AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಉಕ್ರೇನ್​ ಮೇಲೆ ಶೀಘ್ರದಲ್ಲೇ ದಾಳಿ ಮಾಡಲಿದೆ ರಷ್ಯಾ ?!-48 ಗಂಟೆಯಲ್ಲಿ ಉಕ್ರೇನ್​ ತೊರೆಯಲು ತನ್ನ ಪ್ರಜೆಗಳಿಗೆ ಸೂಚಿಸಿದ ಅಮೆರಿಕ​ ಶ್ವೇತ ಭವನ

ರಷ್ಯಾ ಇದೀಗ ಪಾಶ್ಚಿಮಾತ್ಯ ನಿರ್ಬಂಧಗಳನ್ನು ತೀವ್ರವಾಗಿಸುತ್ತಿದೆ. ಉಕ್ರೇನ್​​ಗೆ ಬೆಂಬಲವಾಗಿ ನಿಂತಿರುವ ಅಟ್ಲಾಂಟಿಕ್ ಒಪ್ಪಂದ ಸಂಸ್ಥೆ (North Atlantic Treaty Organization- NATO )ಯ ಪಡೆಯನ್ನು ವಾಪಸ್​ ಕಳಿಸಲು ಎಲ್ಲ ರೀತಿಯ ಪ್ರಯತ್ನವನ್ನೂ ಪುತಿನ್ ಮಾಡುತ್ತಿದ್ದಾರೆ.

ಉಕ್ರೇನ್​ ಮೇಲೆ ಶೀಘ್ರದಲ್ಲೇ ದಾಳಿ ಮಾಡಲಿದೆ ರಷ್ಯಾ ?!-48 ಗಂಟೆಯಲ್ಲಿ ಉಕ್ರೇನ್​ ತೊರೆಯಲು ತನ್ನ ಪ್ರಜೆಗಳಿಗೆ ಸೂಚಿಸಿದ ಅಮೆರಿಕ​ ಶ್ವೇತ ಭವನ
ಶ್ವೇತ ಭವನದ ರಾಷ್ಟ್ರೀಯ ಕಾರ್ಯದರ್ಶಿ ಸಲಹೆಗಾರ ಜೇಕ್​ ಸುಲ್ಲಿವಾನ್​
TV9 Web
| Edited By: |

Updated on:Feb 12, 2022 | 4:10 PM

Share

ಉಕ್ರೇನ್​ ಮತ್ತು ರಷ್ಯಾ (Russia) ನಡುವೆ ಯುದ್ಧದ ಕಾರ್ಮೋಡ ಕವಿದು ಹಲವು ದಿನಗಳೇ ಕಳೆದಿವೆ. ಯುಎಸ್​ ಸೇರಿ ನ್ಯಾಟೋ ಮಿತ್ರರಾಷ್ಟ್ರಗಳು ಉಕ್ರೇನ್​ (Ukraine)ಬೆಂಬಲಕ್ಕೆ ನಿಂತಿವೆ. ಇಷ್ಟೆಲ್ಲದರ ಮಧ್ಯೆ ಯುಎಸ್​ ಉಕ್ರೇನ್​​ನಲ್ಲಿರುವ ಅಮೆರಿಕ ಪ್ರಜೆಗಳಿಗೆ ಶುಕ್ರವಾರ ಎಚ್ಚರಿಕೆಯೊಂದನ್ನು ನೀಡಿದ್ದು, ಇನ್ನು 48ಗಂಟೆಗಳಲ್ಲಿ ಉಕ್ರೇನ್​ನಿಂದ ವಾಪಸ್​ ದೇಶಕ್ಕೆ ತೆರಳಿ ಎಂದು ಹೇಳಿದೆ. ಶೀಘ್ರದಲ್ಲೇ ರಷ್ಯಾ, ಉಕ್ರೇನ್​ ಮೇಲೆ ವೈಮಾನಿಕ ದಾಳಿ ನಡೆಸಲು ಪ್ರಾರಂಭ ಮಾಡಲಿದೆ ಎಂಬ ಮಾಹಿತಿ ಸಿಕ್ಕಿದೆ. ಈ ದಾಳಿಯಲ್ಲಿ ಸಿಲುಕಿ ಸಂಕಷ್ಟಕ್ಕೀಡಾಗುವ ಮೊದಲೇ ಉಕ್ರೇನ್ ತೊರೆದುಬಿಡಿ ಎಂದು ಯುಎಸ್​ ತನ್ನ ನಾಗರಿಕರಿಗೆ ಹೇಳಿದೆ ಎಂದು ಅಮೆರಿಕ ಶ್ವೇತ ಭವನದ (White House) ರಾಷ್ಟ್ರೀಯ ಕಾರ್ಯದರ್ಶಿ ಸಲಹೆಗಾರ ಜೇಕ್​ ಸುಲ್ಲಿವಾನ್​ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಅಲ್ಲದೆ, ಉಕ್ರೇನ್​ ಮೇಲೆ ದಾಳಿ ನಡೆಸಲು ರಷ್ಯಾದ ಲಕ್ಷಕ್ಕೂ ಹೆಚ್ಚು ಸೈನಿಕರು ಸಿದ್ಧವಾಗಿ ನಿಂತಿದ್ದಾರೆ. ಯಾವಾಗ, ಏನು ಬೇಕಾದರೂ ಆಗಬಹುದು ಎಂದು ಹೇಳಿದ್ದಾರೆ.

ರಷ್ಯಾದ ನೆರೆರಾಷ್ಟ್ರ ಚೀನಾದ ಬೀಜಿಂಗ್​​ನಲ್ಲಿ ಚಳಿಗಾಲದ ಒಲಿಂಪಿಕ್​ ನಡೆಯುತ್ತಿರುವ ಹಿನ್ನೆಲೆಯಲ್ಲಿ ರಷ್ಯಾ ಸರ್ಕಾರ ಈಗ ಉಕ್ರೇನ್​ ಮೇಲೆ ದಾಳಿಯಂತ ಇನ್ಯಾವುದೇ ಬಿಕ್ಕಟ್ಟನ್ನೂ ಉಂಟು ಮಾಡುವುದಿಲ್ಲ ಎಂಬ ವಿಶ್ಲೇಷಣೆಯನ್ನೆಲ್ಲ ಅಲ್ಲಗಳೆದ ಅವರು, ಹಾಗೆಲ್ಲ ಅಂದುಕೊಳ್ಳುವುದು ಸುಮ್ಮನೆ. ಫೆ.20ಕ್ಕೆ ಒಲಿಂಪಿಕ್​ ಮುಗಿಯುತ್ತದೆ. ಅಷ್ಟರೊಳಗೆ ರಷ್ಯಾ ಉಕ್ರೇನ್​ ಮೇಲೆ ದಾಳಿ ನಡೆಸಿದರೂ ಆಶ್ಚರ್ಯವಿಲ್ಲ ಎಂದಿದ್ದಾರೆ. ರಷ್ಯಾ ಮತ್ತು ಉಕ್ರೇನ್​ ನಡುವಿನ ಬಿಕ್ಕಟ್ಟನ್ನು ಶಮನ ಮಾಡುವ ಪ್ರಯತ್ನದ ಭಾಗವಾಗಿ ಫ್ರಾನ್ಸ್ ಅಧ್ಯಕ್ಷ ಇಮ್ಯಾನುಯೇಲ್​ ಮ್ಯಾಕ್ರೇನ್​ ರಷ್ಯಾಕ್ಕೆ ಭೇಟಿ ನೀಡಿ ಪುತಿನ್​​ರೊಟ್ಟಿಗೆ ಮಾತುಕತೆ ನಡೆಸಿದ್ದಾರೆ. ಹಾಗೇ, ಯುಎಸ್ ಅಧ್ಯಕ್ಷ ಜೋ ಬೈಡನ್​ ಕೂಡ ಪುತಿನ್​​ರಿಗೆ ಕರೆ ಮಾಡಿ ಮಾತನಾಡಲಿದ್ದಾರೆ ಎಂದೂ ಶ್ವೇತ ಭವನದ ಮೂಲಗಳಿಂದ ಮಾಹಿತಿ ಸಿಕ್ಕಿದೆ.

ರಷ್ಯಾ ಇದೀಗ ಪಾಶ್ಚಿಮಾತ್ಯ ನಿರ್ಬಂಧಗಳನ್ನು ತೀವ್ರವಾಗಿಸುತ್ತಿದೆ. ಉಕ್ರೇನ್​​ಗೆ ಬೆಂಬಲವಾಗಿ ನಿಂತಿರುವ ಅಟ್ಲಾಂಟಿಕ್ ಒಪ್ಪಂದ ಸಂಸ್ಥೆ (North Atlantic Treaty Organization- NATO )ಯ ಪಡೆಯನ್ನು ವಾಪಸ್​ ಕಳಿಸಲು ಎಲ್ಲ ರೀತಿಯ ಪ್ರಯತ್ನವನ್ನೂ ಪುತಿನ್ ಮಾಡುತ್ತಿದ್ದಾರೆ. ಹಾಗಿದ್ದಾಗ್ಯೂ ಕೂಡನ ನ್ಯಾಟೋ ಅತ್ಯುತ್ತಮವಾಗಿ, ಹಿಂದೆಂದಿಗಿಂತಲೂ ಮಿಗಿಲಾದ ಒಗ್ಗಟ್ಟಿನಿಂದ ಕೆಲಸ ಮಾಡುತ್ತಿದೆ. ಅಷ್ಟೇ ಅಲ್ಲ, ನ್ಯಾಟೋ ತನ್ನ ಉದ್ದೇಶವನ್ನು ತುಂಬ ಚೆನ್ನಾಗಿ ಅರಿತುಕೊಂಡು, ಕ್ರಿಯಾತ್ಮಕವಾಗಿ ಮುಂದುವರಿಯುತ್ತಿದೆ ಎಂದೂ ಜೇಕ್​ ಸುಲ್ಲಿವಾನ್​ ತಿಳಿಸಿದ್ದಾರೆ. ಅಂದಹಾಗೇ, ನ್ಯಾಟೋ ಎಂಬುದು ಅಮೆರಿಕ ಮತ್ತು ಮಿತ್ರರಾಷ್ಟ್ರಗಳ ಸೇನಾ ಒಕ್ಕೂಟವಾಗಿದೆ. ಉಕ್ರೇನ್​ ವಿರುದ್ಧ ನ್ಯಾಟೋ ಶಕ್ತಿಯನ್ನು ಬಲಪಡಿಸಿಲು ಅಮೆರಿಕ ಕಳೆದ ತಿಂಗಳು ತನ್ನ ಸೇನೆಯ 3000 ಯೋಧರನ್ನು ಪೂರ್ವ ಯುರೋಪ್​​ಗೆ ಕಳಿಸಿತ್ತು.

ದಾಳಿ ಮಾಡುವ ಯೋಜನೆಯಿಲ್ಲ: ರಷ್ಯಾದ ನೌಕಾಪಡೆ ಸೇರಿ ಇನ್ನಿತರ ಘಟಕಗಳ ಸೈನಿಕರು ಉಕ್ರೇನ್​ನ ದಕ್ಷಿಣ, ಪೂರ್ವ ಮತ್ತು ಉತ್ತರ ಭಾಗದಲ್ಲಿ ಸುತ್ತುವರಿದಿವೆ. ಹಾಗಿದ್ದಾಗ್ಯೂ ಕೂಡ ರಷ್ಯಾ ತಾನು ಉಕ್ರೇನ್​ ಮೇಲೆ ಆಕ್ರಮಣ ಮಾಡುವ ಯಾವುದೇ ಯೋಜನೆ, ಯೋಚನೆಯನ್ನು ಹೊಂದಿಲ್ಲ ಎಂದು ಹೇಳಿದೆ. ಆದರೆ 2014ರಲ್ಲಿ ವಶಪಡಿಸಿಕೊಂಡಿರುವ ಕ್ರಿಮಿಯಾ ಪ್ರದೇಶದ ಮೇಲೆ ರಷ್ಯಾ ಸಂಪೂರ್ಣ ನಿಯಂತ್ರಣ ಸಾಧಿಸಿದ್ದಲ್ಲದೆ, ಉಕ್ರೇನ್​ನ ಡಾನ್​ಬಾಸ್​ ಪ್ರದೇಶದಲ್ಲಿರುವ ಪ್ರತ್ಯೇಕತಾವಾದಿಗಳಿಗೆ ಬೆಂಬಲ ನೀಡುತ್ತಿದೆ. ಈ ಬಂಡುಕೋರರು ಈಗಾಗಲೇ  ಡಾನ್​ಬಾಸ್​ನ್ನು ನಿಯಂತ್ರಣಕ್ಕೆ ತೆಗೆದುಕೊಂಡಿವೆ.  ನಾವು ಉಕ್ರೇನ್​ ಮೇಲೆ ದಾಳಿ ಮಾಡುವುದಿಲ್ಲ. ಆದರೆ ನ್ಯಾಟೋದಲ್ಲಿ ಉಕ್ರೇನ್​ಗೆ ಸದಸ್ಯತ್ವ ಕೊಡಬಾರದು ಎಂಬುದು ನಮ್ಮ ಬಲವಾದ ಆಗ್ರಹ ಎಂದೂ ರಷ್ಯಾ ಸರ್ಕಾರ ಹೇಳಿಕೊಂಡಿದೆ.

ಇದನ್ನೂ ಓದಿ: ಟಿವಿ 9 ವರದಿ ಫಲಶೃತಿ: ಅಕ್ರಮ ಮರಳು ದಂಧೆಯಲ್ಲಿ ಭಾಗಿಯಾಗಿದ್ದ ಶಿಕ್ಷಕನ ಅಮಾನತು

Published On - 4:08 pm, Sat, 12 February 22

Follow Us
ತಮಿಳುನಾಡಿನಲ್ಲಿ ಹೇಗಿದೆ ವಿಜಯ್ ಕ್ರೇಜ್: ಕಣ್ಣಾರೆ ನೋಡಿದ ವಜ್ರಾಂಗ್ ಮಾತು
ತಮಿಳುನಾಡಿನಲ್ಲಿ ಹೇಗಿದೆ ವಿಜಯ್ ಕ್ರೇಜ್: ಕಣ್ಣಾರೆ ನೋಡಿದ ವಜ್ರಾಂಗ್ ಮಾತು
ಮ್ಯಾಜಿಕ್ ನಂಬರ್ ಗಿಂತಲೂ ಹೆಚ್ಚಿನ ಬೆಂಬಲ: ವಿಜಯ್​​ ಕೈ ಹಿಡಿದ ಪಕ್ಷಗಳಾವುವು
ಮ್ಯಾಜಿಕ್ ನಂಬರ್ ಗಿಂತಲೂ ಹೆಚ್ಚಿನ ಬೆಂಬಲ: ವಿಜಯ್​​ ಕೈ ಹಿಡಿದ ಪಕ್ಷಗಳಾವುವು
ತಮಿಳುನಾಡಿನಲ್ಲಿ TVK ಸರ್ಕಾರ ಫಿಕ್ಸ್‌, ಮ್ಯಾಜಿಕ್ ನಂಬರ್ ಹೊಂದಿಸಿದ ವಿಜಯ್
ತಮಿಳುನಾಡಿನಲ್ಲಿ TVK ಸರ್ಕಾರ ಫಿಕ್ಸ್‌, ಮ್ಯಾಜಿಕ್ ನಂಬರ್ ಹೊಂದಿಸಿದ ವಿಜಯ್
ವಿಜಯ್ ಜೊತೆ ನಟಿಸಿರುವ ಕನ್ನಡದ ನಟ ವಜ್ರಾಂಗ್ ದಳಪತಿ ಬಗ್ಗೆ ಹೇಳಿದ್ದೇನು?
ವಿಜಯ್ ಜೊತೆ ನಟಿಸಿರುವ ಕನ್ನಡದ ನಟ ವಜ್ರಾಂಗ್ ದಳಪತಿ ಬಗ್ಗೆ ಹೇಳಿದ್ದೇನು?
ನನ್ನ ಎಲ್ಲಾ ಅಸ್ತಿ ಅನಾಥ ಆಶ್ರಮಕ್ಕೆ ಕೊಡ್ತೇನೆ ಎಂದ ತಾಯಿ
ನನ್ನ ಎಲ್ಲಾ ಅಸ್ತಿ ಅನಾಥ ಆಶ್ರಮಕ್ಕೆ ಕೊಡ್ತೇನೆ ಎಂದ ತಾಯಿ
ತಮಿಳುನಾಡಿನ ಒಳರಾಜಕೀಯನ ಎಳೆಎಳೆಯಾಗಿ ಬಿಚ್ಚಿಟ್ಟ ಕಾಂಗ್ರೆಸ್ ಉಸ್ತುವಾರಿ
ತಮಿಳುನಾಡಿನ ಒಳರಾಜಕೀಯನ ಎಳೆಎಳೆಯಾಗಿ ಬಿಚ್ಚಿಟ್ಟ ಕಾಂಗ್ರೆಸ್ ಉಸ್ತುವಾರಿ
ಆಪ್ತ ಸಹಾಯಕನ ಅರಿಶಿಣ ಶಾಸ್ತ್ರದಲ್ಲಿ ಪತ್ನಿ ಜೊತೆ ಶರಣು ಸಲಗರ ಡ್ಯಾನ್ಸ್​​
ಆಪ್ತ ಸಹಾಯಕನ ಅರಿಶಿಣ ಶಾಸ್ತ್ರದಲ್ಲಿ ಪತ್ನಿ ಜೊತೆ ಶರಣು ಸಲಗರ ಡ್ಯಾನ್ಸ್​​
ಜಿಗಣಿ ಪೊಲೀಸರ ಭರ್ಜರಿ ಬೇಟೆ: ಕೋಟ್ಯಂತರ ರೂ ಮೌಲ್ಯದ 250 ಕೆಜಿ ಗಾಂಜಾ ಜಪ್ತಿ
ಜಿಗಣಿ ಪೊಲೀಸರ ಭರ್ಜರಿ ಬೇಟೆ: ಕೋಟ್ಯಂತರ ರೂ ಮೌಲ್ಯದ 250 ಕೆಜಿ ಗಾಂಜಾ ಜಪ್ತಿ
ಸಂಚಲನ ಮೂಡಿಸಿದ ಬಿಎಲ್ ಸಂತೋಷ್ ಪೋಸ್ಟ್
ಸಂಚಲನ ಮೂಡಿಸಿದ ಬಿಎಲ್ ಸಂತೋಷ್ ಪೋಸ್ಟ್
ಬಿಎಸ್​ವೈ ಅಭಿಮಾನೋತ್ಸವದಲ್ಲಿ ಮಾಜಿ ಸಿಎಂಗೆ ಅದೃಷ್ಟ ತಂದ ಕಾರಿನ ಪ್ರದರ್ಶನ
ಬಿಎಸ್​ವೈ ಅಭಿಮಾನೋತ್ಸವದಲ್ಲಿ ಮಾಜಿ ಸಿಎಂಗೆ ಅದೃಷ್ಟ ತಂದ ಕಾರಿನ ಪ್ರದರ್ಶನ