
ಭಾರತದಲ್ಲಿ ಸ್ವದೇಶಿ ಮತ್ತು ಆಯುರ್ವೇದದ ಬಗ್ಗೆ ಮಾತು ಬಂದಾಗಲೆಲ್ಲಾ ಬಾಬಾ ರಾಮದೇವ್ ಹಾಗೂ ಅವರ ಪತಂಜಲಿ ಸಂಸ್ಥೆಯ (Patanjali) ಹೆಸರು ಮೊದಲು ಬರುತ್ತದೆ. ಆದರೆ ಪತಂಜಲಿ ಇನ್ನು ಮುಂದೆ ಟೂತ್ಪೇಸ್ಟ್, ಶಾಂಪೂ ಮತ್ತು FMCG ಉತ್ಪನ್ನಗಳಿಗೆ ಮಾತ್ರ ಸೀಮಿತವಾಗಿಲ್ಲ. ಶಿಕ್ಷಣ, ಆರೋಗ್ಯ, ಕೃಷಿ, ಪರಿಸರ ಹೀಗೆ ಅದರ ಪ್ರಭಾವ ಹರಡಿದೆ.
ಪತಂಜಲಿ ಮೊದಲಿಗೆ ಆಯುರ್ವೇದ ಉತ್ಪನ್ನಗಳೊಂದಿಗೆ ಮಾರುಕಟ್ಟೆಯಲ್ಲಿ ಕಾಲೂರಿತು. ಕ್ರಮೇಣ, ಸಾಂಪ್ರದಾಯಿಕ ಜ್ಞಾನವನ್ನು ಆಧುನಿಕ ಮಾರ್ಕೆಟಿಂಗ್ನೊಂದಿಗೆ ಸಂಯೋಜಿಸುವ ಮೂಲಕ FMCG ವಲಯದಲ್ಲಿ ಒಂದು ವಿಶಿಷ್ಟ ಗುರುತನ್ನು ಸೃಷ್ಟಿಸಿತು. ಆದರೆ ಈಗ ಕಂಪನಿಯು ಕೇವಲ ಲಾಭವನ್ನು ಆಧರಿಸಿರದೆ ಸಮಾಜದ ಪ್ರತಿಯೊಂದು ವರ್ಗಕ್ಕೂ ಪ್ರಯೋಜನವನ್ನು ನೀಡುವ ಪರಂಪರೆಯ ಮೇಲೆ ಕಣ್ಣಿಟ್ಟಿದೆ.
ಪತಂಜಲಿ ಯೋಗಪೀಠ ಮತ್ತು ಅದರ ಅಡಿಯ ಶಿಕ್ಷಣ ಸಂಸ್ಥೆಗಳಲ್ಲಿ ಆಧುನಿಕ ವಿಜ್ಞಾನ ಮತ್ತು ಸಾಂಪ್ರದಾಯಿಕ ಭಾರತೀಯ ಜ್ಞಾನವನ್ನು ಒಟ್ಟಿಗೆ ಕಲಿಸಲಾಗುತ್ತದೆ. ಪತಂಜಲಿ ಗುರುಕುಲ, ಪತಂಜಲಿ ವಿಶ್ವವಿದ್ಯಾಲಯ ಮತ್ತು ವೇದ-ಪಾಠಶಾಲೆಗಳು ಈ ನಿಟ್ಟಿನಲ್ಲಿ ಪ್ರಮುಖ ಪಾತ್ರ ವಹಿಸುತ್ತಿವೆ. ಈ ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳಿಗೆ ಪದವಿಗಳನ್ನು ಮಾತ್ರವಲ್ಲದೆ ಸಂಸ್ಕೃತಿ, ಮೌಲ್ಯಗಳು ಮತ್ತು ಸೇವಾ ಭಾವನೆಯನ್ನು ಸಹ ಕಲಿಸಲಾಗುತ್ತಿದೆ.
ಇದನ್ನೂ ಓದಿ: Palm Seeds Deal: ಮಲೇಷ್ಯಾ ಜೊತೆ ಪತಂಜಲಿ ಒಪ್ಪಂದ; ದೇಶಕ್ಕೆ ಲಕ್ಷಾಂತರ ಕೋಟಿ ರೂ ಉಳಿತಾಯ
ಪತಂಜಲಿ ಆಯುರ್ವೇದ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರವು ದೇಶಾದ್ಯಂತ ರೋಗಿಗಳಿಗೆ ಚಿಕಿತ್ಸೆ ನೀಡುವುದಲ್ಲದೆ, ಆಧುನಿಕ ವಿಜ್ಞಾನ ಮತ್ತು ಆಯುರ್ವೇದದ ನಡುವೆ ಸೇತುವೆಯಾಗಿಯೂ ಕಾರ್ಯನಿರ್ವಹಿಸುತ್ತಿದೆ. ಸಾಂಪ್ರದಾಯಿಕ ವೈದ್ಯಕೀಯ ಪದ್ಧತಿಗಳ ಜೊತೆಗೆ ಹೊಸ ಸಂಶೋಧನೆಗಳನ್ನು ಸಹ ಇಲ್ಲಿ ಉತ್ತೇಜಿಸಲಾಗುತ್ತಿದೆ.
ಕೃಷಿ ಕ್ಷೇತ್ರದಲ್ಲಿ ಪತಂಜಲಿ ಸಂಸ್ಥೆಯು ಸಾವಯವ ಕೃಷಿಯನ್ನು ಉತ್ತೇಜಿಸಿದೆ. ರೈತರಿಗೆ ರಾಸಾಯನಿಕ ಮುಕ್ತ ಕೃಷಿಯಲ್ಲಿ ತರಬೇತಿ ನೀಡುವುದು, ಸಾವಯವ ಗೊಬ್ಬರಗಳು ಮತ್ತು ಬೀಜಗಳನ್ನು ಒದಗಿಸುವುದು ಮತ್ತು ಅವರ ಉತ್ಪನ್ನಗಳಿಗೆ ಮಾರುಕಟ್ಟೆಯನ್ನು ತಲುಪಲು ಸಹಾಯ ಮಾಡುವುದು ಇದರ ಮುಖ್ಯ ಉದ್ದೇಶಗಳಾಗಿವೆ. ಇದು ಲಕ್ಷಾಂತರ ರೈತರ ಆದಾಯವನ್ನು ಸುಧಾರಿಸಿದೆ ಎಂದು ಕಂಪನಿ ಹೇಳಿಕೊಂಡಿದೆ.
ಇದನ್ನೂ ಓದಿ: ರೀಟೇಲ್ ಮಾತ್ರವಲ್ಲ, ಹೋಲ್ಸೇಲ್ ಬ್ಯುಸಿನೆಸ್ನಲ್ಲೂ ಇವೆ ಈ ಪತಂಜಲಿ ಉತ್ಪನ್ನಗಳು
ಪತಂಜಲಿ ತನ್ನ ಘಟಕಗಳಲ್ಲಿ ಸುಸ್ಥಿರತೆ ಮತ್ತು ಪರಿಸರ ಸಂರಕ್ಷಣೆಗೆ ಮುತುವರ್ಜಿ ತೋರುತ್ತದೆ. ಸ್ವದೇಶಿ ಆಂದೋಲನ ಉತ್ತೇಜಿಸಲು ಮೇಕ್ ಇನ್ ಇಂಡಿಯಾ ಅಡಿಯಲ್ಲಿ ಸ್ಥಳೀಯ ಉತ್ಪಾದನೆಗೆ ಒತ್ತು ನೀಡಲಾಗಿದೆ.
ಪತಂಜಲಿ ಇನ್ನು ಮುಂದೆ ಕೇವಲ FMCG ಬ್ರಾಂಡ್ ಅಲ್ಲ, ಬದಲಾಗಿ ಅದು ಒಂದು ಸೈದ್ಧಾಂತಿಕ ಚಳುವಳಿಯ ರೂಪ ಪಡೆದುಕೊಂಡಿದೆ. ಭಾರತೀಯ ಮಾರುಕಟ್ಟೆಯಲ್ಲಿ ತನ್ನ ಹಿಡಿತವನ್ನು ಬಲಪಡಿಸುವುದು ಮಾತ್ರವಲ್ಲದೆ ಪ್ರತಿಯೊಬ್ಬ ಭಾರತೀಯನ ಜೀವನವನ್ನು ಸುಧಾರಿಸುವುದು ಇದರ ಗುರಿಯಾಗಿದೆ. ಆರೋಗ್ಯ, ಶಿಕ್ಷಣ, ಉದ್ಯೋಗ, ಕೃಷಿ ಮತ್ತು ಪರಿಸರದಂತಹ ಕ್ಷೇತ್ರಗಳಲ್ಲಿ ಪತಂಜಲಿಯ ಕ್ರಿಯಾಶೀಲತೆ ನೋಡಿದರೆ, ಅದು ಒಂದು ವ್ಯವಹಾರ ಮಾತ್ರವಲ್ಲ, ಒಂದು ಧ್ಯೇಯವಾಗಿ ನಿಂತಿರುವುದು ಸಾಬೀತಾಗುತ್ತದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ