AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Sunny Leone: ಮಾಜಿ ನೀಲಿಚಿತ್ರತಾರೆ ಸನ್ನಿ ಲಿಯೋನೆ ಹೊಸ ಬಿಸಿನೆಸ್; ಚಿಕಲೋಕ ಆರಂಭ

ChicaLoca Restaurant In Uttar Pradesh: ಸನ್ನಿ ಲಿಯೋನೆ ಮತ್ತು ಪತಿ ಡೇನಿಯಲ್ ವೆಬೆರ್ ಅವರು ಉತ್ತರಪ್ರದೇಶದ ನೋಯ್ಡಾದಲ್ಲಿ ಚಿಕಲೋಕ ಎಂಬ ರೆಸ್ಟೋರೆಂಟ್ ಆರಂಭಿಸಿದ್ದಾರೆ. ಸಿಂಗಿಂಗ್ ಬೌಲ್ಸ್ ಹಾಸ್ಪಿಟಾಲಿಟಿ ಎಂಬ ಸಂಸ್ಥೆ ಈ ವ್ಯವಹಾರದಲ್ಲಿ ಸನ್ನಿ ಜೊತೆ ಕೈಜೋಡಿಸಿದೆ. ಚಿತ್ರ ನಟರು ಕೇವಲ ಸಿನಿಮಾ, ಟಿವಿಗಳಿಗೆ ಸೀಮಿತವಾಗದೇ ಹೊಸ ವ್ಯವಹಾರಗಳನ್ನು ನಡೆಸಬೇಕು ಎಂದು ಸನ್ನಿ ಕರೆ ನೀಡಿದ್ದಾರೆ.

Sunny Leone: ಮಾಜಿ ನೀಲಿಚಿತ್ರತಾರೆ ಸನ್ನಿ ಲಿಯೋನೆ ಹೊಸ ಬಿಸಿನೆಸ್; ಚಿಕಲೋಕ ಆರಂಭ
ಸನ್ನಿ ಲಿಯೋನೆ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jan 26, 2024 | 3:53 PM

Share

ನವದೆಹಲಿ, ಜನವರಿ 26: ನಟಿಯಾಗಿದ್ದು ವಿವಿಧ ವ್ಯವಹಾರಗಳನ್ನೂ ನಿಭಾಯಿಸುವ ಸನ್ನಿ ಲಿಯೋನೆ ಇದೀಗ ಉತ್ತರಪ್ರದೇಶದಲ್ಲಿ ಹೊಸ ರೆಸ್ಟೋರೆಂಟ್ ಆರಂಭಿಸಿದ್ದಾರೆ. ಸನ್ನಿ ಲಿಯೋನೆ ಮತ್ತವರ ಪತಿ ಡೇನಿಯಲ್ ವೆಬೆರ್ (Sunny Leone and Daniel Weber) ನೋಯಿಡಾದಲ್ಲಿ ಚಿಕಲೋಕ (ChicaLoca) ಎಂಬ ಹೆಸರಿನ ರೆಸ್ಟೋರೆಂಟ್ ತೆರೆದಿದ್ದಾರೆ. ಇದು ಈ ದಂಪತಿಯ ಮೊದಲ ರೆಸ್ಟೋರೆಂಟ್ ಬಿಸಿನೆಸ್ ಆಗಿದ್ದು, ಎರಡು ಮಹಡಿಯನ್ನು ಚಿಕಲೋಕಾಗೆಂದು ಬಾಡಿಗೆಗೆ ಪಡೆದಿದ್ದಾರೆ. ಇದರಲ್ಲಿ ಸನ್ನಿ ಲಿಯೋನೆ ಅವರ ಕಲರ್​ಫುಲ್ ಬದುಕಿನ ಆಸಕ್ತಿದಾಯಕ ವಿಚಾರಗಳನ್ನು ಅನಾವರಣಗೊಳಿಸುವ ಪೇಂಟಿಂಗ್ ಮತ್ತಿತರ ಕಲೆಗಳು ಒಳಗೊಂಡಿವೆ.

ಸಿಂಗಿಂಗ್ ಬೌಲ್ಸ್ ಹಾಸ್ಪಿಟಾಲಿಟಿ (Singing Bowls Hospitality) ಎಂಬ ಸಂಸ್ಥೆ ಚಿಕಲೋಕ ರೆಸ್ಟೋರೆಂಟ್ ಬಿಸಿನೆಸ್​ನಲ್ಲಿ ಸನ್ನಿ ಲಿಯೋನೆ ಜೊತೆ ಸಹಭಾಗಿಯಾಗಿದೆ. ಸನ್ನಿ ಅವರ ಅಮೋಘ ಶಕ್ತಿ ಮತ್ತು ಉಲ್ಲಸಿತ ವ್ಯಕ್ತಿತ್ವವನ್ನು ತೋರ್ಪಡಿಸುವಂತಹ ವಾತಾವರಣವನ್ನು ರೆಸ್ಟೋರೆಂಟ್​​ನಲ್ಲಿ ಒಳಗೊಳ್ಳುವುದು ಗುರಿಯಾಗಿದೆ ಎಂದು ಸಿಂಗಿಂಗ್ ಬೌಲ್ಸ್ ಹಾಸ್ಪಿಟಾಲಿಟಿಯ ನಿರ್ದೇಶಕ ಸಾಹಿಲ್ ಬವೇಜಾ ಹೇಳುತ್ತಾರೆ.

ಇದನ್ನೂ ಓದಿ: CEO Drives Cab: ಹಗಲಿನಲ್ಲಿ ಸಿಇಒ, ರಾತ್ರಿಯಲ್ಲಿ ಬೆಂಗಳೂರಿನ ಕ್ಯಾಬ್ ಡ್ರೈವರ್; ಹೀಗೂ ಇರುತ್ತಾರಾ ಒಂದು ಸಂಸ್ಥೆಯ ಮುಖ್ಯಸ್ಥರು?

ಮನರಂಜಿಸುವವರು ಫಿಲಂ, ಟಿವಿ ಶೋಗಳಿಗೆ ಸೀಮಿತವಾಗಬಾರದು ಎನ್ನುವ ಲಿಯೋನೆ

ಬಾಲಿವುಡ್​​ಗೆ ಪ್ರವೇಶ ಮಾಡುವವರೆಗೂ ನೀಲಿ ಚಿತ್ರಗಳ ಉದ್ಯಮದಲ್ಲಿದ್ದ ಸನ್ನಿ ಲಿಯೋನೆ ಇದೀಗ ಆ ಇಮೇಜ್​ನಿಂದ ಸಾಕಷ್ಟು ಹೊರಬಂದಿದ್ದಾರೆ. ಸಿನಿಮಾಗಳಲ್ಲಿ ನಟಿಸುವ ಜೊತೆಗೆ ವಿವಿಧ ರೀತಿಯ ಬಿಸಿನೆಸ್​ನಗಳಲ್ಲಿ ತೊಡಗಿಸಿಕೊಳ್ಳಬೇಕೆನ್ನುವುದು ಮತ್ತು ಈ ವಿಶ್ವವನ್ನು ಆವರಿಸುವುದು ಅವರ ಬಯಕೆ.

‘ಮನರಂಜಿಸುವವರು ಕೇವಲ ಚಿತ್ರಗಳು ಹಾಗೂ ಟಿವಿ ಶೋಗಳಿಗೆ ಸೀಮಿತವಾಗಬಾರದು. ಹೊರಗೆ ಇಣುಕಿ ಹೊಸ ಕಾರ್ಯಗಳಿಗೆ ಪ್ರಯತ್ನಿಸುವ ಮೂಲಕ ನಮ್ಮ ಬ್ರ್ಯಾಂಡ್ ಅನ್ನು ಬೇರೆ ಬೇರೆ ರೀತಿಯಲ್ಲಿ ಬೆಳೆಸುವ ಅವಕಾಶ ಇದೆ’ ಎಂದು ಐಎಎನ್​ಎನ್ ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

ಇದನ್ನೂ ಓದಿ: Tariq Premji: ವಿಪ್ರೋ ಸೇರುವ ಮುನ್ನ ಬೆಂಗಳೂರಿನ ಸೇಂಟ್ ಜೋಸೆಪ್ಸ್​ನಲ್ಲಿ ಓದಿ ಬಿಪಿಒದಲ್ಲಿ ಕೆಲಸ ಮಾಡಿದ್ದ ಅಜೀಮ್ ಪ್ರೇಮ್​ಜಿ 2ನೇ ಮಗ

ಈ ವಿಶ್ವವನ್ನು ಗೆಲ್ಲಬೇಕು ಎಂದು ಹೇಳುವ ಅವರು ವಿವಿಧ ವ್ಯಾವಹಾರಿಕ ಅವಕಾಶಗಳನ್ನು ಅವಲೋಕಿಸಬೇಕು, ಹೊಸ ಐಡಿಯಾಗಳನ್ನು ಸೃಷ್ಟಿಸಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ಸುಗ್ಗನಹಳ್ಳಿ ವಿಜಯಸಾರಥಿ
ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
ಗೊರಗುಂಟೆಪಾಳ್ಯ ಭೀಕರ ರಸ್ತೆ ಅಪಘಾತ: ಸ್ಫೋಟಕ ಮಾಹಿತಿ ನೀಡಿದ ಡಿಸಿಪಿ
ಗೊರಗುಂಟೆಪಾಳ್ಯ ಭೀಕರ ರಸ್ತೆ ಅಪಘಾತ: ಸ್ಫೋಟಕ ಮಾಹಿತಿ ನೀಡಿದ ಡಿಸಿಪಿ
ಗೃಹಲಕ್ಷ್ಮೀ ಯೋಜನೆ ಪರಿಷ್ಕರಣೆ: 3.89 ಲಕ್ಷ ಜನ ಸ್ಕೀಂನಿಂದ ಔಟ್!
ಗೃಹಲಕ್ಷ್ಮೀ ಯೋಜನೆ ಪರಿಷ್ಕರಣೆ: 3.89 ಲಕ್ಷ ಜನ ಸ್ಕೀಂನಿಂದ ಔಟ್!
ವಿಡಿಯೋ: ಸಿನಿಮಾಗಳಲ್ಲಿ ಆಕ್ಷನ್ ದೃಶ್ಯ ಎಷ್ಟು ಕಷ್ಟವಾಗಿರುತ್ತೆ ನೋಡಿ
ವಿಡಿಯೋ: ಸಿನಿಮಾಗಳಲ್ಲಿ ಆಕ್ಷನ್ ದೃಶ್ಯ ಎಷ್ಟು ಕಷ್ಟವಾಗಿರುತ್ತೆ ನೋಡಿ
ಬೈಕ್​​​ಗೆ ಗುದ್ದಿ ನೇರವಾಗಿ ಅಡಿಕೆ ತೋಟಕ್ಕೆ ನುಗ್ಗಿದ KSRTC ಬಸ್
ಬೈಕ್​​​ಗೆ ಗುದ್ದಿ ನೇರವಾಗಿ ಅಡಿಕೆ ತೋಟಕ್ಕೆ ನುಗ್ಗಿದ KSRTC ಬಸ್
ಮತದಾನವಿಲ್ಲದೇ ಕರ್ನಾಟಕದಿಂದ ನಾಲ್ವರು ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆ
ಮತದಾನವಿಲ್ಲದೇ ಕರ್ನಾಟಕದಿಂದ ನಾಲ್ವರು ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆ
‘ಬಾಯ್ಸ್ ನೆವರ್ ಕಾಂಪ್ರಮೈಸ್’: ಸಿನಿಮಾ ಬಗ್ಗೆ ನಿರ್ದೇಶಕರ ಮಾತು
‘ಬಾಯ್ಸ್ ನೆವರ್ ಕಾಂಪ್ರಮೈಸ್’: ಸಿನಿಮಾ ಬಗ್ಗೆ ನಿರ್ದೇಶಕರ ಮಾತು
'ಅವನು ನನ್ನ ವಿರುದ್ಧವೇ ಕೆಲಸ ಮಾಡಿದ್ದಾನೆ': ಜಮಿರ್ ವಿರುದ್ಧ ಸಿದ್ದು ಗರಂ
'ಅವನು ನನ್ನ ವಿರುದ್ಧವೇ ಕೆಲಸ ಮಾಡಿದ್ದಾನೆ': ಜಮಿರ್ ವಿರುದ್ಧ ಸಿದ್ದು ಗರಂ
ಹಿಂದುಳಿದ ವರ್ಗಗಳ ಇಲಾಖೆಯಲ್ಲಿ ಅನುದಾನ ತಾರತಮ್ಯದ ಆರೋಪ
ಹಿಂದುಳಿದ ವರ್ಗಗಳ ಇಲಾಖೆಯಲ್ಲಿ ಅನುದಾನ ತಾರತಮ್ಯದ ಆರೋಪ
ಸಿಎಂ ಡಿಕೆಶಿಗೆ ಯಾವುದೇ ಕಂಟಕವಿಲ್ಲ: ನೊಣವಿನಕೆರೆ ಸ್ವಾಮೀಜಿ ಭವಿಷ್ಯ
ಸಿಎಂ ಡಿಕೆಶಿಗೆ ಯಾವುದೇ ಕಂಟಕವಿಲ್ಲ: ನೊಣವಿನಕೆರೆ ಸ್ವಾಮೀಜಿ ಭವಿಷ್ಯ
26 ವರ್ಷಗಳ ಬಳಿಕ ಮನೆಗೆ ಮರಳಿದ ಮಗ: ಭಾವುಕ ಕ್ಷಣಕ್ಕೆ ಸಾಕ್ಷಿಯಾದ ಧರ್ಮಸ್ಥಳ
26 ವರ್ಷಗಳ ಬಳಿಕ ಮನೆಗೆ ಮರಳಿದ ಮಗ: ಭಾವುಕ ಕ್ಷಣಕ್ಕೆ ಸಾಕ್ಷಿಯಾದ ಧರ್ಮಸ್ಥಳ