AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Google: ಗೂಗಲ್​ನಿಂದ ಉದ್ಯೋಗಿಗಳಿಗೆ 1,21,000 ರೂಪಾಯಿ ಒಂದು ಸಲದ ನಗದು ಬೋನಸ್ ಘೋಷಣೆ

ಆಲ್ಫಾಬೆಟ್ ಇಂಕ್​ನ ಗೂಗಲ್​ ತನ್ನ ಉದ್ಯೋಗಿಗಳಿಗೆ ಒಂದು ಸಲದ ಬೋನಸ್ 1,21,000 ರೂಪಾಯಿ ಘೋಷಣೆ ಮಾಡಿದೆ. ಆ ಬಗ್ಗೆ ಮಾಹಿತಿ ಇಲ್ಲಿದೆ.

Google: ಗೂಗಲ್​ನಿಂದ ಉದ್ಯೋಗಿಗಳಿಗೆ 1,21,000 ರೂಪಾಯಿ ಒಂದು ಸಲದ ನಗದು ಬೋನಸ್ ಘೋಷಣೆ
ಸಾಂದರ್ಭಿಕ ಚಿತ್ರ
Follow us
TV9 Web
| Updated By: Srinivas Mata

Updated on: Dec 09, 2021 | 11:17 AM

ಆಲ್ಫಾಬೆಟ್ ಇಂಕ್‌ಗೆ ಸೇರಿದ ಗೂಗಲ್ ಈ ವರ್ಷ ಜಾಗತಿಕವಾಗಿ ತನ್ನ ಉದ್ಯೋಗಿಗಳಿಗೆ ಹೆಚ್ಚುವರಿ ಬೋನಸ್ ನೀಡುವುದಾಗಿ ಬುಧವಾರ ಘೋಷಣೆ ಮಾಡಿದೆ. ಏಕೆಂದರೆ ಟೆಕ್ ದೈತ್ಯ ಕಂಪೆನಿ ಗೂಗಲ್ ತನ್ನ ರಿಟರ್ನ್-ಟು-ಆಫೀಸ್ ಯೋಜನೆಯನ್ನು ಹಿಂದಕ್ಕೆ ತಳ್ಳಿದೆ. ಕಂಪೆನಿಯ ದೊಡ್ಡ ಸಂಖ್ಯೆಯಲ್ಲಿನ ಸಿಬ್ಬಂದಿ ಮತ್ತು ಇಂಟರ್ನ್‌ಗಳು ಸೇರಿದಂತೆ ಎಲ್ಲ ಉದ್ಯೋಗಿಗಳಿಗೆ ಈ ತಿಂಗಳು ತಮ್ಮ ದೇಶದಲ್ಲಿ 1,600 ಅಮೆರಿಕನ್ ಡಾಲರ್ ಅಥವಾ ಸಮಾನ ಮೌಲ್ಯದ ಒಂದು-ಬಾರಿಯ ನಗದು ಬೋನಸ್ ಅನ್ನು ಗೂಗಲ್ ನೀಡುತ್ತದೆ ಎಂದು ಕಂಪೆನಿಯ ವಕ್ತಾರರು ರಾಯಿಟರ್ಸ್‌ಗೆ ತಿಳಿಸಿದ್ದಾರೆ.

ಕೊರೊನಾ ಸಾಂಕ್ರಾಮಿಕದ ಸಮಯದಲ್ಲಿ ಉದ್ಯೋಗಿಗಳನ್ನು ಬೆಂಬಲಿಸುವ ಸಲುವಾಗಿ ಗೂಗಲ್​ನಿಂದ ಮನೆಯಿಂದ ಕೆಲಸದ ಭತ್ಯೆ ಮತ್ತು ಯೋಗಕ್ಷೇಮದ ಬೋನಸ್ ನೀಡಲಾಗಿತ್ತು. ಇದೀಗ ಹೆಚ್ಚುವರಿಯಾಗಿ ಬೆನಿಫಿಟ್​ ಘೋಷಣೆ ಮಾಡಿದೆ. ಕಂಪೆನಿಯು ಈ ಉದ್ದೇಶಕ್ಕಾಗಿ ಒಟ್ಟು ಎಷ್ಟು ಮೊತ್ತ ಮೀಸಲಿಟ್ಟಿದೆ ಎಂಬುದರ ಕುರಿತು ವಿವರಗಳನ್ನು ನೀಡದೆ ವಕ್ತಾರರು ಮಾಹಿತಿ ತಿಳಿಸಿದ್ದಾರೆ. 2021ರ ಮಾರ್ಚ್‌ನಲ್ಲಿ ಗೂಗಲ್​ನ ಆಂತರಿಕ ಸಮೀಕ್ಷೆಯು ಕಳೆದ ವರ್ಷದಲ್ಲಿ ತನ್ನ ಉದ್ಯೋಗಿ ಯೋಗಕ್ಷೇಮದಲ್ಲಿ ಕುಸಿತವನ್ನು ತೋರಿಸಿದೆ. ಅದರ ನಂತರ ಕಂಪೆನಿಯು 500 ಯುಎಸ್​ಡಿ ಯೋಗಕ್ಷೇಮದ ನಗದು ಬೋನಸ್ ಸೇರಿ ಹಲವು ಬೆನಿಫಿಟ್​ಗಳನ್ನು ಘೋಷಿಸಿತು.

ಕಳೆದ ವಾರ ಒಮಿಕ್ರಾನ್ ವೇರಿಯಂಟ್ ಆತಂಕಗಳು ಮತ್ತು ಕಂಪೆನಿ-ಆದೇಶದ ಲಸಿಕೆಗಳಿಗೆ ತನ್ನ ಉದ್ಯೋಗಿಗಳಿಂದ ಪ್ರತಿರೋಧದ ಮಧ್ಯೆ ಗೂಗಲ್ ತನ್ನ ಕಚೇರಿಗೆ ಹಿಂತಿರುಗುವ ಯೋಜನೆಯನ್ನು ಅನಿರ್ದಿಷ್ಟವಾಗಿ ಮುಂದಕ್ಕೆ ಹಾಕಿತು. ಜನವರಿ 10ರಿಂದ ಸಿಬ್ಬಂದಿ ಕಚೇರಿಗೆ ಮರಳುವ ನಿರೀಕ್ಷೆಯಿದೆ.

ಇದನ್ನೂ ಓದಿ: Google Pay: ಧ್ವನಿ ಕಮಾಂಡ್​ನಿಂದ ಬ್ಯಾಂಕ್​ ಖಾತೆಗೆ ಹಣ ವರ್ಗಾಯಿಸುವ ಫೀಚರ್ ತರಲಿದೆ ಗೂಗಲ್ ಪೇ

ರಾಕೇಶ್ ಪೂಜಾರಿ ಪ್ರತಿಭೆ ಕಂಡು ದರ್ಶನ್ ಕೂಡ ಫೋಟೋ ತೆಗೆಸಿಕೊಂಡಿದ್ರು: ರಘು
ರಾಕೇಶ್ ಪೂಜಾರಿ ಪ್ರತಿಭೆ ಕಂಡು ದರ್ಶನ್ ಕೂಡ ಫೋಟೋ ತೆಗೆಸಿಕೊಂಡಿದ್ರು: ರಘು
ಗಂಗಾವತಿಯಲ್ಲಿ ಬೆಂಬಲಿಗರ ಸಭೆ ನಡೆಸಿದ ಜನಾರ್ಧನ ರೆಡ್ಡಿ ಪತ್ನಿ ಅರುಣಾ
ಗಂಗಾವತಿಯಲ್ಲಿ ಬೆಂಬಲಿಗರ ಸಭೆ ನಡೆಸಿದ ಜನಾರ್ಧನ ರೆಡ್ಡಿ ಪತ್ನಿ ಅರುಣಾ
ಲಿಫ್ಟ್​ನಲ್ಲಿದ್ದ9 ಜನರನ್ನ ಗೋಡೆ ಕೊರೆದು ರಕ್ಷಿಸಿದ ರೋಚಕ ವಿಡಿಯೋ!
ಲಿಫ್ಟ್​ನಲ್ಲಿದ್ದ9 ಜನರನ್ನ ಗೋಡೆ ಕೊರೆದು ರಕ್ಷಿಸಿದ ರೋಚಕ ವಿಡಿಯೋ!
ಪುರುಷರು ವಾಹನ ಓಡಿಸಲು ಪರದಾಡಿದ ರಸ್ತೇಲಿ ಸಲೀಸಾಗಿ ಸ್ಕೂಟರ್ ಓಡಿಸಿದ ಯುವತಿ
ಪುರುಷರು ವಾಹನ ಓಡಿಸಲು ಪರದಾಡಿದ ರಸ್ತೇಲಿ ಸಲೀಸಾಗಿ ಸ್ಕೂಟರ್ ಓಡಿಸಿದ ಯುವತಿ
ರಾಕೇಶ್ ಪೂಜಾರಿಗೆ ಆರೋಗ್ಯ ಸಮಸ್ಯೆ ಇತ್ತ: ಗೆಳೆಯ ಕೊಟ್ಟ ಉತ್ತರ
ರಾಕೇಶ್ ಪೂಜಾರಿಗೆ ಆರೋಗ್ಯ ಸಮಸ್ಯೆ ಇತ್ತ: ಗೆಳೆಯ ಕೊಟ್ಟ ಉತ್ತರ
ಪಾಕಿಸ್ತಾನ ಎಸೆದ ಜೀವಂತ ಶೆಲ್​ಗಳನ್ನು ನಿಷ್ಕ್ರಿಯಗೊಳಿಸಿದ ಭಾರತೀಯ ಸೇನೆ
ಪಾಕಿಸ್ತಾನ ಎಸೆದ ಜೀವಂತ ಶೆಲ್​ಗಳನ್ನು ನಿಷ್ಕ್ರಿಯಗೊಳಿಸಿದ ಭಾರತೀಯ ಸೇನೆ
ಮಳೆಗಾಲ ಸಮೀಪದಲ್ಲಿದೆ, ನಗರದಲ್ಲಿ ಮರ ಗಣತಿ ಶುರುಮಾಡಲು ಇದು ಸಕಾಲ
ಮಳೆಗಾಲ ಸಮೀಪದಲ್ಲಿದೆ, ನಗರದಲ್ಲಿ ಮರ ಗಣತಿ ಶುರುಮಾಡಲು ಇದು ಸಕಾಲ
ಮನೆಯೊಳಗೆ ನುಗ್ಗಿ ಕೊಲ್ಲುತ್ತೇವೆ; ಪಾಕಿಸ್ತಾನಕ್ಕೆ ಮೋದಿ ಖಡಕ್ ಎಚ್ಚರಿಕೆ
ಮನೆಯೊಳಗೆ ನುಗ್ಗಿ ಕೊಲ್ಲುತ್ತೇವೆ; ಪಾಕಿಸ್ತಾನಕ್ಕೆ ಮೋದಿ ಖಡಕ್ ಎಚ್ಚರಿಕೆ
ಹೊತ್ತಿ ಉರಿದ ಗೋದಾಮು, 60ಕ್ಕೂ ಹೆಚ್ಚು ಗಾಡಿ ನೀರು ಹಾಕಿದ್ರೂ ಆರದ ಬೆಂಕಿ
ಹೊತ್ತಿ ಉರಿದ ಗೋದಾಮು, 60ಕ್ಕೂ ಹೆಚ್ಚು ಗಾಡಿ ನೀರು ಹಾಕಿದ್ರೂ ಆರದ ಬೆಂಕಿ
ಸಾಮಾನ್ಯ ಸಂಗತಿಯೆಂಬಂತೆ ಘಟನೆ ವಿವರಿಸಿದ ಮೃತ ಬಾಲಕನ ತಂದೆ
ಸಾಮಾನ್ಯ ಸಂಗತಿಯೆಂಬಂತೆ ಘಟನೆ ವಿವರಿಸಿದ ಮೃತ ಬಾಲಕನ ತಂದೆ