Sign In

By signing in or creating an account, you agree with Associated Broadcasting Company's Terms & Conditions and Privacy Policy.

Bitcoin: 2008ರ ಬಿಕ್ಕಟ್ಟಿನಲ್ಲಿ ಹುಟ್ಟಿ, 2025ರ ಬಿಕ್ಕಟ್ಟಿನಲ್ಲಿ ಮುಳುಗಲಿರುವ ಬಿಟ್​ಕಾಯಿನ್: ಪೀಟರ್ ಶಿಫ್ ಭವಿಷ್ಯ

2025 financial crisis limited to US, says Peter Schiff: ಜಗತ್ತಿನ ಅತಿದೊಡ್ಡ ಕ್ರಿಪ್ಟೋಕರೆನ್ಸಿ ಎನಿಸಿರುವ ಬಿಟ್​​ಕಾಯಿನ್ ಈ ವರ್ಷ ಅಂತ್ಯವಾಗಬಹುದು ಎಂದು ಅಮೆರಿಕನ್ ಆರ್ಥಿಕ ತಜ್ಞ ಪೀಟರ್ ಶಿಫ್ ಹೇಳಿದ್ದಾರೆ. 2008ರ ಹಣಕಾಸು ಬಿಕ್ಕಟ್ಟಿನಲ್ಲಿ ಬಿಟ್​​ಕಾಯಿನ್ ಹುಟ್ಟಿತು. 2025ರ ಬಿಕ್ಕಟ್ಟಿನಲ್ಲಿ ಅದು ಸಾಯುತ್ತಿದೆ ಎಂದು ಅವರು ಲೇವಡಿ ಮಾಡಿದ್ದಾರೆ. 2025ರ ಹಣಕಾಸು ಬಿಕ್ಕಟ್ಟು ಕೇವಲ ಅಮೆರಿಕಕ್ಕೆ ಸೀಮಿತವಾಗಿದೆ. ವಿಶ್ವದ ಇತರ ಭಾಗಕ್ಕೆ ಈ ಬಿಕ್ಕಟ್ಟಿಲ್ಲ ಎಂದಿದ್ದಾರೆ ಶಿಫ್.

Bitcoin: 2008ರ ಬಿಕ್ಕಟ್ಟಿನಲ್ಲಿ ಹುಟ್ಟಿ, 2025ರ ಬಿಕ್ಕಟ್ಟಿನಲ್ಲಿ ಮುಳುಗಲಿರುವ ಬಿಟ್​ಕಾಯಿನ್: ಪೀಟರ್ ಶಿಫ್ ಭವಿಷ್ಯ
ಬಿಟ್​​ಕಾಯಿನ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Apr 13, 2025 | 7:21 PM

ನವದೆಹಲಿ, ಏಪ್ರಿಲ್ 13: ಖ್ಯಾತ ಅಮೆರಿಕನ್ ಆರ್ಥಿಕ ತಜ್ಞ ಪೀಟರ್ ಶಿಫ್ (Peter Schiff) ಅವರು ಬಿಟ್​​ಕಾಯಿನ್​​ಗೆ ಮರಣ ಭವಿಷ್ಯ ಬರೆದಿದ್ದಾರೆ. ಬಿಟ್​​ಕಾಯಿನ್ ಆಯಸ್ಸು ಈ ವರ್ಷವೇ ಮುಗಿಯುತ್ತೆ ಎಂದಿದ್ದಾರೆ ಅವರು. ಚಿನ್ನ, ಬೆಳ್ಳಿ, ಕರೆನ್ಸಿಗಳನ್ನು ರಿಸರ್ವ್ ಆಸ್ತಿಯಾಗಿ ಇಟ್ಟುಕೊಳ್ಳುವಂತೆ ಬಿಟ್​​ಕಾಯಿನ್ ರಿಸರ್ವ್ ಕೂಡ ಸೃಷ್ಟಿಸುತ್ತೇನೆಂದು ಹೊರಟಿರುವ ಅಮೆರಿಕನ್ ಸರ್ಕಾರಕ್ಕೆ ಪೀಟರ್ ಶಿಫ್ ಕನ್ನಡಿ ತೋರಿಸಿದಂತಿದೆ. 2025ರ ಹಣಕಾಸು ಬಿಕ್ಕಟ್ಟಿಗೆ (Financial crisis) ಸಿಕ್ಕು ಬಿಟ್​​ಕಾಯಿನ್ ಸತ್ತು ಹೋಗಬಹುದು ಎಂದು ಹೇಳಿದ್ದಾರೆ.

‘2008ರ ಹಣಕಾಸು ಬಿಕ್ಕಟ್ಟಿನ ಪರಿಣಾಮವಾಗಿ ಬಿಟ್​​ಕಾಯಿನ್ ಹುಟ್ಟಿತು. ವಿಪರ್ಯಾಸ ಎಂದರೆ 2025ರ ಹಣಕಾಸು ಬಿಕ್ಕಟ್ಟಿನಿಂದ ಬಿಟ್​​ಕಾಯಿನ್ ಕಥೆ ಮುಗಿದು ಹೋಗುತ್ತದೆ’ ಎಂದು ಮೊನ್ನೆ ಪೀಟರ್ ಶಿಫ್ ತಮ್ಮ ಎಕ್ಸ್ ಪೋಸ್ಟ್​​ವೊಂದರಲ್ಲಿ ಹೇಳಿದ್ದಾರೆ.

ಇದನ್ನೂ ಓದಿ: 2025ರಲ್ಲಿ ಅಮೆರಿಕದಲ್ಲಿ ದಿವಾಳಿ ಬೀಳುತ್ತಿವೆ ದೊಡ್ಡ ದೊಡ್ಡ ಕಂಪನಿಗಳು: ಎಸ್ ಅಂಡ್ ಪಿ ವರದಿ

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಬಿಟ್​​ಕಾಯಿನ್ ಹಾಗೂ ಇತರ ಕ್ರಿಪ್ಟೋ ಕರೆನ್ಸಿಗಳನ್ನು ಬಹಿರಂಗವಾಗಿ ಬೆಂಬಲಿಸಿದ್ದಾರೆ. ಬಿಟ್​ಕಾಯಿನ್ ಅನ್ನು ದೇಶದ ದೊಡ್ಡ ರಿಸರ್ವ್ ಆಸ್ತಿಯಾಗಿ ಬೆಳಸಲಾಗುತ್ತದೆ ಎಂದು ಅವರು ಹೇಳಿದ್ದಾರೆ. ಅವರು ಅಧ್ಯಕ್ಷರಾದಾಗ ಒಂದು ಬಿಟ್​​ಕಾಯಿನ್ ಬೆಲೆ ಒಂದು ಲಕ್ಷ ಡಾಲರ್ ದಾಟಿ ಹೋಗಿತ್ತು. ಈಗ ಅದು 85,000 ಡಾಲರ್​ಗೆ ಇಳಿದಿದೆ. ಈಗ ಬಿಕ್ಕಟ್ಟಿನಲ್ಲಿ ಬಿಟ್​​ಕಾಯಿನ್​​ಗೆ ಚಿನ್ನ, ಬೆಳ್ಳಿ ರೀತಿಯಲ್ಲಿ ಡಿಮ್ಯಾಂಡ್ ಸೃಷ್ಟಿಯಾಗುವ ನಿರೀಕ್ಷೆ ಇತ್ತು. ಆದರೆ, ಜನರು ಕ್ರಿಪ್ಟೋದಿಂದ ದೂರ ಉಳಿಯುತ್ತಿರುವಂತೆ ತೋರುತ್ತಿದೆ.

ಅಮೆರಿಕದ ಬಿಟ್​​ಕಾಯಿನ್ ರಿಸರ್ವ್ ಮಾರ್ಚ್ 6ರಂದು ಚಾಲನೆಗೊಂಡಿತ್ತು. ಆಗಿನಿಂದ ಅದರ ಮೌಲ್ಯ ಶೇ. 12ರಷ್ಟು ಕುಸಿದಿದೆ. ಚಿನ್ನಕ್ಕೆ ಪರ್ಯಾಯ ಸಂಪತ್ತು ಆಗುವ ಉಮೇದಿನಲ್ಲಿತ್ತು ಬಿಟ್​​ಕಾಯಿನ್. ಆದರೆ, ಬಿಟ್​​ಕಾಯಿನ್ ಬೀಳುತ್ತಿರುವಾಗ ಚಿನ್ನ ಮೇಲೇರಿತ್ತು. ಪೀಟರ್ ಶಿಫ್ ಈ ಅಂಶವನ್ನು ಎತ್ತಿ ತೋರಿಸಿ, ಬಿಟ್​​ಕಾಯಿನ್ ಅನ್ನು ಲೇವಡಿ ಮಾಡಿದ್ದಾರೆ.

ಇದನ್ನೂ ಓದಿ: ಮಕ್ಕಳಿಗೆ ನೂರಕ್ಕೆ ಒಂದು ರುಪಾಯಿಯೂ ಕೊಡದ ಬಿಲ್ ಗೇಟ್ಸ್; ಮಕ್ಕಳು ಏನಂತಾರೆ ನೋಡಿ…

2025ರ ಬಿಕ್ಕಟ್ಟು ಅಮೆರಿಕಕ್ಕೆ ಮಾತ್ರ ಸೀಮಿತವಾ?

ಪೀಟರ್ ಶಿಫ್ ಮತ್ತೊಂದು ಕುತೂಹಲಕಾರಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. 2025ರ ಹಣಕಾಸು ಬಿಕ್ಕಟ್ಟು ಜಾಗತಿಕವಾಗಿ ನಿರ್ಮಾಣ ಆಗಿಲ್ಲ. ಅದು ಅಮೆರಿಕಕ್ಕೆ ಮಾತ್ರ ಸೀಮಿತವಾಗಿರುತ್ತದೆ. ಈ ಬಿಕ್ಕಟ್ಟಿನಿಂದ ವಿಶ್ವದ ಇತರ ಭಾಗವು ಹೊರತಾಗಿರುತ್ತದೆ ಎಂದಿದ್ದಾರೆ ಅಮೆರಿಕನ್ ಆರ್ಥಿಕ ತಜ್ಞ. ಈ ಬಿಕ್ಕಟ್ಟಿನಿಂದ ಅಮೆರಿಕ ಪಾರಾಗುವ ಏಕೈಕ ಮಾರ್ಗ ಎಂದರೆ ಟ್ರಂಪ್ ಅವರು ರಾಜೀನಾಮೆ ಕೊಡುವುದು ಎಂದೂ ಶಿಫ್ ಒತ್ತಾಯಿಸಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 7:02 pm, Sun, 13 April 25

ತಕ್ಕ ಪಾಠ ಕಲಿಸುತ್ತೇವೆ; ಉಗ್ರರ ದಾಳಿಗೆ ಸಚಿವ ಪ್ರಲ್ಹಾದ್ ಜೋಶಿ ಖಂಡನೆ
ತಕ್ಕ ಪಾಠ ಕಲಿಸುತ್ತೇವೆ; ಉಗ್ರರ ದಾಳಿಗೆ ಸಚಿವ ಪ್ರಲ್ಹಾದ್ ಜೋಶಿ ಖಂಡನೆ
ಮಂಜುನಾಥ್, ಸಾವಿಗೂ ಮುನ್ನ ಪತ್ನಿಯೊಂದಿಗೆ ಕಾಶ್ಮೀರದಲ್ಲಿ ಕಳೆದ ಕೊನೆ ಕ್ಷಣ
ಮಂಜುನಾಥ್, ಸಾವಿಗೂ ಮುನ್ನ ಪತ್ನಿಯೊಂದಿಗೆ ಕಾಶ್ಮೀರದಲ್ಲಿ ಕಳೆದ ಕೊನೆ ಕ್ಷಣ
ಉಗ್ರರ ದಾಳಿ ಬಳಿಕ ಭದ್ರತಾ ಪರಿಶೀಲನೆಗೆ ಶ್ರೀನಗರಕ್ಕೆ ತೆರಳಿದ ಅಮಿತ್ ಶಾ
ಉಗ್ರರ ದಾಳಿ ಬಳಿಕ ಭದ್ರತಾ ಪರಿಶೀಲನೆಗೆ ಶ್ರೀನಗರಕ್ಕೆ ತೆರಳಿದ ಅಮಿತ್ ಶಾ
ಪಹಲ್ಗಾಮ್‌: ಪತ್ನಿ ಎದುರೇ ಪತಿಯನ್ನ ಕೊಂದು ಮೋದಿಗೆ ಹೋಗಿ ಹೇಳು ಎಂದ ಉಗ್ರ
ಪಹಲ್ಗಾಮ್‌: ಪತ್ನಿ ಎದುರೇ ಪತಿಯನ್ನ ಕೊಂದು ಮೋದಿಗೆ ಹೋಗಿ ಹೇಳು ಎಂದ ಉಗ್ರ
ಪತ್ನಿ ಪಲ್ಲವಿ ಹಾಗೂ ಮಗನೊಂದಿಗೆ ಪ್ರವಾಸ ತೆರಳಿದ್ದ ಮಂಜುನಾಥ್
ಪತ್ನಿ ಪಲ್ಲವಿ ಹಾಗೂ ಮಗನೊಂದಿಗೆ ಪ್ರವಾಸ ತೆರಳಿದ್ದ ಮಂಜುನಾಥ್
ಕೇವಲ ಕಳ್ಳತನಕ್ಕಾಗಿ ನಡೆದ ಕೊಲೆ ಅಲ್ಲ ಇದು, ಬೇರೆ ಕಾರಣವೂ ಇದೆ: ಡಿಸಿಪಿ
ಕೇವಲ ಕಳ್ಳತನಕ್ಕಾಗಿ ನಡೆದ ಕೊಲೆ ಅಲ್ಲ ಇದು, ಬೇರೆ ಕಾರಣವೂ ಇದೆ: ಡಿಸಿಪಿ
ದರ್ಶನ್ ಜಾಮೀನು ರದ್ದು ಅರ್ಜಿ: ಸುಪ್ರೀಂಕೋರ್ಟ್​ನಲ್ಲಿ ಇಂದು ನಡೆದ ವಾದವೇನು?
ದರ್ಶನ್ ಜಾಮೀನು ರದ್ದು ಅರ್ಜಿ: ಸುಪ್ರೀಂಕೋರ್ಟ್​ನಲ್ಲಿ ಇಂದು ನಡೆದ ವಾದವೇನು?
ದರ್ಶನ್, ಪವಿತ್ರಾ ಗೌಡ ಸಂಬಂಧದ ಬಗ್ಗೆ ಸುಪ್ರೀಂಕೋರ್ಟ್ ಕೇಳಿದ ಪ್ರಶ್ನೆ ಏನು?
ದರ್ಶನ್, ಪವಿತ್ರಾ ಗೌಡ ಸಂಬಂಧದ ಬಗ್ಗೆ ಸುಪ್ರೀಂಕೋರ್ಟ್ ಕೇಳಿದ ಪ್ರಶ್ನೆ ಏನು?
ನಾವು ಇದುವರೆಗೆ ಯಾರನ್ನೂ ಅಪರಾಧಿಗಳು ಅಂತ ಹೇಳಿಲ್ಲ: ರಿಕ್ಕಿ ರೈ ವಕೀಲ
ನಾವು ಇದುವರೆಗೆ ಯಾರನ್ನೂ ಅಪರಾಧಿಗಳು ಅಂತ ಹೇಳಿಲ್ಲ: ರಿಕ್ಕಿ ರೈ ವಕೀಲ
ವಿಜಯಪುರದಲ್ಲಿ ವಿಜಯೇಂದ್ರ ಭಾಷಣ ಮಾಡುವಾಗ ಸ್ವಲ್ಪ ಜನರಿದ್ದರು: ಯತ್ನಾಳ್
ವಿಜಯಪುರದಲ್ಲಿ ವಿಜಯೇಂದ್ರ ಭಾಷಣ ಮಾಡುವಾಗ ಸ್ವಲ್ಪ ಜನರಿದ್ದರು: ಯತ್ನಾಳ್