AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Video: ಪತ್ರಕರ್ತನ ಮೊಬೈಲ್​ ಕದ್ದು ಮಳ್ಳಾದ ಕಳ್ಳ; ಕದ್ದ ಮರುಕ್ಷಣವೇ ಅವನಿಗೇ ಗೊತ್ತಿಲ್ಲದೆ 20 ಸಾವಿರ ಜನರಿಗೆ ಮುಖ ತೋರಿಸಿದ !

ಮೊಬೈಲ್​ ಕದ್ದಿದ್ದು ಗಂಭೀರ ವಿಚಾರವಾದರೂ ಇದೀಗ ಫನ್ನಿ ವಿಡಿಯೋವಾಗಿ ಮಾರ್ಪಟ್ಟಿದೆ. ನೆಟ್ಟಿಗರೊಬ್ಬರು ಶೇರ್​ ಮಾಡಿಕೊಂಡ ವಿಡಿಯೋಕ್ಕೆ 6.2 ಮಿಲಿಯನ್​ಗಳಷ್ಟು ವೀವ್ಸ್​ ಬಂದಿದೆ. ಸಾವಿರಾರು ಜನ ಕಮೆಂಟ್​ ಮಾಡಿದ್ದಾರೆ. 

Video: ಪತ್ರಕರ್ತನ ಮೊಬೈಲ್​ ಕದ್ದು ಮಳ್ಳಾದ ಕಳ್ಳ; ಕದ್ದ ಮರುಕ್ಷಣವೇ ಅವನಿಗೇ ಗೊತ್ತಿಲ್ಲದೆ 20 ಸಾವಿರ ಜನರಿಗೆ ಮುಖ ತೋರಿಸಿದ !
ಮೊಬೈಲ್​ ಕದ್ದ ಕಳ್ಳ
TV9 Web
| Edited By: |

Updated on:Oct 21, 2021 | 4:53 PM

Share

ಕಳ್ಳನೊಬ್ಬ ಪತ್ರಕರ್ತನ ಮೊಬೈಲ್​ ಕದ್ದು ಬೇಸ್ತುಬಿದ್ದ ಘಟನೆ ನಡೆದಿದೆ. ಕದ್ದ ಮರುಕ್ಷಣವೇ ಆ ಕಳ್ಳನ ಮುಖ ಎಲ್ಲರಿಗೂ ಕಂಡಿದೆ. ಇದೀಗ ಆತನ ಬಂಧನವೂ ಆಗಿದೆ. ಅಂದಹಾಗೆ ಘಟನೆ ನಡೆದದ್ದು ಈಜಿಪ್ಟ್​​ನ ರಾಜಧಾನಿ ಕೈರೋದಲ್ಲಿ. ಇಲ್ಲಿ ಪತ್ರಕರ್ತನೊಬ್ಬ ತನ್ನ ಮೊಬೈಲ್​​​ನಲ್ಲಿ ವಿಡಿಯೋ ಮಾಡುತ್ತ, ಭೂಕಂಪದ ವರದಿ ಮಾಡುತ್ತಿದ್ದ. ಕೈರೋದ ರಸ್ತೆಗಳಲ್ಲಿ ಭೂಕಂಪದಿಂದಾದ ಹಾನಿಯ ಚಿತ್ರದ ವರದಿಯನ್ನು ಲೈವ್​ ವಿಡಿಯೋ ಮಾಡುತ್ತಿದ್ದಾಗ ಬೈಕ್​​ನಲ್ಲಿ ಬಂದ ಕಳ್ಳನೊಬ್ಬ ಆತನ ಮೊಬೈಲ್​ ಕಿತ್ತುಕೊಂಡು ಹೋದ. ಈ ವೇಳೆ ಪತ್ರಕರ್ತನ ವಿಡಿಯೋವನ್ನು ಸುಮಾರು 20 ಸಾವಿರ ಮಂದಿ ವೀಕ್ಷಿಸುತ್ತಿದ್ದರು. ಅಷ್ಟೂ ಜನಕ್ಕೆ ಕಳ್ಳ ತನ್ನ ಮುಖದರ್ಶನ ಮಾಡಿಸಿದ್ದಾನೆ. ವಿಡಿಯೋ ಇದೀಗ ಸೋಷಿಯಲ್​ ಮೀಡಿಯಾದಲ್ಲಿ ಸಿಕ್ಕಾಪಟೆ ವೈರಲ್​ ಆಗುತ್ತಿದೆ.  

ಈಜಿಪ್ಟ್​​ನ ಕೈರೋ ಸೇರಿ ವಿವಿಧೆಡೆ ಮಂಗಳವಾರ ಮುಂಜಾನೆ ಭೂಕಂಪನವಾಗಿತ್ತು. ಅದರ ಚಿತ್ರಣವನ್ನು ವರದಿ ಮಾಡಲು ಪತ್ರಕರ್ತ ಮೊಬೈಲ್​​ನಲ್ಲಿ ಫೇಸ್​​ಬುಕ್​ ಲೈವ್​ ವಿಡಿಯೋ ಮಾಡುತ್ತಿದ್ದ. ಬೈಕ್​​ನಲ್ಲಿ ಬಂದ ಕಳ್ಳ ಆ ಮೊಬೈಲ್​​ನ್ನು ಪತ್ರಕರ್ತನ ಕೈಯಿಂದ ಕಿತ್ತುಕೊಳ್ಳುವಾಗ ಕೆಲ ಕಾಲ ಅಡಚಣೆಯುಂಟಾಗಿದ್ದನ್ನು ವಿಡಿಯೋದಲ್ಲಿ ನೋಡಬಹುದು. ಹಾಗೇ, ಹಿಂದಿನಿಂದ ಪತ್ರಕರ್ತನ ಧ್ವನಿಯೂ ಇದರಲ್ಲಿ ಕೇಳುತ್ತಿರುತ್ತದೆ. ಮೊಬೈಲ್​ ಕಿತ್ತುಕೊಂಡು ಆತ ತನ್ನ ಬೈಕ್​​ನ ಮುಂದೆ ಅದನ್ನಿಟ್ಟುಕೊಂಡು ಅಲ್ಲಿಂದ ಹೊರಟಿದ್ದಾನೆ.  ಆದರೆ ಆ ಮೊಬೈಲ್​ ಕ್ಯಾಮರಾ ಸೆಲ್ಫಿಯಾಗಿ ತಿರುಗಿರುವ ಕಾರಣ ಆ ಕಳ್ಳನ ಮುಖ ಎಲ್ಲರಿಗೂ ಕಂಡಿದೆ. ಆತ ಸಿಗರೇಟ್​ ಬಾಯಲ್ಲಿಟ್ಟುಕೊಂಡು ಹೋಗುತ್ತಿದ್ದಾನೆ. ತನ್ನನ್ನು ಯಾರಾದರು ಹಿಂಬಾಲಿಸುತ್ತಿದ್ದಾರಾ ಎಂದು ಹಿಂದಿರುಗಿ ನೋಡುವುದು ಕೂಡ  ವಿಡಿಯೋದಲ್ಲಿ ಕಾಣಿಸುತ್ತಿದೆ. ಆ ಕಳ್ಳನಿಗೆ ಮಾತ್ರ ಇದ್ಯಾವುದರ ಅರಿವೂ ಇಲ್ಲ. ಮೊಬೈಲ್​​ವೊಂದು ಸಿಕ್ಕ ಖುಷಿಯಲ್ಲಿ ಬೈಕ್​​ನಲ್ಲಿ ಸ್ಪೀಡ್​ ಆಗಿ ಹೋಗುವುದು ವಿಡಿಯೋದಲ್ಲಿ ನೋಡಬಹುದು.

ಮೊಬೈಲ್​ ಕದ್ದಿದ್ದು ಗಂಭೀರ ವಿಚಾರವಾದರೂ ಇದೀಗ ಫನ್ನಿ ವಿಡಿಯೋವಾಗಿ ಮಾರ್ಪಟ್ಟಿದೆ. ನೆಟ್ಟಿಗರೊಬ್ಬರು ಶೇರ್​ ಮಾಡಿಕೊಂಡ ವಿಡಿಯೋಕ್ಕೆ 6.2 ಮಿಲಿಯನ್​ಗಳಷ್ಟು ವೀವ್ಸ್​ ಬಂದಿದೆ. ಸಾವಿರಾರು ಜನ ಕಮೆಂಟ್​ ಮಾಡಿದ್ದಾರೆ.  ಈ ಕಳ್ಳನೀಗ ಬಂಧಿಸಲ್ಪಟ್ಟಿದ್ದಾನೆ ಮತ್ತು ಆತನ ಬೈಕ್​ನ್ನೂ ಪೊಲೀಸರು ವಶಪಡಿಸಿಕೊಂಡಿದ್ದಾರೆ ಎಂದು ಅಲ್ಲಿನ ಮಾಧ್ಯಮವೊಂದು ವರದಿ ಮಾಡಿದೆ.

ಇದನ್ನೂ ಓದಿ: ಬಿಎಸ್​ವೈ ಆಪ್ತನ ಸ್ಥಾನಚ್ಯುತಿ: ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ದಿಢೀರ್ ಬದಲಾವಣೆ

‘ಸಲಗ ಚಿತ್ರವನ್ನು ತುಳಿಯೋಕೆ ಆಗಲ್ಲ, ಸುಮ್ಮನೆ ಸಣ್ಣತನ ತೋರಿಸಬೇಡಿ’: ದುನಿಯಾ ವಿಜಯ್​ ಎಚ್ಚರಿಕೆ

Published On - 4:51 pm, Thu, 21 October 21

ಕನ್ಯಾ ರಾಶಿಯ ಮೇಲೆ ರಾಹುಗ್ರಸ್ತ ಸೂರ್ಯಗ್ರಹಣದ ಪ್ರಭಾವ ಹೇಗಿರಲಿದೆ?
ಕನ್ಯಾ ರಾಶಿಯ ಮೇಲೆ ರಾಹುಗ್ರಸ್ತ ಸೂರ್ಯಗ್ರಹಣದ ಪ್ರಭಾವ ಹೇಗಿರಲಿದೆ?
ಮಹಾಶಿವರಾತ್ರಿ ಎಫೆಕ್ಟ್​​: ಹೂ, ಹಣ್ಣುಗಳ ದರ ಗಗನಕ್ಕೆ; ಗ್ರಾಹಕರು ಕಂಗಾಲು
ಮಹಾಶಿವರಾತ್ರಿ ಎಫೆಕ್ಟ್​​: ಹೂ, ಹಣ್ಣುಗಳ ದರ ಗಗನಕ್ಕೆ; ಗ್ರಾಹಕರು ಕಂಗಾಲು
ಮಹದೇಶ್ವರ ಬೆಟ್ಟದ ಜಾತ್ರೆ ಹೊತ್ತಲೇ ಭೀಕರ ಅಪಘಾತ
ಮಹದೇಶ್ವರ ಬೆಟ್ಟದ ಜಾತ್ರೆ ಹೊತ್ತಲೇ ಭೀಕರ ಅಪಘಾತ
300ಕ್ಕೂ ಹೆಚ್ಚು ಬಾಳೆ ಗಿಡಗಳನ್ನ ಕಡಿದ ದುಷ್ಕರ್ಮಿಗಳು
300ಕ್ಕೂ ಹೆಚ್ಚು ಬಾಳೆ ಗಿಡಗಳನ್ನ ಕಡಿದ ದುಷ್ಕರ್ಮಿಗಳು
ಹಂಪಿ ಉತ್ಸವಕ್ಕೆ ಸಜ್ಜಾದ ಭವ್ಯ ವೇದಿಕೆ: 50 ಸಾವಿರ ಜನರಿಗೆ ಆಸನದ ವ್ಯವಸ್ಥೆ
ಹಂಪಿ ಉತ್ಸವಕ್ಕೆ ಸಜ್ಜಾದ ಭವ್ಯ ವೇದಿಕೆ: 50 ಸಾವಿರ ಜನರಿಗೆ ಆಸನದ ವ್ಯವಸ್ಥೆ
ಸಿಂಹ ರಾಶಿಯವರ ಮೇಲೆ ರಾಹುಗ್ರಸ್ತ ಕಂಕಣ ಸೂರ್ಯಗ್ರಹಣದ ಪ್ರಭಾವ ಹೇಗಿರಲಿದೆ?
ಸಿಂಹ ರಾಶಿಯವರ ಮೇಲೆ ರಾಹುಗ್ರಸ್ತ ಕಂಕಣ ಸೂರ್ಯಗ್ರಹಣದ ಪ್ರಭಾವ ಹೇಗಿರಲಿದೆ?
ಸೇವಾ ತೀರ್ಥ; ಪ್ರಧಾನಮಂತ್ರಿ ಕಚೇರಿಯ ನೂತನ ಹೆಸರು ಅನಾವರಣಗೊಳಿಸಿದ ಮೋದಿ
ಸೇವಾ ತೀರ್ಥ; ಪ್ರಧಾನಮಂತ್ರಿ ಕಚೇರಿಯ ನೂತನ ಹೆಸರು ಅನಾವರಣಗೊಳಿಸಿದ ಮೋದಿ
ಸರಣಿ ಅಪಘಾತದಲ್ಲಿ 7 ಜನ ದುರ್ಮರಣ: ಘಟನೆಯ ಭೀಕರತೆ ಬಿಚ್ಚಿಟ್ಟ ಚಾಲಕ
ಸರಣಿ ಅಪಘಾತದಲ್ಲಿ 7 ಜನ ದುರ್ಮರಣ: ಘಟನೆಯ ಭೀಕರತೆ ಬಿಚ್ಚಿಟ್ಟ ಚಾಲಕ
ವರ್ಷದ ಮೊದಲ ಸೂರ್ಯಗ್ರಹಣ ಕರ್ಕಾಟಕ ರಾಶಿಯವರಿಗೆ ಹೇಗಿರಲಿದೆ?
ವರ್ಷದ ಮೊದಲ ಸೂರ್ಯಗ್ರಹಣ ಕರ್ಕಾಟಕ ರಾಶಿಯವರಿಗೆ ಹೇಗಿರಲಿದೆ?
ಶಿಶುಗಳ ಕಳ್ಳತನ ತಡೆಯಲು ಹೊಸ ಪ್ಲಾನ್ ಮಾಡಿದ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆ
ಶಿಶುಗಳ ಕಳ್ಳತನ ತಡೆಯಲು ಹೊಸ ಪ್ಲಾನ್ ಮಾಡಿದ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆ