AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Govt Expense: ಬಡ್ಡಿಗೆ ಆಯ್ತು ಶೇ. 25 ಬಜೆಟ್ ಹಣ; ಸಾರಿಗೆ, ರಕ್ಷಣೆ ಇತ್ಯಾದಿಗೆ ಸಿಕ್ಕಿದ್ದಿಷ್ಟು

Union Budget 2025, allocations: ಈ ಬಾರಿಯ ಬಜೆಟ್ ಗಾತ್ರ 50.65 ಲಕ್ಷ ಕೋಟಿ ರೂನಷ್ಟಿದೆ. ಇದರಲ್ಲಿ ಕಾಲುಭಾಗದಷ್ಟು ಹಣವು ಬಡ್ಡಿ ಕಟ್ಟಲು ವಿನಿಯೋಗವಾಗುತ್ತದೆ. ಮಾಹಿತಿ ಪ್ರಕಾರ 12.76 ಲಕ್ಷ ಕೋಟಿ ರೂ ಹಣವು ಬಡ್ಡಿ ಸಂದಾಯಕ್ಕೆ ಹೋಗುತ್ತದೆ. ಸಾರಿಗೆ ಇಲಾಖೆಗೆ ಐದೂವರೆ ಲಕ್ಷ ಕೋಟಿ ರೂ, ರಕ್ಷಣಾ ಇಲಾಖೆಗೆ 4.91 ಲಕ್ಷ ಕೋಟಿ ರೂ ಹೋಗುತ್ತದೆ. ಪೆಟ್ರೋಲಿಯಂ, ಆಹಾರ ಇತ್ಯಾದಿಗಳಿಗೆ ನೀಡುವ ಸಬ್ಸಿಡಿಯೂ 3.83 ಲಕ್ಷ ಕೋಟಿ ರೂ ಆಗುತ್ತದೆ.

Govt Expense: ಬಡ್ಡಿಗೆ ಆಯ್ತು ಶೇ. 25 ಬಜೆಟ್ ಹಣ; ಸಾರಿಗೆ, ರಕ್ಷಣೆ ಇತ್ಯಾದಿಗೆ ಸಿಕ್ಕಿದ್ದಿಷ್ಟು
ಬಜೆಟ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Feb 01, 2025 | 6:44 PM

Share

ನವದೆಹಲಿ, ಫೆಬ್ರುವರಿ 1: ನಿರ್ಮಲಾ ಸೀತಾರಾಮನ್ ಅವರು 50.65 ಲಕ್ಷ ಕೋಟಿ ರೂ ದಾಖಲೆ ಗಾತ್ರದ ಬಜೆಟ್ ಮಂಡಿಸಿದ್ದಾರೆ. ಸರ್ಕಾರದ ಹಣ ಯಾವ್ಯಾವುದಕ್ಕೆ ಎಷ್ಟೆಷ್ಟು ವಿನಿಯೋಗವಾಗುತ್ತದೆ ಎಂಬುದು ಕುತೂಹಲದ ಸಂಗತಿ. ಬಜೆಟ್ ದಾಖಲೆ ಪ್ರಕಾರ 50.65 ಲಕ್ಷ ಕೋಟಿ ರೂ ಅಂದಾಜು ಲಭ್ಯ ಇರುವ ಹಣದಲ್ಲಿ 12.76 ಲಕ್ಷ ಕೋಟಿ ರೂ ಮೊತ್ತವು ಸಾಲ ಮರುಪಾವತಿ, ಬಡ್ಡಿ ಪಾವತಿಗೆ ಸಂದಾಯವಾಗುತ್ತದೆ. ಅಂದರೆ, ಶೇ. 25ರಷ್ಟು ಬಜೆಟ್ ಹಣವು ಸಾಲಕ್ಕೆಯೇ ಹೋಗಿಬಿಡುತ್ತದೆ. ಇದರ ಜೊತೆಗೆ, ಸಬ್ಸಿಡಿ, ಸಂಬಳ, ಮತ್ತು ಪಿಂಚಣಿ ಹಣವನ್ನೂ ಸೇರಿಸಿದರೆ ದೊಡ್ಡ ಮೊತ್ತವೇ ಆಗಿಹೋಗುತ್ತದೆ.

ಇವು ಬಿಟ್ಟರೆ, ಸಾರಿಗೆ, ರಕ್ಷಣೆ, ಗ್ರಾಮೀಣಾಭಿವೃದ್ಧಿ ಕ್ಷೇತ್ರಗಳಿಗೆ ಅತಿಹೆಚ್ಚು ಅನುದಾನ ಸಿಗುತ್ತದೆ. ಕೃಷಿ ಕ್ಷೇತ್ರಕ್ಕೂ ಉತ್ತಮ ಮೊತ್ತದ ಅನುದಾನ ಇದೆ. ಕಳೆದ ಹತ್ತು ವರ್ಷಗಳಿಂದ ಸರ್ಕಾರದಿಂದ ಬಂಡವಾಳ ವೆಚ್ಚ ಗಣನೀಯವಾಗಿ ನಡೆದಿತ್ತು. ಮೂಲಸೌಕರ್ಯ ಅಭಿವೃದ್ಧಿ, ಉತ್ಪಾದನೆ, ಡಿಫೆನ್ಸ್ ಇತ್ಯಾದಿಗೆ ಸರ್ಕಾರದಿಂದ ಸಾಕಷ್ಟು ವೆಚ್ಚವಾಗಿದೆ. ಅಂತೆಯೇ ಸಾಲದ ಪ್ರಮಾಣ ಹೆಚ್ಚಾಗಿದೆ. ಸಾಲ ಎಂದರೆ ಇಲ್ಲಿ ಆಂತರಿಕವಾಗಿ ವಿವಿಧ ಬಾಂಡ್​ಗಳ ಮೂಲಕ ಪಡೆದ ಸಾಲಗಳು ಪ್ರಮುಖವಾಗಿವೆ. ಸೇವಿಂಗ್ಸ್ ಸ್ಕೀಮ್​ಗಳಿಗೆ ಬಡ್ಡಿ ಪಾವತಿಸಬೇಕಾಗುತ್ತದೆ. ಇವುಗಳ ವೆಚ್ಚವೇ ಸರ್ಕಾರಕ್ಕೆ ಅತ್ಯಧಿಕ ಆಗುತ್ತದೆ.

ಇದನ್ನೂ ಓದಿ: Tax Calculator: ಹೊಸ ಟ್ಯಾಕ್ಸ್ ಕ್ಯಾಲ್ಕುಲೇಟರ್, ಪಕ್ಕಾ ಲೆಕ್ಕಾಚಾರ… ನೀವೆಷ್ಟು ತೆರಿಗೆ ಕಟ್ಟಬೇಕು ತಿಳಿಯಿರಿ…

ಬಜೆಟ್​ನ 50.65 ಲಕ್ಷ ಕೋಟಿ ರೂ ಎಲ್ಲೆಲ್ಲಿಗೆ ಹೋಗುತ್ತದೆ ನೋಡಿ…

  • ಬಡ್ಡಿ: 12,76,338 ಕೋಟಿ ರೂ
  • ಸಾರಿಗೆ: 5,48,649 ಕೋಟಿ ರೂ
  • ರಕ್ಷಣೆ: 4,91,732 ಕೋಟಿ ರೂ
  • ಸಬ್ಸಿಡಿ: 3,83,407 ಕೋಟಿ ರೂ
  • ಪಿಂಚಣಿ: 2,76,618 ಕೋಟಿ ರೂ
  • ಗ್ರಾಮೀಣಾಭಿವೃದ್ಧಿ: 2,66,817 ಕೋಟಿ ರೂ
  • ಗೃಹ ವ್ಯವಹಾರ: 2,33,211 ಕೋಟಿ ರೂ
  • ತೆರಿಗೆ ನಿರ್ವಹಣೆ: 1,86,632 ಕೋಟಿ ರೂ
  • ಕೃಷಿ: 1,71,437 ಕೋಟಿ ರೂ
  • ಜಿಎಸ್​ಟಿ ಪರಿಹಾರ: 1,30,641 ಕೋಟಿ ರೂ
  • ಶಿಕ್ಷಣ: 1,28,650 ಕೋಟಿ ರೂ
  • ಆರೋಗ್ಯ: 98,311 ಕೋಟಿ ರೂ
  • ನಗರಾಭಿವೃದ್ಧಿ: 96,777 ಕೋಟಿ ರೂ
  • ಐಟಿ ಮತ್ತು ಟೆಲಿಕಾಂ: 95,298 ಕೋಟಿ ರೂ
  • ಇಂಧನ: 81,174 ಕೋಟಿ ರೂ
  • ವಾಣಿಜ್ಯ ಮತ್ತು ಉದ್ಯಮ: 65,553 ಕೋಟಿ ರೂ
  • ಹಣಕಾಸು: 62,924 ಕೋಟಿ ರೂ
  • ಸಮಾಜ ಕಲ್ಯಾಣ: 60,052 ಕೋಟಿ ರೂ
  • ವೈಜ್ಞಾನಿಕ ಇಲಾಖೆಗಳು: 55,679 ಕೋಟಿ ರೂ
  • ವಿದೇಶಾಂಗ ವ್ಯವಹಾರ: 20,517 ಕೋಟಿ ರೂ
  • ಈಶಾನ್ಯ ರಾಜ್ಯಗಳ ಅಭಿವೃದ್ಧಿ: 5,915 ಕೋಟಿ ರೂ
  • ಇತರೆ: 4,82,653 ಕೋಟಿ ರೂ

ಇನ್ನಷ್ಟು ಬಜೆಟ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
Vijaya Sarathy SN
Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ‘ಶಿವ ತಾಂಡವ’ ರಂಗು!
ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ‘ಶಿವ ತಾಂಡವ’ ರಂಗು!
ಐಪಿಎಲ್ ಫೈನಲ್: ಬೆಂಗಳೂರಿನಲ್ಲಿ ಖಾಕಿ ಸರ್ಪಗಾವಲು; ತೀವ್ರ ಕಟ್ಟೆಚ್ಚರ
ಐಪಿಎಲ್ ಫೈನಲ್: ಬೆಂಗಳೂರಿನಲ್ಲಿ ಖಾಕಿ ಸರ್ಪಗಾವಲು; ತೀವ್ರ ಕಟ್ಟೆಚ್ಚರ
ಬಾಗೇಪಲ್ಲಿ ಭೀಕರ ರಸ್ತೆ ಅಪಘಾತ ಪ್ರಕರಣ: ಎಸ್‌ಪಿ ಬಿಗ್ ಸ್ಟೇಟ್‌ಮೆಂಟ್
ಬಾಗೇಪಲ್ಲಿ ಭೀಕರ ರಸ್ತೆ ಅಪಘಾತ ಪ್ರಕರಣ: ಎಸ್‌ಪಿ ಬಿಗ್ ಸ್ಟೇಟ್‌ಮೆಂಟ್
ಪ್ರಮಾಣವಚನ ದಿನವೇ ಕಾಂಗ್ರೆಸ್ ಭವನ ಶಂಕುಸ್ಥಾಪನೆಗೆ ಡಿಕೆಶಿ ಪ್ಲ್ಯಾನ್​
ಪ್ರಮಾಣವಚನ ದಿನವೇ ಕಾಂಗ್ರೆಸ್ ಭವನ ಶಂಕುಸ್ಥಾಪನೆಗೆ ಡಿಕೆಶಿ ಪ್ಲ್ಯಾನ್​
ಪವರ್​ ಪ್ಲೇನಲ್ಲೇ ಗುಜರಾತ್ ಪವರ್ ಕಸಿದ ಆರ್​ಸಿಬಿ
ಪವರ್​ ಪ್ಲೇನಲ್ಲೇ ಗುಜರಾತ್ ಪವರ್ ಕಸಿದ ಆರ್​ಸಿಬಿ
ಆರ್​​ಸಿಬಿ ಫ್ಯಾನ್ಸ್‌ಗೆ ಬೆಂಗಳೂರು ಕಮಿಷನರ್ ಕಠಿಣ ವಾರ್ನಿಂಗ್!
ಆರ್​​ಸಿಬಿ ಫ್ಯಾನ್ಸ್‌ಗೆ ಬೆಂಗಳೂರು ಕಮಿಷನರ್ ಕಠಿಣ ವಾರ್ನಿಂಗ್!
ಸಿದ್ ಶ್ರೀರಾಮ್ ಗಾಯನಕ್ಕೆ ಹಿನ್ನೆಲೆ ಸಂಗೀತದ ಅವಶ್ಯಕತೆಯೇ ಇಲ್ಲ: ವಿಡಿಯೋ
ಸಿದ್ ಶ್ರೀರಾಮ್ ಗಾಯನಕ್ಕೆ ಹಿನ್ನೆಲೆ ಸಂಗೀತದ ಅವಶ್ಯಕತೆಯೇ ಇಲ್ಲ: ವಿಡಿಯೋ
ಸಚಿವ ಸ್ಥಾನದ ಆಕಾಂಕ್ಷಿಗಳಿಗೆ ಬಿಗ್​​ ಅಪ್ಡೇಡ್​​ ನೀಡಿದ ಡಿ.ಕೆ ಶಿವಕುಮಾರ್
ಸಚಿವ ಸ್ಥಾನದ ಆಕಾಂಕ್ಷಿಗಳಿಗೆ ಬಿಗ್​​ ಅಪ್ಡೇಡ್​​ ನೀಡಿದ ಡಿ.ಕೆ ಶಿವಕುಮಾರ್
ಶ್ರೀ ಕೃಷ್ಣನ ಸನ್ನಿಧಾನದಲ್ಲಿ ವಸಿಷ್ಠ ಸಿಂಹ, ಹರಿಪ್ರಿಯ ದಂಪತಿ: ವಿಡಿಯೋ
ಶ್ರೀ ಕೃಷ್ಣನ ಸನ್ನಿಧಾನದಲ್ಲಿ ವಸಿಷ್ಠ ಸಿಂಹ, ಹರಿಪ್ರಿಯ ದಂಪತಿ: ವಿಡಿಯೋ
ಪುತ್ರಿ ರೂಪಾ ಶಶಿಧರ್ ಸಚಿವ ಸ್ಥಾನ ನೀಡುವ ಬಗ್ಗೆ ಮಹತ್ವದ ಹೇಳಿಕೆ
ಪುತ್ರಿ ರೂಪಾ ಶಶಿಧರ್ ಸಚಿವ ಸ್ಥಾನ ನೀಡುವ ಬಗ್ಗೆ ಮಹತ್ವದ ಹೇಳಿಕೆ