AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Calligo: ಬೆಂಗಳೂರಿನ ಕ್ಯಾಲಿಗೋ ಸಾಧನೆ; ಪೊಸಿಟ್ ಎನೇಬಲ್ಡ್ ಸಿಲಿಕಾನ್ ರಚಿಸಿದ ವಿಶ್ವದ ಮೊದಲ ಕಂಪನಿ

World's First Posit Enabled Silicon: ಬೆಂಗಳೂರಿನ ಕ್ಯಾಲಿಗೋ ಟೆಕ್ನಾಲಜೀಸ್ ಇದೀಗ ಪೊಸಿಟ್ ಎನೇಬಲ್ಡ್ ಸಿಲಿಕಾನ್ ತಯಾರಿಸಿದೆ. ಈ ಸಾಧನೆ ಮಾಡಿದ ವಿಶ್ವದ ಮೊದಲ ಕಂಪನಿಯಾಗಿದೆ. ಕ್ಯಾಲಿಗೋ ಈಗ ಸಾಮಾನ್ಯ ಬಳಕೆಯ ಕಂಪ್ಯೂಟಿಂಗ್​​ಗೆ ಆಕ್ಸಲರೇಟರ್ ಕಾರ್ಡ್ ತಯಾರಿಸುವ ಸಾಮರ್ಥ್ಯ ಹೊಂದಿದೆ. 2016ರಲ್ಲಿ ಅಮೆರಿಕದ ಗಣಿತಜ್ಞರೊಬ್ಬರು ರೂಪಿಸಿದ ಪೊಸಿಟ್ ನಂಬರ್ ವ್ಯವಸ್ಥೆಯಲ್ಲಿ ಹೆಚ್ಚು ನಿಖರತೆ ಇದೆ. ಇದರ ಆಧಾರದಲ್ಲಿ ಸಿಲಿಕಾನ್ ತಯಾರಿಸಲಾಗಿದೆ.

Calligo: ಬೆಂಗಳೂರಿನ ಕ್ಯಾಲಿಗೋ ಸಾಧನೆ; ಪೊಸಿಟ್ ಎನೇಬಲ್ಡ್ ಸಿಲಿಕಾನ್ ರಚಿಸಿದ ವಿಶ್ವದ ಮೊದಲ ಕಂಪನಿ
ಕ್ಯಾಲಿಗೋ ಆ್ಯಕ್ಸಲರೇಟರ್ ಕಾರ್ಡ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jan 26, 2024 | 11:55 AM

Share

ಬೆಂಗಳೂರು, ಜನವರಿ 26: ಭಾರತದ ಸೆಮಿಕಂಡಕ್ಟರ್ ಕ್ಷೇತ್ರದ ಬೆಳವಣಿಗೆ ಸರಿಯಾದ ದಿಕ್ಕಿನಲ್ಲಿ ಸಾಗುತ್ತಿರುವಂತಿದೆ. ಬಹಳಷ್ಟು ಫ್ಯಾಬ್​ಲೆಸ್ ಚಿಪ್ ಡಿಸೈನ್ (fabless semiconductor chip design) ಸ್ಟಾರ್ಟಪ್​ಗಳು ಭಾರತದಲ್ಲಿ ಹುಲುಸಾಗಿ ಬೆಳೆಯುತ್ತಿವೆ. ಅದರಲ್ಲಿ ಬೆಂಗಳೂರಿನ ಕ್ಯಾಲಿಗೋ ಟೆಕ್ನಾಲಜೀಸ್ (Calligo Technologies) ಒಂದು. ಹತ್ತು ವರ್ಷದ ಹಿಂದೆ ಸ್ಥಾಪನೆಯಾದ ಕ್ಯಾಲಿಗೋ ಹೊಸ ಮೈಲಿಗಲ್ಲು ಮುಟ್ಟಿದೆ. ಪೊಸಿಟ್ ಎನೇಬಲ್ಡ್ ಸಿಲಿಕಾನ್ (POSIT-enabled Silicon) ಅನ್ನು ತಯಾರಿಸಿದ ವಿಶ್ವದ ಮೊದಲ ಕಂಪನಿ ಎನಿಸಿದೆ. ಇದರೊಂದಿಗೆ ಆ್ಯಕ್ಸಲರೇಟರ್ ಕಾರ್ಡ್ (Accelerator card) ತಯಾರಿಸುವ ಸಾಮರ್ಥ್ಯ ಕ್ಯಾಲಿಗೋಗೆ ಸಿಕ್ಕಂತಾಗಿದೆ. ಮುಂದಿನ ತಲೆಮಾರಿನ ಕಂಪ್ಯೂಟಿಂಗ್ ತಂತ್ರಜ್ಞಾನದಲ್ಲಿ ಬೆಂಗಳೂರಿನ ಸ್ಟಾರ್ಟಪ್​ಗೆ ಬಲ ಸಿಕ್ಕಂತಾಗಿದೆ.

ಸೆಮಿಕಂಡಕ್ಟರ್ ಫ್ಯಾಬ್​ಲೆಸ್ ಆ್ಯಕ್ಸಲರೇಟರ್ ಲ್ಯಾಬ್ ಮತ್ತು ಕರ್ನಾಟಕ ಸರ್ಕಾರದ ಇನ್ಫಾರ್ಮೇಶನ್ ಟೆಕ್ನಾಲಜಿ ಸೊಸೈಟಿಯಿಂದ ಬೆಂಬಲ ಹೊಂದಿರುವ ಕ್ಯಾಲಿಗೋ ಟೆಕ್ನಾಲಜೀಸ್ ತಯಾರಿಸಿರುವ ಪೊಸಿಟ್ ಎನೇಬಲ್ಡ್ ಸಿಲಿಕಾನ್ ಅನ್ನು ಪಿಎಫ್​ಜಿಎ ಪ್ಲಾಟ್​ಫಾರ್ಮ್​ನಲ್ಲಿ ಅಳವಡಿಸಲಾಗುತ್ತದೆ. ಈ ರೀತಿಯಲ್ಲಿ ತಯಾರಿಸಲಾದ ಮೊದಲ ಸಿಲಿಕಾನ್ ಮುಂದಿನ ತಿಂಗಳು (2024ರ ಫೆಬ್ರುವರಿ) ತಯಾರಾಗುವ ನಿರೀಕ್ಷೆ ಇದೆ.

ಇದನ್ನೂ ಓದಿ: Foxconn CEO: ಫಾಕ್ಸ್​ಕಾನ್ ಸಿಇಒ ಯಂಗ್ ಲಿಯುಗೆ ಪದ್ಮ ಭೂಷಣ ಪ್ರಶಸ್ತಿ ಗೌರವ

ಕ್ಯಾಲಿಗೋ ಈಗ ಸಾಮಾನ್ಯ ಬಳಕೆಯ ಕಂಪ್ಯೂಟಿಂಗ್​​ಗೆ ಆಕ್ಸಲರೇಟರ್ ಕಾರ್ಡ್ ತಯಾರಿಸುವ ಸಾಮರ್ಥ್ಯ ಹೊಂದಿದೆ. ಇಂಡಸ್ಟ್ರಿ ಕಾಂಪ್ಯಾಟಬಲ್ ಕಂಪೈಲರ್ ಮತ್ತು ಆಪರೇಟಿಂಗ್ ಸಿಸ್ಟಂ ಸೇರಿದಂತೆ ಸಂಪೂರ್ಣ ಸಾಫ್ಟ್​ವೇರ್ ಟೆಕ್ನಾಲಜಿ ಹೊಂದಿದೆ.

ಏನಿದು ಪೊಸಿಟ್?

ಇತ್ತೀಚಿನವರೆಗೂ ಫ್ಲೋಟಿಂಗ್ ಪಾಯಿಂಟ್ ಯೂನಿಟ್ ಹಾರ್ಡ್​ವೇರ್​ಗಳಿಗೆ ಐಇಇಇ 754 ಎಂಬುದು ಟೆಕ್ನಿಕಲ್ ಸ್ಟ್ಯಾಂಡರ್ಡ್ ಆಗಿತ್ತು. ಆದರೆ, ಅದರ ಸಂಖ್ಯೆ ವ್ಯವಸ್ಥೆಯಲ್ಲಿ ಒಂದಷ್ಟು ಲೋಪದೋಷಗಳಿವೆ. 2016ರಲ್ಲಿ ಅಮೆರಿಕದ ಗಣಿತಜ್ಞ ಜಾನ್ ಗುಸ್ಟಾಫ್​ಸನ್ ಎಂಬುವವರು ಇನ್ನಷ್ಟು ಗಣಿತ ನಿಖರತೆ ಮತ್ತು ವ್ಯಾಪ್ತಿ ಹೆಚ್ಚುವಂತೆ ಪೊಸಿಟ್ ನಂಬರ್ ಸಿಸ್ಟಂ ಅನ್ನು ಶೋಧಿಸಿದರು.

ಇದನ್ನೂ ಓದಿ: Cashless Treatment: ಇನ್ಷೂರೆನ್ಸ್ ಇದ್ದು ಯಾವುದೇ ಆಸ್ಪತ್ರೆಗೆ ದಾಖಲಾದರೂ ಕ್ಯಾಷ್​ಲೆಸ್ ಟ್ರೀಟ್ಮೆಂಟ್ ಪಡೆಯಿರಿ; ಇದು ಜಿಐಸಿ ಹೊಸ ನಿಯಮ

ಈ ವಿನೂತನ ಪೊಸಿಟ್ ನಂಬರ್ ಸಿಸ್ಟಂ ಆಧಾರಿತವಾಗಿ ಚಿಪ್ ತಯಾರಿಸುವುದು ಸವಾಲಿನ ಕೆಲಸವಾಗಿತ್ತು. ಕ್ಯಾಲಿಗೋ ಟೆಕ್ನಾಲಜೀಸ್ ಈ ಕಾರ್ಯ ಮಾಡಿ ಸೈ ಎನಿಸಿದೆ. ಇದರಿಂದ ಕಂಪ್ಯೂಟಿಂಗ್ ನಿಖರತೆ ಇನ್ನಷ್ಟು ಹೆಚ್ಚುತ್ತದೆ. ನೆಕ್ಸ್ಟ್ ಜನರೇಶನ್ ಕಂಪ್ಯೂಟಿಂಗ್​ಗೆ ಇದು ಪುಷ್ಟಿ ಕೊಡಲಿದೆ.

ಭಾರತದಲ್ಲಿ ಕ್ರಿಯಾಶೀಲತೆ, ನಾವೀನ್ಯತೆಯ ಗುಣ ಹೊಂದಿರುವ ಸ್ಟಾರ್ಟಪ್​ಗಳಿಗೆ ಪ್ರತೀಕವಾಗಿ ಕ್ಯಾಲಿಗೋ ಇದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
Vijaya Sarathy SN
Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
‘ಡ್ರ್ಯಾಗನ್’ ಟೀಸರ್: ಚಿತ್ರಮಂದಿರದಲ್ಲಿ ಸಂಭ್ರಮಿಸಿದ ಪ್ರಶಾಂತ್ ನೀಲ್ ಪತ್ನಿ
‘ಡ್ರ್ಯಾಗನ್’ ಟೀಸರ್: ಚಿತ್ರಮಂದಿರದಲ್ಲಿ ಸಂಭ್ರಮಿಸಿದ ಪ್ರಶಾಂತ್ ನೀಲ್ ಪತ್ನಿ
‘ಧುರಂಧರ್’ ಸಿನಿಮಾಕ್ಕೆ ಎದುರಾಗಿರುವ ಕಾನೂನು ಸಂಕಷ್ಟ ಏನು: ವಿಡಿಯೋ
‘ಧುರಂಧರ್’ ಸಿನಿಮಾಕ್ಕೆ ಎದುರಾಗಿರುವ ಕಾನೂನು ಸಂಕಷ್ಟ ಏನು: ವಿಡಿಯೋ
ಮೆಡಿಕಲ್ ಸೀಟ್ ಪರೀಕ್ಷೆ ನಡೆಸಲು ರಾಜ್ಯ ಸರ್ಕಾರಗಳಿಗೆ ಕೊಡಿ: ಸಿಎಂ ಆಗ್ರಹ
ಮೆಡಿಕಲ್ ಸೀಟ್ ಪರೀಕ್ಷೆ ನಡೆಸಲು ರಾಜ್ಯ ಸರ್ಕಾರಗಳಿಗೆ ಕೊಡಿ: ಸಿಎಂ ಆಗ್ರಹ
ಕಾಂಗ್ರೆಸ್ ಯುವ ಕಾರ್ಯಕರ್ತರು ಪೊಲೀಸ್ ವಶಕ್ಕೆ, ನಾಯಕರು ಹೋಟೆಲ್​​ಗೆ​
ಕಾಂಗ್ರೆಸ್ ಯುವ ಕಾರ್ಯಕರ್ತರು ಪೊಲೀಸ್ ವಶಕ್ಕೆ, ನಾಯಕರು ಹೋಟೆಲ್​​ಗೆ​
ಕಾಂಗ್ರೆಸ್ ನಾಯಕರಿಂದ ಐ ಆ್ಯಮ್ ಕೊಕ್ರೋಚ್ ಟೀ ಶರ್ಟ್ ಬಿಡುಗಡೆ
ಕಾಂಗ್ರೆಸ್ ನಾಯಕರಿಂದ ಐ ಆ್ಯಮ್ ಕೊಕ್ರೋಚ್ ಟೀ ಶರ್ಟ್ ಬಿಡುಗಡೆ
ಹೊಸ ಶಾಪಿಂಗ್ ಸಂಕೀರ್ಣಕ್ಕಾಗಿ ನೂರಾರು ಮರಗಳ ಮಾರಣಹೋಮ
ಹೊಸ ಶಾಪಿಂಗ್ ಸಂಕೀರ್ಣಕ್ಕಾಗಿ ನೂರಾರು ಮರಗಳ ಮಾರಣಹೋಮ
ನೀಟ್ ಹಗರಣದ ವಿರುದ್ಧ ಬೀದಿಗಿಳಿದ ಸಾವಿರಾರು ಹಸ್ತ ಪಡೆ
ನೀಟ್ ಹಗರಣದ ವಿರುದ್ಧ ಬೀದಿಗಿಳಿದ ಸಾವಿರಾರು ಹಸ್ತ ಪಡೆ
ಭಕ್ತರು ಮತ್ತು ಭಗವಂತನ ನಡುವೆ ವ್ಯವಹಾರದ ಸ್ಥಳ ದೇವಾಲಯ: ಡಿಕೆಶಿ
ಭಕ್ತರು ಮತ್ತು ಭಗವಂತನ ನಡುವೆ ವ್ಯವಹಾರದ ಸ್ಥಳ ದೇವಾಲಯ: ಡಿಕೆಶಿ
ರಾತ್ರಿ ಹೊತ್ತು ಮನೆಯಲ್ಲಿರಲಾಗದೆ ಗೋಳು ತೋಡಿಕೊಂಡ ನಿವಾಸಿಗಳು
ರಾತ್ರಿ ಹೊತ್ತು ಮನೆಯಲ್ಲಿರಲಾಗದೆ ಗೋಳು ತೋಡಿಕೊಂಡ ನಿವಾಸಿಗಳು
ನಟಿ ಶ್ರುತಿ ಪ್ರಕಾಶ್‌ಗೆ ಡೈಮಂಡ್ ಉಂಗುರ ತೊಡಿಸಿ ಪ್ರಪೋಸ್ ಮಾಡಿದ ಕರಣ್
ನಟಿ ಶ್ರುತಿ ಪ್ರಕಾಶ್‌ಗೆ ಡೈಮಂಡ್ ಉಂಗುರ ತೊಡಿಸಿ ಪ್ರಪೋಸ್ ಮಾಡಿದ ಕರಣ್