AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅನೈತಿಕ ವ್ಯವಹಾರ ಆರೋಪ: ಇಬ್ಬರು ಫಂಡ್ ಮ್ಯಾನೇಜರ್​ಗಳನ್ನು ವಜಾ ಮಾಡಿದ ಆಕ್ಸಿಸ್ ಮ್ಯೂಚುವಲ್ ಫಂಡ್

ಅನೈತಿಕ ವಹಿವಾಟು ಆರೋಪದ ಮೇಲೆ ಇಬ್ಬರು ಫಂಡ್​ ಮ್ಯಾನೇಜರ್​ಗಳನ್ನು ಆ್ಯಕ್ಸಿಸ್ ಮ್ಯೂಚುವಲ್​ ಫಂಡ್​ನ ಆಡಳಿತ ಮಂಡಳಿಅಮಾನತು ಮಾಡಿದೆ.

ಅನೈತಿಕ ವ್ಯವಹಾರ ಆರೋಪ: ಇಬ್ಬರು ಫಂಡ್ ಮ್ಯಾನೇಜರ್​ಗಳನ್ನು ವಜಾ ಮಾಡಿದ ಆಕ್ಸಿಸ್ ಮ್ಯೂಚುವಲ್ ಫಂಡ್
ಪ್ರಾತಿನಿಧಿಕ ಚಿತ್ರ
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ|

Updated on:May 08, 2022 | 2:01 PM

Share

ಮುಂಬೈ: ಆ್ಯಕ್ಸಿಸ್ ಮ್ಯೂಚುವಲ್​ ಫಂಡ್​ನ ಆಡಳಿತ ಮಂಡಳಿ ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ಅನೈತಿಕ ವಹಿವಾಟು ಆರೋಪದ ಮೇಲೆ ಇಬ್ಬರು ಫಂಡ್​ ಮ್ಯಾನೇಜರ್​ಗಳನ್ನು ಅಮಾನತು ಮಾಡಿದೆ. ಈ ಬೆಳವಣಿಗೆಯಿಂದಾಗಿ ಆಕ್ಸಿಸ್ ಫಂಡ್​ ಹೌಸ್​ ನಿರ್ವಹಿಸುತ್ತಿದ್ದ ಏಳು ಮ್ಯೂಚುವಲ್​ ಫಂಡ್​ಗಳ ನಿರ್ವಹಣೆಯ ಚುಕ್ಕಾಣಿ ಹಿಡಿದ ಕೈಗಳು ಬದಲಾಗಿವೆ. ಟ್ರೇಡರ್, ರೀಸರ್ಚ್ ಅನಲಿಸ್ಟ್​ ಮತ್ತು ಫಂಡ್​ ಮ್ಯಾನೇಜರ್​ಗಳಾಗಿದ್ದ ವೀರೇಶ್ ಜೋಶಿ ಮತ್ತು ದೀಪಕ್ ಅಗರ್​ವಾಲ್ ಅಮಾನತು ಆದವರು.

ವೀರೇಶ್ ಜೋಶಿ ಅವರು ಆ್ಯಕ್ಸಿಸ್​ ಆಬ್ರಿಟ್ರೇಜ್ ಫಂಡ್, ಆ್ಯಕ್ಸಿಸ್ ಬ್ಯಾಂಕಿಂಗ್ ಇಟಿಎಫ್, ಆ್ಯಕ್ಸಿಸ್ ಕನ್​ಸಮ್​ಷನ್ ಇಟಿಎಫ್, ಆ್ಯಕ್ಸಿಸ್ ನಿಫ್ಟಿ ಇಟಿಎಫ್, ಆ್ಯಕ್ಸಿಸ್ ಟೆಕ್ನಾಲಜಿ ಇಟಿಫ್​ಗಳನ್ನು ಇತರರ ಸಹಯೋಗದಲ್ಲಿ ನಿರ್ವಹಿಸುತ್ತಿದ್ದರು. ದೀಪಕ್ ಅಗರ್​ವಾಲ್​ ಅವರು ಸ್ವತಂತ್ರವಾಗಿ ಅ್ಯಕ್ಸಿಸ್ ಕ್ವಾಂಟ್ ಫಂಡ್​ ಮತ್ತು ಇತರರ ಸಹಯೋಗದಲ್ಲಿ ಆ್ಯಕ್ಸಿಸ್ ಕನ್​ಸಮ್​ಷನ್ ಇಟಿಎಫ್, ಆ್ಯಕ್ಸಿಸ್ ವ್ಯಾಲ್ಯೂ ಫಂಡ್​ಗಳನ್ನು ನಿರ್ವಹಿಸುತ್ತಿದ್ದರು. ಈ ಎಲ್ಲ ಫಂಡ್​ಗಳು ಹೂಡಿಕೆದಾರರ ಮೆಚ್ಚುಗೆಗೆ ಪಾತ್ರವಾಗಿದ್ದ ಜನಪ್ರಿಯ ಫಂಡ್​ಗಳಾಗಿದ್ದವು. ಆಶಿಶ್ ನಾಯಕ್ ಮತ್ತು ಜಿನೇಶ್ ಗೋಪಾನಿ ಅವರಿಗೆ ಇದೀಗ ಈ ಫಂಡ್​ಗಳ ಹೊಣೆ ವಹಿಸಲಾಗಿದೆ.

‘ನಿಯಮಗಳಿಗೆ ಬದ್ಧವಾಗಿರಬೇಕು ಎನ್ನುವುದು ಆ್ಯಕ್ಸಿಸ್ ಎಎಂಸಿ ಘೋಷಿಸಿಕೊಂಡಿರುವ ನೀತಿ. ನಮ್ಮೆಲ್ಲ ಸಿಬ್ಬಂದಿ ಇದಕ್ಕೆ ಬದ್ಧವಾಗಿರಬೇಕು. ನಾವು ಕಳೆದ ಎರಡು ತಿಂಗಳುಗಳಿಂದ ಸ್ವಯಂಪ್ರೇರಿತ ಆಂತರಿಕ ವಿಚಾರಣೆ ನಡೆಸುತ್ತಿದ್ದೇವೆ. ಇದಕ್ಕಾಗಿ ಪ್ರತಿಷ್ಠಿತ ಬಾಹ್ಯ ಸಲಹೆಗಾರರ ಮಾರ್ಗದರ್ಶನ ಪಡೆದುಕೊಂಡಿದ್ದೇವೆ. ಈ ಪ್ರಕ್ರಿಯೆಯ ಭಾಗವಾಗಿ ಇಬ್ಬರು ಫಂಡ್​ ಮ್ಯಾನೇಜರ್​ಗಳ ವಿರುದ್ಧ ವಿಚಾರಣೆ ಬಾಕಿಯಿಟ್ಟು, ಅವರನ್ನು ಅಮಾನತು ಮಾಡಲಾಗಿದೆ’ ಎಂಬ ಆ್ಯಕ್ಸಿಸ್​ ಮ್ಯೂಚುವಲ್ ಫಂಡ್ ಹೇಳಿಕೆಯನ್ನು ಎಕನಾಮಿಕ್ ಟೈಮ್ಸ್ ವರದಿ ಮಾಡಿದೆ.

ಅಮಾನತಾಗಿರುವ ವೀರೇಶ್ ಜೋಶಿ ಮತ್ತು ದೀಪಕ್ ಅಗರ್​ವಾಲ್ ವಿರುದ್ಧ ಫ್ರಂಟ್ ರನಿಂಗ್ ಅಕ್ರಮ ಎಸಗಿರುವ ಆರೋಪ ಕೇಳಿ ಬಂದಿತ್ತು. ಷೇರು ದಲ್ಲಾಳಿಯೊಬ್ಬರಿಗೆ ಬೃಹತ್ ಪ್ರಮಾಣದ ಷೇರು ವಹಿವಾಟಿನ ಗೌಪ್ಯ ಮಾಹಿತಿ ಲಭ್ಯವಾಗಿ, ಅವರು ಅದರಿಂದ ದೊಡ್ಡಮಟ್ದ ಲಾಭಮಾಡಿಕೊಳ್ಳುವಂಥ ವಹಿವಾಟು ನಡೆಸುವುದನ್ನು ಫ್ರಂಟ್ ರನಿಂಗ್ ಎನ್ನುತ್ತಾರೆ. ಭಾರತದಲ್ಲಿ ಇಂತ ವಹಿವಾಟನ್ನು ಅನೈತಿಕ ಎಂದು ಕರೆಯಲಾಗಿದೆ. ಇದಕ್ಕೆ ಕಾನೂನಿನ ಮಾನ್ಯತೆಯಿಲ್ಲ.

ಈ ಬೆಳವಣಿಗೆಯ ನಂತರ ಈ ಫಂಡ್​ಗಳಲ್ಲಿ ಹೂಡಿಕೆ ಮಾಡಿರುವ ಕೆಲವರು ಗಾಬರಿಗೊಂಡಿದ್ದಾರೆ. ಆದರೆ ಅಂಥ ಚಿಂತೆ ಅನಗತ್ಯ ಎಂದು ಹೂಡಿಕೆ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಆ್ಯಕ್ಸಿಸ್ ಎಎಂಸಿಯ ಮ್ಯೂಚುವಲ್​ ಫಂಡ್​ಗಳನ್ನು ಹಲವು ಮ್ಯಾನೇಜರ್​ಗಳು ನಿರ್ವಹಿಸುತ್ತಾರೆ. ಹೀಗಾಗಿ ಯಾರೋ ಒಬ್ಬಿಬ್ಬರು ಮ್ಯಾನೇಜರ್​ಗಳ ವಿರುದ್ಧ ಆರೋಪ ಕೇಳಿ ಬಂದ ಮಾತ್ರಕ್ಕೆ ಹೂಡಿಕೆದಾರರು ಗಾಬರಿಗೆ ಒಳಗಾಗಿ ನಿರ್ಧಾರಗಳನ್ನು ತೆಗೆದುಕೊಳ್ಳಬಾರದು. ಹೂಡಿಕೆಯ ಯಾವುದೇ ನಿರ್ಧಾರದ ಮೇಲೆಯೂ ಈ ಸುದ್ದಿಯ ಪರಿಣಾಮ ಇರಬಾರದು. ಫಂಡ್​ಗಳು ಹೂಡಿಕೆ ಮಾಡಿರುವ ರೀತಿಯಲ್ಲಿ, ಈ ಫಂಡ್​ಗಳ ಭಾಗವಾಗಿರುವ ಕಂಪನಿಗಳ ಷೇರುಗಳ ಮಾರಾಟ ಅಥವಾ ಖರೀದಿ ನಡೆದರೆ ಅದನ್ನೂ ಫಂಡ್​ಹೌಸ್ ಜನರ ಗಮನಕ್ಕೆ ತರಲಿದೆ ಎಂದು ಹೂಡಿಕೆ ಸಲಹೆಗಾರರು ತಿಳಿಸಿದ್ದಾರೆ.

ಇದನ್ನೂ ಓದಿ: ಇನ್ಫ್ರಾ ಮ್ಯೂಚುವಲ್ ಫಂಡ್​ಗಳಲ್ಲಿ ಹೂಡಿಕೆ ಮಾಡಿ, ಲಾಭ ಗಳಿಸೋದು ಹೇಗೆ..! ಇಲ್ಲಿದೆ ಮಾಹಿತಿ

ಇದನ್ನೂ ಓದಿ: Mutual Funds: ಮ್ಯೂಚುವಲ್​ ಫಂಡ್ಸ್​ ಪ್ಲಾನ್​ನಲ್ಲಿ ಹೂಡಿಕೆ ಮಾಡುವಾಗ ಈ 5 ಅಂಶಗಳನ್ನು ಗಮನಿಸಿ

Published On - 2:01 pm, Sun, 8 May 22

ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?