AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಕಪ್ಪೆಯ ಚಾಕಲೇಟ್​ ಅಲ್ಲ..ಚಾಕಲೇಟ್​ ಕಪ್ಪೆ’-ಇದು ಆಸ್ಟ್ರೇಲಿಯಾದಲ್ಲಿ ಪತ್ತೆಯಾದ ಅಪರೂಪ ಪ್ರಭೇದದ ಕಪ್ಪೆ

ಲಿಟೋರಿಯಾ ಪ್ರಭೇದ ಹೋಲುವ ಈ ಕಪ್ಪೆಗಳಿಗೆ ನಾವು ಮಿರಾ ಎಂದು ಕರೆದಿದ್ದೇವೆ. ಮಿರಾ ಎಂದರೆ ಲ್ಯಾಟಿನ್ ಭಾಷೆಯಲ್ಲಿ ಅಚ್ಚರಿ ಎಂದರ್ಥ ಎಂದು ವಿಜ್ಞಾನಿಗಳ ತಂಡ ತಿಳಿಸಿದೆ.

‘ಕಪ್ಪೆಯ ಚಾಕಲೇಟ್​ ಅಲ್ಲ..ಚಾಕಲೇಟ್​ ಕಪ್ಪೆ’-ಇದು ಆಸ್ಟ್ರೇಲಿಯಾದಲ್ಲಿ ಪತ್ತೆಯಾದ ಅಪರೂಪ ಪ್ರಭೇದದ ಕಪ್ಪೆ
ಅಪರೂಪದ ಕಪ್ಪೆ
Follow us
Lakshmi Hegde
|

Updated on:May 30, 2021 | 3:32 PM

ಆಸ್ಟ್ರೇಲಿಯಾದ ವಿಜ್ಞಾನಿಗಳ ತಂಡವೊಂದು ಹೊಸ ಪ್ರಭೇದದ ಕಪ್ಪೆಯೊಂದನ್ನು ಅನ್ವೇಷಿಸಿದೆ. ಇದು ಚಾಕಲೇಟ್ ಕಪ್ಪೆ​ (Chocolate Frog​)ಯಾಗಿದ್ದು, ನ್ಯೂ ಜಿನಿವಾದ ಮಳೆಕಾಡುಗಳಲ್ಲಿ ಪತ್ತೆಯಾಗಿದೆ. ಚಾಕಲೇಟ್​ ಕಪ್ಪೆ ಎಂದಾಕ್ಷಣ ಹ್ಯಾರಿ ಪಾಟರ್​ ಸಿನಿಮಾದಲ್ಲಿ ಕಾಣಿಸುವ ಕಪ್ಪೆಯಾಕಾರದ ಚಾಕಲೇಟ್​ ಎಂದುಕೊಳ್ಳಬೇಡಿ. ಈಗ ಪತ್ತೆಯಾಗಿದ್ದು ಜೀವಂತ ಕಪ್ಪೆಗಳು. ಥೇಟ್​ ಚಾಕಲೇಟ್​ನಂತೆಯೇ ಇವೆ. ದೇಹ ಮೆಲ್ಟ್ ಆಗಬಹುದೇನೋ ಎನ್ನುವಷ್ಟು ಮೃದುವಾಗಿದೆ.

ಇದೀಗ ಪತ್ತೆಯಾದ ಹೊಸ ಕಪ್ಪೆಗಳ ಬಗ್ಗೆ ಆಸ್ಟ್ರೇಲಿಯಾದ ಝೂಲಜಿ ಮ್ಯಾಗ್​​ಜಿನ್​ನಲ್ಲಿ ಲೇಖನ ಪ್ರಕಟವಾಗಿದೆ. ಇವು ಲಿಟೋರಿಯಾ ಎಂಬ ಪ್ರಭೇದವನ್ನೇ ಹೋಲುವ ಕಪ್ಪೆಗಳಾಗಿವೆ. ಲಿಟೋರಿಯಾ ವರ್ಗದ ಕಪ್ಪೆಗಳ ಬಣ್ಣ ಸಾಮಾನ್ಯವಾಗಿ ಹಸಿರು ಬಣ್ಣದಲ್ಲಿರುತ್ತದೆ. ಆದರೆ ಈಗ ಪತ್ತೆಯಾದ ಕಪ್ಪೆಗಳು ಪೂರ್ತಿಯಾಗಿ ಕಂದುಬಣ್ಣದಿಂದ ಕೂಡಿವೆ. ಹಾಗಾಗಿ ಅವಕ್ಕೆ ಚಾಕಲೇಟ್​ ಕಪ್ಪೆಗಳೆಂದು ಹೆಸರಿಸಲಾಗಿದೆ ಎಂದು ಸಹ ಲೇಖಕರಾದ ಪೌಲ್​ ಆಲಿವರ್​ ತಿಳಿಸಿದ್ದಾರೆ.

ಲಿಟೋರಿಯಾ ಪ್ರಭೇದ ಹೋಲುವ ಈ ಕಪ್ಪೆಗಳಿಗೆ ನಾವು ಮಿರಾ ಎಂದು ಕರೆದಿದ್ದೇವೆ. ಮಿರಾ ಎಂದರೆ ಲ್ಯಾಟಿನ್ ಭಾಷೆಯಲ್ಲಿ ಅಚ್ಚರಿ ಎಂದರ್ಥ. ನಮಗೆ ಇಂಥದ್ದೊಂದು ಬಣ್ಣದ, ವಿಧದ ಕಪ್ಪೆ ಸಿಕ್ಕಿದ್ದು ನಿಜಕ್ಕೂ ಅಚ್ಚರಿ ಮೂಡಿಸಿದೆ ಎಂದು ಹೇಳಿಕೊಂಡಿದ್ದಾರೆ. ಈ ಕಪ್ಪೆಗಳು ತುಂಬ ದೂರ ಚಲಿಸಲು ಸಾಧ್ಯವಿಲ್ಲ. ಇವು ಸಾಕಷ್ಟು ಬಿಸಿಯಾಗಿರುವ ಜೌಗು ಸ್ಥಳದಲ್ಲಿ ವಾಸಿಸುತ್ತವೆ ಎಂದು ಇನ್ನೊಬ್ಬ ಲೇಖಕ ಸ್ಟೀವ್​ ರಿಚರ್ಡ್​ ತಿಳಿಸಿದ್ದಾರೆ.

ವಿಧವಿಧದ ಕಪ್ಪೆಗಳು ಪತ್ತೆಯಾಗುವುದು ಹೊಸದೇನಲ್ಲ. ಕಳೆದ ವರ್ಷ ಜುಲೈನಲ್ಲಿ ಮಧ್ಯಪ್ರದೇಶದ ನರಸಿಂಗ ಪುರ ಜಿಲ್ಲೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಹಳದಿ ಕಪ್ಪೆಗಳು ಪತ್ತೆಯಾಗಿ ಅಚ್ಚರಿ ಮೂಡಿಸಿದ್ದವು. ಅದರ ವಿಡಿಯೋವನ್ನು ಐಎಫ್​ಎಸ್​ ಅಧಿಕಾರಿ ಪ್ರವೀಣ್​ ಕಸ್ವಾನ್​ ಶೇರ್ ಮಾಡಿಕೊಂಡಿದ್ದರು. ಮಾನ್ಸೂನ್​​ನಲ್ಲಿ ಕಪ್ಪೆಗಳು ತಮ್ಮ ಮೈಬಣ್ಣ ಬದಲಿಸುತ್ತವೆ ಎಂಬ ವಿಶೇಷವಾದ ಮಾಹಿತಿಯನ್ನೂ ಹಂಚಿಕೊಂಡಿದ್ದರು.

ಇದನ್ನೂ ಓದಿ: ನಿಮಗೆ ಕನ್ನಡ ಬರುತ್ತಾ? ನೆಟ್ಟಿಗರು ಕೇಳಿದ ವಿಭಿನ್ನ ಪ್ರಶ್ನೆಗಳಿಗೆ ನಯವಾಗಿಯೇ ಉತ್ತರಿಸಿದ ಕೊಹ್ಲಿ; ನೀವೂ ಓದಿ

Published On - 3:25 pm, Sun, 30 May 21

ರಾಜ್ಯ ಬಿಜೆಪಿ ನಾಯಕತ್ವದಿಂದ ಅಂತರ ಕಾಯ್ದುಕೊಂಡಿರುವ ಸಿದ್ದೇಶ್ವರ
ರಾಜ್ಯ ಬಿಜೆಪಿ ನಾಯಕತ್ವದಿಂದ ಅಂತರ ಕಾಯ್ದುಕೊಂಡಿರುವ ಸಿದ್ದೇಶ್ವರ
ರಾಕೇಶ್ ಪೂಜಾರಿ ತಂಗಿ ವಿಚಾರದಲ್ಲಿ ದೊಡ್ಡ ನಿರ್ಧಾರ ತೆಗೆದುಕೊಂಡ ಆನಂದ್
ರಾಕೇಶ್ ಪೂಜಾರಿ ತಂಗಿ ವಿಚಾರದಲ್ಲಿ ದೊಡ್ಡ ನಿರ್ಧಾರ ತೆಗೆದುಕೊಂಡ ಆನಂದ್
ಡಿಜಿಎಂಒಗಳ ಸಭೆಯಲ್ಲೂ ಪಾಕಿಸ್ತಾನಕ್ಕೆ ತಪರಾಕಿ, ತಂಟೆಗೆ ಬಂದರೆ ಜೋಕೆ!
ಡಿಜಿಎಂಒಗಳ ಸಭೆಯಲ್ಲೂ ಪಾಕಿಸ್ತಾನಕ್ಕೆ ತಪರಾಕಿ, ತಂಟೆಗೆ ಬಂದರೆ ಜೋಕೆ!
ರಕ್ಷಣಾ ಸಚಿವಾಲಯಕ್ಕೆ 25 ಲಕ್ಷ‌ ರೂ: ಸುಬುಧೇಂದ್ರ ತೀರ್ಥರಿಂದ ಘೋಷಣೆ
ರಕ್ಷಣಾ ಸಚಿವಾಲಯಕ್ಕೆ 25 ಲಕ್ಷ‌ ರೂ: ಸುಬುಧೇಂದ್ರ ತೀರ್ಥರಿಂದ ಘೋಷಣೆ
ಶಾಲೆಗೆ ಬರಲು ನಮಗೆ ಯಾವ ಭಯವೂ ಇಲ್ಲ ಎನ್ನುತ್ತಿರುವ ಮಕ್ಕಳು
ಶಾಲೆಗೆ ಬರಲು ನಮಗೆ ಯಾವ ಭಯವೂ ಇಲ್ಲ ಎನ್ನುತ್ತಿರುವ ಮಕ್ಕಳು
ನೆಲಮಂಗಲ: ಆಯಿಲ್ ಗೋಡೌನ್​ಗೆ ಬೆಂಕಿ, ಧಗಧಗಿಸಿದ ಗೋದಾಮು
ನೆಲಮಂಗಲ: ಆಯಿಲ್ ಗೋಡೌನ್​ಗೆ ಬೆಂಕಿ, ಧಗಧಗಿಸಿದ ಗೋದಾಮು
ಮನೆಯ ದ್ವಾರಕ್ಕೆ ತೆಂಗಿನ ಕಾಯಿ ಕಟ್ಟುವುದರ ಹಿಂದಿನ ಅಧ್ಯಾತ್ಮಿಕ ರಹಸ್ಯ
ಮನೆಯ ದ್ವಾರಕ್ಕೆ ತೆಂಗಿನ ಕಾಯಿ ಕಟ್ಟುವುದರ ಹಿಂದಿನ ಅಧ್ಯಾತ್ಮಿಕ ರಹಸ್ಯ
ಚಂದ್ರ ವೃಶ್ಚಿಕ ರಾಶಿಯಲ್ಲಿ ಸಂಚಾರ: ದ್ವಾದಶ ರಾಶಿಗಳ ಫಲಾಫಲ ಹೇಗಿದೆ ನೋಡಿ
ಚಂದ್ರ ವೃಶ್ಚಿಕ ರಾಶಿಯಲ್ಲಿ ಸಂಚಾರ: ದ್ವಾದಶ ರಾಶಿಗಳ ಫಲಾಫಲ ಹೇಗಿದೆ ನೋಡಿ
ವಿಜಯೇಂದ್ರ ಕೆಳಗಿಳಿಸಿ ನನ್ನನ್ನು ಪಕ್ಷಕ್ಕೆ ಸೇರಿಸಿಕೊಳ್ಳುತ್ತಾರೆ: ಯತ್ನಾಳ್
ವಿಜಯೇಂದ್ರ ಕೆಳಗಿಳಿಸಿ ನನ್ನನ್ನು ಪಕ್ಷಕ್ಕೆ ಸೇರಿಸಿಕೊಳ್ಳುತ್ತಾರೆ: ಯತ್ನಾಳ್
ಆಪರೇಷನ್ ಸಿಂಧೂರ ಬಳಿಕ ಮೋದಿ ಮೊದಲ ಮಾತು, ಪ್ರಧಾನಿ ಭಾಷಣದ ನೇರಪ್ರಸಾರ
ಆಪರೇಷನ್ ಸಿಂಧೂರ ಬಳಿಕ ಮೋದಿ ಮೊದಲ ಮಾತು, ಪ್ರಧಾನಿ ಭಾಷಣದ ನೇರಪ್ರಸಾರ