AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Air India: ಬೋಯಿಂಗ್ 787 ಡ್ರೀಮ್​ಲೈನರ್ ವಿಮಾನಗಳ ಹಾರಾಟ ತಾತ್ಕಾಲಿಕವಾಗಿ ನಿಲ್ಲಿಸಲು ಯೋಜನೆ

India may ground Boeing 787-8 fleet: ಗುಜರಾತ್​​ನಲ್ಲಿ ಅಪಘಾತಕ್ಕೊಳಗಾದ ಹಿನ್ನೆಲೆಯಲ್ಲಿ ಭಾರತದಲ್ಲಿರುವ ಬೋಯಿಂಗ್ ಕಂಪನಿಯ ಎಲ್ಲಾ ಡ್ರೀಮ್​ಲೈನರ್ 787 ಸರಣಿಯ ವಿಮಾನಗಳ ಹಾರಾಟ ನಿಲ್ಲಿಸಬಹುದು. ಈ ವಿಮಾನಗಳನ್ನು ಸಂಪೂರ್ಣ ತಪಾಸಣೆ ನಡೆಸಿ ಅವು ಹಾರಾಟಕ್ಕೆ ಸುರಕ್ಷಿತವಾಗಿ ಎಂದು ದೃಢಪಡುವವರೆಗೂ ಇವುಗಳನ್ನು ಗ್ರೌಂಡಿಂಗ್ ಮಾಡಬಹುದು. ಜೂನ್ 12ರಂದು ಅಹ್ಮದಾಬಾದ್ ಏರ್​​ಪೋರ್ಟ್​​ನಲ್ಲಿ ಬೋಯಿಂಗ್ 787-8 ವಿಮಾನ ಅಪಘಾತಗೊಂಡು 241 ಮಂದಿ ಪ್ರಯಾಣಿಕರು ಬಲಿಯಾಗಿದ್ದಾರೆ.

Air India: ಬೋಯಿಂಗ್ 787 ಡ್ರೀಮ್​ಲೈನರ್ ವಿಮಾನಗಳ ಹಾರಾಟ ತಾತ್ಕಾಲಿಕವಾಗಿ ನಿಲ್ಲಿಸಲು ಯೋಜನೆ
ಏರ್ ಇಂಡಿಯಾ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jun 13, 2025 | 2:42 PM

Share

ನವದೆಹಲಿ, ಜೂನ್ 13: ಅಹ್ಮದಾಬಾದ್​​ನಲ್ಲಿ ನಿನ್ನೆ ಏರ್ ಇಂಡಿಯಾದ ಬೋಯಿಂಗ್ ಡ್ರೀಮ್​ಲೈನರ್ 787-8 ವಿಮಾನ (Ahmedabad plane crash) ಅಪಘಾತಗೊಂಡಿದೆ. ಇದಕ್ಕೆ ಏನು ಕಾರಣ ಎಂದು ಸ್ಪಷ್ಟವಾಗಿ ಗೊತ್ತಾಗಿಲ್ಲ. ತನಿಖೆ ನಡೆಸಲಾಗುತ್ತದೆ. ತನಿಖೆ ಮುಗಿಯುವವರೆಗೂ ಭಾರತದಲ್ಲಿ ಆಪರೇಟ್ ಆಗುತ್ತಿರುವ ಎಲ್ಲಾ ಬೋಯಿಂಗ್ ಡ್ರೀಮ್​​ಲೈನರ್ ವಿಮಾನಗಳನ್ನು ನಿಲ್ಲಿಸಲು ಆಲೋಚಿಸಲಾಗುತ್ತಿದೆ. ಸುರಕ್ಷತೆ ದೃಷ್ಟಿಯಿಂದ ಈ ಕ್ರಮ ತೆಗೆದುಕೊಳ್ಳಲಾಗುತ್ತಿದೆ.

ಬೋಯಿಂಗ್ ಕಂಪನಿಯ ಎಂಜಿನಿಯರುಗಳು ಈ ಎಲ್ಲಾ ಡ್ರೀಮ್​ಲೈನರ್ ಸರಣಿಯ ವಿಮಾನಗಳನ್ನು ತಪಾಸಿಸಲಿದ್ದಾರೆ. ವಿಮಾನಗಳು ಯಾವ ಸಮಸ್ಯೆ ಹೊಂದಿಲ್ಲ ಎಂದು ಖಚಿತಪಡಿಸಿಕೊಳ್ಳುವ ಉದ್ದೇಶ ಇದು. ಕೇಂದ್ರ ಸರ್ಕಾರವು ಉನ್ನತ ಮಟ್ಟದ ಸಮಿತಿಯನ್ನು ರಚಿಸಿ ತನಿಖೆ ನಡೆಸಲು ಬಿಟ್ಟಿದೆ.

ಇದನ್ನೂ ಓದಿ: ಒಂದು ವಾರದ ಹಿಂದೆಯೇ ವಿಮಾನ ಅಪಘಾತದ ಭವಿಷ್ಯ ನುಡಿದಿದ್ದ ಜ್ಯೋತಿಷಿ!

ಇದನ್ನೂ ಓದಿ
Image
ಏರ್ ಇಂಡಿಯಾ ಅವಘಡ: ವಿಮಾ ಕಂಪನಿಗಳಿಗೆ 1,000 ಕೋಟಿ ಹೊರೆ?
Image
ಕೊನೆಯ ಕ್ಷಣದಲ್ಲಿ ಕೈಕೊಟ್ಟ ನೊಗ ಪಂಪರ್, ಲಿಫ್ಟ್ ಗೇರ್
Image
2010ರ ಮಂಗಳೂರು ವಿಮಾನ ದುರಂತದಲ್ಲಿ ಆಗಿದ್ದೇನು?
Image
ವಿಮಾನದ ರಹಸ್ಯ ಇರುವ ಬ್ಲ್ಯಾಕ್ ಬಾಕ್ಸ್ ಎಂದರೇನು?

ಇದೇ ವೇಳೆ, ಏರ್ ಇಂಡಿಯಾ ಸಂಸ್ಥೆ ತನ್ನ ವಿಮಾನಗಳ ಮೈಂಟೆನೆನ್ಸ್​​ಗೆ ಯಾವ ಕ್ರಮ ಅನುಸರಿಸುತ್ತದೆ ಎನ್ನುವುದನ್ನೂ ತನಿಖೆ ಮಾಡಲಾಗುತ್ತದೆ. ಎಷ್ಟು ನಿಯಮಿತವಾಗಿ ವಿಮಾನವನ್ನು ಸರ್ವಿಸ್ ಮಾಡಲಾಗುತ್ತಿದೆ ಎಂಬುದನ್ನು ನೋಡಲಾಗುತ್ತದೆ. ಇದು ತೃಪ್ತಿದಾಯಕ ಅಲ್ಲ ಎಂದಲ್ಲಿ ಏರ್ ಇಂಡಿಯಾ ವಿರುದ್ಧ ಕಠಿಣ ಕ್ರಮ ಜರುವ ಸಾಧ್ಯತೆಯೂ ಇರುತ್ತದೆ.

ಅಹ್ಮದಾಬಾದ್​​ನಲ್ಲಿ ಅಪಘಾತಕ್ಕೊಳಗಾದ ಬೋಯಿಂಗ್ 787 ಡ್ರೀಮ್​ಲೈನರ್ ಸರಣಿಯ ವಿಮಾನಗಳು ಉತ್ಕೃಷ್ಟ ಗುಣಮಟ್ಟದವು ಎಂದು ಪರಿಗಣಿತವಾಗಿವೆ. ಇವು ಹೆಚ್ಚು ಅಗಲ ಇರುತ್ತವೆ. ಅಂತಾರಾಷ್ಟ್ರೀಯ ಫ್ಲೈಟ್​​ಗಳಲ್ಲಿ ಇವನ್ನು ಹೆಚ್ಚಾಗಿ ಬಳಸಲಾಗುತ್ತದೆ. ಈ ಡ್ರೀಮ್​ಲೈನರ್ ಸರಣಿಯಲ್ಲಿ 787-8, 787-9, ಮತ್ತು 787-10 ಮಾಡಲ್​ಗಳಿವೆ. 787-8 ವಿಮಾನಗಳಲ್ಲಿ ಕಡಿಮೆ ಜನರ ಸಾಮರ್ಥ್ಯ ಇರುತ್ತದೆ. ಈ ಡ್ರೀಮ್​ಲೈನ್ ವಿಮಾನಗಳಲ್ಲಿ ಬಹಳ ಅಗುರವಾದ ವಸ್ತುಗಳನ್ನು ಬಳಸಲಾಗಿರುವುದರಿಂದ ಇಂಧನ ಕ್ಷಮತೆ ಶೇ 20ರಷ್ಟು ಹೆಚ್ಚಿರುತ್ತದೆ. ಅದಕ್ಕೆ ಅನುಗುಣವಾಗಿ ವಿಶೇಷ ಡಿಸೈನ್ ಕೂಡ ಇದೆ.

ಇದನ್ನೂ ಓದಿ: ಅಹ್ಮದಾಬಾದ್ ವಿಮಾನ ದುರಂತ; ಏರ್ ಇಂಡಿಯಾ, ವಿಮಾ ಕಂಪನಿಗಳಿಗೆ ನಷ್ಟವೆಷ್ಟು? ಪ್ರಯಾಣಿಕರಿಗೆ ಪರಿಹಾರವೆಷ್ಟು? ಇಲ್ಲಿದೆ ಡೀಟೇಲ್ಸ್

2011ರಲ್ಲಿ ಹಾಂಕಂಗ್​​ನಿಂದ ಟೋಕಿಯೋದ ನಾರಿಟಾ ಏರ್​​ಪೋರ್ಟ್​​ಗೆ ಇದರ ಮೊದಲ ಕಮರ್ಷಿಯಲ್ ಫ್ಲೈಟ್ ನಡೆದಿತ್ತು. ಕಳೆದ 14 ವರ್ಷದಲ್ಲಿ ಈ ಡ್ರೀಮ್​​ಲೈನರ್ ವಿಮಾನಗಳು ತಾಂತ್ರಿಕ ದೋಷದಿಂದ ದೊಡ್ಡ ಅಪಘಾತಕ್ಕೆ ಒಳಗಾದ ಘಟನೆಯೇ ಇರಲಿಲ್ಲ. ಅಹ್ಮದಾಬಾದ್​ನದ್ದೇ ಮೊದಲ ಅಪಘಾತ ಘಟನೆ ಎಂದು ಹೇಳಲಾಗುತ್ತಿದೆ.

ಈ 14 ವರ್ಷದಲ್ಲಿ ಬೋಯಿಂಗ್ ಕಂಪನಿಯು 2,500ಕ್ಕೂ ಹೆಚ್ಚು ಡ್ರೀಮ್​ಲೈನರ್ ವಿಮಾನಗಳನ್ನು ಮಾರಾಟ ಮಾಡಿದೆ. ಏರ್ ಇಂಡಿಯಾ ಕಂಪನಿ ಈ 47 ವಿಮಾನಗಳನ್ನು ಖರೀದಿಸಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಚೈತ್ರಾ ಕುಂದಾಪುರ ಡಿಬಾರ್ ಆಗಿದ್ದಳು: ಎಲ್ಲ ವಿಷಯ ಹೇಳಿದ ತಂದೆ ಬಾಲಕೃಷ್ಣ
ಚೈತ್ರಾ ಕುಂದಾಪುರ ಡಿಬಾರ್ ಆಗಿದ್ದಳು: ಎಲ್ಲ ವಿಷಯ ಹೇಳಿದ ತಂದೆ ಬಾಲಕೃಷ್ಣ
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ
ಮೋದಿಯಿಂದ ನಾಳೆ ಉದ್ಘಾಟನೆಯಾಗಲಿದೆ ಅಸ್ಸಾಂನ ಅತಿದೊಡ್ಡ ವಿಮಾನ ನಿಲ್ದಾಣ
ಮೋದಿಯಿಂದ ನಾಳೆ ಉದ್ಘಾಟನೆಯಾಗಲಿದೆ ಅಸ್ಸಾಂನ ಅತಿದೊಡ್ಡ ವಿಮಾನ ನಿಲ್ದಾಣ
ಶಾಲೆಗೆ ಬರುವ ಮಕ್ಕಳನ್ನ ಗಾರೆ ಕೆಲಸಕ್ಕಚ್ಚಿದ ಮೇಸ್ಟ್ರು, ವಿಡಿಯೋ ವೈರಲ್
ಶಾಲೆಗೆ ಬರುವ ಮಕ್ಕಳನ್ನ ಗಾರೆ ಕೆಲಸಕ್ಕಚ್ಚಿದ ಮೇಸ್ಟ್ರು, ವಿಡಿಯೋ ವೈರಲ್
ಸಂಸತ್ ಅಧಿವೇಶನ ಮುಕ್ತಾಯ; ಮೋದಿ ಸೇರಿ ಎಲ್ಲ ಸಂಸದರಿಗೆ ಸ್ಪೀಕರ್ ಟೀ ಪಾರ್ಟಿ
ಸಂಸತ್ ಅಧಿವೇಶನ ಮುಕ್ತಾಯ; ಮೋದಿ ಸೇರಿ ಎಲ್ಲ ಸಂಸದರಿಗೆ ಸ್ಪೀಕರ್ ಟೀ ಪಾರ್ಟಿ
ಬಾಲಕನನ್ನು ಫುಟ್ಬಾಲ್​​ನಂತೆ ಒದ್ದ ಜಿಮ್ ಟ್ರೈನರ್​​ನ ಮತ್ತಷ್ಟು ಕೃತ್ಯಗಳು
ಬಾಲಕನನ್ನು ಫುಟ್ಬಾಲ್​​ನಂತೆ ಒದ್ದ ಜಿಮ್ ಟ್ರೈನರ್​​ನ ಮತ್ತಷ್ಟು ಕೃತ್ಯಗಳು
ವಕ್ಫ್ ಆಸ್ತಿಗಾಗಿ ಸಂಘರ್ಷ: 11 ಎಕರೆ ಜಮೀನಿಗಾಗಿ ಕುಟುಂಬಗಳ‌ ಮಧ್ಯೆ ಬಡಿದಾಟ
ವಕ್ಫ್ ಆಸ್ತಿಗಾಗಿ ಸಂಘರ್ಷ: 11 ಎಕರೆ ಜಮೀನಿಗಾಗಿ ಕುಟುಂಬಗಳ‌ ಮಧ್ಯೆ ಬಡಿದಾಟ
ದೇವಿ ದರ್ಶನ ಬಳಿಕ ಡಿಸಿಎಂ ಸ್ಫೋಟಕ ಹೇಳಿಕೆ: ಸಂಚಲನ ಮೂಡಿಸಿದ ಡಿಕೆಶಿ ಸಂದೇಶ
ದೇವಿ ದರ್ಶನ ಬಳಿಕ ಡಿಸಿಎಂ ಸ್ಫೋಟಕ ಹೇಳಿಕೆ: ಸಂಚಲನ ಮೂಡಿಸಿದ ಡಿಕೆಶಿ ಸಂದೇಶ