಉದ್ಯೋಗ ಸೃಷ್ಟಿಗೆ ವಿಶೇಷ ಒತ್ತು
ಮಹಿಳಾ ಸಬಲೀಕರಣ ಮತ್ತು ಉದ್ಯೋಗ ಸೃಷ್ಟಿಗೆ ವಿಶೇಷ ಒತ್ತು
ಚಲನಚಿತ್ರ ವಾಣಿಜ್ಯ ಮಂಡಳಿ ನೂತನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಜಯಮಾಲಾ
ಚಲನಚಿತ್ರ ವಾಣಿಜ್ಯ ಮಂಡಳಿ ನೂತನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಜಯಮಾಲಾ
ಕೇಂದ್ರ ಬಜೆಟ್‌ ಮಂಡನೆ ನೇರಪ್ರಸಾರವನ್ನು ಇಲ್ಲಿ ವೀಕ್ಷಿಸಿ
ಕೇಂದ್ರ ಬಜೆಟ್‌ ಮಂಡನೆ ನೇರಪ್ರಸಾರವನ್ನು ಇಲ್ಲಿ ವೀಕ್ಷಿಸಿ
ಒಂದೇ ಪಂದ್ಯದಲ್ಲಿ ಬರೋಬ್ಬರಿ 11 ವಿಕೆಟ್ ಕಬಳಿಸಿದ ಶಹಬಾಝ್ ಅಹ್ಮದ್
ಒಂದೇ ಪಂದ್ಯದಲ್ಲಿ ಬರೋಬ್ಬರಿ 11 ವಿಕೆಟ್ ಕಬಳಿಸಿದ ಶಹಬಾಝ್ ಅಹ್ಮದ್
ಮಾಘ ಹುಣ್ಣಿಮೆ: ಕಾವೇರಿ ತ್ರಿವೇಣಿ ಸಂಗಮದಲ್ಲಿ ಪುಣ್ಯ ಸ್ನಾನಕ್ಕೆ ಭಕ್ತಸಾಗರ
ಮಾಘ ಹುಣ್ಣಿಮೆ: ಕಾವೇರಿ ತ್ರಿವೇಣಿ ಸಂಗಮದಲ್ಲಿ ಪುಣ್ಯ ಸ್ನಾನಕ್ಕೆ ಭಕ್ತಸಾಗರ
ನಿರ್ಮಲಾ ಸೀತಾರಾಮನ್​​​​​ಗೆ ಚಾರ್ಕೋಲ್ ಸ್ಕೆಚ್ ಮೂಲಕ ಸ್ವಾಗತ
ನಿರ್ಮಲಾ ಸೀತಾರಾಮನ್​​​​​ಗೆ ಚಾರ್ಕೋಲ್ ಸ್ಕೆಚ್ ಮೂಲಕ ಸ್ವಾಗತ
5 ವಿಕೆಟ್​ ಕಬಳಿಸಿ ಅತ್ಯಂತ ಹೀನಾಯ ದಾಖಲೆ ಬರೆದ ಅರ್ಷದೀಪ್ ಸಿಂಗ್
5 ವಿಕೆಟ್​ ಕಬಳಿಸಿ ಅತ್ಯಂತ ಹೀನಾಯ ದಾಖಲೆ ಬರೆದ ಅರ್ಷದೀಪ್ ಸಿಂಗ್
‘ಕಲ್ಟ್’ ಸಿನಿಮಾ ನೋಡಿ ಕಣ್ಣೀರು ಹಾಕಿದ ಸಿಎಂ ಸಿದ್ದರಾಮಯ್ಯ
‘ಕಲ್ಟ್’ ಸಿನಿಮಾ ನೋಡಿ ಕಣ್ಣೀರು ಹಾಕಿದ ಸಿಎಂ ಸಿದ್ದರಾಮಯ್ಯ