AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಿರಿಯಾದಲ್ಲಿ ಯುಎಸ್​ ಸೇನೆಯಿಂದ ಡ್ರೋಣ್​ ದಾಳಿ; ಅಲ್​ ಖೈದಾ ಹಿರಿಯ ನಾಯಕ ಅಬ್ದುಲ್​ ಹಮೀದ್​ ಹತ್ಯೆ

ಅಲ್​-ಖೈದಾ ಉಗ್ರಸಂಘಟನೆ ಈ ಸಿರಿಯಾವನ್ನು ತಮ್ಮ ಸುರಕ್ಷಿತ ತಾಣವನ್ನಾಗಿ ರೂಪಿಸಿಕೊಳ್ಳಲು ಸಿದ್ಧತೆ ನಡೆಸುತ್ತಿದೆ. ಅಮೆರಿಕ ಮತ್ತು ನಮ್ಮ ಮೈತ್ರಿ ರಾಷ್ಟ್ರಗಳ ಜನರಿಗೆ ಬೆದರಿಕೆ ಒಡ್ಡುವುದನ್ನು ಮುಂದುವರಿಸಿದೆ ಎಂದು ಯುಎಸ್​ ಸೇನಾ ಮೇಜರ್​ ಜಾನ್ ರಿಗ್ಸ್ಬೀ ತಿಳಿಸಿದ್ದಾರೆ.

ಸಿರಿಯಾದಲ್ಲಿ ಯುಎಸ್​ ಸೇನೆಯಿಂದ ಡ್ರೋಣ್​ ದಾಳಿ; ಅಲ್​ ಖೈದಾ ಹಿರಿಯ ನಾಯಕ ಅಬ್ದುಲ್​ ಹಮೀದ್​ ಹತ್ಯೆ
ಸಾಂಕೇತಿಕ ಚಿತ್ರ
TV9 Web
| Edited By: |

Updated on:Oct 23, 2021 | 9:12 AM

Share

ಯುಎಸ್​ ಸೇನೆ ಸಿರಿಯಾದಲ್ಲಿ ನಡೆಸಿದ ಡ್ರೋಣ್​ ದಾಳಿ (Drone Strike)ಗೆ ಅಲ್​ ಖೈದಾ (al-Qaeda) ಉಗ್ರಸಂಘಟನೆಯ ಹಿರಿಯ ನಾಯಕ ಅಬ್ದುಲ್​ ಹಮೀದ್​ ಅಲ್​ ಮತಾರ್​​ ಬಲಿಯಾಗಿದ್ದಾನೆ. ಈ ಬಗ್ಗೆ ಯುಎಸ್​ ಸೆಂಟ್ರಲ್​ ಕಮಾಂಡ್​ ವಕ್ತಾರ ಮಾಹಿತಿ ನೀಡಿದ್ದಾರೆ.  ಯುಎಸ್  ಸೇನೆಯ ಮೇಜರ್ ಜಾನ್ ರಿಗ್ಸ್ಬೀ ಶುಕ್ರವಾರ ರಾತ್ರಿ ಹೇಳಿಕೆ ಬಿಡುಗಡೆ ಮಾಡಿದ್ದು, ಅಲ್​ ಖೈದಾ ಹಿರಿಯ ನಾಯಕನಾಗಿದ್ದ ಹಮೀದ್​ ಹತ್ಯೆಯಿಂದಾಗಿ ಖಂಡಿತವಾಗಿಯೂ ಆ ಉಗ್ರ ಸಂಘಟನೆಗೆ ಹಿನ್ನಡೆಯಾಗುತ್ತದೆ. ಅವರು ಮತ್ತೊಂದು ಜಾಗತಿಕ ದಾಳಿ ನಡೆಸುವುದು, ಯುಎಸ್​ ನಾಗರಿಕರ, ನಮ್ಮ ಸಹಭಾಗಿ ದೇಶಗಳ ಜನರಿಗೆ, ಮುಗ್ಧ ನಾಗರಿಕರ ಜೀವಕ್ಕೆ ಹಾನಿ ಮಾಡುವ ಅವರ ಯೋಜನೆಗೆ ಅಡ್ಡಿಯುಂಟಾಗುತ್ತದೆ ಎಂದು ಹೇಳಿದ್ದಾರೆ. ಅಲ್​-ಖೈದಾ ಹಿರಿಯ ನಾಯಕನನ್ನು ಬಿಟ್ಟರೆ ಇನ್ಯಾರೂ ಸತ್ತಿಲ್ಲ. ನಾವು MQ-9 ಏರ್​ಕ್ರಾಫ್ಟ್​ ಬಳಸಿ ದಾಳಿ ನಡೆಸಿದ್ದೆವು ಎಂದೂ ಮಾಹಿತಿ ನೀಡಿದ್ದಾರೆ. 

ದಕ್ಷಿಣ ಸಿರಿಯಾದಲ್ಲಿರುವ ಯುಎಸ್​ ಔಟ್​​ಪೋಸ್ಟ್​ ಮೇಲೆ ಅಲ್​-ಖೈದಾ ದಾಳಿ ನಡೆಸಿದ ಎರಡೇ ದಿನದಲ್ಲಿ ಯುಎಸ್ ಸೇನೆ ಪ್ರತಿದಾಳಿ ನಡೆಸಿದೆ.  ಅಲ್​-ಖೈದಾ ಉಗ್ರಸಂಘಟನೆ ಈ ಸಿರಿಯಾವನ್ನು ತಮ್ಮ ಸುರಕ್ಷಿತ ತಾಣವನ್ನಾಗಿ ರೂಪಿಸಿಕೊಳ್ಳಲು ಸಿದ್ಧತೆ ನಡೆಸುತ್ತಿದೆ. ಅಮೆರಿಕ ಮತ್ತು ನಮ್ಮ ಮೈತ್ರಿ ರಾಷ್ಟ್ರಗಳ ಜನರಿಗೆ ಬೆದರಿಕೆ ಒಡ್ಡುವುದನ್ನು ಮುಂದುವರಿಸಿದೆ ಎಂದೂ ಜಾನ್ ರಿಗ್ಸ್ಬೀ ತಿಳಿಸಿದ್ದಾರೆ. ಆದರೆ ಸಿರಿಯಾದ ಯಾವ ಭಾಗದಲ್ಲಿ ಡ್ರೋಣ್​ ದಾಳಿ ನಡೆಸಲಾಗಿದೆ ಎಂಬುದನ್ನು ಸೇನಾ ಮೇಜರ್​ ತಿಳಿಸಿಲ್ಲ.

ಇದನ್ನೂ ಓದಿ: Feng Shui: ಮನೆಯಲ್ಲಿ ಸೌಭಾಗ್ಯ ನೆಲೆಸಬೇಕೆಂದರೆ ಫೆಂಗ್ ಶೂಯಿ ಪದ್ಧತಿಯಲ್ಲಿ ಈ ಮೂರು ನಿಯಮ ಪಾಲಿಸಿ

ರಾಯನ್​ ರಾಜ್​ ಸರ್ಜಾ ಹುಟ್ಟುಹಬ್ಬದ ಫೋಟೋ ಗ್ಯಾಲರಿ; ಸೆಲೆಬ್ರಿಟಿಗಳ ಜೊತೆ ಚಿರು-ಮೇಘನಾ ಪುತ್ರ ಮಿಂಚಿಂಗ್

Published On - 9:06 am, Sat, 23 October 21

Follow Us
ಚಾಮರಾಜನಗರವನ್ನು 'ಕಾಡುಗಳ್ಳ ಮುಕ್ತ' ಮಾಡಲು ಸರ್ಕಾರದ ಬಿಗ್ ಪ್ಲಾನ್
ಚಾಮರಾಜನಗರವನ್ನು 'ಕಾಡುಗಳ್ಳ ಮುಕ್ತ' ಮಾಡಲು ಸರ್ಕಾರದ ಬಿಗ್ ಪ್ಲಾನ್
ಬ್ರಿಕ್ಸ್​ ವೇದಿಕೆಯಲ್ಲಿ ಗಮನಸೆಳೆದ ರಾಮೇಶ್ವರಂ ದೇವಾಲಯದ ಸ್ಕ್ರೀನ್
ಬ್ರಿಕ್ಸ್​ ವೇದಿಕೆಯಲ್ಲಿ ಗಮನಸೆಳೆದ ರಾಮೇಶ್ವರಂ ದೇವಾಲಯದ ಸ್ಕ್ರೀನ್
ಇನ್ಸ್‌ಪೆಕ್ಟರ್ ಧನಂಜಯ್‌ಗೆ ಮಾಜಿ ಸಂಸದ ಪ್ರತಾಪ್ ಸಿಂಹ ಎಚ್ಚರಿಕೆ
ಇನ್ಸ್‌ಪೆಕ್ಟರ್ ಧನಂಜಯ್‌ಗೆ ಮಾಜಿ ಸಂಸದ ಪ್ರತಾಪ್ ಸಿಂಹ ಎಚ್ಚರಿಕೆ
ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಐದನೇ ವರ್ಷದ ಗಣೇಶೋತ್ಸವಕ್ಕೆ ಸಿದ್ಧತೆ
ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಐದನೇ ವರ್ಷದ ಗಣೇಶೋತ್ಸವಕ್ಕೆ ಸಿದ್ಧತೆ
ಸದ್ಯದಲ್ಲೇ ಸಚಿವ ಸತೀಶ್ ಜಾರಕಿಹೊಳಿಗೆ ಮತ್ತೊಂದು ಶಾಕ್!
ಸದ್ಯದಲ್ಲೇ ಸಚಿವ ಸತೀಶ್ ಜಾರಕಿಹೊಳಿಗೆ ಮತ್ತೊಂದು ಶಾಕ್!
ಗಗನ್​-ತಾಂಡವ್ ರಾಮ್​​ಗೆ ಕ್ಲಾಸ್; ದೊಡ್ಡ ಸೂಚನೆ ಕೊಟ್ಟ ಸುದೀಪ್
ಗಗನ್​-ತಾಂಡವ್ ರಾಮ್​​ಗೆ ಕ್ಲಾಸ್; ದೊಡ್ಡ ಸೂಚನೆ ಕೊಟ್ಟ ಸುದೀಪ್
ಕೊಪ್ಪಳ ಸರ್ಕಾರಿ ಆಸ್ಪತ್ರೆಯಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ: ರೋಗಿಗಳ ಪರದಾಟ!
ಕೊಪ್ಪಳ ಸರ್ಕಾರಿ ಆಸ್ಪತ್ರೆಯಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ: ರೋಗಿಗಳ ಪರದಾಟ!
ಮುದ್ದಾದ ಮಗಳಿದ್ರೂ ಪ್ರಿಯಕರನ ಹಿಂದೆ ಬಿದ್ದು ಗಂಡನ ಕಥೆ ಮುಗಿಸಿದ ಹೆಂಡ್ತಿ!
ಮುದ್ದಾದ ಮಗಳಿದ್ರೂ ಪ್ರಿಯಕರನ ಹಿಂದೆ ಬಿದ್ದು ಗಂಡನ ಕಥೆ ಮುಗಿಸಿದ ಹೆಂಡ್ತಿ!
ಹಾಸನ: ಬೆಂಗಳೂರು-ಮಂಗಳೂರು ಹೆದ್ದಾರಿಯಲ್ಲಿ ಪೆಟ್ರೋಲ್ ಟ್ಯಾಂಕರ್ ಪಲ್ಟಿ
ಹಾಸನ: ಬೆಂಗಳೂರು-ಮಂಗಳೂರು ಹೆದ್ದಾರಿಯಲ್ಲಿ ಪೆಟ್ರೋಲ್ ಟ್ಯಾಂಕರ್ ಪಲ್ಟಿ
ಶಾರ್ಟ್​ ಸರ್ಕ್ಯೂಟ್​ಗೆ ಸಿಲಿಂಡರ್​ ಸ್ಫೋಟ; 21 ಲಕ್ಷ ರೂ. ಕಳೆದುಕೊಂಡ ಮಾಲೀಕ
ಶಾರ್ಟ್​ ಸರ್ಕ್ಯೂಟ್​ಗೆ ಸಿಲಿಂಡರ್​ ಸ್ಫೋಟ; 21 ಲಕ್ಷ ರೂ. ಕಳೆದುಕೊಂಡ ಮಾಲೀಕ