AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಜೆಟ್ ಮುನ್ನ 200 ಅಂಕಗಳಷ್ಟು ಏರಿದ ಸೆನ್ಸೆಕ್ಸ್; ಒಟ್ಟಾರೆ ಹಸಿರುಬಣ್ಣದಲ್ಲಿ ಷೇರುಪೇಟೆ

Sensex, Nifty indices gain before budget: ಕಳೆದ ಕೆಲ ತಿಂಗಳಿಂದ ಹಿನ್ನಡೆಯಲ್ಲಿರುವ ಷೇರು ಮಾರುಕಟ್ಟೆ ಅಪರೂಪಕ್ಕೆ ಇವತ್ತು ಹಸಿರುಬಣ್ಣಕ್ಕೆ ತಿರುಗಿದೆ. ಬಜೆಟ್ ಮಂಡನೆಗೆ ಮುನ್ನ ಪೇಟೆ ಹೊಸ ಕಳೆ ಮತ್ತು ಉತ್ಸಾಹ ಪಡೆದುಕೊಂಡಂತಿದೆ. ಸೆನ್ಸೆಕ್ಸ್, ನಿಫ್ಟಿ ಸೇರಿದಂತೆ ಬಿಎಸ್​ಇ ಮತ್ತು ಎನ್​ಎಸ್​ಇನ ಹೆಚ್ಚಿನ ಸೂಚ್ಯಂಕಗಳು ಗಣನೀಯ ವೃದ್ಧಿ ಕಂಡಿವೆ. ಬಿಎಸ್​ಇ ಸೆನ್ಸೆಕ್ಸ್ ಬೆಳಗ್ಗೆ 10:30ರಲ್ಲಿ 200 ಅಂಕಗಳಷ್ಟು ಏರಿಕೆ ಕಂಡಿದೆ.

ಬಜೆಟ್ ಮುನ್ನ 200 ಅಂಕಗಳಷ್ಟು ಏರಿದ ಸೆನ್ಸೆಕ್ಸ್; ಒಟ್ಟಾರೆ ಹಸಿರುಬಣ್ಣದಲ್ಲಿ ಷೇರುಪೇಟೆ
ಷೇರು ಮಾರುಕಟ್ಟೆ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Feb 01, 2025 | 10:42 AM

Share

ಮುಂಬೈ, ಫೆಬ್ರುವರಿ 1: ಇವತ್ತು ಬಜೆಟ್ ಮಂಡನೆ ಇರುವ ಪ್ರಯುಕ್ತ, ಶನಿವಾರವಾದರೂ ಷೇರು ಮಾರುಕಟ್ಟೆ ಕಾರ್ಯ ನಿರ್ವಹಿಸುತ್ತಿದೆ. ಬಜೆಟ್​ನ ಬಿಸಿಯಲ್ಲಿ ಟ್ರೇಡಿಂಗ್ ಮಾಡಲು ಇವತ್ತು ಅವಕಾಶ ಸಿಕ್ಕಿದೆ. ಬಜೆಟ್​ನಲ್ಲಿ ಹಲವು ಸುಧಾರಣಾ ಕ್ರಮಗಳು ಜಾರಿಯಾಗುವ ಆಶಾಭಾವನೆಯಲ್ಲಿ ಷೇರು ಮಾರುಕಟ್ಟೆ ಬೆಳಗ್ಗೆಯೇ ಗರಿಗೆದರಿ ನಿಂತಿದೆ. ಬೆಳಗ್ಗೆ 11 ಗಂಟೆಗೆ ಬಜೆಟ್ ಪ್ರಸ್ತುತಿ ನಡೆಯುತ್ತದೆ. ಬೆಳಗ್ಗೆ 9ಕ್ಕೆ ಆರಂಭವಾದ ಮಾರುಕಟ್ಟೆ 10 ಗಂಟೆಯಷ್ಟರಲ್ಲಿ ಉತ್ತಮವಾಗಿ ಏರಿಕೆ ಕಂಡಿತ್ತು. ಬಿಎಸ್​ಇ ಸೆನ್ಸೆಕ್ಸ್ 200 ಅಂಕಗಳಷ್ಟು ಹೆಚ್ಚಳ ಕಂಡಿತು. ನಿಫ್ಟಿ ಕೂಡ 70 ಅಂಕಗಳಷ್ಟು ಏರಿಕೆ ಕಂಡಿತು.

ಬಾಂಬೆ ಸ್ಟಾಕ್ ಎಕ್ಸ್​ಚೇಂಜ್​ನ ಪ್ರಮುಖ ಸೂಚ್ಯಂಕವಾದ ಸೆನ್ಸೆಕ್ಸ್ ಸೇರಿದಂತೆ ಹೆಚ್ಚಿನ ಇಂಡೆಕ್ಸ್​ಗಳು ಇಂದು ಶನಿವಾರ ಪಾಸಿಟಿವ್​ನಲ್ಲಿ ಇವೆ.

ನ್ಯಾಷನಲ್ ಸ್ಟಾಕ್ ಎಕ್ಸ್​ಚೇಂಜ್​ನಲ್ಲೂ ನಿಫ್ಟಿ 50 ಸೇರಿದಂತೆ ಹೆಚ್ಚಿನ ಸೂಚ್ಯಂಕಗಳು ಹಸಿರು ಬಣ್ಣದಲ್ಲೇ ಇವೆ. ಐಟಿ, ಆಯಿಲ್ ಅಂಡ್ ಗ್ಯಾಸ್ ಇತ್ಯಾದಿ ಬೆರಳೆಣಿಕೆಯಷ್ಟು ಇಂಡೆಕ್ಸ್​ಗಳು ಮಾತ್ರವೇ ತುಸು ಹಿನ್ನಡೆ ಕಂಡಿವೆ. ಉಳಿದಂತೆ ಎಲ್ಲಾ ನಿಫ್ಟಿ ಇಂಡೆಕ್ಸ್​ಗಳು ಪಾಸಿಟಿವ್ ಇವೆ. ನಿಫ್ಟಿ ಸ್ಮಾಲ್​ಕ್ಯಾಪ್ 100 ಇಂಡೆಕ್ಸ್ ಬಹುತೇಕ ಶೇ. 1ರಷ್ಟು ಏರಿಕೆ ಕಂಡಿದೆ. ನಿಫ್ಟಿ ಮಿಡ್​ಕ್ಯಾಪ್ 100, ನಿಫ್ಟಿ ನೆಕ್ಸ್ಟ್ 50, ನಿಫ್ಟಿ ಸ್ಮಾಲ್​ಕ್ಯಾಪ್ 50, ನಿಫ್ಟಿ ರಿಯಾಲ್ಟಿ ಸೂಚ್ಯಂಕಗಳು 0.70 ಪ್ರತಿಶತಕ್ಕಿಂತ ಹೆಚ್ಚಿನ ಮಟ್ಟದ ಏರಿಕೆ ಕಂಡಿರುವುದು ಗಮನಾರ್ಹ.

ಬಿಎಸ್​ಇನಲ್ಲೂ ಸ್ಮಾಲ್​ಕ್ಯಾಪ್ ಸೂಚ್ಯಂಕ ಶೇ. 0.80ರಷ್ಟು ಹೆಚ್ಚಳ ಕಂಡಿದೆ. ಬಿಎಸ್​ಇ ಇಂಡಸ್ಟ್ರಿಯಲ್ಸ್ ಸೂಚ್ಯಂಕವಂತೂ ಶೇ. 1.32ರಷ್ಟು ಏರಿಕೆ ಕಂಡಿತು. ಬಿಎಸ್​ಇನಲ್ಲಿ ಐಟಿ ಸ್ಟಾಕ್​​ಗಳು ಪಾಸಿಟಿವ್ ಇವೆ. ಬಿಎಸ್​ಇ ಯುಟಿಲಿಟೀಸ್ ಸೂಚ್ಯಂಕ ಕೂಡ ಶೇ 1ಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಹೆಚ್ಚಳ ಕಂಡಿದೆ.

ಇದನ್ನೂ ಓದಿ: ಫೆ. 1ರ ಬಳಿಕ ಮಾರುಕಟ್ಟೆ ಕುಸಿಯುತ್ತದಾ? ಬಜೆಟ್​ನಲ್ಲಿ ಸಂಭಾವ್ಯ ಘೋಷಣೆಗಳಿವು…

ನಿಫ್ಟಿ 50ಯಲ್ಲಿ ಅತಿಹೆಚ್ಚಳ ಕಾಣುತ್ತಿರುವ ಐದು ಷೇರುಗಳು (ಬೆಳಗ್ಗೆ 10:30ಕ್ಕೆ)

  • ಎಲ್ ಅಂಡ್ ಟಿ: ಶೇ. 10.87
  • ಮಹೀಂದ್ರ ಅಂಡ್ ಮಹೀಂದ್ರ: ಶೇ. 8.66
  • ಬಿಇಎಲ್: ಶೇ. 8.46
  • ಅಲ್ಟ್ರಾಟೆಕ್ ಸಿಮೆಂಟ್: ಶೇ. 4.84
  • ಇನ್ಫೋಸಿಸ್: ಶೇ. 4.59

ನಿಫ್ಟಿ50ಯಲ್ಲಿ ಕುಸಿಯುತ್ತಿರುವ ಷೇರುಗಳು

  • ಟೈಟಾನ್ ಕಂಪನಿ: ಶೇ. 5.22 ಕುಸಿತ
  • ನೆಸ್ಲೆ: ಶೇ. 3.96 ಕುಸಿತ
  • ಐಟಿಸಿ: ಶೇ. 2.89 ಕುಸಿತ
  • ಗ್ರಾಸಿಂ ಇಂಡಸ್ಟ್ರೀಸ್: ಶೇ. 2.21 ಕುಸಿತ
  • ಎಚ್​ಸಿಎಲ್ ಟೆಕ್: ಶೇ. 1.73 ಕುಸಿತ

ಬಜೆಟ್ ಲೈವ್ ಅಪ್​ಡೇಟ್ಸ್​ಗೆ ಇಲ್ಲಿ ಕ್ಲಿಕ್ ಮಾಡಿ

ಇನ್ನಷ್ಟು ಬಜೆಟ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
Vijaya Sarathy SN
Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
ಕಿಡ್ನಿ ಆರೋಗ್ಯವಾಗಿರಬೇಕು ಅಂದ್ರೆ ಈ ಸಲಹೆಗಳನ್ನು ತಪ್ಪದೆ ಪಾಲಿಸಬೇಕು
ಕಿಡ್ನಿ ಆರೋಗ್ಯವಾಗಿರಬೇಕು ಅಂದ್ರೆ ಈ ಸಲಹೆಗಳನ್ನು ತಪ್ಪದೆ ಪಾಲಿಸಬೇಕು
ಶೇ. 55 ಅಂಕ ಪಡೆದ ಮಗನಿಗೆ ಅಪ್ಪ-ಅಮ್ಮ ಮಾಡಿದ್ದೇನು?
ಶೇ. 55 ಅಂಕ ಪಡೆದ ಮಗನಿಗೆ ಅಪ್ಪ-ಅಮ್ಮ ಮಾಡಿದ್ದೇನು?
‘ಪೆದ್ದಿ’ ಚಿತ್ರದಲ್ಲಿ ಶಿವರಾಜ್​ಕುಮಾರ್ ಗತ್ತು ನೋಡಿ; ಮೇಕಿಂಗ್ ವಿಡಿಯೋ
‘ಪೆದ್ದಿ’ ಚಿತ್ರದಲ್ಲಿ ಶಿವರಾಜ್​ಕುಮಾರ್ ಗತ್ತು ನೋಡಿ; ಮೇಕಿಂಗ್ ವಿಡಿಯೋ
ಮಂಗಳೂರು: ವಿಮಾನಗಳನ್ನ ಆಕಾಶದಲ್ಲೇ ಅಲೆದಾಡಿಸುತ್ತಿರುವ ಮಳೆರಾಯ!
ಮಂಗಳೂರು: ವಿಮಾನಗಳನ್ನ ಆಕಾಶದಲ್ಲೇ ಅಲೆದಾಡಿಸುತ್ತಿರುವ ಮಳೆರಾಯ!
‘ಲವ್ ಮಾಕ್ಟೆಲ್’ ಸೆಟ್​ನಲ್ಲಿ ದಿಲೀಪ್: ವಿಡಿಯೋ ಹಂಚಿಕೊಂಡ ಡಾರ್ಲಿಂಗ್ ಕೃಷ್ಣ
‘ಲವ್ ಮಾಕ್ಟೆಲ್’ ಸೆಟ್​ನಲ್ಲಿ ದಿಲೀಪ್: ವಿಡಿಯೋ ಹಂಚಿಕೊಂಡ ಡಾರ್ಲಿಂಗ್ ಕೃಷ್ಣ
ಮಧ್ಯಪ್ರದೇಶದ ದೇವಾಸ್ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; ಮೂವರು ಸಾವು
ಮಧ್ಯಪ್ರದೇಶದ ದೇವಾಸ್ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; ಮೂವರು ಸಾವು
ಕೇಸರಿ ಶಾಲು ನಿಷೇಧಿಸುವ ಅಧಿಕಾರ ಕೊಟ್ಟಿದ್ಯಾರು? ಪ್ರಲ್ಹಾದ್​ ಜೋಶಿ ಕಿಡಿ
ಕೇಸರಿ ಶಾಲು ನಿಷೇಧಿಸುವ ಅಧಿಕಾರ ಕೊಟ್ಟಿದ್ಯಾರು? ಪ್ರಲ್ಹಾದ್​ ಜೋಶಿ ಕಿಡಿ
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಮೇಲೂ SIR ನೆರಳು!
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಮೇಲೂ SIR ನೆರಳು!
ಯುವಕರಿಂದ ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ
ಯುವಕರಿಂದ ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ