AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಕಪ್ಪೆಯ ಚಾಕಲೇಟ್​ ಅಲ್ಲ..ಚಾಕಲೇಟ್​ ಕಪ್ಪೆ’-ಇದು ಆಸ್ಟ್ರೇಲಿಯಾದಲ್ಲಿ ಪತ್ತೆಯಾದ ಅಪರೂಪ ಪ್ರಭೇದದ ಕಪ್ಪೆ

ಲಿಟೋರಿಯಾ ಪ್ರಭೇದ ಹೋಲುವ ಈ ಕಪ್ಪೆಗಳಿಗೆ ನಾವು ಮಿರಾ ಎಂದು ಕರೆದಿದ್ದೇವೆ. ಮಿರಾ ಎಂದರೆ ಲ್ಯಾಟಿನ್ ಭಾಷೆಯಲ್ಲಿ ಅಚ್ಚರಿ ಎಂದರ್ಥ ಎಂದು ವಿಜ್ಞಾನಿಗಳ ತಂಡ ತಿಳಿಸಿದೆ.

‘ಕಪ್ಪೆಯ ಚಾಕಲೇಟ್​ ಅಲ್ಲ..ಚಾಕಲೇಟ್​ ಕಪ್ಪೆ’-ಇದು ಆಸ್ಟ್ರೇಲಿಯಾದಲ್ಲಿ ಪತ್ತೆಯಾದ ಅಪರೂಪ ಪ್ರಭೇದದ ಕಪ್ಪೆ
ಅಪರೂಪದ ಕಪ್ಪೆ
Lakshmi Hegde
|

Updated on:May 30, 2021 | 3:32 PM

Share

ಆಸ್ಟ್ರೇಲಿಯಾದ ವಿಜ್ಞಾನಿಗಳ ತಂಡವೊಂದು ಹೊಸ ಪ್ರಭೇದದ ಕಪ್ಪೆಯೊಂದನ್ನು ಅನ್ವೇಷಿಸಿದೆ. ಇದು ಚಾಕಲೇಟ್ ಕಪ್ಪೆ​ (Chocolate Frog​)ಯಾಗಿದ್ದು, ನ್ಯೂ ಜಿನಿವಾದ ಮಳೆಕಾಡುಗಳಲ್ಲಿ ಪತ್ತೆಯಾಗಿದೆ. ಚಾಕಲೇಟ್​ ಕಪ್ಪೆ ಎಂದಾಕ್ಷಣ ಹ್ಯಾರಿ ಪಾಟರ್​ ಸಿನಿಮಾದಲ್ಲಿ ಕಾಣಿಸುವ ಕಪ್ಪೆಯಾಕಾರದ ಚಾಕಲೇಟ್​ ಎಂದುಕೊಳ್ಳಬೇಡಿ. ಈಗ ಪತ್ತೆಯಾಗಿದ್ದು ಜೀವಂತ ಕಪ್ಪೆಗಳು. ಥೇಟ್​ ಚಾಕಲೇಟ್​ನಂತೆಯೇ ಇವೆ. ದೇಹ ಮೆಲ್ಟ್ ಆಗಬಹುದೇನೋ ಎನ್ನುವಷ್ಟು ಮೃದುವಾಗಿದೆ.

ಇದೀಗ ಪತ್ತೆಯಾದ ಹೊಸ ಕಪ್ಪೆಗಳ ಬಗ್ಗೆ ಆಸ್ಟ್ರೇಲಿಯಾದ ಝೂಲಜಿ ಮ್ಯಾಗ್​​ಜಿನ್​ನಲ್ಲಿ ಲೇಖನ ಪ್ರಕಟವಾಗಿದೆ. ಇವು ಲಿಟೋರಿಯಾ ಎಂಬ ಪ್ರಭೇದವನ್ನೇ ಹೋಲುವ ಕಪ್ಪೆಗಳಾಗಿವೆ. ಲಿಟೋರಿಯಾ ವರ್ಗದ ಕಪ್ಪೆಗಳ ಬಣ್ಣ ಸಾಮಾನ್ಯವಾಗಿ ಹಸಿರು ಬಣ್ಣದಲ್ಲಿರುತ್ತದೆ. ಆದರೆ ಈಗ ಪತ್ತೆಯಾದ ಕಪ್ಪೆಗಳು ಪೂರ್ತಿಯಾಗಿ ಕಂದುಬಣ್ಣದಿಂದ ಕೂಡಿವೆ. ಹಾಗಾಗಿ ಅವಕ್ಕೆ ಚಾಕಲೇಟ್​ ಕಪ್ಪೆಗಳೆಂದು ಹೆಸರಿಸಲಾಗಿದೆ ಎಂದು ಸಹ ಲೇಖಕರಾದ ಪೌಲ್​ ಆಲಿವರ್​ ತಿಳಿಸಿದ್ದಾರೆ.

ಲಿಟೋರಿಯಾ ಪ್ರಭೇದ ಹೋಲುವ ಈ ಕಪ್ಪೆಗಳಿಗೆ ನಾವು ಮಿರಾ ಎಂದು ಕರೆದಿದ್ದೇವೆ. ಮಿರಾ ಎಂದರೆ ಲ್ಯಾಟಿನ್ ಭಾಷೆಯಲ್ಲಿ ಅಚ್ಚರಿ ಎಂದರ್ಥ. ನಮಗೆ ಇಂಥದ್ದೊಂದು ಬಣ್ಣದ, ವಿಧದ ಕಪ್ಪೆ ಸಿಕ್ಕಿದ್ದು ನಿಜಕ್ಕೂ ಅಚ್ಚರಿ ಮೂಡಿಸಿದೆ ಎಂದು ಹೇಳಿಕೊಂಡಿದ್ದಾರೆ. ಈ ಕಪ್ಪೆಗಳು ತುಂಬ ದೂರ ಚಲಿಸಲು ಸಾಧ್ಯವಿಲ್ಲ. ಇವು ಸಾಕಷ್ಟು ಬಿಸಿಯಾಗಿರುವ ಜೌಗು ಸ್ಥಳದಲ್ಲಿ ವಾಸಿಸುತ್ತವೆ ಎಂದು ಇನ್ನೊಬ್ಬ ಲೇಖಕ ಸ್ಟೀವ್​ ರಿಚರ್ಡ್​ ತಿಳಿಸಿದ್ದಾರೆ.

ವಿಧವಿಧದ ಕಪ್ಪೆಗಳು ಪತ್ತೆಯಾಗುವುದು ಹೊಸದೇನಲ್ಲ. ಕಳೆದ ವರ್ಷ ಜುಲೈನಲ್ಲಿ ಮಧ್ಯಪ್ರದೇಶದ ನರಸಿಂಗ ಪುರ ಜಿಲ್ಲೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಹಳದಿ ಕಪ್ಪೆಗಳು ಪತ್ತೆಯಾಗಿ ಅಚ್ಚರಿ ಮೂಡಿಸಿದ್ದವು. ಅದರ ವಿಡಿಯೋವನ್ನು ಐಎಫ್​ಎಸ್​ ಅಧಿಕಾರಿ ಪ್ರವೀಣ್​ ಕಸ್ವಾನ್​ ಶೇರ್ ಮಾಡಿಕೊಂಡಿದ್ದರು. ಮಾನ್ಸೂನ್​​ನಲ್ಲಿ ಕಪ್ಪೆಗಳು ತಮ್ಮ ಮೈಬಣ್ಣ ಬದಲಿಸುತ್ತವೆ ಎಂಬ ವಿಶೇಷವಾದ ಮಾಹಿತಿಯನ್ನೂ ಹಂಚಿಕೊಂಡಿದ್ದರು.

ಇದನ್ನೂ ಓದಿ: ನಿಮಗೆ ಕನ್ನಡ ಬರುತ್ತಾ? ನೆಟ್ಟಿಗರು ಕೇಳಿದ ವಿಭಿನ್ನ ಪ್ರಶ್ನೆಗಳಿಗೆ ನಯವಾಗಿಯೇ ಉತ್ತರಿಸಿದ ಕೊಹ್ಲಿ; ನೀವೂ ಓದಿ

Published On - 3:25 pm, Sun, 30 May 21

Follow Us
ಮುಸ್ಲಿಂ ಸಮುದಾಯದ ಮತ್ತಿಬ್ಬರಿಗೆ ಸಚಿವ ಸ್ಥಾನ ನೀಡುವ ಬಗ್ಗೆ ಚರ್ಚೆ
ಮುಸ್ಲಿಂ ಸಮುದಾಯದ ಮತ್ತಿಬ್ಬರಿಗೆ ಸಚಿವ ಸ್ಥಾನ ನೀಡುವ ಬಗ್ಗೆ ಚರ್ಚೆ
ಅಡ್ಡಮತದಾನ ಮಾಡಿದವರಿಗೆ ತಕ್ಕ ಶಾಸ್ತಿ: ಹೈಕಮಾಂಡ್ ಗುಟ್ಟು ಬಿಚ್ಚಿಟ್ಟ ಅಶೋಕ್
ಅಡ್ಡಮತದಾನ ಮಾಡಿದವರಿಗೆ ತಕ್ಕ ಶಾಸ್ತಿ: ಹೈಕಮಾಂಡ್ ಗುಟ್ಟು ಬಿಚ್ಚಿಟ್ಟ ಅಶೋಕ್
ಪೋರ್ಟರ್, ರ‍್ಯಾಪಿಡೋ ಆ್ಯಪ್​​ಗಳ ವಿರುದ್ಧ ಬೀದಿಗಿಳಿದ ಗೂಡ್ಸ್ ವಾಹನ ಚಾಲಕರು
ಪೋರ್ಟರ್, ರ‍್ಯಾಪಿಡೋ ಆ್ಯಪ್​​ಗಳ ವಿರುದ್ಧ ಬೀದಿಗಿಳಿದ ಗೂಡ್ಸ್ ವಾಹನ ಚಾಲಕರು
ಯುಎಇ ದೇಶಕ್ಕೆ ರಫ್ತಾಗಲಿವೆ ಬ್ರಹ್ಮೋಸ್, ಆಕಾಶ್ ಕ್ಷಿಪಣಿಗಳು!
ಯುಎಇ ದೇಶಕ್ಕೆ ರಫ್ತಾಗಲಿವೆ ಬ್ರಹ್ಮೋಸ್, ಆಕಾಶ್ ಕ್ಷಿಪಣಿಗಳು!
ಬೆಂಗಳೂರು ರಸ್ತೆ ಅಭಿವೃದ್ಧಿ ಅನುದಾನದ ಬಗ್ಗೆ ತೇಜಸ್ವಿ ಸೂರ್ಯ ವಾಗ್ದಾಳಿ
ಬೆಂಗಳೂರು ರಸ್ತೆ ಅಭಿವೃದ್ಧಿ ಅನುದಾನದ ಬಗ್ಗೆ ತೇಜಸ್ವಿ ಸೂರ್ಯ ವಾಗ್ದಾಳಿ
ಮುಮ್ಮಡಿ ನಿರ್ವಾಣ ಸ್ವಾಮೀಜಿ ಅಂತಿಮ ದರ್ಶನದ ವೇಳೆ ಸಿಎಂ ಡಿಕೆಶಿ ಭಾವುಕ
ಮುಮ್ಮಡಿ ನಿರ್ವಾಣ ಸ್ವಾಮೀಜಿ ಅಂತಿಮ ದರ್ಶನದ ವೇಳೆ ಸಿಎಂ ಡಿಕೆಶಿ ಭಾವುಕ
ಧರ್ಮಸ್ಥಳದಲ್ಲಿ ಶಾಸಕರ ಆಣೆ ಪ್ರಮಾಣ ನಿರ್ಧಾರದಿಂದ ಹಿಂದೆ ಸರಿದ ಬಿಜೆಪಿ
ಧರ್ಮಸ್ಥಳದಲ್ಲಿ ಶಾಸಕರ ಆಣೆ ಪ್ರಮಾಣ ನಿರ್ಧಾರದಿಂದ ಹಿಂದೆ ಸರಿದ ಬಿಜೆಪಿ
‘ಹೀರೋಗಳು ವರ್ಷಕ್ಕೆ ಒಂದಾದರೂ ಸಿನಿಮಾ ಕೊಡಬೇಕು, ಆಗ ಇಂಡಸ್ಟ್ರಿ ಉಳಿಯುತ್ತೆ’
‘ಹೀರೋಗಳು ವರ್ಷಕ್ಕೆ ಒಂದಾದರೂ ಸಿನಿಮಾ ಕೊಡಬೇಕು, ಆಗ ಇಂಡಸ್ಟ್ರಿ ಉಳಿಯುತ್ತೆ’
ರಾಕಸಕೊಪ್ಪ ಡ್ಯಾಂ ಖಾಲಿ: ಬೆಳಗಾವಿ ನಗರದ ಕುಡಿಯುವ ನೀರಿನ ಸಮಸ್ಯೆ ತೀವ್ರ
ರಾಕಸಕೊಪ್ಪ ಡ್ಯಾಂ ಖಾಲಿ: ಬೆಳಗಾವಿ ನಗರದ ಕುಡಿಯುವ ನೀರಿನ ಸಮಸ್ಯೆ ತೀವ್ರ
ಬಿಳಿಗಿರಿರಂಗನಾಥಸ್ವಾಮಿ ಬೆಟ್ಟದಲ್ಲಿ ಒಂಟಿ ಸಲಗದ ಅಟಾಟೋಪ
ಬಿಳಿಗಿರಿರಂಗನಾಥಸ್ವಾಮಿ ಬೆಟ್ಟದಲ್ಲಿ ಒಂಟಿ ಸಲಗದ ಅಟಾಟೋಪ