ಸಿರಿಯಾದಲ್ಲಿ ಯುಎಸ್​ ಸೇನೆಯಿಂದ ಡ್ರೋಣ್​ ದಾಳಿ; ಅಲ್​ ಖೈದಾ ಹಿರಿಯ ನಾಯಕ ಅಬ್ದುಲ್​ ಹಮೀದ್​ ಹತ್ಯೆ

ಅಲ್​-ಖೈದಾ ಉಗ್ರಸಂಘಟನೆ ಈ ಸಿರಿಯಾವನ್ನು ತಮ್ಮ ಸುರಕ್ಷಿತ ತಾಣವನ್ನಾಗಿ ರೂಪಿಸಿಕೊಳ್ಳಲು ಸಿದ್ಧತೆ ನಡೆಸುತ್ತಿದೆ. ಅಮೆರಿಕ ಮತ್ತು ನಮ್ಮ ಮೈತ್ರಿ ರಾಷ್ಟ್ರಗಳ ಜನರಿಗೆ ಬೆದರಿಕೆ ಒಡ್ಡುವುದನ್ನು ಮುಂದುವರಿಸಿದೆ ಎಂದು ಯುಎಸ್​ ಸೇನಾ ಮೇಜರ್​ ಜಾನ್ ರಿಗ್ಸ್ಬೀ ತಿಳಿಸಿದ್ದಾರೆ.

ಸಿರಿಯಾದಲ್ಲಿ ಯುಎಸ್​ ಸೇನೆಯಿಂದ ಡ್ರೋಣ್​ ದಾಳಿ; ಅಲ್​ ಖೈದಾ ಹಿರಿಯ ನಾಯಕ ಅಬ್ದುಲ್​ ಹಮೀದ್​ ಹತ್ಯೆ
ಸಾಂಕೇತಿಕ ಚಿತ್ರ
Follow us
| Updated By: Lakshmi Hegde

Updated on:Oct 23, 2021 | 9:12 AM

ಯುಎಸ್​ ಸೇನೆ ಸಿರಿಯಾದಲ್ಲಿ ನಡೆಸಿದ ಡ್ರೋಣ್​ ದಾಳಿ (Drone Strike)ಗೆ ಅಲ್​ ಖೈದಾ (al-Qaeda) ಉಗ್ರಸಂಘಟನೆಯ ಹಿರಿಯ ನಾಯಕ ಅಬ್ದುಲ್​ ಹಮೀದ್​ ಅಲ್​ ಮತಾರ್​​ ಬಲಿಯಾಗಿದ್ದಾನೆ. ಈ ಬಗ್ಗೆ ಯುಎಸ್​ ಸೆಂಟ್ರಲ್​ ಕಮಾಂಡ್​ ವಕ್ತಾರ ಮಾಹಿತಿ ನೀಡಿದ್ದಾರೆ.  ಯುಎಸ್  ಸೇನೆಯ ಮೇಜರ್ ಜಾನ್ ರಿಗ್ಸ್ಬೀ ಶುಕ್ರವಾರ ರಾತ್ರಿ ಹೇಳಿಕೆ ಬಿಡುಗಡೆ ಮಾಡಿದ್ದು, ಅಲ್​ ಖೈದಾ ಹಿರಿಯ ನಾಯಕನಾಗಿದ್ದ ಹಮೀದ್​ ಹತ್ಯೆಯಿಂದಾಗಿ ಖಂಡಿತವಾಗಿಯೂ ಆ ಉಗ್ರ ಸಂಘಟನೆಗೆ ಹಿನ್ನಡೆಯಾಗುತ್ತದೆ. ಅವರು ಮತ್ತೊಂದು ಜಾಗತಿಕ ದಾಳಿ ನಡೆಸುವುದು, ಯುಎಸ್​ ನಾಗರಿಕರ, ನಮ್ಮ ಸಹಭಾಗಿ ದೇಶಗಳ ಜನರಿಗೆ, ಮುಗ್ಧ ನಾಗರಿಕರ ಜೀವಕ್ಕೆ ಹಾನಿ ಮಾಡುವ ಅವರ ಯೋಜನೆಗೆ ಅಡ್ಡಿಯುಂಟಾಗುತ್ತದೆ ಎಂದು ಹೇಳಿದ್ದಾರೆ. ಅಲ್​-ಖೈದಾ ಹಿರಿಯ ನಾಯಕನನ್ನು ಬಿಟ್ಟರೆ ಇನ್ಯಾರೂ ಸತ್ತಿಲ್ಲ. ನಾವು MQ-9 ಏರ್​ಕ್ರಾಫ್ಟ್​ ಬಳಸಿ ದಾಳಿ ನಡೆಸಿದ್ದೆವು ಎಂದೂ ಮಾಹಿತಿ ನೀಡಿದ್ದಾರೆ. 

ದಕ್ಷಿಣ ಸಿರಿಯಾದಲ್ಲಿರುವ ಯುಎಸ್​ ಔಟ್​​ಪೋಸ್ಟ್​ ಮೇಲೆ ಅಲ್​-ಖೈದಾ ದಾಳಿ ನಡೆಸಿದ ಎರಡೇ ದಿನದಲ್ಲಿ ಯುಎಸ್ ಸೇನೆ ಪ್ರತಿದಾಳಿ ನಡೆಸಿದೆ.  ಅಲ್​-ಖೈದಾ ಉಗ್ರಸಂಘಟನೆ ಈ ಸಿರಿಯಾವನ್ನು ತಮ್ಮ ಸುರಕ್ಷಿತ ತಾಣವನ್ನಾಗಿ ರೂಪಿಸಿಕೊಳ್ಳಲು ಸಿದ್ಧತೆ ನಡೆಸುತ್ತಿದೆ. ಅಮೆರಿಕ ಮತ್ತು ನಮ್ಮ ಮೈತ್ರಿ ರಾಷ್ಟ್ರಗಳ ಜನರಿಗೆ ಬೆದರಿಕೆ ಒಡ್ಡುವುದನ್ನು ಮುಂದುವರಿಸಿದೆ ಎಂದೂ ಜಾನ್ ರಿಗ್ಸ್ಬೀ ತಿಳಿಸಿದ್ದಾರೆ. ಆದರೆ ಸಿರಿಯಾದ ಯಾವ ಭಾಗದಲ್ಲಿ ಡ್ರೋಣ್​ ದಾಳಿ ನಡೆಸಲಾಗಿದೆ ಎಂಬುದನ್ನು ಸೇನಾ ಮೇಜರ್​ ತಿಳಿಸಿಲ್ಲ.

ಇದನ್ನೂ ಓದಿ: Feng Shui: ಮನೆಯಲ್ಲಿ ಸೌಭಾಗ್ಯ ನೆಲೆಸಬೇಕೆಂದರೆ ಫೆಂಗ್ ಶೂಯಿ ಪದ್ಧತಿಯಲ್ಲಿ ಈ ಮೂರು ನಿಯಮ ಪಾಲಿಸಿ

ರಾಯನ್​ ರಾಜ್​ ಸರ್ಜಾ ಹುಟ್ಟುಹಬ್ಬದ ಫೋಟೋ ಗ್ಯಾಲರಿ; ಸೆಲೆಬ್ರಿಟಿಗಳ ಜೊತೆ ಚಿರು-ಮೇಘನಾ ಪುತ್ರ ಮಿಂಚಿಂಗ್

Published On - 9:06 am, Sat, 23 October 21

20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್