ಆಸ್ಟ್ರಿಯಾದಲ್ಲಿ ವಂದೇ ಮಾತರಂ ಗೀತೆಯೊಂದಿಗೆ ಪ್ರಧಾನಿ ಮೋದಿಯನ್ನು ಸ್ವಾಗತಿಸಿದ ವಿಜಯ್ ಉಪಾಧ್ಯಾಯ ಯಾರು?

ಪ್ರಧಾನಿ ನರೇಂದ್ರ ಮೋದಿ 40 ವರ್ಷಗಳ ಬಳಿಕ ಆಸ್ಟ್ರಿಯಾಗೆ ತೆರಳಿದ್ದು ಅಲ್ಲಿ ಅವರಿಗೆ ಭವ್ಯ ಸ್ವಾಗತ ದೊರೆತಿದೆ. ಭಾರತ ಮೂಲದ ಕಲಾವಿದರೊಬ್ಬರು ವಂದೇ ಮಾತರಂ ಗಾಯನದ ಮೂಲಕ ಮೋದಿಯವರಿಗೆ ಸ್ವಾಗತ ಕೋರಿದ್ದಾರೆ.

Follow us
|

Updated on: Jul 10, 2024 | 1:12 PM

ಯಶಸ್ವಿ ರಷ್ಯಾ ಪ್ರವಾಸದ ಬಳಿಕ ಪ್ರಧಾನಿ ನರೇಂದ್ರ ಮೋದಿ(Narendra Modi) ಇದೀಗ ಐರೋಪ್ಯ ರಾಷ್ಟ್ರ ಆಸ್ಟ್ರಿಯಾ ತಲುಪಿದ್ದಾರೆ. ಇಲ್ಲಿ ಅವರು ವಿಮಾನದಿಂದ ಇಳಿದ ತಕ್ಷಣ ಅವರಿಗೆ ಭವ್ಯ ಸ್ವಾಗತ ದೊರೆಯಿತು. ಅವರಿಗೆ ಸೂಕ್ತ ರೆಡ್ ಕಾರ್ಪೆಟ್ ಹಾಕಿ ಸ್ವಾಗತಿಸಲಾಯಿತು. ಇಷ್ಟೇ ಅಲ್ಲ, ಮೋದಿಯನ್ನು ಸ್ವಾಗತಿಸಲು ಆಸ್ಟ್ರಿಯಾದ ವಿದೇಶಾಂಗ ಸಚಿವ ಅಲೆಕ್ಸಾಂಡರ್ ಶಾಲೆನ್‌ಬರ್ಗ್ ಸ್ವತಃ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದರು. ಈ ಸ್ವಾಗತವನ್ನು ಖುದ್ದು ಪ್ರಧಾನಿ ಮೋದಿಯೇ ಕಣ್ತುಂಬಿಕೊಂಡರು.

ವಿಯೆನ್ನಾದಲ್ಲಿ ಆಸ್ಟ್ರೀಯಾದ ಕಲಾವಿದರು ಪ್ರಧಾನಿಯವರನ್ನು ಸ್ವಾಗತಿಸಿ ‘ವಂದೇ ಮಾತರಂ’ ಗೀತೆ ಮೂಲಕ ಸ್ವಾಗತಿಸಿದರು. ಈ ಆಸ್ಟ್ರಿಯನ್ ಆರ್ಕೆಸ್ಟ್ರಾ ತಂಡದ ಅದ್ಭುತ ಪ್ರಸ್ತುತಿಯ ವೀಡಿಯೊವನ್ನು ಪ್ರಧಾನಿ ಮೋದಿ ತಮ್ಮ ಎಕ್ಸ್ ಹ್ಯಾಂಡಲ್‌ನಲ್ಲಿ ಹಂಚಿಕೊಂಡಿದ್ದಾರೆ.

ಈ ಆರ್ಕೆಸ್ಟ್ರಾದ ನೇತೃತ್ವವಹಿಸಿದ್ದ ವಿಜಯ್ ಉಪಾಧ್ಯಾಯ ಯಾರು ಎನ್ನುವ ಕುರಿತು ಮಾಹಿತಿ ಇಲ್ಲಿದೆ ವಿಜಯ್ ಉಪಾಧ್ಯಾಯ ಅವರು ತ್ತರ ಪ್ರದೇಶದ ಲಕ್ನೋ ನಿವಾಸಿಯಾಗಿದ್ದಾರೆ. ಈ ಆರ್ಕೆಸ್ಟ್ರಾದಲ್ಲಿ ಒಟ್ಟು 50 ಮಂದಿ ಇದ್ದರು.

ಮತ್ತಷ್ಟು ಓದಿ:PM Modi Russia Visit: ಪ್ರಧಾನಿ ನರೇಂದ್ರ ಮೋದಿ ರಷ್ಯಾ ಪ್ರವಾಸ, ಇಂದಿನಿಂದ ಶುರು

ಉಪಾಧ್ಯಾಯ ಅಂತಾರಾಷ್ಟ್ರೀಯ ಸಂಗೀತ ರಂಗದಲ್ಲಿ ಅಲೆ ಎಬ್ಬಿಸುತ್ತಿದ್ದಾರೆ. ಅವರು ಪ್ರತಿಷ್ಠಿತ ವಿಯೆನ್ನಾ ವಿಶ್ವವಿದ್ಯಾನಿಲಯದ ಫಿಲ್ಹಾರ್ಮೋನಿಕ್ (ಇತರ ಅಂತರರಾಷ್ಟ್ರೀಯ ಆರ್ಕೆಸ್ಟ್ರಾಗಳಲ್ಲಿ) ನಿರ್ದೇಶಕರಾಗಿದ್ದಾರೆ ಮತ್ತು ಇಂಡಿಯಾ ನ್ಯಾಷನಲ್ ಯೂತ್ ಆರ್ಕೆಸ್ಟ್ರಾವನ್ನು ಸ್ಥಾಪಿಸಿದ್ದಾರೆ.

ಹೆಮ್ಮೆಯ ಭಾರತೀಯರಾಗಿದ್ದಾರೆ ಮತ್ತು ಆಗಾಗ ಭಾರತೀಯ ಶೈಲಿಯ ಸಂಗೀತ ಕಾರ್ಯಕ್ರಮವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ನಿಯೋಜನೆ ಮಾಡುತ್ತಾರೆ.

ಲಕ್ನೋದಲ್ಲಿ ಜನಿಸಿದ ಉಪಾಧ್ಯಾಯ ಅವರ ಸಂಗೀತ ಪಯಣವು ಅವರ ತಾಯಿಯ ಶಿಕ್ಷಣದ ಅಡಿಯಲ್ಲಿ ಪ್ರಾರಂಭವಾಯಿತು, ಪಿಯಾನೋ ಮತ್ತು ನಂತರ ಭಾರತೀಯ ತಾಳವಾದ್ಯ (ತಬಲಾ) ಮತ್ತು ನೃತ್ಯ (ಕಥಕ್) ಕಲಿತಿದ್ದಾರೆ. ಲಕ್ನೋ ವಿಶ್ವವಿದ್ಯಾನಿಲಯದಲ್ಲಿ ಇಂಗ್ಲಿಷ್ ಸಾಹಿತ್ಯ, ಅರ್ಥಶಾಸ್ತ್ರ ಮತ್ತು ಇತಿಹಾಸದಲ್ಲಿ ಅಧ್ಯಯನ ಮಾಡಿದ ನಂತರ, ಉಪಾಧ್ಯಾಯ ಅವರು ಆಸ್ಟ್ರಿಯಾಕ್ಕೆ ತೆರಳಿದರು.

ಉಪಾಧ್ಯಾಯ ಅವರು ತಮ್ಮ ಕೆಲಸದ ಜತೆಗೆ ಜೊತೆಗೆ ಸಂಯೋಜನೆಯತ್ತ ಗಮನಹರಿಸಿದ್ದಾರೆ. 2010 ರಲ್ಲಿ, ಯುವ ಸಂಗೀತಗಾರರನ್ನು ಪೋಷಿಸಲು ಮತ್ತು ಅವರಿಗೆ ಆರ್ಕೆಸ್ಟ್ರಾ ಮತ್ತು ಗಾಯನ ಅನುಭವವನ್ನು ಒದಗಿಸಲು ಉಪಾಧ್ಯಾಯ ಅವರು ಇಂಡಿಯಾ ನ್ಯಾಷನಲ್ ಯೂತ್ ಆರ್ಕೆಸ್ಟ್ರಾ ಮತ್ತು ಕೋರಸ್ ಅನ್ನು ಸ್ಥಾಪಿಸಿದರು.

ಇದು 40 ವರ್ಷಗಳ ನಂತರ ಆಸ್ಟ್ರಿಯಾಕ್ಕೆ ಭಾರತದ ಪ್ರಧಾನಿಯ ಮೊದಲ ಭೇಟಿಯಾಗಿದೆ, 1983 ರಲ್ಲಿ ಇಂದಿರಾ ಗಾಂಧಿಯವರು ಕೊನೆಯ ಬಾರಿಗೆ ಭೇಟಿ ನೀಡಿದ್ದರು. ಆಸ್ಟ್ರಿಯಾಕ್ಕೆ ಭೇಟಿ ನೀಡುವ ಮೊದಲು, ಮೋದಿ ಅವರು ಪ್ರಜಾಪ್ರಭುತ್ವ, ಸ್ವಾತಂತ್ರ್ಯ ಮತ್ತು ಕಾನೂನಿನ ಆಳ್ವಿಕೆಯ ಹಂಚಿಕೆಯ ಮೌಲ್ಯಗಳು ಉಭಯ ದೇಶಗಳು ಸದಾ ನಿಕಟ ಪಾಲುದಾರಿಕೆಯನ್ನು ನಿರ್ಮಿಸುವ ತಳಹದಿಯನ್ನು ರೂಪಿಸುತ್ತವೆ ಎಂದಿದ್ದರು.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ನಾವು ಸೇಡು ತೀರಿಸಿಕೊಂಡರೆ ಬಿಜೆಪಿಗೆ ಜೈಲುಗಳು ಸಾಕಾಗಲ್ಲ: ಹೆಬ್ಬಾಳ್ಕರ್
ನಾವು ಸೇಡು ತೀರಿಸಿಕೊಂಡರೆ ಬಿಜೆಪಿಗೆ ಜೈಲುಗಳು ಸಾಕಾಗಲ್ಲ: ಹೆಬ್ಬಾಳ್ಕರ್
‘ಕನ್ನಡ ಚಿತ್ರರಂಗಕ್ಕೆ ಸಮಿತಿ ಬೇಡ, ಇದರಿಂದ ಚಿತ್ರರಂಗಕ್ಕೆ ನಷ್ಟ’; ಗೋವಿಂದು
‘ಕನ್ನಡ ಚಿತ್ರರಂಗಕ್ಕೆ ಸಮಿತಿ ಬೇಡ, ಇದರಿಂದ ಚಿತ್ರರಂಗಕ್ಕೆ ನಷ್ಟ’; ಗೋವಿಂದು
ತಿರುಮಲ ದೇವಾಲಯದಲ್ಲಿನ ವಿಮಾನ ವೆಂಕಟೇಶ್ವರನ ಮಹತ್ವ ತಿಳಿಯಿರಿ
ತಿರುಮಲ ದೇವಾಲಯದಲ್ಲಿನ ವಿಮಾನ ವೆಂಕಟೇಶ್ವರನ ಮಹತ್ವ ತಿಳಿಯಿರಿ
ಈ ರಾಶಿಯವರು ಆಸ್ತಿಯ ವಿಚಾರವಾಗಿ ಕಾನೂನು ಹೋರಾಟ ಮಾಡಲಿದ್ದೀರಿ
ಈ ರಾಶಿಯವರು ಆಸ್ತಿಯ ವಿಚಾರವಾಗಿ ಕಾನೂನು ಹೋರಾಟ ಮಾಡಲಿದ್ದೀರಿ
ಮುನಿರತ್ನರನ್ನು ದಿಢೀರ್​ ಜಯದೇವ ಆಸ್ಪತ್ರೆಗೆ ಕರೆದುಕೊಂಡು ಹೋದ ಪೊಲೀಸರು
ಮುನಿರತ್ನರನ್ನು ದಿಢೀರ್​ ಜಯದೇವ ಆಸ್ಪತ್ರೆಗೆ ಕರೆದುಕೊಂಡು ಹೋದ ಪೊಲೀಸರು
ಗ್ಯಾರಂಟಿ ಯೋಜನೆ ಜಾರಿ ನಂತರ ನನ್ನನ್ನು ಮುಗಿಸಲು ಷಡ್ಯಂತ್ರ; ಸಿದ್ದರಾಮಯ್ಯ
ಗ್ಯಾರಂಟಿ ಯೋಜನೆ ಜಾರಿ ನಂತರ ನನ್ನನ್ನು ಮುಗಿಸಲು ಷಡ್ಯಂತ್ರ; ಸಿದ್ದರಾಮಯ್ಯ
ಪ್ರವಾಹದಲ್ಲಿ ಸಿಲುಕಿದ 11 ಪ್ರವಾಸಿಗರ ಪ್ರಾಣ ಉಳಿಸಿದ ರಕ್ಷಣಾ ಪಡೆ
ಪ್ರವಾಹದಲ್ಲಿ ಸಿಲುಕಿದ 11 ಪ್ರವಾಸಿಗರ ಪ್ರಾಣ ಉಳಿಸಿದ ರಕ್ಷಣಾ ಪಡೆ
ನಡುರಸ್ತೆಯಲ್ಲಿ ಡೀಸೆಲ್‌ ಟ್ಯಾಂಕರ್‌ಗೆ ಬೆಂಕಿ; ತಪ್ಪಿದ ಭಾರೀ ಅನಾಹುತ
ನಡುರಸ್ತೆಯಲ್ಲಿ ಡೀಸೆಲ್‌ ಟ್ಯಾಂಕರ್‌ಗೆ ಬೆಂಕಿ; ತಪ್ಪಿದ ಭಾರೀ ಅನಾಹುತ
‘ನನಗೂ ಕೆಟ್ಟ ಅನುಭವ ಆಗಿದೆ’; ನೀತು ಶೆಟ್ಟಿ ನೇರ ಮಾತು
‘ನನಗೂ ಕೆಟ್ಟ ಅನುಭವ ಆಗಿದೆ’; ನೀತು ಶೆಟ್ಟಿ ನೇರ ಮಾತು
ಚಿತ್ರದುರ್ಗದಲ್ಲಿ ಈದ್ ಮಿಲಾದ್ ಮೆರವಣಿಗೆ ವೇಳೆ ಪ್ಯಾಲೆಸ್ತೀನ್ ಪರ ಘೋಷಣೆ
ಚಿತ್ರದುರ್ಗದಲ್ಲಿ ಈದ್ ಮಿಲಾದ್ ಮೆರವಣಿಗೆ ವೇಳೆ ಪ್ಯಾಲೆಸ್ತೀನ್ ಪರ ಘೋಷಣೆ