Basmati Rice: ಮಳೆಯಿಂದಾಗಿ ಭತ್ತದ ಬೆಳೆಗೆ ಹಾನಿ; ಬಾಸುಮತಿ ಅಕ್ಕಿಯ ಬೆಲೆ ಮತ್ತಷ್ಟು ಹೆಚ್ಚಳ

| Updated By: Rakesh Nayak Manchi

Updated on: Sep 26, 2022 | 11:24 AM

ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಅಕ್ಕಿ, ಗೋಧಿ, ಹಿಟ್ಟಿನ ಬೆಲೆ ಮತ್ತಷ್ಟು ಹೆಚ್ಚಾಗುವ ನಿರೀಕ್ಷೆ ಇದ್ದು, ಇದರಿಂದ ಅಕ್ಕಿ, ಗೋಧಿ, ಹಿಟ್ಟಿನ ಬೆಲೆಯಲ್ಲಿ ಏರಿಕೆಯಾಗಲಿದೆ. ಕೆಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಆಹಾರ ಉತ್ಪನ್ನಗಳ ಬೆಲೆಯಲ್ಲಿ ಶೇಕಡಾ 20 ರಷ್ಟು ಏರಿಕೆಯಾಗಿದೆ.

Basmati Rice: ಮಳೆಯಿಂದಾಗಿ ಭತ್ತದ ಬೆಳೆಗೆ ಹಾನಿ; ಬಾಸುಮತಿ ಅಕ್ಕಿಯ ಬೆಲೆ ಮತ್ತಷ್ಟು ಹೆಚ್ಚಳ
ಮಳೆಯಿಂದಾಗಿ ಭತ್ತದ ಬೆಳೆಗೆ ಹಾನಿ ಹಿನ್ನೆಲೆ ಬಾಸುಮತಿ ಅಕ್ಕಿಯ ಬೆಲೆ ಮತ್ತಷ್ಟು ಹೆಚ್ಚಳವಾಗುವ ಸಾಧ್ಯತೆ
Follow us on

ದೇಶೀಯ ಮಾರುಕಟ್ಟೆಯಲ್ಲಿ ಅಕ್ಕಿ(Rice), ಗೋಧಿ (Wheat), ಹಿಟ್ಟಿನಂತಹ ಧಾನ್ಯಗಳ ಬೆಲೆ (Price of grains)ಯನ್ನು ನಿಯಂತ್ರಿಸಲು ಸರ್ಕಾರವು ರಫ್ತು ನಿಲ್ಲಿಸಿದರೂ ಅವುಗಳ ಬೆಲೆ ನಿರಂತರವಾಗಿ ಹೆಚ್ಚುತ್ತಿದೆ. ಭಾರೀ ಮಳೆಯಿಂದಾಗಿ ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಈ ಆಹಾರ ಉತ್ಪನ್ನಗಳ ಬೆಲೆಯಲ್ಲಿ ಶೇ 20ರಷ್ಟು ಏರಿಕೆಯಾಗಿದೆ ಎಂದು ಆಹಾರ ಸಚಿವಾಲಯ ತಿಳಿಸಿದೆ. ಆದರೆ ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಅಕ್ಕಿ, ಗೋಧಿ, ಹಿಟ್ಟಿನ ಬೆಲೆಯಲ್ಲಿ ಮತ್ತಷ್ಟು ಹೆಚ್ಚಾಗುವ ನಿರೀಕ್ಷೆ ಇದ್ದು, ಪರಿಣಾಮವಾಗಿ ಮುಂದಿನ ದಿನಗಳಲ್ಲಿ ಜನರ ಜೇಬುಗಳು ಇನ್ನಷ್ಟು ಸಡಿಲವಾಗಬಹುದು. ಅತಿವೃಷ್ಟಿಯು ರೈತರ ಬೆಳೆಗಳಿಗೆ ಹಾನಿಯನ್ನುಂಟುಮಾಡಿದಾಗ ರೈತರ ಶ್ರಮವು ಸಂಪೂರ್ಣವಾಗಿ ಕೊಚ್ಚಿಹೋಗುತ್ತದೆ. ಅಂದರೆ ರೈತ ಶ್ರಮಪಟ್ಟು ಬೆಳೆದ ಬೆಳೆಗಳು ಮಳೆ ನೀರಿಗೆ ಹಾನಿಗೊಳಲಾಗುತ್ತವೆ. ಅದೇ ರೀತಿ ದೇಶದ ಕೆಲವೆಡೆ ಕಳೆದ ಕೆಲ ದಿನಗಳಿಂದ ನಿರಂತರವಾಗಿ ಮಳೆಯಾಗುತ್ತಿರುವುದರಿಂದ ದೇಶದ ಹಲವು ರೈತರು ಬೆಳೆದ ಭತ್ತದ ಬೆಳೆ ಸಂಪೂರ್ಣವಾಗಿ ಹಾಳಾಗಿದೆ. ಪರಿಣಾಮವಾಗಿ ಬಾಸುಮತಿ ಅಕ್ಕಿ (Basmati Rice)ಯ ಬೆಲೆ ಮತ್ತಷ್ಟು ಹೆಚ್ಚಾಗಬಹುದು ಎಂದು ಊಹಿಸಲಾಗಿದೆ.

ಬಾಸ್ಮತಿ ಅಕ್ಕಿಯು ಅದರ ವಿಶಿಷ್ಟ ರುಚಿ ಮತ್ತು ಗುಣಲಕ್ಷಣಗಳಿಂದಾಗಿ ಪ್ರಪಂಚದಾದ್ಯಂತ ಆಹಾರ ಮತ್ತು ರೆಸ್ಟೋರೆಂಟ್ ಉದ್ಯಮದಲ್ಲಿ ಪ್ರೀಮಿಯಂ ಅಕ್ಕಿಯಾಗಿ ಅಸ್ತಿತ್ವದಲ್ಲಿದೆ. ಇದು ಹರಿಯಾಣ, ಪಂಜಾಬ್, ಹಿಮಾಚಲ, ಉತ್ತರಾಖಂಡ, ದೆಹಲಿ, ಪಶ್ಚಿಮ ಉತ್ತರ ಪ್ರದೇಶದ 30 ಮತ್ತು ಜಮ್ಮು ಮತ್ತು ಕಾಶ್ಮೀರದ 3 ಜಿಲ್ಲೆಗಳು (ಜಮ್ಮು, ಕಥುವಾ ಮತ್ತು ಸಾಂಬಾ) ಸೇರಿದಂತೆ 7 ರಾಜ್ಯಗಳ 95 ಜಿಲ್ಲೆಗಳಲ್ಲಿ ಜಿಐ ಟ್ಯಾಗ್ ಅನ್ನು ಪಡೆದುಕೊಂಡಿದೆ. ಇಂತಹ ಅಕ್ಕಿ ಸೆಪ್ಟೆಂಬರ್ ಅಂತ್ಯದಲ್ಲಿ ಸುರಿದ ಭಾರಿ ಮಳೆಗೆ ರೈತರ ಭತ್ತದ ಬೆಳೆಗೆ ಭಾರಿ ಹಾನಿಯಾಗಿದೆ. ಇದರಿಂದ ಶೇ.20ರಷ್ಟು ಭತ್ತದ ಬೆಳೆ ಹಾನಿಯಾಗಿದೆ.

ಇಂತಹ ಪರಿಸ್ಥಿತಿಯಲ್ಲಿ ಮುಂದಿನ ದಿನಗಳಲ್ಲಿ ಬಾಸ್ಮತಿ ಅಕ್ಕಿಯ ಬೆಲೆ ಹೆಚ್ಚಾಗಬಹುದು ಎಂದು ವ್ಯಾಪಾರಿಗಳು ನಂಬಿದ್ದಾರೆ. ಇದು ರಫ್ತಿನ ಮೇಲೂ ನೇರ ಪರಿಣಾಮ ಬೀರಲಿದೆ. ಈ ಮಳೆಯಿಂದಾಗಿ ಭತ್ತದ ಗುಣಮಟ್ಟವೂ ಕುಸಿದಿದೆ. ಈ ಬಾರಿಯ ಅತಿವೃಷ್ಟಿಯಿಂದಾಗಿ ರೈತರು ಸಾಕಷ್ಟು ಆರ್ಥಿಕ ನಷ್ಟ ಅನುಭವಿಸಬೇಕಾಗಿದೆ. ಇದರೊಂದಿಗೆ ದೇಶಾದ್ಯಂತ ಅತಿವೃಷ್ಟಿಯಿಂದ ಭತ್ತದ ಬೆಳೆಗಳಲ್ಲಿ ಗಣನೀಯ ಕುಸಿತವಾಗಿದೆ.

ಬಾಸ್ಮತಿ ಅಕ್ಕಿಯನ್ನು ನಮ್ಮ ದೇಶದಿಂದ ಸುಮಾರು 150 ದೇಶಗಳಿಗೆ ರಫ್ತು ಮಾಡಲಾಗುತ್ತದೆ. ನಾವು ಇದನ್ನು ಬೆಳೆಸುವ ಪ್ರಮುಖ ರಾಜ್ಯಗಳ ಬಗ್ಗೆ ಮಾತನಾಡಿದರೆ, ಪಂಜಾಬ್, ಹರಿಯಾಣ ಮತ್ತು ಉತ್ತರ ಪ್ರದೇಶ ಎಂಬ ಮೂರು ರಾಜ್ಯಗಳ ಹೆಸರು ಮೊದಲು ಬರುತ್ತದೆ. ಇದಲ್ಲದೆ, ಪಶ್ಚಿಮ ಉತ್ತರ ಪ್ರದೇಶದ ಮೀರತ್, ಸಹರಾನ್‌ಪುರ, ಆಗ್ರಾ, ಅಲಿಗಢ, ಮೊರಾದಾಬಾದ್, ಬರೇಲಿ ಎಲ್ಲಾ ಜಿಲ್ಲೆಗಳಲ್ಲಿ ಬಾಸ್ಮತಿ ಅಕ್ಕಿಯನ್ನು ಬೆಳೆಯಲಾಗುತ್ತದೆ. ಇಲ್ಲಿನ ಮಣ್ಣು ಮತ್ತು ಹವಾಮಾನವು ಬಾಸ್ಮತಿ ಭತ್ತದ ಕೃಷಿಗೆ ತುಂಬಾ ಅನುಕೂಲಕರವಾಗಿದೆ. ಅಷ್ಟು ಮಾತ್ರವಲ್ಲದೆ ರೈತರಿಗೆ ನೀರಾವರಿ ಸಾಧನಗಳು ಸಹ ಸುಲಭವಾಗಿ ಲಭ್ಯವಿದೆ. ಇಷ್ಟೇ ಅಲ್ಲ, ಬಾಸ್ಮತಿ ಅಕ್ಕಿಯನ್ನು ಇಂಡೋ-ಗಂಗಾ ಬಯಲು ಅಂದರೆ ಹಿಮಾಲಯದ ತಪ್ಪಲಿನಲ್ಲಿರುವ ಗಂಗಾ ಬಯಲು ಪ್ರದೇಶದಲ್ಲಿಯೂ ಉತ್ಪಾದಿಸಲಾಗುತ್ತದೆ. ಇದು ಪಾಕಿಸ್ತಾನದ ಭಾಗವಾಗಿರುವ ಪಂಜಾಬ್‌ನ 14 ಜಿಲ್ಲೆಗಳನ್ನು ಸಹ ಒಳಗೊಂಡಿದೆ.

ಮತ್ತಷ್ಟು ವಾಣಿಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:24 am, Mon, 26 September 22